ETV Bharat / state

ದಾವಣಗೆರೆಯಲ್ಲಿ ಕೊರೊನಾಕ್ಕೆ 9 ಮಂದಿ ಬಲಿ: 157 ಮಂದಿಯಲ್ಲಿ ಪಾಸಿಟಿವ್..

author img

By

Published : Aug 9, 2020, 9:33 PM IST

ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾಕ್ಕೆ 9 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 89ಕ್ಕೇರಿದೆ. 157 ಮಂದಿಗೆ ಕೊರೊನಾ ವೈರಸ್ ತಗುಲಿದೆ.

Davanagere
ದಾವಣಗೆರೆ

ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾಕ್ಕೆ 9 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 89ಕ್ಕೇರಿದೆ. 157 ಮಂದಿಗೆ ಕೊರೊನಾ ವೈರಸ್ ತಗುಲಿದ್ದು, ಇದರಿಂದ ಸೋಂಕಿತರ ಸಂಖ್ಯೆ 3,435ಕ್ಕೇರಿದೆ.

ದಾವಣಗೆರೆಯ ಜಾಲಿನಗರದ 38 ವರ್ಷದ ಪುರುಷ ಆಗಸ್ಟ್ 1, ಜೈನ್ ಲೇಔಟ್​ನ 65 ವರ್ಷದ ವೃದ್ಧ, ಹರಿಹರದ ಕಾಳಿಕಾದೇವಿ ರಸ್ತೆಯ 48 ವರ್ಷದ ಪುರುಷ, ದಾವಣಗೆರೆಯ ಎಸ್​ಪಿಎಸ್ ನಗರದ 55 ವರ್ಷದ ಪುರುಷ ಆಗಸ್ಟ್ 6, ಆಜಾದ್ ನಗರದ 75 ವರ್ಷದ ವೃದ್ಧ ಆಗಸ್ಟ್ 5, ಹರಿಹರದ ಜೆ.ಸಿ. ಬಡಾವಣೆಯ 55 ವರ್ಷದ ವೃದ್ಧೆ, ದಾವಣಗೆರೆ ತಾಲೂಕಿನ ಕುಕ್ಕುವಾಡದ 54 ವರ್ಷದ ಪುರುಷ ಆಗಸ್ಟ್ 7, ರೇಣುಕಾ ಲೇಔಟ್​ನ 63 ವರ್ಷದ ವೃದ್ಧ ಹಾಗೂ ವಿನಾಯಕ ನಗರದ 49 ವರ್ಷದ ಪುರುಷ ಆಗಸ್ಟ್ 8 ರಂದು ಮೃತಪಟ್ಟಿದ್ದಾರೆ. ಎಲ್ಲರೂ ಕೋವಿಡ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ದಾವಣಗೆರೆಯಲ್ಲಿ 106, ಹರಿಹರ 9, ಜಗಳೂರು 17, ಚನ್ನಗಿರಿ 5, ಹೊನ್ನಾಳಿ 7, ಹೊರ ಜಿಲ್ಲೆಯಿಂದ ಬಂದ ಮೂವರಲ್ಲಿ ವೈರಾಣು ಇರುವುದು ದೃಢಪಟ್ಟಿದೆ. 2 ಹಾಗೂ 6 ವರ್ಷದ ಬಾಲಕಿ, 80 ವರ್ಷದ ವೃದ್ಧ ಸೇರಿ 118 ಮಂದಿ ಆಸ್ಪತ್ರೆಯಿಂದ ಸಂಪೂರ್ಣವಾಗಿ ಕೊರೊನಾದಿಂದ ಬಿಡುಗಡೆ ಹೊಂದಿದ್ದು, ಇದುವರೆಗೆ 2,227 ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ. 1119 ಸಕ್ರಿಯ ಪ್ರಕರಣಗಳಿದ್ದು ಚಿಕಿತ್ಸೆ ಮುಂದುವರಿದಿದೆ.

