ETV Bharat / state

ಮಂಗಳೂರಲ್ಲಿ ರಸ್ತೆ ವಿಭಜಕ ದಾಟಿ ಡಿಕ್ಕಿ ಹೊಡೆದ ಐಷಾರಾಮಿ ಕಾರು.. ಸರಣಿ ಅಪಘಾತದಲ್ಲಿ ಇಬ್ಬರು ಗಂಭೀರ

author img

By

Published : Apr 9, 2022, 5:54 PM IST

Updated : Apr 9, 2022, 9:40 PM IST

ಅಪಘಾತ ನಡೆದ ಸ್ಥಳದಲ್ಲಿ ತಕ್ಷಣ ಜನ ಜಮಾಯಿಸಿದ್ದು, ಅಪಘಾತಕ್ಕೆ ಕಾರಣನಾದ ಬಿಎಂಡಬ್ಲ್ಯು ಕಾರು ಚಾಲಕ ಶ್ರವಣ್​ನನ್ನು ಕಾರಿನಿಂದ ಹೊರಗೆಳೆದು ಥಳಿಸಿದ್ದಾರೆ. ಅಪಘಾತದ ಸಂದರ್ಭದ ಭೀಕರ ದೃಶ್ಯ ಹಾಗೂ ಜನರು ಕಾರು ಚಾಲಕ ಯುವಕನನ್ನು ಥಳಿಸುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ..

two-seriously-injured-in-serial-accident-in-mangaluru
ಮಂಗಳೂರಲ್ಲಿ ರಸ್ತೆ ವಿಭಜಕ ದಾಟಿ ಡಿಕ್ಕಿ ಹೊಡೆದ ಐಷಾರಾಮಿ ಕಾರು

ಮಂಗಳೂರು : ಅತಿವೇಗದಿಂದ ಚಲಾಯಿಸುತ್ತಿದ್ದ ಬಿಎಂಡಬ್ಲ್ಯು ಕಾರೊಂದು ರಸ್ತೆ ವಿಭಜಕ ದಾಟಿ ಮತ್ತೊಂದು ಬದಿಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಗಳು ಹಾಗೂ ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಸರಣಿ ಅಪಘಾತ ಮಂಗಳೂರಿನ ಬಳ್ಳಾಲ್ ಭಾಗ್​ನಲ್ಲಿ ಇಂದು ಮಧ್ಯಾಹ್ನ 1.20ರ ಸುಮಾರಿಗೆ ಸಂಭವಿಸಿದೆ. ಘಟನೆಯಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಓರ್ವ ಮಹಿಳೆ ಹಾಗೂ ಕಾರಿನಲ್ಲಿದ್ದ ಏಳು ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಾರು ಚಾಲಕ‌ ಶ್ರವಣ್ ಕುಮಾರ್ ಎಂಬಾತ ಅತಿವೇಗದಿಂದ ಬಿಎಂಡಬ್ಲ್ಯು ಕಾರು ಚಲಾಯಿಸಿಕೊಂಡು ಬಂದಿದ್ದು, ಮದ್ಯದ ಮತ್ತಿನಲ್ಲಿದ್ದನೆಂದು ಹೇಳಲಾಗುತ್ತಿದೆ. ಪರಿಣಾಮ ಆತನ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ದಾಟಿ ಮತ್ತೊಂದು ಕಡೆಯಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನಗಳು ಹಾಗೂ ಕಾರುಗಳಿಗೆ ಡಿಕ್ಕಿ ಹೊಡೆದಿದೆ.

