ETV Bharat / state

ನಿಯಮ ಮರೆತ ಜನರಿಗೆ ರೇಣುಕಾಚಾರ್ಯರಿಂದ ಕೋವಿಡ್​ ಪಾಠ

author img

By

Published : May 6, 2021, 12:12 PM IST

ಹೊನ್ನಾಳಿ ಪಟ್ಟಣದ ಜನರು ಕೋವಿಡ್​ ನಿಯಮ ಪಾಸಲಿಸದೇ ಇದ್ದುದ್ದನ್ನು ಗಮನಿಸಿ ಬೆಳ್ಳಂಬೆಳಗ್ಗೆ ಶಾಸಕ ಎಂ.ಪಿ.ರೇಣುಕಾಚಾರ್ಯ ಫೀಲ್ಡಿಗಿಳಿದು ನಿಯಮ ಮರೆತವರಿಗೆ ಕ್ಲಾಸ್​ ತೆಗೆದುಕೊಂಡ್ರು. ಜತೆಗೆ ಕೋವಿಡ್​ ಕುರಿತು ಜಾಗೃತಿ ಮೂಡಿಸಿದರು.

covid awareness by mp renukacharya in davanagere
ಎಂಪಿ ರೇಣುಕಾಚಾರ್ಯರಿಂದ ಕೋವಿಡ್​ ಜಾಗೃತಿ

ದಾವಣಗೆರೆ: ಬೆಳ್ಳಂಬೆಳಗ್ಗೆ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಫೀಲ್ಡಿಗಿಳಿದು ಮಾಸ್ಕ್ ಧರಿಸುವಿಕೆ ಹಾಗೂ ಸಾಮಾಜಿಕ ಅಂತರದ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದ್ರು.

ಎಂ.ಪಿ.ರೇಣುಕಾಚಾರ್ಯರಿಂದ ಕೋವಿಡ್​ ಜಾಗೃತಿ

ಜಿಲ್ಲೆಯ ಹೊನ್ನಾಳಿ ಪಟ್ಟಣದ ಎಪಿಎಂಸಿಗೆ ಭೇಟಿ ನೀಡಿ ಮಾಸ್ಕ್ ಹಾಕಿಕೊಳ್ಳದೇ, ಸಾಮಾಜಿಕ ಅಂತರ ಕಾಪಾಡದೇ ಇದ್ದ ಜನರಿಗೆ ಕೋವಿಡ್​ ಕುರಿತು ಜಾಗೃತಿ ಮೂಡಿಸಿದರು. ತರಕಾರಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಮರೆತಿದ್ದ ಜನರನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಸೋಂಕು ಕುರಿತು ಜನರಿಗೆ ಜಾಗೃತಿ ಮೂಡಿಸಿ, ವರ್ತಕರಿಗೆ ನಿಯಮಗಳೊಂದಿಗೆ ವ್ಯಾಪಾರ ಮಾಡುವಂತೆ ಸೂಚಿಸಿದರು.

ಇದನ್ನೂ ಓದಿ: ಬಿಜೆಪಿ ನೇತೃತ್ವದ ಸ್ಕ್ಯಾಮ್‌ ಸರ್ಕಾರ ಕೋಮು ವಿಷಬೀಜ ಬಿತ್ತುತ್ತಿದೆ: ನಟ ಚೇತನ್

ಇನ್ನು ಜನರು ಸಾಮಾಜಿಕ ಅಂತರ ಕಾಪಾಡದೇ ಇದ್ದರೆ ಮಾರುಕಟ್ಟೆ ಬಂದ್ ಮಾಡಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು. ಸರ್ಕಾರದ ಮಾರ್ಗದರ್ಶನ ಪಾಲಿಸದೇ ಇದ್ದರೆ ಕಾನೂನು ಕ್ರಮ ತೆಗೆದುಕೊಳ್ಳೋದಾಗಿ ಎಚ್ಚರಿಕೆ ನೀಡಿದರು.

ದಾವಣಗೆರೆ: ಬೆಳ್ಳಂಬೆಳಗ್ಗೆ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಫೀಲ್ಡಿಗಿಳಿದು ಮಾಸ್ಕ್ ಧರಿಸುವಿಕೆ ಹಾಗೂ ಸಾಮಾಜಿಕ ಅಂತರದ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದ್ರು.

ಎಂ.ಪಿ.ರೇಣುಕಾಚಾರ್ಯರಿಂದ ಕೋವಿಡ್​ ಜಾಗೃತಿ

ಜಿಲ್ಲೆಯ ಹೊನ್ನಾಳಿ ಪಟ್ಟಣದ ಎಪಿಎಂಸಿಗೆ ಭೇಟಿ ನೀಡಿ ಮಾಸ್ಕ್ ಹಾಕಿಕೊಳ್ಳದೇ, ಸಾಮಾಜಿಕ ಅಂತರ ಕಾಪಾಡದೇ ಇದ್ದ ಜನರಿಗೆ ಕೋವಿಡ್​ ಕುರಿತು ಜಾಗೃತಿ ಮೂಡಿಸಿದರು. ತರಕಾರಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಮರೆತಿದ್ದ ಜನರನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಸೋಂಕು ಕುರಿತು ಜನರಿಗೆ ಜಾಗೃತಿ ಮೂಡಿಸಿ, ವರ್ತಕರಿಗೆ ನಿಯಮಗಳೊಂದಿಗೆ ವ್ಯಾಪಾರ ಮಾಡುವಂತೆ ಸೂಚಿಸಿದರು.

ಇದನ್ನೂ ಓದಿ: ಬಿಜೆಪಿ ನೇತೃತ್ವದ ಸ್ಕ್ಯಾಮ್‌ ಸರ್ಕಾರ ಕೋಮು ವಿಷಬೀಜ ಬಿತ್ತುತ್ತಿದೆ: ನಟ ಚೇತನ್

ಇನ್ನು ಜನರು ಸಾಮಾಜಿಕ ಅಂತರ ಕಾಪಾಡದೇ ಇದ್ದರೆ ಮಾರುಕಟ್ಟೆ ಬಂದ್ ಮಾಡಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು. ಸರ್ಕಾರದ ಮಾರ್ಗದರ್ಶನ ಪಾಲಿಸದೇ ಇದ್ದರೆ ಕಾನೂನು ಕ್ರಮ ತೆಗೆದುಕೊಳ್ಳೋದಾಗಿ ಎಚ್ಚರಿಕೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.