ETV Bharat / state

ಪುತ್ತೂರಲ್ಲಿ ರಾರಾಜಿಸುತ್ತಿವೆ ತಾರನಾಥ ಆಚಾರ್ಯ ತಯಾರಿಸಿರುವ ಪರಿಸರಸ್ನೇಹಿ ಗಣೇಶ ಮೂರ್ತಿಗಳು

author img

By

Published : Sep 9, 2021, 3:17 PM IST

ದಕ್ಷಿಣಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಇಂದಿಗೂ ಸಾಂಪ್ರದಾಯಿಕವಾಗಿ ಮಣ್ಣನ್ನು ಬಳಸಿ ಗಣೇಶನ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ. ಅದರಂತೆ ಪುತ್ತೂರಿನ ಪರ್ಲಡ್ಕದ ತಾರನಾಥ ಆಚಾರಿಯವರು ತಯಾರಿಸಿರುವ ಪರಿಸರ ಸ್ನೇಹಿ ಗಣೇಶ ಮೂರ್ತಿಗಳು ಬೇಡಿಕೆ ಹೆಚ್ಚಾಗಿದೆ.

eco friendly  Ganesh idols
ಪರಿಸರ ಸ್ನೇಹಿ ಗಣೇಶ ವಿಗ್ರಹಗಳು

ಪುತ್ತೂರು (ದಕ್ಷಿಣ ಕನ್ನಡ): ನಾಳೆಯಿಂದ ಮನೆ ಮನೆಗಳಲ್ಲಿ, ವಠಾರಗಳಲ್ಲಿ, ಪ್ರಮುಖ ಬೀದಿಗಳಲ್ಲಿ ಮೋದಕ ಪ್ರಿಯ ಗಣೇಶ ಚತುರ್ಥಿ ಸಂಭ್ರಮ ಕಳೆಗಟ್ಟಲಿದೆ. ಈ ಹಿನ್ನೆಲೆ ಎಲ್ಲೆಡೆ ಗಣೇಶ ಮೂರ್ತಿಗಳು ರಾರಾಜಿಸುತ್ತಿವೆ. ಇದರ ನಡುವೆ ಪುತ್ತೂರಿನಲ್ಲಿ ತಾರನಾಥ ಆಚಾರ್ಯ ಅವರು ತಯಾರಿಸುವ ಪರಿಸರ ಪ್ರೇಮಿ ವಿಗ್ರಹಗಳು ಕೂಡ ಖ್ಯಾತಿ ಪಡೆದಿವೆ.

ತಾರನಾಥ ಆಚಾರ್ಯ ತಯಾರಿಸಿರುವ ಪರಿಸರ ಸ್ನೇಹಿ ಗಣೇಶ ವಿಗ್ರಹಗಳು

ದಕ್ಷಿಣಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಇಂದಿಗೂ ಸಾಂಪ್ರದಾಯಿಕವಾಗಿ ಮಣ್ಣನ್ನು ಬಳಸಿ ಗಣೇಶನ ವಿಗ್ರಹಗಳನ್ನು ತಯಾರಿಸಲಾಗುತ್ತಿದೆ. ಕೇವಲ ಮಣ್ಣಲ್ಲದೆ ವಿಗ್ರಹಗಳಿಗೆ ರಾಸಾಯನಿಕವನ್ನು ಬಳಸದೆ ನೈಸರ್ಗಿಕ ಬಣ್ಣಗಳನ್ನು ಬಳಸುವ ಮೂಲಕ ಪರಿಸರ ಸ್ನೇಹಿ ಗಣಪತಿ ವಿಗ್ರಹಗಳನ್ನು ತಯಾರಿಸುತ್ತಿದ್ದಾರೆ.

ಪುತ್ತೂರಿನ ಪರ್ಲಡ್ಕದ ತಾರನಾಥ ಆಚಾರ್ಯ ಅವರು ಕಳೆದ 73 ವರ್ಷಗಳಿಂದ ಪರಿಸರ ಸ್ನೇಹಿ ವಿಗ್ರಹಗಳನ್ನು ತಯಾರಿಸುತ್ತಿದ್ದಾರೆ. ಇವರಿಗೆ ಕುಟುಂಬದ ಸದಸ್ಯರೂ ಕೈ ಜೋಡಿಸಿದ್ದರೆ, ಯುವಕರು ಸಹಾಯ ಮಾಡುತ್ತಿದ್ದಾರೆ. ಯಾವುದೇ ಫಲಾಪೇಕ್ಷೆಯಿಲ್ಲದೆ ದುಡಿಯುವ ಈ ಯುವಕರು ಗಣೇಶನ ವಿಗ್ರಹ ತಯಾರಿಸುವ ಕಾಯಕದಲ್ಲೇ ಗಣೇಶನ ಸೇವೆ ನೆರವೇರಿಸಿಕೊಂಡು ಬರುತ್ತಿದ್ದಾರೆ.

