ETV Bharat / state

ಉಡುಪಿ ಮತ್ತು ಮಂಗಳೂರು ಮೀನುಗಾರರು ಬೇರೆ ಎಂದು ತಾರತಮ್ಯ ಇರಬಾರದು: ಯು.ಟಿ ಖಾದರ್

author img

By

Published : Dec 3, 2020, 2:11 PM IST

ಮಂಗಳೂರು ಬೋಟ್ ದುರಂತದಲ್ಲಿ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರ ನೀಡದಿದ್ದರೆ ಮೀನುಗಾರಿಕಾ ಸಚಿವರ ತಾರತಮ್ಯ ಎಂದು ಅರ್ಥೈಸಬೇಕಾಗುತ್ತದೆ. ಉಡುಪಿ ಮೀನುಗಾರರು ಮತ್ತು ಮಂಗಳೂರು ಮೀನುಗಾರರು ಬೇರೆ ಎಂದು ತಾರತಮ್ಯ ಇರಬಾರದು ಎಂದು ಮಾಜಿ ಸಚಿವ ಯು.ಟಿ ಖಾದರ್ ಹೇಳಿದರು.

manglore
ಪತ್ರಿಕಾಗೋಷ್ಠಿ

ಮಂಗಳೂರು: ಬೋಟ್ ದುರಂತದಲ್ಲಿ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರ ನೀಡದಿದ್ದರೆ ಮೀನುಗಾರಿಕಾ ಸಚಿವರ ತಾರತಮ್ಯ ಎಂದು ಅರ್ಥೈಸಬೇಕಾಗುತ್ತದೆ ಎಂದು ಮಾಜಿ ಸಚಿವ ಯು.ಟಿ ಖಾದರ್ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿಯ ಸುವರ್ಣ ತ್ರಿಭುಜ ಬೋಟ್ ದುರಂತದ ವೇಳೆ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ ರಾಜ್ಯ ಸರ್ಕಾರ ಹತ್ತು ಲಕ್ಷ ಪರಿಹಾರ ನೀಡಿತ್ತು. ಆದರೆ ಮಂಗಳೂರು ಬೋಟ್ ದುರಂತದಲ್ಲಿ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ 6 ಲಕ್ಷ ಪರಿಹಾರ ಘೋಷಿಸಲಾಗಿದೆ. ಉಡುಪಿ ಮೀನುಗಾರರು ಮತ್ತು ಮಂಗಳೂರು ಮೀನುಗಾರರು ಬೇರೆ ಎಂದು ತಾರತಮ್ಯ ಇರಬಾರದು ಎಂದರು.

ಮಾಜಿ ಸಚಿವ ಯು.ಟಿ ಖಾದರ್

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ್​ ಪೂಜಾರಿ ಅವರು ಉಡುಪಿ ಜಿಲ್ಲೆಯವರಾಗಿರಬಹುದು. ಆದರೆ ಅವರು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು. ಅವರು ತಾರತಮ್ಯ ಮಾಡದೆ ಪರಿಹಾರ ವಿತರಿಸಬೇಕಾಗಿದೆ. ಈ ಬಗ್ಗೆ ಆಗಿರುವ ತಪ್ಪನ್ನು ಅವರು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಲವ್ ಜಿಹಾದ್​ಗೆ ಸರ್ಕಾರ ಕಾನೂನು ರೂಪಿಸುತ್ತದೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ಲವ್ ಜಿಹಾದ್ ಕಾನೂನಿನಲ್ಲಿ ಅರೇಬಿಕ್ ಪದ ಯಾಕೆ. ಕರ್ನಾಟಕದ ಕಾನೂನಿಗೆ ಕನ್ನಡ ಪದದ ಬದಲು ಅರೇಬಿಕ್ ಪದ ಯಾಕೆ ಎಂದು ಪ್ರಶ್ನಿಸಿದರು. ಲವ್ ಜಿಹಾದ್ ಕಾನೂನು ರೂಪಿಸುತ್ತೇವೆ ಎಂಬ ಚರ್ಚೆ ಮಾಡಿ ಜನರಲ್ಲಿ ಗೊಂದಲ ಮೂಡಿಸುವುದು ಬೇಡ. ಅದರ ಬದಲಿಗೆ ವಿಧಾನಸಭೆಯಲ್ಲಿ ಮಂಡಿಸಿ ಎಂದರು.

ಮಂಗಳೂರು: ಬೋಟ್ ದುರಂತದಲ್ಲಿ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರ ನೀಡದಿದ್ದರೆ ಮೀನುಗಾರಿಕಾ ಸಚಿವರ ತಾರತಮ್ಯ ಎಂದು ಅರ್ಥೈಸಬೇಕಾಗುತ್ತದೆ ಎಂದು ಮಾಜಿ ಸಚಿವ ಯು.ಟಿ ಖಾದರ್ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿಯ ಸುವರ್ಣ ತ್ರಿಭುಜ ಬೋಟ್ ದುರಂತದ ವೇಳೆ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ ರಾಜ್ಯ ಸರ್ಕಾರ ಹತ್ತು ಲಕ್ಷ ಪರಿಹಾರ ನೀಡಿತ್ತು. ಆದರೆ ಮಂಗಳೂರು ಬೋಟ್ ದುರಂತದಲ್ಲಿ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ 6 ಲಕ್ಷ ಪರಿಹಾರ ಘೋಷಿಸಲಾಗಿದೆ. ಉಡುಪಿ ಮೀನುಗಾರರು ಮತ್ತು ಮಂಗಳೂರು ಮೀನುಗಾರರು ಬೇರೆ ಎಂದು ತಾರತಮ್ಯ ಇರಬಾರದು ಎಂದರು.

ಮಾಜಿ ಸಚಿವ ಯು.ಟಿ ಖಾದರ್

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ್​ ಪೂಜಾರಿ ಅವರು ಉಡುಪಿ ಜಿಲ್ಲೆಯವರಾಗಿರಬಹುದು. ಆದರೆ ಅವರು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು. ಅವರು ತಾರತಮ್ಯ ಮಾಡದೆ ಪರಿಹಾರ ವಿತರಿಸಬೇಕಾಗಿದೆ. ಈ ಬಗ್ಗೆ ಆಗಿರುವ ತಪ್ಪನ್ನು ಅವರು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಲವ್ ಜಿಹಾದ್​ಗೆ ಸರ್ಕಾರ ಕಾನೂನು ರೂಪಿಸುತ್ತದೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ಲವ್ ಜಿಹಾದ್ ಕಾನೂನಿನಲ್ಲಿ ಅರೇಬಿಕ್ ಪದ ಯಾಕೆ. ಕರ್ನಾಟಕದ ಕಾನೂನಿಗೆ ಕನ್ನಡ ಪದದ ಬದಲು ಅರೇಬಿಕ್ ಪದ ಯಾಕೆ ಎಂದು ಪ್ರಶ್ನಿಸಿದರು. ಲವ್ ಜಿಹಾದ್ ಕಾನೂನು ರೂಪಿಸುತ್ತೇವೆ ಎಂಬ ಚರ್ಚೆ ಮಾಡಿ ಜನರಲ್ಲಿ ಗೊಂದಲ ಮೂಡಿಸುವುದು ಬೇಡ. ಅದರ ಬದಲಿಗೆ ವಿಧಾನಸಭೆಯಲ್ಲಿ ಮಂಡಿಸಿ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.