ETV Bharat / state

ಮಾಸ್ಟರ್ ಆನಂದ್ ನೇತೃತ್ವದ ಗ್ರೀನ್ ಗೆಳೆಯರ ತಂಡದಿಂದ ಸ್ವಚ್ಚತಾ ಕಾರ್ಯ - cleanup work by master anand and team

ನಟ ಮಾಸ್ಟರ್ ಆನಂದ್ ಗ್ರೀನ್ ಗೆಳೆಯರು ಎಂಬ ತಂಡ ಕಟ್ಟಿಕೊಂಡು ಹರಿಹರದ ತುಂಗಾಭದ್ರ ನದಿ ತಟ ಸ್ವಚ್ಛಗೊಳಿಸಿ ಬಳಿಕ ಹರಿಹರೇಶ್ವರ ದೇವಸ್ಥಾನದ ಆವರಣಗಳನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಿದರು. ಈ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.

cleanup-work-by-a-team-of-green-friends-led-by-master-anand
ಮಾಸ್ಟರ್ ಆನಂದ್ ನೇತೃತ್ವದ ಗ್ರೀನ್ ಗೆಳೆಯರ ತಂಡದಿಂದ ಸ್ವಚ್ಚತಾ ಕಾರ್ಯ
author img

By

Published : Jun 13, 2022, 7:32 PM IST

ದಾವಣಗೆರೆ: ನಟ ಮಾಸ್ಟರ್ ಆನಂದ್ ನೇತೃತ್ವದ ಗ್ರೀನ್ ಗೆಳೆಯರ ತಂಡದಿಂದ ತುಂಗಭದ್ರಾ ನದಿಯ ತಟದಲ್ಲಿ ಸ್ವಚ್ಚತಾ ಕಾರ್ಯ ನಡೆಯಿತು. ಹರಿಹರ ಬಳಿ ಇರುವ ನದಿಯ ದಡ, ಹರಿಹರೇಶ್ವರ ದೇವಾಲಯದ ಆವರಣ ಸೇರಿದಂತೆ ಪ್ರಮುಖ ರಸ್ತೆಗಳ ಸ್ವಚ್ಛಗೊಳಿಸುವ ಕಾರ್ಯವನ್ನು ಈ ತಂಡ ಕೈಗೊಂಡಿದೆ.


ವಾರದ ಹಿಂದೆ ಮಾಸ್ಟರ್ ಆನಂದ್ ಹಾಗೂ ಅವರ ಸ್ನೇಹಿತರು ಗ್ರೀನ್ ಗೆಳೆಯರ ತಂಡ ರಚಿಸಿದ್ದು, ಮೊದಲನೇ ಸ್ವಚ್ಛತಾ ಕಾರ್ಯವನ್ನು ತುಂಗಾಭದ್ರ ನದಿಯ ತಟದಿಂದಲೇ ಆರಂಭಿಸಿ, ನಂತರ ಹರಿಹರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಆ ಬಳಿಕ ದೇವಸ್ಥಾನದ ಆವರಣ ಶುಚಿಗೊಳಿಸಿದ್ದಾರೆ. ಇದಾದ ನಂತರ ದೇಗುಲದ ಮುಂಭಾಗದ ರಸ್ತೆ ಹಾಗೂ ಪ್ರಮುಖ ಬೀದಿಗಳನ್ನೂ ಶುಚಿಗೊಳಿಸಿದರು. ಹರಿಹರದ ರೈತ ಮುಖಂಡ ಚಂದ್ರಶೇಖರ್ ಪೂಜಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇದನ್ನೂ ಓದಿ: ಮಂಗಳೂರಿನಲ್ಲಿ ಭಾರಿ ಪ್ರತಿಭಟನೆ ವದಂತಿ: ಮುಸ್ಲಿಂ ಮುಖಂಡರೊಂದಿಗೆ ಕಮಿಷನರ್ ಸಭೆ

ದಾವಣಗೆರೆ: ನಟ ಮಾಸ್ಟರ್ ಆನಂದ್ ನೇತೃತ್ವದ ಗ್ರೀನ್ ಗೆಳೆಯರ ತಂಡದಿಂದ ತುಂಗಭದ್ರಾ ನದಿಯ ತಟದಲ್ಲಿ ಸ್ವಚ್ಚತಾ ಕಾರ್ಯ ನಡೆಯಿತು. ಹರಿಹರ ಬಳಿ ಇರುವ ನದಿಯ ದಡ, ಹರಿಹರೇಶ್ವರ ದೇವಾಲಯದ ಆವರಣ ಸೇರಿದಂತೆ ಪ್ರಮುಖ ರಸ್ತೆಗಳ ಸ್ವಚ್ಛಗೊಳಿಸುವ ಕಾರ್ಯವನ್ನು ಈ ತಂಡ ಕೈಗೊಂಡಿದೆ.


ವಾರದ ಹಿಂದೆ ಮಾಸ್ಟರ್ ಆನಂದ್ ಹಾಗೂ ಅವರ ಸ್ನೇಹಿತರು ಗ್ರೀನ್ ಗೆಳೆಯರ ತಂಡ ರಚಿಸಿದ್ದು, ಮೊದಲನೇ ಸ್ವಚ್ಛತಾ ಕಾರ್ಯವನ್ನು ತುಂಗಾಭದ್ರ ನದಿಯ ತಟದಿಂದಲೇ ಆರಂಭಿಸಿ, ನಂತರ ಹರಿಹರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಆ ಬಳಿಕ ದೇವಸ್ಥಾನದ ಆವರಣ ಶುಚಿಗೊಳಿಸಿದ್ದಾರೆ. ಇದಾದ ನಂತರ ದೇಗುಲದ ಮುಂಭಾಗದ ರಸ್ತೆ ಹಾಗೂ ಪ್ರಮುಖ ಬೀದಿಗಳನ್ನೂ ಶುಚಿಗೊಳಿಸಿದರು. ಹರಿಹರದ ರೈತ ಮುಖಂಡ ಚಂದ್ರಶೇಖರ್ ಪೂಜಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇದನ್ನೂ ಓದಿ: ಮಂಗಳೂರಿನಲ್ಲಿ ಭಾರಿ ಪ್ರತಿಭಟನೆ ವದಂತಿ: ಮುಸ್ಲಿಂ ಮುಖಂಡರೊಂದಿಗೆ ಕಮಿಷನರ್ ಸಭೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.