ETV Bharat / state

ಕಾರು ಹರಿದು ಆರ್​ಟಿಒ ವಾಹನ ಚಾಲಕನ ದುರ್ಮರಣ - ಜಗಳೂರು ಕಾರು ಅಪಘಾತಕ್ಕೆ ಆರ್​ಟಿಒ ವಾಹನ ಚಾಲಕ

ವಾಹನ ತಪಾಸಣೆ ವೇಳೆ ಕಾರು ಹರಿದ ಪರಿಣಾಮ ಆರ್​ಟಿಒ ವಾಹನ ಚಾಲಕ ಮೃತಪಟ್ಟ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.

Car strikes and moves on RTO vehicle driver: Driver dead on spot
ಕಾರು ಹರಿದು ಆರ್​ಟಿಒ ವಾಹನ ಚಾಲಕನ ದುರ್ಮರಣ...!
author img

By

Published : Dec 28, 2019, 3:03 PM IST

ದಾವಣಗೆರೆ: ವಾಹನ ತಪಾಸಣೆ ವೇಳೆ ಕಾರು ಹರಿದ ಪರಿಣಾಮ ಆರ್​ಟಿಒ ವಾಹನ ಚಾಲಕ ಮೃತಪಟ್ಟ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.

ದಾವಣಗೆರೆ ಸಮೀಪದ ಮಳಲ್ಕೆರೆ ಗ್ರಾಮದ ಅಜ್ಜಪ್ಪ ಸಾವನ್ನಪ್ಪಿದ ಆರ್​ಟಿಒ ವಾಹನ ಚಾಲಕ ಎಂದು ಗುರುತಿಸಲಾಗಿದೆ.

ದೊಣ್ಣೆಹಳ್ಳಿ ಬಳಿ ಲಾರಿಗಳ ದಾಖಲೆಯನ್ನು ಆರ್​ಟಿಒ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದರು. ಈ ವೇಳೆ ಚಿತ್ರದುರ್ಗ ಕಡೆಯಿಂದ ಬಂದ ಕಾರು, ಚಾಲಕನ ನಿಯಂತ್ರಣ ತಪ್ಪಿ ಆರ್​ಟಿಒ ವಾಹನ ಚಾಲಕನ ಮೇಲೆ ಹರಿದಿದ್ದು ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ‌. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಕಾರು ಚಾಲಕನನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ಕಳೆದ ಮೂರು ದಿನಗಳ ಹಿಂದಷ್ಟೇ ಎರಡು ಲಾರಿಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಸಜೀವ ದಹನವಾದ ಹಿನ್ನೆಲೆ ಆರ್​ಟಿಒ ಅಧಿಕಾರಿಗಳು ತಪಾಸಣೆ ಬಿಗಿಗೊಳಿಸಿದ್ದರು. ಆದರೆ, ಅಷ್ಟರಲ್ಲೇ ಈ ದುರ್ಘಟನೆ ನಡೆದಿದೆ.

ದಾವಣಗೆರೆ: ವಾಹನ ತಪಾಸಣೆ ವೇಳೆ ಕಾರು ಹರಿದ ಪರಿಣಾಮ ಆರ್​ಟಿಒ ವಾಹನ ಚಾಲಕ ಮೃತಪಟ್ಟ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.

ದಾವಣಗೆರೆ ಸಮೀಪದ ಮಳಲ್ಕೆರೆ ಗ್ರಾಮದ ಅಜ್ಜಪ್ಪ ಸಾವನ್ನಪ್ಪಿದ ಆರ್​ಟಿಒ ವಾಹನ ಚಾಲಕ ಎಂದು ಗುರುತಿಸಲಾಗಿದೆ.

ದೊಣ್ಣೆಹಳ್ಳಿ ಬಳಿ ಲಾರಿಗಳ ದಾಖಲೆಯನ್ನು ಆರ್​ಟಿಒ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದರು. ಈ ವೇಳೆ ಚಿತ್ರದುರ್ಗ ಕಡೆಯಿಂದ ಬಂದ ಕಾರು, ಚಾಲಕನ ನಿಯಂತ್ರಣ ತಪ್ಪಿ ಆರ್​ಟಿಒ ವಾಹನ ಚಾಲಕನ ಮೇಲೆ ಹರಿದಿದ್ದು ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ‌. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಕಾರು ಚಾಲಕನನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ಕಳೆದ ಮೂರು ದಿನಗಳ ಹಿಂದಷ್ಟೇ ಎರಡು ಲಾರಿಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಸಜೀವ ದಹನವಾದ ಹಿನ್ನೆಲೆ ಆರ್​ಟಿಒ ಅಧಿಕಾರಿಗಳು ತಪಾಸಣೆ ಬಿಗಿಗೊಳಿಸಿದ್ದರು. ಆದರೆ, ಅಷ್ಟರಲ್ಲೇ ಈ ದುರ್ಘಟನೆ ನಡೆದಿದೆ.

