ETV Bharat / state

ಬಂಟ್ವಾಳದಲ್ಲಿ ರಸ್ತೆ ಅವ್ಯವಸ್ಥೆ: ಅಪಘಾತಗಳ ಸಂಖ್ಯೆ ಹೆಚ್ಚಳ

author img

By

Published : Dec 5, 2020, 10:30 AM IST

ಸಾರ್ವಜನಿಕರು, ವಾಹನ ಸವಾರರ ಕಟುಟೀಕೆಗೆ ಒಳಗಾದ ರಾಷ್ಟ್ರಿಯ ಹೆದ್ದಾರಿ 75ರಲ್ಲಿದ್ದ ಗುಂಡಿಗಳನ್ನು ಮುಚ್ಚಲಾಗಿದೆಯಾದ್ರೂ ರಸ್ತೆಯ ಎಡ, ಬಲಗಳಲ್ಲಿರುವ ಏರು ತಗ್ಗುಗಳು ಅಪಘಾತಕ್ಕೆ ಕಾರಣವಾಗುತ್ತಿವೆ.

sdsdx
ಬಂಟ್ವಾಳದಲ್ಲಿ ರಸ್ತೆ ಅವ್ಯವಸ್ಥೆ

ಬಂಟ್ವಾಳ: ರಾಷ್ಟ್ರಿಯ ಹೆದ್ದಾರಿ 75ರ ಬಿ.ಸಿ.ರೋಡ್​ನಿಂದ ಮಾಣಿವರೆಗಿನ ಹೆದ್ದಾರಿಯ ಕೆಲ ತಗ್ಗುಗಳನ್ನು ಮುಚ್ಚಲಾಗಿದೆ. ಆದರೆ ರಸ್ತೆಯ ಎಡ, ಬಲಗಳಲ್ಲಿ ಏರುತಗ್ಗುಗಳು ಅಪಾಯಕಾರಿಯಾಗಿ ಪರಿಣಮಿಸಿದ್ದು, ಅಪಘಾತಕ್ಕೆ ಆಹ್ವಾನ ನೀಡುತ್ತಿವೆ.

ಬಂಟ್ವಾಳದಲ್ಲಿ ರಸ್ತೆ ಅವ್ಯವಸ್ಥೆ: ಅಭಿವೃದ್ಧಿಗೆ ಅಧಿಕಾರಿಗಳ ಮೀನಮೇಷವೇಕೆ?

ಈ ಪರಿಣಾಮ ರಾತ್ರಿಯಷ್ಟೇ ಅಲ್ಲ, ಹಗಲಿನಲ್ಲೂ ಕೂಡಾ ಎದುರಿನಿಂದ ಅಥವಾ ರಾಂಗ್ ಸೈಡ್​ನಲ್ಲಿ ವಾಹನಗಳೇನಾದರೂ ಬಂದರೆ ಸ್ಥಳಾವಕಾಶ ಕೊಡಲು ಹೋಗುವವರು ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಹಲವೆಡೆ ಹೊಸ ಅಪಘಾತ ವಲಯಗಳೂ ಉದ್ಭವವಾಗಿದ್ದು,ಕಳೆದ ಎರಡು ವಾರದಲ್ಲಿ ಎರಡು ಅಪಘಾತ ಪ್ರಕರಣಗಳು ಸಂಭವಿಸಿದೆ.

ಓದಿ: ಮಂಗಳೂರು ಮನಪಾ ಮಾಜಿ ಮೇಯರ್ ಕೆ.ಕೃಷ್ಣಪ್ಪ ಮೆಂಡನ್ ನಿಧನ

ಅದೇ ರೀತಿ ಮೇಲ್ಕಾರ್ ಟ್ರಾಫಿಕ್ ಠಾಣಾ ಮುಂಭಾಗದ ರಸ್ತೆ ಪ್ಯಾಚ್ ವರ್ಕ್ ಸರಿಯಾಗಿ ಆಗಿಲ್ಲ. ರಸ್ತೆ ಕಿತ್ತುಹೋಗಿ ಧೂಳು ತುಂಬಿಕೊಂಡಿದ್ದು, ವಾಹನಗಳು ಎದುರು-ಬದುರಾಗುವಾಗ ಅಪಘಾತವಾಗುವ ಸಂಭವವಿದೆ. ಎರಡು ದಿನದ ಹಿಂದೆ ಕೃಷ್ಣಕೋಡಿ ಎಂಬಲ್ಲಿ ಟ್ರಕ್ ಮಗುಚಿ ಚಾಲಕ ಮೃತಪಟ್ಟ ಘಟನೆ ನಡೆದಿತ್ತು. ಅಷ್ಟು ಮಾತ್ರವಲ್ಲ, ಇತ್ತೀಚೆಗೆ ಕಲ್ಲಡ್ಕ ದಾಸಕೋಡಿ ಬಳಿ ಬೈಕ್ ಸವಾರರೊಬ್ಬರು ಇದೇ ರೀತಿಯ ಅಪಘಾತದಲ್ಲಿ ಸಿಲುಕಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ.