ಸರಣಿ ಅಪಘಾತದಲ್ಲಿ ಇಬ್ಬರು ಗಂಭೀರ

ಅಪಘಾತದಲ್ಲಿ ಎರಡು ಕಾರುಗಳ ಮಧ್ಯೆ ಸಿಲುಕಿದ ಸ್ಕೂಟರ್ ಸವಾರೆ ಪ್ರೀತಿ ಮನೋಜ್ (47) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಅಲ್ಲದೆ ಅಪಘಾತದ ಸಂದರ್ಭ ಮತ್ತೊಂದು ಕಾರಿನಲ್ಲಿದ್ದ ಏಳು ವರ್ಷದ ಬಾಲಕ ಅಮಯ್ ಜಯದೇವನ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾರೆ.

two-seriously-injured-in-serial-accident-in-mangaluru
ಸರಣಿ ಅಪಘಾತ

ಇದನ್ನೂ ಓದಿ: ಕೊನೆ ಪ್ರಯಾಣಿಕ ಇಳಿದ 5 ಸೆಕೆಂಡ್​ನಲ್ಲಿ ಇಡೀ ಬಸ್​ಗೆ ವ್ಯಾಪಿಸಿದ ಬೆಂಕಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಅಪಘಾತ ನಡೆದ ಸ್ಥಳದಲ್ಲಿ ತಕ್ಷಣ ಜನ ಜಮಾಯಿಸಿದ್ದು, ಅಪಘಾತಕ್ಕೆ ಕಾರಣನಾದ ಬಿಎಂಡಬ್ಲ್ಯು ಕಾರು ಚಾಲಕ ಶ್ರವಣ್​ನನ್ನು ಕಾರಿನಿಂದ ಹೊರಗೆಳೆದು ಥಳಿಸಿದ್ದಾರೆ. ಅಪಘಾತದ ಸಂದರ್ಭದ ಭೀಕರ ದೃಶ್ಯ ಹಾಗೂ ಜನರು ಕಾರು ಚಾಲಕ ಯುವಕನನ್ನು ಥಳಿಸುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಸಿಸಿಟಿವಿ ವಿಡಿಯೋ

ಮಣ್ಣಗುಡ್ಡ ನಿವಾಸಿಯಾಗಿರುವ ಶ್ರವಣ್ ಕುಮಾರ್ ಇಂಟಿರೀಯರ್ ಡೆಕೊರೇಟರ್ ಆಗಿದ್ದು, ದೇರೆಬೈಲ್​ನಲ್ಲಿ ಆಫೀಸ್​ ಹೊಂದಿದ್ದಾರೆ. ಈತ ಪಾನಮತ್ತನಾಗಿ ಕಾರು ಚಲಾಯಿಸಿದ್ದನೆಂದು ಹೇಳಲಾಗುತ್ತಿದೆ. ಈ ಬಗ್ಗೆ ತನಿಖೆಯಿಂದಷ್ಟೇ ಸತ್ಯಾಂಶ ಹೊರ ಬರಬೇಕಿದೆ. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪ್ರೀತಿಸಿ ಕೈಕೊಟ್ಟ ಯುವಕ ; ಮನನೊಂದು 5 ಜನ ಸ್ನೇಹಿತೆಯರೊಂದಿಗೆ ವಿಷ ಸೇವಿಸಿದ ಬಾಲಕಿ, ಮೂವರು ಸಾವು

ಮಂಗಳೂರು : ಅತಿವೇಗದಿಂದ ಚಲಾಯಿಸುತ್ತಿದ್ದ ಬಿಎಂಡಬ್ಲ್ಯು ಕಾರೊಂದು ರಸ್ತೆ ವಿಭಜಕ ದಾಟಿ ಮತ್ತೊಂದು ಬದಿಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಗಳು ಹಾಗೂ ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಸರಣಿ ಅಪಘಾತ ಮಂಗಳೂರಿನ ಬಳ್ಳಾಲ್ ಭಾಗ್​ನಲ್ಲಿ ಇಂದು ಮಧ್ಯಾಹ್ನ 1.20ರ ಸುಮಾರಿಗೆ ಸಂಭವಿಸಿದೆ. ಘಟನೆಯಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಓರ್ವ ಮಹಿಳೆ ಹಾಗೂ ಕಾರಿನಲ್ಲಿದ್ದ ಏಳು ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಾರು ಚಾಲಕ‌ ಶ್ರವಣ್ ಕುಮಾರ್ ಎಂಬಾತ ಅತಿವೇಗದಿಂದ ಬಿಎಂಡಬ್ಲ್ಯು ಕಾರು ಚಲಾಯಿಸಿಕೊಂಡು ಬಂದಿದ್ದು, ಮದ್ಯದ ಮತ್ತಿನಲ್ಲಿದ್ದನೆಂದು ಹೇಳಲಾಗುತ್ತಿದೆ. ಪರಿಣಾಮ ಆತನ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ದಾಟಿ ಮತ್ತೊಂದು ಕಡೆಯಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನಗಳು ಹಾಗೂ ಕಾರುಗಳಿಗೆ ಡಿಕ್ಕಿ ಹೊಡೆದಿದೆ.