ಆಳೆತ್ತರದಿಂದ ಹಿಡಿದು ಪುಟ್ಟ ಗಣಪತಿಯೂ ಇಲ್ಲಿ ಮಣ್ಣಿನಿಂದಲೇ ತಯಾರಾಗುತ್ತಿದ್ದು, ಈ ಕಾರಣದಿಂದಲೇ ಈ ಭಾಗದಲ್ಲಿ ಈ ಗಣೇಶನ ವಿಗ್ರಹಗಳಿಗೆ ಹೆಚ್ಚಿನ ಬೇಡಿಕೆಯೂ ಇದೆ. ದಕ್ಷಿಣಕನ್ನಡ ಜಿಲ್ಲೆಯ ಹಲವು ಕಡೆಗಳಿಗೆ ಇಲ್ಲಿಂದಲೇ ಗಣೇಶನ ವಿಗ್ರಹಗಳನ್ನು ಸಾಗಿಸಲಾಗುತ್ತಿದೆ.

ಗಣೇಶ ಹಬ್ಬದ ಆಚರಣೆಯ ಜೊತೆಗೆ ಪ್ರಕೃತಿಯನ್ನೂ ಆರಾಧಿಸಿಕೊಂಡು ಬರುವ ಕರಾವಳಿಯ ಜನ ವಿಗ್ರಹ ಖರೀದಿ ವಿಚಾರದಲ್ಲೂ ಪರಿಸರದ ಕುರಿತು ಕಾಳಜಿಯನ್ನು ಇವರು ಇಂದಿಗೂ ಮರೆತಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇಂದಿಗೂ ಮಣ್ಣಿನಿಂದ ತಯಾರಿಸಿದ ವಿಗ್ರಹಗಳಿಗೆ ಹೆಚ್ಚಿನ ಬೇಡಿಕೆಯಿದೆ.

ಓದಿ: ದೊಡ್ಡಗೌಡರ ನಿವಾಸದಲ್ಲಿ ಗೌರಿ ಹಬ್ಬದ ಸಂಭ್ರಮ: ನಾಡಿನ ಜನತೆಗೆ ಶುಭ ಕೋರಿದ ಹೆಚ್​ಡಿಡಿ

ಪುತ್ತೂರು (ದಕ್ಷಿಣ ಕನ್ನಡ): ನಾಳೆಯಿಂದ ಮನೆ ಮನೆಗಳಲ್ಲಿ, ವಠಾರಗಳಲ್ಲಿ, ಪ್ರಮುಖ ಬೀದಿಗಳಲ್ಲಿ ಮೋದಕ ಪ್ರಿಯ ಗಣೇಶ ಚತುರ್ಥಿ ಸಂಭ್ರಮ ಕಳೆಗಟ್ಟಲಿದೆ. ಈ ಹಿನ್ನೆಲೆ ಎಲ್ಲೆಡೆ ಗಣೇಶ ಮೂರ್ತಿಗಳು ರಾರಾಜಿಸುತ್ತಿವೆ. ಇದರ ನಡುವೆ ಪುತ್ತೂರಿನಲ್ಲಿ ತಾರನಾಥ ಆಚಾರ್ಯ ಅವರು ತಯಾರಿಸುವ ಪರಿಸರ ಪ್ರೇಮಿ ವಿಗ್ರಹಗಳು ಕೂಡ ಖ್ಯಾತಿ ಪಡೆದಿವೆ.

