ETV Bharat / state

ಏಕರಾಷ್ಟ್ರಕ್ಕೆ ವಿರೋಧವೇಕೆ ಎಂದು ಕೇಳಿದ ಯುವತಿಗೆ ಕನ್ನಯ್ಯ ಹೇಳಿದ್ದೇನು? ಪ್ರಶ್ನೆಯಷ್ಟೇ ಮೊನಚಾಗಿತ್ತು ಉತ್ತರ!

ನಾನು ಸೀತಾರಾಮ ಎಂದು ಕೂಗುತ್ತೇನೆ. ನಿಮಗೆ ಜೈ ಶ್ರೀರಾಮ ಎಂದು ಕೂಗಲು ಹಕ್ಕು ನೀಡಿದ ಸಂವಿಧಾನಕ್ಕೂ ಒಮ್ಮೆ ಜೈಕಾರ ಹಾಕಲು ನಿಮ್ಮನ್ನು ಒತ್ತಾಯಿಸುತ್ತೇನೆ ಎಂದು ಸಿಪಿಐ ನಾಯಕ ಕನ್ನಯ್ಯ ಕುಮಾರ್​ ಸಂವಾದದಲ್ಲಿ ಮನವಿ ಮಾಡಿದರು.

author img

By

Published : Aug 11, 2019, 4:59 PM IST

ಸಂವಾದದಲ್ಲಿ ಕನ್ನಯ್ಯ ಕುಮಾರ್

ಮಂಗಳೂರು: ನಾನು ಸೀತಾರಾಮ, ರಾಧಾಕೃಷ್ಣ ಎಂದು ಕರೆಯುತ್ತೇನೆ. ಏಕ ಸಂಸ್ಕೃತಿ, ಏಕವ್ಯಕ್ತಿಯಿಂದ ಯಾವುದೂ, ಯಾರೂ ಜನ್ಮ ತಾಳುವುದಿಲ್ಲ ಎಂದು ವಿದ್ಯಾರ್ಥಿಯೊಬ್ಬಳ ಪ್ರಶ್ನೆಗೆ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಹಾಗು ಯುವ ನಾಯಕ ಕನ್ನಯ್ಯ ಕುಮಾರ್​ ಉತ್ತರಿಸಿದ್ರು.

ಸಂವಾದದಲ್ಲಿ ವಿದ್ಯಾರ್ಥಿನಿಯೊಬ್ಬಳ ಪ್ರಶ್ನೆಗೆ ಕನ್ನಯ್ಯ ಕುಮಾರ್ ಉತ್ತರಿಸುತ್ತಿರುವುದು

ಬಿ.ವಿ.ಕಕ್ಕಿಲ್ಲಾಯ ಜನ್ಮಶತಾಬ್ದಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂವಾದದಲ್ಲಿ ವಿದ್ಯಾರ್ಥಿನಿಯೊಬ್ಬಳು ನಾವೆಲ್ಲಾ ಹೆಮ್ಮೆ ಪಡುವ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಹೊಸ್ತಿಲಲ್ಲಿ ಇದ್ದೇವೆ. ದಯವಿಟ್ಟು ಒಮ್ಮೆ ಜೈ ಹಿಂದ್, ಜೈ ಶ್ರೀರಾಮ ಎಂದು ಘೋಷಣೆ ಕೂಗಿ ಎಂದು ಹೇಳಿದ್ರು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಅವರು, ನಾನು ಸೀತಾರಾಮ, ರಾಧಾಕೃಷ್ಣ ಎಂದು ಕರೆಯುತ್ತೇನೆ. ಏಕ ಸಂಸ್ಕೃತಿ, ಏಕವ್ಯಕ್ತಿಯಿಂದ ಯಾವುದೂ, ಯಾರೂ ಜನ್ಮ ತಾಳುವುದಿಲ್ಲ ಎಂದು ಹೇಳಿದ್ರು.

