ETV Bharat / state

ಬಲೆಯಲ್ಲಿ ಸಿಕ್ಕಿ ಬಿದ್ದ ಕೆರೆ ಹಾವು - ಕಾಳಿಂಗ ಸರ್ಪ: ಉರಗ ತಜ್ಞನಿಂದ ರಕ್ಷಣೆ

author img

By

Published : Mar 10, 2021, 6:39 AM IST

ಸುಳ್ಯ ಸಮೀಪದ ಮರ್ಕಂಜದಲ್ಲಿ ಕೆರೆ ಹಾವನ್ನು ಅಟ್ಟಿಸಿಕೊಂಡು ಬಂದ ಬೃಹತ್ ಕಾಳಿಂಗ ಸರ್ಪವೊಂದು ಆಕಸ್ಮಿಕವಾಗಿ ಬಲೆಯೊಳಗೆ ಸಿಲುಕಿಕೊಂಡ ಘಟನೆ ನಡೆದಿದೆ. ಈ ವೇಳೆ ಉರಗ ತಜ್ಞ ಬಂದು ಎರಡು ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟರು.

ಬಲೆಯಲ್ಲಿ ಸಿಕ್ಕಿ ಬಿದ್ದ ಕೆರೆ ಹಾವು-ಕಾಳಿಂಗ ಸರ್ಪ
Snake and cobra caught in net at Sulya

ಸುಳ್ಯ: ಕೆರೆ ಹಾವು ಅಟ್ಟಿಸಿಕೊಂಡು ಬಂದ ಬೃಹತ್ ಕಾಳಿಂಗ ಸರ್ಪವೊಂದು ಆಕಸ್ಮಿಕವಾಗಿ ಬಲೆಯೊಳಗೆ ಸಿಲುಕಿಕೊಂಡ ಘಟನೆ ಸುಳ್ಯ ಸಮೀಪದ ಮರ್ಕಂಜದಲ್ಲಿ ನಡೆದಿದೆ.

ಮರ್ಕಂಜದ ಆಕಿರೆಕಾಡು ಎಂಬಲ್ಲಿ ಸ್ಥಳೀಯರೊಬ್ಬರು ಬಾಳೆಗೊನೆಯ ರಕ್ಷಣೆಗಾಗಿ ಮೀನು ಹಿಡಿಯುವ ಬಲೆಯನ್ನು ಅಳವಡಿಸಿದ್ದರು. ಈ ವೇಳೆ ಜೀವ ರಕ್ಷಣೆಯೊಂದಿಗೆ ಓಡುತ್ತಿದ್ದ ಕೆರೆ ಹಾವು ಮತ್ತು ಕೆರೆ ಹಾವನ್ನು ಬೆನ್ನಟ್ಟಿ ಬಂದ ಕಾಳಿಂಗ ಸರ್ಪ ಎರಡೂ ಒಂದೇ ಬಲೆಯಲ್ಲಿ ಸಿಕ್ಕಿ ಬಿದ್ದಿದ್ದವು.

ತಕ್ಷಣ ಸ್ಥಳೀಯರು ಈ ಕುರಿತಂತೆ ಅರಂತೋಡು ಗ್ರಾಪಂ ಸದಸ್ಯ ಹಾಗೂ ಉರಗ ತಜ್ಞ ಶಿವಾನಂದ ಕುಕ್ಕುಂಬಳ ಎಂಬುವವರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅವರು, ಬಲೆಯನ್ನು ಕತ್ತರಿಸಿ ಎರಡು ಹಾವುಗಳನ್ನು ರಕ್ಷಿಸಿ, ಕಾಡಿಗೆ ಬಿಟ್ಟಿದ್ದಾರೆ. ಕಾಳಿಂಗ ಸರ್ಪ ಸುಮಾರು 12 ಅಡಿ ಉದ್ದವಾಗಿತ್ತು ಎನ್ನಲಾಗುತ್ತಿದೆ.

ಸುಳ್ಯ: ಕೆರೆ ಹಾವು ಅಟ್ಟಿಸಿಕೊಂಡು ಬಂದ ಬೃಹತ್ ಕಾಳಿಂಗ ಸರ್ಪವೊಂದು ಆಕಸ್ಮಿಕವಾಗಿ ಬಲೆಯೊಳಗೆ ಸಿಲುಕಿಕೊಂಡ ಘಟನೆ ಸುಳ್ಯ ಸಮೀಪದ ಮರ್ಕಂಜದಲ್ಲಿ ನಡೆದಿದೆ.

ಮರ್ಕಂಜದ ಆಕಿರೆಕಾಡು ಎಂಬಲ್ಲಿ ಸ್ಥಳೀಯರೊಬ್ಬರು ಬಾಳೆಗೊನೆಯ ರಕ್ಷಣೆಗಾಗಿ ಮೀನು ಹಿಡಿಯುವ ಬಲೆಯನ್ನು ಅಳವಡಿಸಿದ್ದರು. ಈ ವೇಳೆ ಜೀವ ರಕ್ಷಣೆಯೊಂದಿಗೆ ಓಡುತ್ತಿದ್ದ ಕೆರೆ ಹಾವು ಮತ್ತು ಕೆರೆ ಹಾವನ್ನು ಬೆನ್ನಟ್ಟಿ ಬಂದ ಕಾಳಿಂಗ ಸರ್ಪ ಎರಡೂ ಒಂದೇ ಬಲೆಯಲ್ಲಿ ಸಿಕ್ಕಿ ಬಿದ್ದಿದ್ದವು.

ತಕ್ಷಣ ಸ್ಥಳೀಯರು ಈ ಕುರಿತಂತೆ ಅರಂತೋಡು ಗ್ರಾಪಂ ಸದಸ್ಯ ಹಾಗೂ ಉರಗ ತಜ್ಞ ಶಿವಾನಂದ ಕುಕ್ಕುಂಬಳ ಎಂಬುವವರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅವರು, ಬಲೆಯನ್ನು ಕತ್ತರಿಸಿ ಎರಡು ಹಾವುಗಳನ್ನು ರಕ್ಷಿಸಿ, ಕಾಡಿಗೆ ಬಿಟ್ಟಿದ್ದಾರೆ. ಕಾಳಿಂಗ ಸರ್ಪ ಸುಮಾರು 12 ಅಡಿ ಉದ್ದವಾಗಿತ್ತು ಎನ್ನಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.