ETV Bharat / state

ಲಾಕ್​ಡೌನ್ ಚಾಲೆಂಜ್: ಹಾಡಾಗಿ ಮೂಡಿ ಬಂದ 25ಕ್ಕೂ ಅಧಿಕ ಹಳೆ-ಹೊಸ ತುಳು ಕವನಗಳು! - Tulu Poems become Song

ಫೇಸ್​ಬುಕ್​ ಮೂಲಕ ತುಳು ಕವಿ ಶಶಿರಾಜ್​ ಕಾವೂರು ಮಾಡಿರುವ ಚಾಲೆಂಜ್​ನಿಂದ ತುಳು ಭಾಷೆಯ ಹಳೆ ಕವಿತೆಗಳಿಗೆ 25ಕ್ಕೂ ಅಧಿಕ ಹೊಸ ಹಾಡುಗಳು ನಿರ್ಮಾಣಗೊಂಡಿವೆ.

ತುಳು ಕವಿ ಶಶಿರಾಜ್​ ಕಾವೂರು
ತುಳು ಕವಿ ಶಶಿರಾಜ್​ ಕಾವೂರು
author img

By

Published : May 29, 2020, 11:56 AM IST

ಮಂಗಳೂರು: ತುಳು ಕವಿ ಮಾಡಿರುವ ಚಾಲೆಂಜ್​ನಿಂದ ತುಳು ಭಾಷೆಯಲ್ಲಿ ಹೊಸ ಹಾಡುಗಳ ನಿರ್ಮಾಣಕ್ಕೆ ನಾಂದಿ ಹಾಡಿದೆ. ಫೇಸ್​ಬುಕ್​ನಲ್ಲಿ ತುಳು ಕವಿ ಮಾಡಿದ ಮನವಿಗೆ 25ಕ್ಕೂ ಅಧಿಕ ಹಾಡುಗಳು ನಿರ್ಮಾಣವಾಗಿದ್ದು, ತುಳು ಭಾಷೆಗೆ ದೊಡ್ಡ ಕೊಡುಗೆ ನೀಡಿದಂತಾಗಿದೆ.

ತುಳು ಕವಿ ಶಶಿರಾಜ್​ ಕಾವೂರು

ತುಳು ಕವಿ, ಸಿನಿಮಾ ಚಿತ್ರಕಥೆಗಾರ ಶಶಿರಾಜ್ ಕಾವೂರು ಲಾಕ್​ಡೌನ್ ಸಂದರ್ಭದಲ್ಲಿ ಫೇಸ್​ಬುಕ್ ಮೂಲಕ ಹೊಸ ಪ್ರಯತ್ನ ಆರಂಭಿಸಿದ್ದರು. ಹಿರಿಯ ಮತ್ತು ಕಿರಿಯ ಸಾಹಿತಿಗಳ ಕವನಗಳನ್ನು ಹುಡುಕಿ ಫೇಸ್​ಬುಕ್​ನಲ್ಲಿ ಅಪ್​ಲೋಡ್​​ ಮಾಡಿದ್ದರು. ಆದಿ ಪ್ರಾಸ, ಅಂತ್ಯ ಪ್ರಾಸವಿರುವ 250 ಕವನಗಳನ್ನು ಹುಡುಕಿ, ಇದಕ್ಕೆ ಸ್ವಂತ ಸಂಗೀತ ಮತ್ತು ರಾಗ ಸಂಯೋಜನೆ ಮಾಡಿ ಹಾಡುವಂತೆ ವಿನಂತಿಸಿದ್ದರು.

ತುಳು ಕವಿಗಳ ಕವಿತೆಯನ್ನು ಹಾಡಾಗಿಸುವ ವಿನಂತಿಯನ್ನು ಚಾಲೆಂಜ್ ಆಗಿ ತೆಗೆದುಕೊಂಡ ತುಳು ಪ್ರಿಯ ಹಾಡುಗಾರರು, ತುಳು ಕವಿತೆಗಳಿಗೆ ಸಂಗೀತ ನೀಡಿ ಹಾಡು ಹಾಡಿದ್ದಾರೆ. ಅದನ್ನು ಫೇಸ್​ಬುಕ್​ನಲ್ಲಿ ಅಪ್​ಲೋಡ್​ ಮಾಡಿದ್ದಾರೆ. ತುಳು ಕವಿತೆಗಳನ್ನು ಹಾಡುವ ವಿನಂತಿಯನ್ನು ಸ್ವೀಕರಿಸಿದ ಹಾಡುಗಾರರಲ್ಲಿ ಹಿರಿಯ ಹಾಗೂ ಕಿರಿಯ ಹಾಡುಗಾರರಿದ್ದಾರೆ.

ಇವರು ಹಾಡುಗಳನ್ನು ಸೃಷ್ಟಿಸಿ ಫೇಸ್​​ಬುಕ್​​ನಲ್ಲಿ ಹಾಕಿದ್ದು, ಈ ಹಾಡುಗಳನ್ನು ಸಾವಿರಾರು ಜನರು ವೀಕ್ಷಿಸಿದ್ದಾರೆ. ಲಾಕ್​ಡೌನ್ ಸಂದರ್ಭದಲ್ಲಿ ಶಶಿರಾಜ್ ಕಾವೂರು ಮಾಡಿದ ಈ ಹೊಸ ಪ್ರಯತ್ನದಿಂದ ತುಳು ಸಾಹಿತ್ಯ ಲೋಕಕ್ಕೊಂದು ಕೊಡುಗೆ ನೀಡಿದಂತಾಗಿದೆ. ಲಾಕ್​ಡೌನ್ ಸಂದರ್ಭದಲ್ಲಿ ಸಮಯದ ಸದ್ಬಳಕೆಯ ಜೊತೆಗೆ ತುಳು ಭಾಷೆಯ ಸಾಹಿತ್ಯವನ್ನು ಶ್ರೀಮಂತಗೊಳಿಸುವ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾದದ್ದು.