Intro:KN_DVG_02_28_ACCIDENT_SCRIPT_7203307


ಕಾರು ಹರಿದ ಪರಿಣಾಮ ಆರ್ ಟಿ ಒ ವಾಹನ ಚಾಲಕ ದುರ್ಮರಣ...!

ದಾವಣಗೆರೆ: ವಾಹನ ತಪಾಸಣೆ ವೇಳೆ ಕಾರು ಹರಿದ ಪರಿಣಾಮ ಆರ್ ಟಿ ಒ ವಾಹನ ಚಾಲಕ ಮೃತಪಟ್ಟ ಘಟನೆ ಜಗಳೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ನಡೆದಿದೆ.

ದೊಣ್ಣೆಹಳ್ಳಿ ಸಮೀಪ ಈ ಅಪಘಾತ ನಡೆದಿದ್ದು, ಆರ್.ಟಿ.ಓ.ವಾಹನ ಚಾಲಕರಾದ ದಾವಣಗೆರೆ ಸಮೀಪದ ಮಳಲ್ಕೆರೆ ಗ್ರಾಮದ ಅಜ್ಜಪ್ಪ ಸಾವನ್ನಪ್ಪಿದವರು ಎಂದು ಗುರುತಿಸಲಾಗಿದೆ.

ದೊಣ್ಣೆಹಳ್ಳಿ ಬಳಿ ಲಾರಿಗಳ ದಾಖಲೆಯನ್ನು ಆರ್ ಟಿ ಒ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದರು. ಈ ವೇಳೆ ಚಿತ್ರದುರ್ಗ ಕಡೆಯಿಂದ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಆರ್ ಟಿ ಒ ವಾಹನ ಚಾಲಕನ ಮೇಲೆ ಹರಿದಿದೆ. ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ‌. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಮೂರು ದಿನಗಳ ಹಿಂದೆಯಷ್ಟೇ ಎರಡು ಲಾರಿಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಸಜೀವ ದಹನವಾದ ಹಿನ್ನೆಲೆಯಲ್ಲಿ ಆರ್ ಟಿ ಒ ಅಧಿಕಾರಿಗಳು ತಪಾಸಣೆ ಬಿಗಿಗೊಳಿಸಿದ್ದರು.Body:KN_DVG_02_28_ACCIDENT_SCRIPT_7203307


ಕಾರು ಹರಿದ ಪರಿಣಾಮ ಆರ್ ಟಿ ಒ ವಾಹನ ಚಾಲಕ ದುರ್ಮರಣ...!

ದಾವಣಗೆರೆ: ವಾಹನ ತಪಾಸಣೆ ವೇಳೆ ಕಾರು ಹರಿದ ಪರಿಣಾಮ ಆರ್ ಟಿ ಒ ವಾಹನ ಚಾಲಕ ಮೃತಪಟ್ಟ ಘಟನೆ ಜಗಳೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ನಡೆದಿದೆ.

ದೊಣ್ಣೆಹಳ್ಳಿ ಸಮೀಪ ಈ ಅಪಘಾತ ನಡೆದಿದ್ದು, ಆರ್.ಟಿ.ಓ.ವಾಹನ ಚಾಲಕರಾದ ದಾವಣಗೆರೆ ಸಮೀಪದ ಮಳಲ್ಕೆರೆ ಗ್ರಾಮದ ಅಜ್ಜಪ್ಪ ಸಾವನ್ನಪ್ಪಿದವರು ಎಂದು ಗುರುತಿಸಲಾಗಿದೆ.

ದೊಣ್ಣೆಹಳ್ಳಿ ಬಳಿ ಲಾರಿಗಳ ದಾಖಲೆಯನ್ನು ಆರ್ ಟಿ ಒ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದರು. ಈ ವೇಳೆ ಚಿತ್ರದುರ್ಗ ಕಡೆಯಿಂದ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಆರ್ ಟಿ ಒ ವಾಹನ ಚಾಲಕನ ಮೇಲೆ ಹರಿದಿದೆ. ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ‌. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಮೂರು ದಿನಗಳ ಹಿಂದೆಯಷ್ಟೇ ಎರಡು ಲಾರಿಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಸಜೀವ ದಹನವಾದ ಹಿನ್ನೆಲೆಯಲ್ಲಿ ಆರ್ ಟಿ ಒ ಅಧಿಕಾರಿಗಳು ತಪಾಸಣೆ ಬಿಗಿಗೊಳಿಸಿದ್ದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.