ETV Bharat / state

ಸೀನಿಯರ್ ನ್ಯಾಷನಲ್ ಪವರ್ ಲಿಫ್ಟ್ ಚಾಂಪಿಯನ್​ಶಿಪ್​:  ಚಿನ್ನ, ಬೆಳ್ಳಿ, ಕಂಚಿನ ಪದಕ ಪಡೆದ ಮಂಗಳೂರಿನ ಹುಡುಗ

ಫೆ. 17ರಿಂದ 21ರವರೆಗೆ ನಡೆದಿರುವ ಸೀನಿಯರ್ ನ್ಯಾಷನಲ್ ಪವರ್ ಲಿಫ್ಟ್ ಚಾಂಪಿಯನ್​ಶಿಪ್​ನಲ್ಲಿ ಮಂಗಳೂರಿನ ಪ್ರದೀಪ್ ಕುಮಾರ್ ಆಚಾರ್ಯ ಮೂರು ಪದಕಗಳನ್ನು ಗೆದ್ದಿದ್ದಾರೆ.

author img

By

Published : Feb 21, 2021, 8:08 PM IST

Updated : Feb 21, 2021, 9:27 PM IST

Senior National Power Lift Championship
ಸೀನಿಯರ್ ನ್ಯಾಷನಲ್ ಪವರ್ ಲಿಫ್ಟ್ ಚಾಂಪಿಯನ್ ಶಿಪ್

ಮಂಗಳೂರು: ತಮಿಳುನಾಡಿನ ಕೊಯಮುತ್ತೂರಿನಲ್ಲಿ ನಡೆದ ಸೀನಿಯರ್ ನ್ಯಾಷನಲ್ ಪವರ್ ಲಿಫ್ಟ್ ಚಾಂಪಿಯನ್​​ಶಿಪ್​ನಲ್ಲಿ ಮಂಗಳೂರಿನ ಪ್ರದೀಪ್ ಕುಮಾರ್ ಆಚಾರ್ಯ ಒಟ್ಟು 807 ಕೆಜಿ ಭಾರ ಎತ್ತುವ ಮೂಲಕ ತಲಾ ಒಂದೊಂದು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ.

3 ಚಿನ್ನ, ಬೆಳ್ಳಿ, ಕಂಚಿನ ಪದಕ ಪಡೆದ ಮಂಗಳೂರಿನ ಹುಡುಗ

ಫೆ. 17ರಿಂದ 21ರವರೆಗೆ ನಡೆದಿರುವ ಈ ಪವರ್ ಲಿಫ್ಟ್ ಚಾಂಪಿಯನ್​​ಶಿಪ್​ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿರುವ ಪ್ರದೀಪ್ ಕುಮಾರ್ ಆಚಾರ್ಯ, 83 ಕೆಜಿ ದೇಹತೂಕ ವಿಭಾಗದಲ್ಲಿ ಒಟ್ಟು 807 ಕೆಜಿ ಭಾರ ಎತ್ತುವ ಮೂಲಕ ಮೂರು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪ್ರದೀಪ್ ಕುಮಾರ್ ಆಚಾರ್ಯ ಸ್ಕಾಟ್ ವಿಭಾಗದಲ್ಲಿ 312.50 ಕೆಜಿ, ಬೆಂಚ್ ಪ್ರೆಸ್​ನಲ್ಲಿ 220 ಕೆಜಿ ಹಾಗೂ ಡೆಡ್ ಲಿಫ್ಟ್​ನಲ್ಲಿ 275 ಕೆಜಿ ಸೇರಿ ಒಟ್ಟು 807.50 ಕೆಜಿ ಭಾರ ಎತ್ತುವ ಮೂಲಕ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ‌.

ಓದಿ:ಪಾದಯಾತ್ರೆ ಮುಗಿದರೂ ಈಡೇರದ 2ಎ ಬೇಡಿಕೆ ; ಮುಂದಿನ ನಡೆ ಏನು?

ಪ್ರದೀಪ್ ಕುಮಾರ್ ಆಚಾರ್ಯ ಮಂಗಳೂರಿನ ಪ್ರತಿಷ್ಠಿತ ಬಾಲಾಂಜನೇಯ ಜಿಮ್ನಾಸಿಯಂನಲ್ಲಿ ಸತೀಶ್ ಕುಮಾರ್ ಕುದ್ರೋಳಿಯವರಿಂದ ತರಬೇತಿ ಪಡೆಯುತ್ತಿದ್ದಾರೆ.

ಮಂಗಳೂರು: ತಮಿಳುನಾಡಿನ ಕೊಯಮುತ್ತೂರಿನಲ್ಲಿ ನಡೆದ ಸೀನಿಯರ್ ನ್ಯಾಷನಲ್ ಪವರ್ ಲಿಫ್ಟ್ ಚಾಂಪಿಯನ್​​ಶಿಪ್​ನಲ್ಲಿ ಮಂಗಳೂರಿನ ಪ್ರದೀಪ್ ಕುಮಾರ್ ಆಚಾರ್ಯ ಒಟ್ಟು 807 ಕೆಜಿ ಭಾರ ಎತ್ತುವ ಮೂಲಕ ತಲಾ ಒಂದೊಂದು ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ.

3 ಚಿನ್ನ, ಬೆಳ್ಳಿ, ಕಂಚಿನ ಪದಕ ಪಡೆದ ಮಂಗಳೂರಿನ ಹುಡುಗ

ಫೆ. 17ರಿಂದ 21ರವರೆಗೆ ನಡೆದಿರುವ ಈ ಪವರ್ ಲಿಫ್ಟ್ ಚಾಂಪಿಯನ್​​ಶಿಪ್​ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿರುವ ಪ್ರದೀಪ್ ಕುಮಾರ್ ಆಚಾರ್ಯ, 83 ಕೆಜಿ ದೇಹತೂಕ ವಿಭಾಗದಲ್ಲಿ ಒಟ್ಟು 807 ಕೆಜಿ ಭಾರ ಎತ್ತುವ ಮೂಲಕ ಮೂರು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪ್ರದೀಪ್ ಕುಮಾರ್ ಆಚಾರ್ಯ ಸ್ಕಾಟ್ ವಿಭಾಗದಲ್ಲಿ 312.50 ಕೆಜಿ, ಬೆಂಚ್ ಪ್ರೆಸ್​ನಲ್ಲಿ 220 ಕೆಜಿ ಹಾಗೂ ಡೆಡ್ ಲಿಫ್ಟ್​ನಲ್ಲಿ 275 ಕೆಜಿ ಸೇರಿ ಒಟ್ಟು 807.50 ಕೆಜಿ ಭಾರ ಎತ್ತುವ ಮೂಲಕ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ‌.

ಓದಿ:ಪಾದಯಾತ್ರೆ ಮುಗಿದರೂ ಈಡೇರದ 2ಎ ಬೇಡಿಕೆ ; ಮುಂದಿನ ನಡೆ ಏನು?

ಪ್ರದೀಪ್ ಕುಮಾರ್ ಆಚಾರ್ಯ ಮಂಗಳೂರಿನ ಪ್ರತಿಷ್ಠಿತ ಬಾಲಾಂಜನೇಯ ಜಿಮ್ನಾಸಿಯಂನಲ್ಲಿ ಸತೀಶ್ ಕುಮಾರ್ ಕುದ್ರೋಳಿಯವರಿಂದ ತರಬೇತಿ ಪಡೆಯುತ್ತಿದ್ದಾರೆ.

Last Updated : Feb 21, 2021, 9:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.