ETV Bharat / state

ಯೋಗಿ ಆದಿತ್ಯನಾಥ್​ಗೂ ಮಂಗಳೂರಿಗೂ ಭಾರಿ ನಂಟು: ಕದ್ರಿ ಯೋಗೀಶ್ವರ ಮಠದಲ್ಲಿ ಕಳೆಕಟ್ಟಿದ ಸಂಭ್ರಮ

author img

By

Published : Mar 28, 2022, 7:38 AM IST

ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಾಥಪಂಥದ ಮೂಲ ಮಠವಾದ ಉತ್ತರದ ತ್ರಯಂಬಕೇಶ್ವರದ ಗೋರಖ್ ಪುರ ಮಠದ ಮಠಾಧೀಶ. ಈ ಗೋರಖ್ ಪುರ ಮಠಕ್ಕೂ ಕದ್ರಿಯ ಯೋಗೀಶ್ವರ ಮಠಕ್ಕೂ ನಿಕಟವಾದ ಸಂಬಂಧವಿದೆ. ಕದ್ರಿಯ ಯೋಗೀಶ್ವರ ಮಠದ ಪೀಠಾಧಿಪತಿಯನ್ನು ಆಯ್ಕೆ ಮಾಡುವ ಅಧಿಕಾರವಿರುವುದು ಗೋರಖ್ ಪುರದ ಮಠಾಧೀಶರಿಗೆ. ಹಾಗಾಗಿ, ಆದಿತ್ಯನಾಥ್​ಗೂ ಮಂಗಳೂರಿಗೂ ಭಾರಿ ನಿಕಟವಾದ ನಂಟಿದೆ.

ಕದ್ರಿ ಯೋಗೀಶ್ವರ ಮಠ
ಕದ್ರಿ ಯೋಗೀಶ್ವರ ಮಠ

ಮಂಗಳೂರು: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ಗೂ ಮಂಗಳೂರಿಗೂ ಭಾರಿ ನಿಕಟವಾದ ನಂಟಿದೆ. ಅದೇ ಕಾರಣಕ್ಕೆ ಅವರು ಯುಪಿಯ ಸಿಎಂ ಗಾದಿಯನ್ನು ಎರಡನೇ ಬಾರಿ ಅಲಂಕರಿಸಿದಾಗ ಮಂಗಳೂರಿನ ಕದ್ರಿ ಯೋಗೀಶ್ವರ ಮಠದಲ್ಲಿ ಸಂಭ್ರಮ ಕಳೆಗಟ್ಟಿತ್ತು. ಹಾಗಾದರೆ, ಯೋಗಿ ಆದಿತ್ಯನಾಥ್​ಗೂ ಕದ್ರಿಯ ಯೋಗೀಶ್ವರ ಮಠಕ್ಕೂ ಇರುವ ಸಂಬಂಧವೇನು?.

ಸಿಎಂ ಯೋಗಿಯವರು ನಾಥಪಂಥದ ಮೂಲ ಮಠವಾದ ಉತ್ತರದ ತ್ರಯಂಬಕೇಶ್ವರದ ಗೋರಖ್ ಪುರ ಮಠದ ಮಠಾಧೀಶ. ಈ ಗೋರಖ್ ಪುರ ಮಠಕ್ಕೂ ಕದ್ರಿಯ ಯೋಗೀಶ್ವರ ಮಠಕ್ಕೂ ನಿಕಟವಾದ ಸಂಬಂಧವಿದೆ. ಕದ್ರಿಯ ಯೋಗೀಶ್ವರ ಮಠದ ಪೀಠಾಧಿಪತಿ ಆಯ್ಕೆ ಮಾಡುವ ಅಧಿಕಾರವಿರುವುದು ಗೋರಖ್ ಪುರದ ಮಠಾಧೀಶರಿಗೆ.