ಅದೇ ರೀತಿ ನೀವೇಕೆ ಏಕರಾಷ್ಟ್ರದ ವಿರುದ್ಧ ಇರುವಿರಿ ಎಂದು ವಿದ್ಯಾರ್ಥಿನಿ ಕೇಳಿರುವ ಪ್ರಶ್ನೆ ಹಾಗು ಕನ್ಜಯ್ಯಕುಮಾರ್ ನೀಡಿದ ಉತ್ತರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಏಕರಾಷ್ಟ್ರದ ಬಗ್ಗೆ ಮಾತನಾಡುತ್ತಾ, ನಾನು ನನ್ನ ತಂದೆ ಮತ್ತು ತಾಯಿಯ ಸಹಯೋಗದಿಂದ ಜನಿಸಿದೆ. ನಮ್ಮ ರಾಷ್ಟ್ರ ಒಂದೇ ನಿಜ. ಆದರೆ, ಈ ಏಕರಾಷ್ಟ್ರದಲ್ಲಿರುವ ಸಂವಿಧಾನದಲ್ಲಿ 300ಕ್ಕೂ ಅಧಿಕ ವಿಧಿಗಳಿದೆ. ಸಂಸತ್ತಿನಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗಳೆಂಬ ಎರಡು ಸದನಗಳಿವೆ. ನಾವು ಪ್ರತಿಪಾದಿಸುವ ಏಕತೆಯನ್ನು ವಿವಿಧತೆ ಪ್ರತಿನಿಧಿಸುತ್ತದೆ. ಆ ಕಾರಣಕ್ಕಾಗಿ ಭಾರತ ಹೆಚ್ಚು ವೈವಿಧ್ಯತೆಯಿಂದ ಕೂಡಿದೆ. ಜೈಶ್ರೀರಾಮ್ ಘೋಷಣೆ ಕೂಗುವುದು ನಿಮ್ಮ ಸ್ವಾತಂತ್ರ್ಯ. ಆ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ಆದ್ದರಿಂದ ಸಂವಿಧಾನಕ್ಕೂ ಒಮ್ಮೆ ಜೈಕಾರ ಹಾಕಿ ಎಂದು ನಾನು ನಿಮ್ಮಲ್ಲಿ ಒತ್ತಾಯಿಸುತ್ತೇನೆ ಎಂದರು.

ಹೀಗೆ ಮಾತನಾಡುತ್ತಾ, ನೀವು ಪಿಹೆಚ್.ಡಿ ಮಾಡುವುದಾದರೆ ದೇಶದಲ್ಲಿ ಇರುವ 300ಕ್ಕೂ ಹೆಚ್ಚು ರಾಮಾಯಣಗಳ ಬಗ್ಗೆ ಮಾಡಿರಿ. ನೀವು ದೇಶವನ್ನು ಸುತ್ತಾಡಿ. ಹಿಮಾಲಯದ ತ್ರಿಲೋಕನಾಥ ಮಂದಿರದಲ್ಲಿ ಭಗವಾನ್ ಬುದ್ದನ ಮೂರ್ತಿ ಮೇಲೆ ಶಿವನ ಮೂರ್ತಿ ಇದೆ. ಇಲ್ಲಿಗೆ ಹಿಂದು ಸಾಧುಗಳು ಬಂದು ಪೂಜೆ ಸಲ್ಲಿಸಿದ ಬಳಿಕ ಬೌದ್ಧ ಬಿಕ್ಕುಗಳು ಬಂದು ಪ್ರದಕ್ಷಿಣೆ ಹಾಕುತ್ತಾರೆ ಎಂದರು.

ಮಂಗಳೂರು: ನಾನು ಸೀತಾರಾಮ, ರಾಧಾಕೃಷ್ಣ ಎಂದು ಕರೆಯುತ್ತೇನೆ. ಏಕ ಸಂಸ್ಕೃತಿ, ಏಕವ್ಯಕ್ತಿಯಿಂದ ಯಾವುದೂ, ಯಾರೂ ಜನ್ಮ ತಾಳುವುದಿಲ್ಲ ಎಂದು ವಿದ್ಯಾರ್ಥಿಯೊಬ್ಬಳ ಪ್ರಶ್ನೆಗೆ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಹಾಗು ಯುವ ನಾಯಕ ಕನ್ನಯ್ಯ ಕುಮಾರ್​ ಉತ್ತರಿಸಿದ್ರು.