ತಾರನಾಥ ಆಚಾರ್ಯ ತಯಾರಿಸಿರುವ ಪರಿಸರ ಸ್ನೇಹಿ ಗಣೇಶ ವಿಗ್ರಹಗಳು

ದಕ್ಷಿಣಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಇಂದಿಗೂ ಸಾಂಪ್ರದಾಯಿಕವಾಗಿ ಮಣ್ಣನ್ನು ಬಳಸಿ ಗಣೇಶನ ವಿಗ್ರಹಗಳನ್ನು ತಯಾರಿಸಲಾಗುತ್ತಿದೆ. ಕೇವಲ ಮಣ್ಣಲ್ಲದೆ ವಿಗ್ರಹಗಳಿಗೆ ರಾಸಾಯನಿಕವನ್ನು ಬಳಸದೆ ನೈಸರ್ಗಿಕ ಬಣ್ಣಗಳನ್ನು ಬಳಸುವ ಮೂಲಕ ಪರಿಸರ ಸ್ನೇಹಿ ಗಣಪತಿ ವಿಗ್ರಹಗಳನ್ನು ತಯಾರಿಸುತ್ತಿದ್ದಾರೆ.

ಪುತ್ತೂರಿನ ಪರ್ಲಡ್ಕದ ತಾರನಾಥ ಆಚಾರ್ಯ ಅವರು ಕಳೆದ 73 ವರ್ಷಗಳಿಂದ ಪರಿಸರ ಸ್ನೇಹಿ ವಿಗ್ರಹಗಳನ್ನು ತಯಾರಿಸುತ್ತಿದ್ದಾರೆ. ಇವರಿಗೆ ಕುಟುಂಬದ ಸದಸ್ಯರೂ ಕೈ ಜೋಡಿಸಿದ್ದರೆ, ಯುವಕರು ಸಹಾಯ ಮಾಡುತ್ತಿದ್ದಾರೆ. ಯಾವುದೇ ಫಲಾಪೇಕ್ಷೆಯಿಲ್ಲದೆ ದುಡಿಯುವ ಈ ಯುವಕರು ಗಣೇಶನ ವಿಗ್ರಹ ತಯಾರಿಸುವ ಕಾಯಕದಲ್ಲೇ ಗಣೇಶನ ಸೇವೆ ನೆರವೇರಿಸಿಕೊಂಡು ಬರುತ್ತಿದ್ದಾರೆ.

ಆಳೆತ್ತರದಿಂದ ಹಿಡಿದು ಪುಟ್ಟ ಗಣಪತಿಯೂ ಇಲ್ಲಿ ಮಣ್ಣಿನಿಂದಲೇ ತಯಾರಾಗುತ್ತಿದ್ದು, ಈ ಕಾರಣದಿಂದಲೇ ಈ ಭಾಗದಲ್ಲಿ ಈ ಗಣೇಶನ ವಿಗ್ರಹಗಳಿಗೆ ಹೆಚ್ಚಿನ ಬೇಡಿಕೆಯೂ ಇದೆ. ದಕ್ಷಿಣಕನ್ನಡ ಜಿಲ್ಲೆಯ ಹಲವು ಕಡೆಗಳಿಗೆ ಇಲ್ಲಿಂದಲೇ ಗಣೇಶನ ವಿಗ್ರಹಗಳನ್ನು ಸಾಗಿಸಲಾಗುತ್ತಿದೆ.

ಗಣೇಶ ಹಬ್ಬದ ಆಚರಣೆಯ ಜೊತೆಗೆ ಪ್ರಕೃತಿಯನ್ನೂ ಆರಾಧಿಸಿಕೊಂಡು ಬರುವ ಕರಾವಳಿಯ ಜನ ವಿಗ್ರಹ ಖರೀದಿ ವಿಚಾರದಲ್ಲೂ ಪರಿಸರದ ಕುರಿತು ಕಾಳಜಿಯನ್ನು ಇವರು ಇಂದಿಗೂ ಮರೆತಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇಂದಿಗೂ ಮಣ್ಣಿನಿಂದ ತಯಾರಿಸಿದ ವಿಗ್ರಹಗಳಿಗೆ ಹೆಚ್ಚಿನ ಬೇಡಿಕೆಯಿದೆ.

ಓದಿ: ದೊಡ್ಡಗೌಡರ ನಿವಾಸದಲ್ಲಿ ಗೌರಿ ಹಬ್ಬದ ಸಂಭ್ರಮ: ನಾಡಿನ ಜನತೆಗೆ ಶುಭ ಕೋರಿದ ಹೆಚ್​ಡಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.