ETV Bharat / state

ಬಸ್​ಗಳ ಮೇಲೆ ಕಲ್ಲು ತೂರಾಟ ಪ್ರಕರಣ: ಮಂಗಳೂರಲ್ಲಿ ಮೂವರು ಆರೋಪಿಗಳ ಬಂಧನ

author img

By

Published : Sep 17, 2019, 11:32 PM IST

ಮಂಗಳೂರಿನ ಮುಲ್ಕಿ ಠಾಣಾ ವ್ಯಾಪ್ತಿಯ ಭಟ್ಟಕೋಡಿ, ಕಿನ್ನಿಗೋಳಿ ಹಾಗೂ ಕಟೀಲು ಪೆಟ್ರೋಲ್ ಬಂಕ್ ಬಳಿ ರಾತ್ರಿ ವೇಳೆ ನಿಂತಿದ್ದ ಬಸ್​ಗಳ ಮೇಲೆ ಕಲ್ಲು ತೂರಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಸ್ ಗಳಿಗೆ ಕಲ್ಲು ತೂರಾಟ ಪ್ರಕರಣ; ಮೂವರು ಆರೋಪಿಗಳ ಬಂಧಿಸಿದ ಪೊಲೀಸರು

ಮಂಗಳೂರು: ಮುಲ್ಕಿ ಠಾಣಾ ವ್ಯಾಪ್ತಿಯ ಭಟ್ಟಕೋಡಿ, ಕಿನ್ನಿಗೋಳಿ ಹಾಗೂ ಕಟೀಲು ಪೆಟ್ರೋಲ್ ಬಂಕ್ ಬಳಿ ರಾತ್ರಿ ವೇಳೆ ನಿಂತಿದ್ದ ಬಸ್​ಗಳ ಮೇಲೆ ಕಲ್ಲು ತೂರಾಟ ನಡೆಸಿರುವ ಆರೋಪದ ಮೇಲೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕು ಪೆರಾಜೆ ಗ್ರಾಮದ ಬುಡೋಳಿ ನಿವಾಸಿ ಶಂಶೀರ್ ಎಂ.(27) ಹಾಗೂ, ಅಬ್ದುಲ್ ಸತ್ತಾರ್(21), ನರಿಕೊಂಬು ಗ್ರಾಮದ ನೆಹರು ನಗರ ನಿವಾಸಿ ಮಹಮ್ಮದ್ ರಿಯಾಜ್(28) ಬಂಧಿತ ಆರೋಪಿಗಳು.

Alto car
ಆರೋಪಿಗಳಿಂದ ಆಲ್ಟೋ ಕಾರನ್ನು ವಶಪಡಿಸಿಕೊಂಡಿರುವುದು
ಸೆ. 9ರಂದು ಮಧ್ಯರಾತ್ರಿ 2-3 ಗಂಟೆ ಸುಮಾರಿಗೆ ಮುಲ್ಕಿ ಠಾಣಾ ವ್ಯಾಪ್ತಿಯ ಭಟ್ಟಕೋಡಿ, ಕಿನ್ನಿಗೋಳಿ ಹಾಗೂ ಕಟೀಲು ಪೆಟ್ರೋಲ್ ಬಂಕ್ ಬಳಿ ನಿಂತಿದ್ದ 5 ಬಸ್​ಗಳ ಮೇಲೆ ಕಲ್ಲು ತೂರಾಡಿದ ಬಗ್ಗೆ ಮುಲ್ಕಿ ಮತ್ತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಲಾಗಿತ್ತು.
ಈ ಬಗ್ಗೆ ಪೊಲೀಸರು ವಿಶೇಷ ತಂಡ ರಚನೆ ಮಾಡಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮೂವರು ಆರೋಪಿಗಳನ್ನು ಕಾರ್ನಾಡು ಗ್ರಾಮದ ಕೊಲ್ನಾಡು ಎಂಬಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 3.50 ಲಕ್ಷ ರೂ. ಮೌಲ್ಯದ ಆಲ್ಟೋ ಕಾರನ್ನು ವಶಪಡಿಸಿಕೊಂಡಿದ್ದಾರೆ.


ಮಂಗಳೂರು: ಮುಲ್ಕಿ ಠಾಣಾ ವ್ಯಾಪ್ತಿಯ ಭಟ್ಟಕೋಡಿ, ಕಿನ್ನಿಗೋಳಿ ಹಾಗೂ ಕಟೀಲು ಪೆಟ್ರೋಲ್ ಬಂಕ್ ಬಳಿ ರಾತ್ರಿ ವೇಳೆ ನಿಂತಿದ್ದ ಬಸ್​ಗಳ ಮೇಲೆ ಕಲ್ಲು ತೂರಾಟ ನಡೆಸಿರುವ ಆರೋಪದ ಮೇಲೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕು ಪೆರಾಜೆ ಗ್ರಾಮದ ಬುಡೋಳಿ ನಿವಾಸಿ ಶಂಶೀರ್ ಎಂ.(27) ಹಾಗೂ, ಅಬ್ದುಲ್ ಸತ್ತಾರ್(21), ನರಿಕೊಂಬು ಗ್ರಾಮದ ನೆಹರು ನಗರ ನಿವಾಸಿ ಮಹಮ್ಮದ್ ರಿಯಾಜ್(28) ಬಂಧಿತ ಆರೋಪಿಗಳು.

Alto car
ಆರೋಪಿಗಳಿಂದ ಆಲ್ಟೋ ಕಾರನ್ನು ವಶಪಡಿಸಿಕೊಂಡಿರುವುದು
ಸೆ. 9ರಂದು ಮಧ್ಯರಾತ್ರಿ 2-3 ಗಂಟೆ ಸುಮಾರಿಗೆ ಮುಲ್ಕಿ ಠಾಣಾ ವ್ಯಾಪ್ತಿಯ ಭಟ್ಟಕೋಡಿ, ಕಿನ್ನಿಗೋಳಿ ಹಾಗೂ ಕಟೀಲು ಪೆಟ್ರೋಲ್ ಬಂಕ್ ಬಳಿ ನಿಂತಿದ್ದ 5 ಬಸ್​ಗಳ ಮೇಲೆ ಕಲ್ಲು ತೂರಾಡಿದ ಬಗ್ಗೆ ಮುಲ್ಕಿ ಮತ್ತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಲಾಗಿತ್ತು.
ಈ ಬಗ್ಗೆ ಪೊಲೀಸರು ವಿಶೇಷ ತಂಡ ರಚನೆ ಮಾಡಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮೂವರು ಆರೋಪಿಗಳನ್ನು ಕಾರ್ನಾಡು ಗ್ರಾಮದ ಕೊಲ್ನಾಡು ಎಂಬಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 3.50 ಲಕ್ಷ ರೂ. ಮೌಲ್ಯದ ಆಲ್ಟೋ ಕಾರನ್ನು ವಶಪಡಿಸಿಕೊಂಡಿದ್ದಾರೆ.


Intro:ಮಂಗಳೂರು: ಮುಲ್ಕಿ ಠಾಣಾ ವ್ಯಾಪ್ತಿಯ ಭಟ್ಟಕೋಡಿ, ಕಿನ್ನಿಗೋಳಿ ಹಾಗೂ ಕಟೀಲು ಪೆಟ್ರೋಲ್ ಬಂಕ್ ಬಳಿ ರಾತ್ರಿ ವೇಳೆ ನಿಂತಿರುವ ಬಸ್ ಗಳಿಗೆ ಕಲ್ಲು ತೂರಾಟ ನಡೆಸಿರುವ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಬುಡೋಳಿ ನಿವಾಸಿ ಶಂಶೀರ್ ಎಂ.(27) ಹಾಗೂ, ಅಬ್ದುಲ್ ಸತ್ತಾರ್(21), ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ನೆಹರು ನಗರ ನಿವಾಸಿ ಮಹಮ್ಮದ್ ರಿಯಾಜ್(28) ಬಂಧಿತ ಆರೋಪಿಗಳು.

Body:ಸೆಪ್ಟೆಂಬರ್ 9ರಂದು ಮಧ್ಯರಾತ್ರಿ 2-3 ಗಂಟೆ ಸುಮಾರಿಗೆ ಮುಲ್ಕಿ ಠಾಣಾ ವ್ಯಾಪ್ತಿಯ ಭಟ್ಟಕೋಡಿ, ಕಿನ್ನಿಗೋಳಿ ಹಾಗೂ ಕಟೀಲು ಪೆಟ್ರೋಲ್ ಬಂಕ್ ಬಳಿ ನಿಂತಿರುವ 5 ಬಸ್ ಗಳಿಗೆ ಕಲ್ಲು ತೂರಾಟ ನಡೆಸಿರುವ ಬಗ್ಗೆ ಮುಲ್ಕಿ ಮತ್ತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಲಾಗಿತ್ತು. ಈ ಬಗ್ಗೆ ಪೊಲೀಸರು ವಿಶೇಷ ತಂಡ ರಚನೆ ಮಾಡಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮೂವರು ಆರೋಪಿಗಳನ್ನು ಕಾರ್ನಾಡು ಗ್ರಾಮದ ಕೊಲ್ನಾಡು ಎಂಬಲ್ಲಿ ಬಂಧಿಸಿದ್ದಾರೆ. ಆರೋಪಿಗಳಿಂದ 3.50 ಲಕ್ಷ ರೂ. ಮೌಲ್ಯದ ಆಲ್ಟೋ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Reporter_Vishwanath PanjimogaruConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.