ಈಗಿನ ಗೋರಖ್​​​​ಪುರದ ಮಠದ ಮಠಾಧೀಶರಾಗಿರೋದು ಯೋಗಿ ಆದಿತ್ಯನಾಥರು. ಪ್ರಸ್ತುತ ಕದ್ರಿ ಮಠದಲ್ಲಿರುವ ಮಠಾಧೀಶರ ಆಯ್ಕೆಯಲ್ಲೂ ಯೋಗಿ ಆದಿತ್ಯನಾಥರು ಪ್ರಮುಖ ಪಾತ್ರ ವಹಿಸಿದ್ದರು. 2016ರಲ್ಲಿ ಕದ್ರಿ ಮಠದ ಪೀಠಾಧಿಪತಿ ನಿರ್ಮಲನಾಥ ಜೀಯವರ ಪಟ್ಟಾಭಿಷೇಕವನ್ನು ಯೋಗಿ ಆದಿತ್ಯನಾಥರವರೇ ನೆರವೇರಿಸಿದ್ದರು. ಆಗ 12 ವರ್ಷಗಳಿಗೊಮ್ಮೆ ಉತ್ತರದಿಂದ ಬರುವ ಝಂಡಿಯಲ್ಲೂ ಯೋಗಿ ಆದಿತ್ಯನಾಥರು ಭಾಗವಹಿಸಿದ್ದರು.

ಕದ್ರಿ ಯೋಗೀಶ್ವರ ಮಠ

ಯೋಗಿ ಆದಿತ್ಯನಾಥರು 2017ರಲ್ಲಿ ಮೊದಲ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದರು. ಇದೀಗ 2ನೇ ಬಾರಿಗೆ ಮತ್ತೆ ಅವರೇ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ‌. ಇದು ಕದ್ರಿ ಯೋಗೀಶ್ವರ ಮಠಕ್ಕೆ ಹೆಮ್ಮೆಯ ವಿಚಾರ. ಆ ಕಾರಣದಿಂದಲೇ ಕದ್ರಿ ಯೋಗೀಶ್ವರ ಮಠದಲ್ಲಿ ಸಂಭ್ರಮದ ಕಳೆಗಟ್ಟಿದೆ.

ಈ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥರು 2ನೇ ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ದಿನ ಕದ್ರಿ ಯೋಗೀಶ್ವರ ಮಠದಲ್ಲಿ ಮಧ್ಯಾಹ್ನದ ರೂಟ್ ಪೂಜೆ, ಶ್ರೀ ಕಾಳಭೈರವನಿಗೆ ಸೀಯಾಳಾಭಿಷೇಕ, ವಿಶೇಷ ಪೂಜೆ ಸಲ್ಲಿಸಿ,ಅವರು ಇನ್ನಷ್ಟು ಯಶಸ್ಸು ಸಾಧಿಸಲೆಂದು ಪ್ರಾರ್ಥಿಸಲಾಯಿತು ಅಂತಾ ಕದ್ರಿ ಯೋಗೀಶ್ವರ ಮಠದ ಪೀಠಾಧಿಪತಿ ಯೋಗಿ ನಿರ್ಮಲನಾಥ ಜೀ ತಿಳಿಸಿದ್ದಾರೆ.

ಇದನ್ನೂ ಓದಿ: ಮದ್ಯದಿಂದಲೇ ಅಭಿಷೇಕ, ಸಿಗರೇಟ್​ ಆರತಿ: ಕಾರವಾರದಲ್ಲೊಂದು ವಿಶಿಷ್ಟ ದೇವರು

ಮಂಗಳೂರು: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ಗೂ ಮಂಗಳೂರಿಗೂ ಭಾರಿ ನಿಕಟವಾದ ನಂಟಿದೆ. ಅದೇ ಕಾರಣಕ್ಕೆ ಅವರು ಯುಪಿಯ ಸಿಎಂ ಗಾದಿಯನ್ನು ಎರಡನೇ ಬಾರಿ ಅಲಂಕರಿಸಿದಾಗ ಮಂಗಳೂರಿನ ಕದ್ರಿ ಯೋಗೀಶ್ವರ ಮಠದಲ್ಲಿ ಸಂಭ್ರಮ ಕಳೆಗಟ್ಟಿತ್ತು. ಹಾಗಾದರೆ, ಯೋಗಿ ಆದಿತ್ಯನಾಥ್​ಗೂ ಕದ್ರಿಯ ಯೋಗೀಶ್ವರ ಮಠಕ್ಕೂ ಇರುವ ಸಂಬಂಧವೇನು?.