ಸಂವಾದದಲ್ಲಿ ವಿದ್ಯಾರ್ಥಿನಿಯೊಬ್ಬಳ ಪ್ರಶ್ನೆಗೆ ಕನ್ನಯ್ಯ ಕುಮಾರ್ ಉತ್ತರಿಸುತ್ತಿರುವುದು

ಬಿ.ವಿ.ಕಕ್ಕಿಲ್ಲಾಯ ಜನ್ಮಶತಾಬ್ದಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂವಾದದಲ್ಲಿ ವಿದ್ಯಾರ್ಥಿನಿಯೊಬ್ಬಳು ನಾವೆಲ್ಲಾ ಹೆಮ್ಮೆ ಪಡುವ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಹೊಸ್ತಿಲಲ್ಲಿ ಇದ್ದೇವೆ. ದಯವಿಟ್ಟು ಒಮ್ಮೆ ಜೈ ಹಿಂದ್, ಜೈ ಶ್ರೀರಾಮ ಎಂದು ಘೋಷಣೆ ಕೂಗಿ ಎಂದು ಹೇಳಿದ್ರು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಅವರು, ನಾನು ಸೀತಾರಾಮ, ರಾಧಾಕೃಷ್ಣ ಎಂದು ಕರೆಯುತ್ತೇನೆ. ಏಕ ಸಂಸ್ಕೃತಿ, ಏಕವ್ಯಕ್ತಿಯಿಂದ ಯಾವುದೂ, ಯಾರೂ ಜನ್ಮ ತಾಳುವುದಿಲ್ಲ ಎಂದು ಹೇಳಿದ್ರು.

ಅದೇ ರೀತಿ ನೀವೇಕೆ ಏಕರಾಷ್ಟ್ರದ ವಿರುದ್ಧ ಇರುವಿರಿ ಎಂದು ವಿದ್ಯಾರ್ಥಿನಿ ಕೇಳಿರುವ ಪ್ರಶ್ನೆ ಹಾಗು ಕನ್ಜಯ್ಯಕುಮಾರ್ ನೀಡಿದ ಉತ್ತರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಏಕರಾಷ್ಟ್ರದ ಬಗ್ಗೆ ಮಾತನಾಡುತ್ತಾ, ನಾನು ನನ್ನ ತಂದೆ ಮತ್ತು ತಾಯಿಯ ಸಹಯೋಗದಿಂದ ಜನಿಸಿದೆ. ನಮ್ಮ ರಾಷ್ಟ್ರ ಒಂದೇ ನಿಜ. ಆದರೆ, ಈ ಏಕರಾಷ್ಟ್ರದಲ್ಲಿರುವ ಸಂವಿಧಾನದಲ್ಲಿ 300ಕ್ಕೂ ಅಧಿಕ ವಿಧಿಗಳಿದೆ. ಸಂಸತ್ತಿನಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗಳೆಂಬ ಎರಡು ಸದನಗಳಿವೆ. ನಾವು ಪ್ರತಿಪಾದಿಸುವ ಏಕತೆಯನ್ನು ವಿವಿಧತೆ ಪ್ರತಿನಿಧಿಸುತ್ತದೆ. ಆ ಕಾರಣಕ್ಕಾಗಿ ಭಾರತ ಹೆಚ್ಚು ವೈವಿಧ್ಯತೆಯಿಂದ ಕೂಡಿದೆ. ಜೈಶ್ರೀರಾಮ್ ಘೋಷಣೆ ಕೂಗುವುದು ನಿಮ್ಮ ಸ್ವಾತಂತ್ರ್ಯ. ಆ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ಆದ್ದರಿಂದ ಸಂವಿಧಾನಕ್ಕೂ ಒಮ್ಮೆ ಜೈಕಾರ ಹಾಕಿ ಎಂದು ನಾನು ನಿಮ್ಮಲ್ಲಿ ಒತ್ತಾಯಿಸುತ್ತೇನೆ ಎಂದರು.

