ಮಂಗಳೂರು: ತೈಲ ಸೋರಿಕೆ ತಡೆಗಟ್ಟುವ ಕಾರ್ಯವಿಧಾನವನ್ನು ಮೌಲ್ಯೀಕರಿಸಲು ಮತ್ತು ಬಲಪಡಿಸಲು ಭಾರತೀಯ ಕೋಸ್ಟ್ ಗಾರ್ಡ್ನಿಂದ ರಾಜ್ಯಮಟ್ಟದ ತೈಲ ಸೋರುವಿಕೆಯಿಂದಾಗುವ ಮಾಲಿನ್ಯ ತಡೆಗಟ್ಟುವ ಕಾರ್ಯಾಗಾರ ನಡೆಸಲಾಯಿತು. ಕಾರ್ಯಾಗಾರದಲ್ಲಿ ಎನ್ಎಂಪಿಟಿ, ಎಂಆರ್ಪಿಎಲ್, ಐಒಸಿಎಲ್ ಮತ್ತು ಇತರ ಪಾಲುದಾರರು ಪಾಲ್ಗೊಂಡಿದ್ದರು.
![Oil Spill Pollution Prevention Workshop](https://etvbharatimages.akamaized.net/etvbharat/prod-images/6170306_964_6170306_1582393011808.png)
ಭಾರತದ ಸಮುದ್ರ ವಲಯದಲ್ಲಿ ಸಮುದ್ರ ಪರಿಸರದ ಸಂರಕ್ಷಣೆಯ ಜವಾಬ್ದಾರಿಯನ್ನು ಭಾರತೀಯ ಕೋಸ್ಟ್ ಗಾರ್ಡ್ ಹೊಂದಿದೆ. ಅದಕ್ಕಾಗಿ ರಾಷ್ಟ್ರೀಯ ತೈಲ ಸೋರಿಕೆ ವಿಪತ್ತು ಆಕಸ್ಮಿಕ ಯೋಜನೆ (ಎನ್ಒಎಸ್ಡಿಸಿಪಿ)ಯನ್ನು ರೂಪಿಸಿದೆ. ಈ ಹಿನ್ನೆಲೆಯಲ್ಲಿ ಮುಂಬೈ, ಚೆನ್ನೈ ಮತ್ತು ಪೋರ್ಟ್ ಬ್ಲೇರ್ನಲ್ಲಿ ಮೂರು ಮಾಲಿನ್ಯ ಪ್ರತಿಕ್ರಿಯೆ ಕೇಂದ್ರಗಳನ್ನು ಸ್ಥಾಪಿಸಿದೆ.
ಕಾರ್ಯಾಗಾರದಲ್ಲಿ ಸಮುದ್ರ ತೈಲ ಸೋರಿಕೆಯನ್ನು ಎದುರಿಸಲು, ವರದಿ ಮಾಡುವ ಕಾರ್ಯವಿಧಾನಗಳು, ಸಂವಹನ ಸಂಪರ್ಕಗಳ ಪರೀಕ್ಷೆ, ಸಮುದ್ರದಿಂದ ತೊಂದರೆಗೀಡಾದ ಸಿಬ್ಬಂದಿಯನ್ನು ಹುಡುಕುವುದು ಮತ್ತು ರಕ್ಷಿಸುವುದು, ಎಲ್ಲಾ ಮದ್ಯಸ್ಥಗಾರರಿಂದ ಚೆಲ್ಲಿದ ತೈಲವನ್ನು ಮರುಪಡೆಯುವುದು, ಮಾಲಿನ್ಯ ನಿಯಂತ್ರಣ ದೋಣಿಗಳಿಂದ ಬಂದರು ತೀರ ಸ್ವಾಗತ ಸೌಲಭ್ಯಕ್ಕೆ ಸಾಗಿಸಲು ಚೇತರಿಸಿಕೊಂಡ ತೈಲವನ್ನು ಬಾರ್ಜ್ಗಳಿಗೆ ವರ್ಗಾಯಿಸುವುದು ಮತ್ತು ಕೋಸ್ಟ್ ಗಾರ್ಡ್ ಇಂಟರ್ಸೆಪ್ಟರ್ ಬೋಟ್ಗಳು, ಕಡಲಾಚೆಯ ಪೆಟ್ರೋಲ್ ಹಡಗುಗಳು ಮತ್ತು ವೇಗದ ಪೆಟ್ರೋಲ್ ಹಡಗುಗಳು ಪ್ರಸರಣ ಸಿಂಪಡಿಸುವ ಸಾಮರ್ಥ್ಯಗಳ ಪ್ರದರ್ಶನ ನಡೆಸಲಾಯಿತು.