ಸಿಎಂ ಯೋಗಿಯವರು ನಾಥಪಂಥದ ಮೂಲ ಮಠವಾದ ಉತ್ತರದ ತ್ರಯಂಬಕೇಶ್ವರದ ಗೋರಖ್ ಪುರ ಮಠದ ಮಠಾಧೀಶ. ಈ ಗೋರಖ್ ಪುರ ಮಠಕ್ಕೂ ಕದ್ರಿಯ ಯೋಗೀಶ್ವರ ಮಠಕ್ಕೂ ನಿಕಟವಾದ ಸಂಬಂಧವಿದೆ. ಕದ್ರಿಯ ಯೋಗೀಶ್ವರ ಮಠದ ಪೀಠಾಧಿಪತಿ ಆಯ್ಕೆ ಮಾಡುವ ಅಧಿಕಾರವಿರುವುದು ಗೋರಖ್ ಪುರದ ಮಠಾಧೀಶರಿಗೆ.

ಈಗಿನ ಗೋರಖ್​​​​ಪುರದ ಮಠದ ಮಠಾಧೀಶರಾಗಿರೋದು ಯೋಗಿ ಆದಿತ್ಯನಾಥರು. ಪ್ರಸ್ತುತ ಕದ್ರಿ ಮಠದಲ್ಲಿರುವ ಮಠಾಧೀಶರ ಆಯ್ಕೆಯಲ್ಲೂ ಯೋಗಿ ಆದಿತ್ಯನಾಥರು ಪ್ರಮುಖ ಪಾತ್ರ ವಹಿಸಿದ್ದರು. 2016ರಲ್ಲಿ ಕದ್ರಿ ಮಠದ ಪೀಠಾಧಿಪತಿ ನಿರ್ಮಲನಾಥ ಜೀಯವರ ಪಟ್ಟಾಭಿಷೇಕವನ್ನು ಯೋಗಿ ಆದಿತ್ಯನಾಥರವರೇ ನೆರವೇರಿಸಿದ್ದರು. ಆಗ 12 ವರ್ಷಗಳಿಗೊಮ್ಮೆ ಉತ್ತರದಿಂದ ಬರುವ ಝಂಡಿಯಲ್ಲೂ ಯೋಗಿ ಆದಿತ್ಯನಾಥರು ಭಾಗವಹಿಸಿದ್ದರು.

ಕದ್ರಿ ಯೋಗೀಶ್ವರ ಮಠ

ಯೋಗಿ ಆದಿತ್ಯನಾಥರು 2017ರಲ್ಲಿ ಮೊದಲ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದರು. ಇದೀಗ 2ನೇ ಬಾರಿಗೆ ಮತ್ತೆ ಅವರೇ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ‌. ಇದು ಕದ್ರಿ ಯೋಗೀಶ್ವರ ಮಠಕ್ಕೆ ಹೆಮ್ಮೆಯ ವಿಚಾರ. ಆ ಕಾರಣದಿಂದಲೇ ಕದ್ರಿ ಯೋಗೀಶ್ವರ ಮಠದಲ್ಲಿ ಸಂಭ್ರಮದ ಕಳೆಗಟ್ಟಿದೆ.

ಈ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥರು 2ನೇ ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ದಿನ ಕದ್ರಿ ಯೋಗೀಶ್ವರ ಮಠದಲ್ಲಿ ಮಧ್ಯಾಹ್ನದ ರೂಟ್ ಪೂಜೆ, ಶ್ರೀ ಕಾಳಭೈರವನಿಗೆ ಸೀಯಾಳಾಭಿಷೇಕ, ವಿಶೇಷ ಪೂಜೆ ಸಲ್ಲಿಸಿ,ಅವರು ಇನ್ನಷ್ಟು ಯಶಸ್ಸು ಸಾಧಿಸಲೆಂದು ಪ್ರಾರ್ಥಿಸಲಾಯಿತು ಅಂತಾ ಕದ್ರಿ ಯೋಗೀಶ್ವರ ಮಠದ ಪೀಠಾಧಿಪತಿ ಯೋಗಿ ನಿರ್ಮಲನಾಥ ಜೀ ತಿಳಿಸಿದ್ದಾರೆ.

ಇದನ್ನೂ ಓದಿ: ಮದ್ಯದಿಂದಲೇ ಅಭಿಷೇಕ, ಸಿಗರೇಟ್​ ಆರತಿ: ಕಾರವಾರದಲ್ಲೊಂದು ವಿಶಿಷ್ಟ ದೇವರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.