ಇನ್ನು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ. ರಾಜೀವ್ ಅವರಿಗೂ ಕೊರೊನಾ ಇರುವುದು ದೃಢಪಟ್ಟಿದೆ. ಸೋಂಕು ತಗುಲಿರುವುದನ್ನು ಖಚಿತಪಡಿಸಿರುವ ರಾಜೀವ್ ಅವರು, ನಾನು ಕ್ಷೇಮವಾಗಿದ್ದೇನೆ.‌ ನನ್ನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರಿಗೆ ಫೋನ್ ಮೂಲಕ ತಿಳಿಸಿದ್ದೇನೆ. ಹೋಮ್ ಐಸೊಲೇಷನ್​ನಲ್ಲಿ ಇರಲು ವೈದ್ಯರು ಸೂಚಿಸಿದ್ದಾರೆ. ಹಾಗಾಗಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾಕ್ಕೆ 9 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 89ಕ್ಕೇರಿದೆ. 157 ಮಂದಿಗೆ ಕೊರೊನಾ ವೈರಸ್ ತಗುಲಿದ್ದು, ಇದರಿಂದ ಸೋಂಕಿತರ ಸಂಖ್ಯೆ 3,435ಕ್ಕೇರಿದೆ.

ದಾವಣಗೆರೆಯ ಜಾಲಿನಗರದ 38 ವರ್ಷದ ಪುರುಷ ಆಗಸ್ಟ್ 1, ಜೈನ್ ಲೇಔಟ್​ನ 65 ವರ್ಷದ ವೃದ್ಧ, ಹರಿಹರದ ಕಾಳಿಕಾದೇವಿ ರಸ್ತೆಯ 48 ವರ್ಷದ ಪುರುಷ, ದಾವಣಗೆರೆಯ ಎಸ್​ಪಿಎಸ್ ನಗರದ 55 ವರ್ಷದ ಪುರುಷ ಆಗಸ್ಟ್ 6, ಆಜಾದ್ ನಗರದ 75 ವರ್ಷದ ವೃದ್ಧ ಆಗಸ್ಟ್ 5, ಹರಿಹರದ ಜೆ.ಸಿ. ಬಡಾವಣೆಯ 55 ವರ್ಷದ ವೃದ್ಧೆ, ದಾವಣಗೆರೆ ತಾಲೂಕಿನ ಕುಕ್ಕುವಾಡದ 54 ವರ್ಷದ ಪುರುಷ ಆಗಸ್ಟ್ 7, ರೇಣುಕಾ ಲೇಔಟ್​ನ 63 ವರ್ಷದ ವೃದ್ಧ ಹಾಗೂ ವಿನಾಯಕ ನಗರದ 49 ವರ್ಷದ ಪುರುಷ ಆಗಸ್ಟ್ 8 ರಂದು ಮೃತಪಟ್ಟಿದ್ದಾರೆ. ಎಲ್ಲರೂ ಕೋವಿಡ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ದಾವಣಗೆರೆಯಲ್ಲಿ 106, ಹರಿಹರ 9, ಜಗಳೂರು 17, ಚನ್ನಗಿರಿ 5, ಹೊನ್ನಾಳಿ 7, ಹೊರ ಜಿಲ್ಲೆಯಿಂದ ಬಂದ ಮೂವರಲ್ಲಿ ವೈರಾಣು ಇರುವುದು ದೃಢಪಟ್ಟಿದೆ. 2 ಹಾಗೂ 6 ವರ್ಷದ ಬಾಲಕಿ, 80 ವರ್ಷದ ವೃದ್ಧ ಸೇರಿ 118 ಮಂದಿ ಆಸ್ಪತ್ರೆಯಿಂದ ಸಂಪೂರ್ಣವಾಗಿ ಕೊರೊನಾದಿಂದ ಬಿಡುಗಡೆ ಹೊಂದಿದ್ದು, ಇದುವರೆಗೆ 2,227 ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ. 1119 ಸಕ್ರಿಯ ಪ್ರಕರಣಗಳಿದ್ದು ಚಿಕಿತ್ಸೆ ಮುಂದುವರಿದಿದೆ.

ಇನ್ನು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ. ರಾಜೀವ್ ಅವರಿಗೂ ಕೊರೊನಾ ಇರುವುದು ದೃಢಪಟ್ಟಿದೆ. ಸೋಂಕು ತಗುಲಿರುವುದನ್ನು ಖಚಿತಪಡಿಸಿರುವ ರಾಜೀವ್ ಅವರು, ನಾನು ಕ್ಷೇಮವಾಗಿದ್ದೇನೆ.‌ ನನ್ನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರಿಗೆ ಫೋನ್ ಮೂಲಕ ತಿಳಿಸಿದ್ದೇನೆ. ಹೋಮ್ ಐಸೊಲೇಷನ್​ನಲ್ಲಿ ಇರಲು ವೈದ್ಯರು ಸೂಚಿಸಿದ್ದಾರೆ. ಹಾಗಾಗಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.