ಹೀಗೆ ಮಾತನಾಡುತ್ತಾ, ನೀವು ಪಿಹೆಚ್.ಡಿ ಮಾಡುವುದಾದರೆ ದೇಶದಲ್ಲಿ ಇರುವ 300ಕ್ಕೂ ಹೆಚ್ಚು ರಾಮಾಯಣಗಳ ಬಗ್ಗೆ ಮಾಡಿರಿ. ನೀವು ದೇಶವನ್ನು ಸುತ್ತಾಡಿ. ಹಿಮಾಲಯದ ತ್ರಿಲೋಕನಾಥ ಮಂದಿರದಲ್ಲಿ ಭಗವಾನ್ ಬುದ್ದನ ಮೂರ್ತಿ ಮೇಲೆ ಶಿವನ ಮೂರ್ತಿ ಇದೆ. ಇಲ್ಲಿಗೆ ಹಿಂದು ಸಾಧುಗಳು ಬಂದು ಪೂಜೆ ಸಲ್ಲಿಸಿದ ಬಳಿಕ ಬೌದ್ಧ ಬಿಕ್ಕುಗಳು ಬಂದು ಪ್ರದಕ್ಷಿಣೆ ಹಾಕುತ್ತಾರೆ ಎಂದರು.

Intro:ಮಂಗಳೂರು: ಮಂಗಳೂರಿನಲ್ಲಿ ಬಿ ವಿ ಕಕ್ಕಿಲ್ಲಾಯ ಜನ್ಮಶತಾಬ್ದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಜೆ ಎನ್ ಯು ವಿದ್ಯಾರ್ಥಿ ಮುಖಂಡ ಕನ್ಹಯ್ಯಕುಮಾರ್ ಗೆ ಸಂವಾದದಲ್ಲಿ ವಿದ್ಯಾರ್ಥಿನಿಯೊಬ್ಬಳು ಜೈಶ್ರೀರಾಮ್ ಎಂದು ಹೇಳಿ ಜೈಹಿಂದ್ ಎಂದು ಒಮ್ಮೆ ಘೋಷಣೆ ಮಾಡಿ ಮತ್ತು ನೀವೇಕೆ ಏಕರಾಷ್ಟ್ರದ ವಿರುದ್ದ ಇರುವಿರಿ ಎಂದು ಕೇಳಿದ ಪ್ರಶ್ನೆಗೆ ಕನ್ಜಯ್ಯಕುಮಾರ್ ನೀಡಿದ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.Body:ಏಕರಾಷ್ಟ್ರದ ಬಗ್ಗೆ ಉತ್ತರಿಸುತ್ತ ಕನ್ಹಯ್ಯಕುಮಾರ್ ನಾನು ಜನಿಸಿದ್ದು ಇಬ್ಬರ ಸಹಯೋಗದಿಂದ. ತಂದೆ ತಾಯಿಯಿಂದ ನಾನು ಹುಟ್ಟಿದೆ ಹೊರತು ಯಾರೋ ಒಬ್ಬರಿಂದ ಹುಟ್ಟಲು ಸಾಧ್ಯ ಇಲ್ಲ. ನಮ್ಮ ರಾಷ್ಟ್ರ ಯಾವತ್ತಿಗೂ ಒಂದೇ. ಆದರೆ ಈ ಏಕರಾಷ್ಟ್ರದಲ್ಲಿರುವ ಸಂವಿಧಾನದಲ್ಲಿ 300 ಕ್ಕೂ ಅಧಿಕ ವಿಧಿಗಳಿದೆ. ಏಕರಾಷ್ಟ್ರದಲ್ಲಿ ಲೋಕಸಭಾ ಮತ್ತು ರಾಜ್ಯಸಭಾ ಎಂಬ ಎರಡು ಸದನಗಳಿದೆ. ಲೋಕಸಭೆಯಲ್ಲಿ 545 ಸದಸ್ಯರು ‌ಇದ್ದಾರೆ. ನಾವು ಪ್ರತಿಪಾದಿಸುವ ಏಕತೆಯನ್ನು ವಿವಿಧತೆ ಪ್ರತಿನಿಧಿಸುತ್ತದೆ. ಅಲ್ಲಿ ವೈವಿಧ್ಯತೆ ಇದೆ. ಜೈಶ್ರೀರಾಮ್ ಘೋಷಣೆ ಕೂಗುವುದು ನಿಮ್ಮ ಸ್ವಾತಂತ್ರ್ಯ. ಜೈಶ್ರೀರಾಮ್, ಜೈ ಹನುಮಾನ್ ಘೋಷಣೆ ಕೂಗುವ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ಆದುದರಿಂದ ಸಂವಿಧಾನಕ್ಕೂ ಒಮ್ಮೆ ಜೈಕಾರ ಹಾಕಿ ಎಂದು ನಾನು ನಿಮ್ಮಲ್ಲಿ ಒತ್ತಾಯಿಸುತ್ತೇನೆ. ನಾನು ಹುಟ್ಟಿದ್ದು ಮಿಥಿಲೆಯಲ್ಲಿ. ನಮ್ಮಲ್ಲಿ ಪ್ರತಿವರುಷ ಸೀತಾರಾಮರ ವಿವಾಹ ಮಹೋತ್ಸವ ನಡೆಯುವಾಗ ಅಯೋಧ್ಯೆಯಿಂದ ರಾಮನ ವೇಷದಲ್ಲಿ ಬರುವ ತರುಣರಿಗೆ ಬೈಗುಳದ ಮೂಲಕ ಸ್ವಾಗತ ಕೋರುತ್ತೇವೆ. ಇದು ನಮ್ಮ ನೆಲದ ಸಂಸ್ಕೃತಿ. ನಮ್ಮ ಸಂಸ್ಕೃತಿಯಲ್ಲಿ ದೇವರನ್ನು ಜೋಡಿಯಾಗಿ ಸ್ಮರಿಸುತ್ತೇವೆ. ರಾಮನನ್ನು ಸೀತಾರಾಮ, ಕೃಷ್ಣ ನನ್ನು ರಾಧಾಕೃಷ್ಣ ಎಂದು. ನೀವು ಏನಾದರೂ ಪಿ ಎಚ್ ಡಿ ಮಾಡುವುದಾದರೆ ದೇಶದಲ್ಲಿ ಇರುವ ಮುನ್ನೂರಕ್ಕೂ ಹೆಚ್ಚು ರಾಮಾಯಣಗಳ ಬಗ್ಗೆ ಮಾಡಿ. ನೀವು ದೇಶವನ್ನು ಸುತ್ತಾಡಿ. ಹಿಮಾಲಯದ ತ್ರಿಲೋಕನಾಥ ಮಂದಿರದಲ್ಲಿ ಭಗವಾನ್ ಬುದ್ದನ ಮೂರ್ತಿ ಮೇಲೆ ಶಿವನ ಮೂರ್ತಿ ಇದೆ. ಇಲ್ಲಿಗೆ ಹಿಂದು ಸಾಧುಗಳು ಬಂದು ಪೂಜೆ ಸಲ್ಲಿಸಿದ ಬಳಿಕ ಬೌದ್ದ ಬಿಕ್ಕುಗಳು ಬಂದು ಪ್ರದಕ್ಷಿಣೆ ಹಾಕುತ್ತಾರೆ.ಲಾಹೋಲಿಯಲ್ಲಿ ಇರುವ ರಾಮಾಯಣ ದಲ್ಲಿ ಸೀತೆ ರಾವಣನ ಮಗಳು. ರಾಮ ಸೀತೆಯನ್ನು ಪ್ರೇಮಿಸಿ ಮದುವೆಯಾಗಿರುವುದರಿಂದ ರಾಮರಾವಣ ನಡುವೆ ಯುದ್ದ ಆಗುತ್ತದೆ. ಇದು ನಮ್ಮ ರಾಷ್ಟ್ರದ ವಿವಿಧತೆ. ಈ ದೇಶ ನನ್ನದು. ನನಗೆ ಪ್ರೀತಿ ಪ್ರದರ್ಶನದ ವಸ್ತುವಲ್ಲ ಎಂದು ಉತ್ತರ ಕೊಟ್ಟಿದ್ದಾರೆ.
ಯುವತಿ ಕೇಳಿದ ಪ್ರಶ್ನೆ ಮತ್ತು ಕನ್ಹಯ್ಯ ನೀಡಿದ ಉತ್ತರ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.
Reporter- vinodpudu
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.