ದಾವಣಗೆರೆ: ನಟ ಮಾಸ್ಟರ್ ಆನಂದ್ ನೇತೃತ್ವದ ಗ್ರೀನ್ ಗೆಳೆಯರ ತಂಡದಿಂದ ತುಂಗಭದ್ರಾ ನದಿಯ ತಟದಲ್ಲಿ ಸ್ವಚ್ಚತಾ ಕಾರ್ಯ ನಡೆಯಿತು. ಹರಿಹರ ಬಳಿ ಇರುವ ನದಿಯ ದಡ, ಹರಿಹರೇಶ್ವರ ದೇವಾಲಯದ ಆವರಣ ಸೇರಿದಂತೆ ಪ್ರಮುಖ ರಸ್ತೆಗಳ ಸ್ವಚ್ಛಗೊಳಿಸುವ ಕಾರ್ಯವನ್ನು ಈ ತಂಡ ಕೈಗೊಂಡಿದೆ.
ವಾರದ ಹಿಂದೆ ಮಾಸ್ಟರ್ ಆನಂದ್ ಹಾಗೂ ಅವರ ಸ್ನೇಹಿತರು ಗ್ರೀನ್ ಗೆಳೆಯರ ತಂಡ ರಚಿಸಿದ್ದು, ಮೊದಲನೇ ಸ್ವಚ್ಛತಾ ಕಾರ್ಯವನ್ನು ತುಂಗಾಭದ್ರ ನದಿಯ ತಟದಿಂದಲೇ ಆರಂಭಿಸಿ, ನಂತರ ಹರಿಹರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಆ ಬಳಿಕ ದೇವಸ್ಥಾನದ ಆವರಣ ಶುಚಿಗೊಳಿಸಿದ್ದಾರೆ. ಇದಾದ ನಂತರ ದೇಗುಲದ ಮುಂಭಾಗದ ರಸ್ತೆ ಹಾಗೂ ಪ್ರಮುಖ ಬೀದಿಗಳನ್ನೂ ಶುಚಿಗೊಳಿಸಿದರು. ಹರಿಹರದ ರೈತ ಮುಖಂಡ ಚಂದ್ರಶೇಖರ್ ಪೂಜಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಇದನ್ನೂ ಓದಿ: ಮಂಗಳೂರಿನಲ್ಲಿ ಭಾರಿ ಪ್ರತಿಭಟನೆ ವದಂತಿ: ಮುಸ್ಲಿಂ ಮುಖಂಡರೊಂದಿಗೆ ಕಮಿಷನರ್ ಸಭೆ