ETV Bharat / state

ಮಂಗಳೂರಿಗೆ ಸಂದರ್ಶನಕ್ಕಾಗಿ ಬಂದಿದ್ದ ಯುವತಿಗೆ ಕಿರುಕುಳ: ಆರೋಪಿ ಬಂಧನ

author img

By

Published : Jun 8, 2022, 4:47 PM IST

ಇಂಟರ್ ​ವ್ಯೂಗಾಗಿ ಬಸ್​ನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಯುವತಿಗೆ ಕಿರುಕುಳ ನೀಡಿದ ಆರೋಪಿಯನ್ನು ಕಂಕನಾಡಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

Muhammed Mustafa arrested
ಆರೋಪಿ ಮುಹಮ್ಮದ್ ಮುಸ್ತಫನ ಬಂಧನ

ಮಂಗಳೂರು: ಖಾಸಗಿ ವಿಮಾನಯಾನ ಸಂಸ್ಥೆಯೊಂದರಲ್ಲಿ ಕೆಲಸಕ್ಕಾಗಿ ಇಂಟರ್ ವ್ಯೂಗೆ ಬೆಂಗಳೂರಿನಿಂದ ಬಸ್​ನಲ್ಲಿ ಬರುತ್ತಿದ್ದ, ಯುವತಿಯೊಬ್ಬರಿಗೆ ಕಿರುಕುಳ ನೀಡಿದ ಆರೋಪಿಯನ್ನು ಕಂಕನಾಡಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಿ ಸಿ ರೋಡ್ ನಿವಾಸಿ ಮಹಮ್ಮದ್ ಮುಸ್ತಫ ಬಂಧಿತ ಆರೋಪಿ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಜೂನ್ 7 ರಂದು ಸಂದರ್ಶನಕ್ಕೆಂದು ಬರುವ ವೇಳೆ ಈ ಘಟನೆ ನಡೆದಿದೆ.

ಆರೋಪಿ ಮುಹಮ್ಮದ್ ಮುಸ್ತಫನ ಬಂಧನ
ಆರೋಪಿ ಮಹಮ್ಮದ್ ಮುಸ್ತಫನ ಬಂಧನ

ಈಕೆ ಬೆಂಗಳೂರಿನಿಂದ ಖಾಸಗಿ ಬಸ್​ನಲ್ಲಿ ಮಂಗಳೂರಿಗೆ ಬರುತ್ತಿದ್ದಾಗ, ಈಕೆಯ ಸನಿಹದ ಸೀಟ್​ನಲ್ಲಿದ್ದ ಯುವಕನೋರ್ವ ಕಿರುಕುಳ ನೀಡಿದ್ದಾನೆ. ಇದನ್ನು ಈಕೆ ಬಸ್​ನಲ್ಲಿದ್ದ ಇತರ ಪ್ರಯಾಣಿಕರಿಗೆ ತಿಳಿಸಿದ್ದಾಳೆ. ಬಸ್ ನಗರದ ಪಂಪ್ ವೆಲ್ ‌ನಿಲ್ದಾಣಕ್ಕೆ ಬಂದ ವೇಳೆ ಬಸ್​ನಿಂದ ಇಳಿದು ಈತ ಪರಾರಿಯಾಗಿದ್ದ. ಇಂಟರ್ ವ್ಯೂ ಮುಗಿದ ಬಳಿಕ ಕಂಕನಾಡಿ ನಗರ ಠಾಣೆಯಲ್ಲಿ ಯುವತಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಇಂದು ಬಂಧಿಸಿದ್ದಾರೆ.

ಇದನ್ನೂ ಓದಿ: 'ಇದು ನಾಚಿಕೆಗೇಡು' ಬೆಂಗಳೂರಿನ ರಸ್ತೆ ದುರವಸ್ಥೆ ಬಗ್ಗೆ ಕಿರಣ್ ಮಂಜುಂದಾರ್ ಷಾ ಕಿಡಿ

ಮಂಗಳೂರು: ಖಾಸಗಿ ವಿಮಾನಯಾನ ಸಂಸ್ಥೆಯೊಂದರಲ್ಲಿ ಕೆಲಸಕ್ಕಾಗಿ ಇಂಟರ್ ವ್ಯೂಗೆ ಬೆಂಗಳೂರಿನಿಂದ ಬಸ್​ನಲ್ಲಿ ಬರುತ್ತಿದ್ದ, ಯುವತಿಯೊಬ್ಬರಿಗೆ ಕಿರುಕುಳ ನೀಡಿದ ಆರೋಪಿಯನ್ನು ಕಂಕನಾಡಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಿ ಸಿ ರೋಡ್ ನಿವಾಸಿ ಮಹಮ್ಮದ್ ಮುಸ್ತಫ ಬಂಧಿತ ಆರೋಪಿ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಜೂನ್ 7 ರಂದು ಸಂದರ್ಶನಕ್ಕೆಂದು ಬರುವ ವೇಳೆ ಈ ಘಟನೆ ನಡೆದಿದೆ.

ಆರೋಪಿ ಮುಹಮ್ಮದ್ ಮುಸ್ತಫನ ಬಂಧನ
ಆರೋಪಿ ಮಹಮ್ಮದ್ ಮುಸ್ತಫನ ಬಂಧನ

ಈಕೆ ಬೆಂಗಳೂರಿನಿಂದ ಖಾಸಗಿ ಬಸ್​ನಲ್ಲಿ ಮಂಗಳೂರಿಗೆ ಬರುತ್ತಿದ್ದಾಗ, ಈಕೆಯ ಸನಿಹದ ಸೀಟ್​ನಲ್ಲಿದ್ದ ಯುವಕನೋರ್ವ ಕಿರುಕುಳ ನೀಡಿದ್ದಾನೆ. ಇದನ್ನು ಈಕೆ ಬಸ್​ನಲ್ಲಿದ್ದ ಇತರ ಪ್ರಯಾಣಿಕರಿಗೆ ತಿಳಿಸಿದ್ದಾಳೆ. ಬಸ್ ನಗರದ ಪಂಪ್ ವೆಲ್ ‌ನಿಲ್ದಾಣಕ್ಕೆ ಬಂದ ವೇಳೆ ಬಸ್​ನಿಂದ ಇಳಿದು ಈತ ಪರಾರಿಯಾಗಿದ್ದ. ಇಂಟರ್ ವ್ಯೂ ಮುಗಿದ ಬಳಿಕ ಕಂಕನಾಡಿ ನಗರ ಠಾಣೆಯಲ್ಲಿ ಯುವತಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಇಂದು ಬಂಧಿಸಿದ್ದಾರೆ.

ಇದನ್ನೂ ಓದಿ: 'ಇದು ನಾಚಿಕೆಗೇಡು' ಬೆಂಗಳೂರಿನ ರಸ್ತೆ ದುರವಸ್ಥೆ ಬಗ್ಗೆ ಕಿರಣ್ ಮಂಜುಂದಾರ್ ಷಾ ಕಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.