ಸರಣಿ ಅಪಘಾತದಲ್ಲಿ ಇಬ್ಬರು ಗಂಭೀರ

ಅಪಘಾತದಲ್ಲಿ ಎರಡು ಕಾರುಗಳ ಮಧ್ಯೆ ಸಿಲುಕಿದ ಸ್ಕೂಟರ್ ಸವಾರೆ ಪ್ರೀತಿ ಮನೋಜ್ (47) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಅಲ್ಲದೆ ಅಪಘಾತದ ಸಂದರ್ಭ ಮತ್ತೊಂದು ಕಾರಿನಲ್ಲಿದ್ದ ಏಳು ವರ್ಷದ ಬಾಲಕ ಅಮಯ್ ಜಯದೇವನ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾರೆ.

two-seriously-injured-in-serial-accident-in-mangaluru
ಸರಣಿ ಅಪಘಾತ

ಇದನ್ನೂ ಓದಿ: ಕೊನೆ ಪ್ರಯಾಣಿಕ ಇಳಿದ 5 ಸೆಕೆಂಡ್​ನಲ್ಲಿ ಇಡೀ ಬಸ್​ಗೆ ವ್ಯಾಪಿಸಿದ ಬೆಂಕಿ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಅಪಘಾತ ನಡೆದ ಸ್ಥಳದಲ್ಲಿ ತಕ್ಷಣ ಜನ ಜಮಾಯಿಸಿದ್ದು, ಅಪಘಾತಕ್ಕೆ ಕಾರಣನಾದ ಬಿಎಂಡಬ್ಲ್ಯು ಕಾರು ಚಾಲಕ ಶ್ರವಣ್​ನನ್ನು ಕಾರಿನಿಂದ ಹೊರಗೆಳೆದು ಥಳಿಸಿದ್ದಾರೆ. ಅಪಘಾತದ ಸಂದರ್ಭದ ಭೀಕರ ದೃಶ್ಯ ಹಾಗೂ ಜನರು ಕಾರು ಚಾಲಕ ಯುವಕನನ್ನು ಥಳಿಸುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಸಿಸಿಟಿವಿ ವಿಡಿಯೋ

ಮಣ್ಣಗುಡ್ಡ ನಿವಾಸಿಯಾಗಿರುವ ಶ್ರವಣ್ ಕುಮಾರ್ ಇಂಟಿರೀಯರ್ ಡೆಕೊರೇಟರ್ ಆಗಿದ್ದು, ದೇರೆಬೈಲ್​ನಲ್ಲಿ ಆಫೀಸ್​ ಹೊಂದಿದ್ದಾರೆ. ಈತ ಪಾನಮತ್ತನಾಗಿ ಕಾರು ಚಲಾಯಿಸಿದ್ದನೆಂದು ಹೇಳಲಾಗುತ್ತಿದೆ. ಈ ಬಗ್ಗೆ ತನಿಖೆಯಿಂದಷ್ಟೇ ಸತ್ಯಾಂಶ ಹೊರ ಬರಬೇಕಿದೆ. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪ್ರೀತಿಸಿ ಕೈಕೊಟ್ಟ ಯುವಕ ; ಮನನೊಂದು 5 ಜನ ಸ್ನೇಹಿತೆಯರೊಂದಿಗೆ ವಿಷ ಸೇವಿಸಿದ ಬಾಲಕಿ, ಮೂವರು ಸಾವು

Last Updated : Apr 9, 2022, 9:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.