ಬಂಟ್ವಾಳ: ರಾಷ್ಟ್ರಿಯ ಹೆದ್ದಾರಿ 75ರ ಬಿ.ಸಿ.ರೋಡ್​ನಿಂದ ಮಾಣಿವರೆಗಿನ ಹೆದ್ದಾರಿಯ ಕೆಲ ತಗ್ಗುಗಳನ್ನು ಮುಚ್ಚಲಾಗಿದೆ. ಆದರೆ ರಸ್ತೆಯ ಎಡ, ಬಲಗಳಲ್ಲಿ ಏರುತಗ್ಗುಗಳು ಅಪಾಯಕಾರಿಯಾಗಿ ಪರಿಣಮಿಸಿದ್ದು, ಅಪಘಾತಕ್ಕೆ ಆಹ್ವಾನ ನೀಡುತ್ತಿವೆ.

ಬಂಟ್ವಾಳದಲ್ಲಿ ರಸ್ತೆ ಅವ್ಯವಸ್ಥೆ: ಅಭಿವೃದ್ಧಿಗೆ ಅಧಿಕಾರಿಗಳ ಮೀನಮೇಷವೇಕೆ?

ಈ ಪರಿಣಾಮ ರಾತ್ರಿಯಷ್ಟೇ ಅಲ್ಲ, ಹಗಲಿನಲ್ಲೂ ಕೂಡಾ ಎದುರಿನಿಂದ ಅಥವಾ ರಾಂಗ್ ಸೈಡ್​ನಲ್ಲಿ ವಾಹನಗಳೇನಾದರೂ ಬಂದರೆ ಸ್ಥಳಾವಕಾಶ ಕೊಡಲು ಹೋಗುವವರು ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಹಲವೆಡೆ ಹೊಸ ಅಪಘಾತ ವಲಯಗಳೂ ಉದ್ಭವವಾಗಿದ್ದು,ಕಳೆದ ಎರಡು ವಾರದಲ್ಲಿ ಎರಡು ಅಪಘಾತ ಪ್ರಕರಣಗಳು ಸಂಭವಿಸಿದೆ.

ಓದಿ: ಮಂಗಳೂರು ಮನಪಾ ಮಾಜಿ ಮೇಯರ್ ಕೆ.ಕೃಷ್ಣಪ್ಪ ಮೆಂಡನ್ ನಿಧನ

ಅದೇ ರೀತಿ ಮೇಲ್ಕಾರ್ ಟ್ರಾಫಿಕ್ ಠಾಣಾ ಮುಂಭಾಗದ ರಸ್ತೆ ಪ್ಯಾಚ್ ವರ್ಕ್ ಸರಿಯಾಗಿ ಆಗಿಲ್ಲ. ರಸ್ತೆ ಕಿತ್ತುಹೋಗಿ ಧೂಳು ತುಂಬಿಕೊಂಡಿದ್ದು, ವಾಹನಗಳು ಎದುರು-ಬದುರಾಗುವಾಗ ಅಪಘಾತವಾಗುವ ಸಂಭವವಿದೆ. ಎರಡು ದಿನದ ಹಿಂದೆ ಕೃಷ್ಣಕೋಡಿ ಎಂಬಲ್ಲಿ ಟ್ರಕ್ ಮಗುಚಿ ಚಾಲಕ ಮೃತಪಟ್ಟ ಘಟನೆ ನಡೆದಿತ್ತು. ಅಷ್ಟು ಮಾತ್ರವಲ್ಲ, ಇತ್ತೀಚೆಗೆ ಕಲ್ಲಡ್ಕ ದಾಸಕೋಡಿ ಬಳಿ ಬೈಕ್ ಸವಾರರೊಬ್ಬರು ಇದೇ ರೀತಿಯ ಅಪಘಾತದಲ್ಲಿ ಸಿಲುಕಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.