ಮಂಗಳೂರು: ತುಳು ಕವಿ ಮಾಡಿರುವ ಚಾಲೆಂಜ್​ನಿಂದ ತುಳು ಭಾಷೆಯಲ್ಲಿ ಹೊಸ ಹಾಡುಗಳ ನಿರ್ಮಾಣಕ್ಕೆ ನಾಂದಿ ಹಾಡಿದೆ. ಫೇಸ್​ಬುಕ್​ನಲ್ಲಿ ತುಳು ಕವಿ ಮಾಡಿದ ಮನವಿಗೆ 25ಕ್ಕೂ ಅಧಿಕ ಹಾಡುಗಳು ನಿರ್ಮಾಣವಾಗಿದ್ದು, ತುಳು ಭಾಷೆಗೆ ದೊಡ್ಡ ಕೊಡುಗೆ ನೀಡಿದಂತಾಗಿದೆ.

ತುಳು ಕವಿ ಶಶಿರಾಜ್​ ಕಾವೂರು

ತುಳು ಕವಿ, ಸಿನಿಮಾ ಚಿತ್ರಕಥೆಗಾರ ಶಶಿರಾಜ್ ಕಾವೂರು ಲಾಕ್​ಡೌನ್ ಸಂದರ್ಭದಲ್ಲಿ ಫೇಸ್​ಬುಕ್ ಮೂಲಕ ಹೊಸ ಪ್ರಯತ್ನ ಆರಂಭಿಸಿದ್ದರು. ಹಿರಿಯ ಮತ್ತು ಕಿರಿಯ ಸಾಹಿತಿಗಳ ಕವನಗಳನ್ನು ಹುಡುಕಿ ಫೇಸ್​ಬುಕ್​ನಲ್ಲಿ ಅಪ್​ಲೋಡ್​​ ಮಾಡಿದ್ದರು. ಆದಿ ಪ್ರಾಸ, ಅಂತ್ಯ ಪ್ರಾಸವಿರುವ 250 ಕವನಗಳನ್ನು ಹುಡುಕಿ, ಇದಕ್ಕೆ ಸ್ವಂತ ಸಂಗೀತ ಮತ್ತು ರಾಗ ಸಂಯೋಜನೆ ಮಾಡಿ ಹಾಡುವಂತೆ ವಿನಂತಿಸಿದ್ದರು.

ತುಳು ಕವಿಗಳ ಕವಿತೆಯನ್ನು ಹಾಡಾಗಿಸುವ ವಿನಂತಿಯನ್ನು ಚಾಲೆಂಜ್ ಆಗಿ ತೆಗೆದುಕೊಂಡ ತುಳು ಪ್ರಿಯ ಹಾಡುಗಾರರು, ತುಳು ಕವಿತೆಗಳಿಗೆ ಸಂಗೀತ ನೀಡಿ ಹಾಡು ಹಾಡಿದ್ದಾರೆ. ಅದನ್ನು ಫೇಸ್​ಬುಕ್​ನಲ್ಲಿ ಅಪ್​ಲೋಡ್​ ಮಾಡಿದ್ದಾರೆ. ತುಳು ಕವಿತೆಗಳನ್ನು ಹಾಡುವ ವಿನಂತಿಯನ್ನು ಸ್ವೀಕರಿಸಿದ ಹಾಡುಗಾರರಲ್ಲಿ ಹಿರಿಯ ಹಾಗೂ ಕಿರಿಯ ಹಾಡುಗಾರರಿದ್ದಾರೆ.

ಇವರು ಹಾಡುಗಳನ್ನು ಸೃಷ್ಟಿಸಿ ಫೇಸ್​​ಬುಕ್​​ನಲ್ಲಿ ಹಾಕಿದ್ದು, ಈ ಹಾಡುಗಳನ್ನು ಸಾವಿರಾರು ಜನರು ವೀಕ್ಷಿಸಿದ್ದಾರೆ. ಲಾಕ್​ಡೌನ್ ಸಂದರ್ಭದಲ್ಲಿ ಶಶಿರಾಜ್ ಕಾವೂರು ಮಾಡಿದ ಈ ಹೊಸ ಪ್ರಯತ್ನದಿಂದ ತುಳು ಸಾಹಿತ್ಯ ಲೋಕಕ್ಕೊಂದು ಕೊಡುಗೆ ನೀಡಿದಂತಾಗಿದೆ. ಲಾಕ್​ಡೌನ್ ಸಂದರ್ಭದಲ್ಲಿ ಸಮಯದ ಸದ್ಬಳಕೆಯ ಜೊತೆಗೆ ತುಳು ಭಾಷೆಯ ಸಾಹಿತ್ಯವನ್ನು ಶ್ರೀಮಂತಗೊಳಿಸುವ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾದದ್ದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.