ETV Bharat / state

ಗೆದ್ದಲು ನಿವಾರಣೆಗೆ ಶಾಶ್ವತ ಪರಿಹಾರ ಕಂಡು ಹಿಡಿದ ಪುತ್ತೂರು ವಿದ್ಯಾರ್ಥಿನಿಯರು! - undefined

ಪುತ್ತೂರು ಸುಧಾನ ವಸತಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ದಡ್ಡಾಲದ ಮರದ ತೊಗಟೆಯನ್ನು ಬಳಸಿ ಗೆದ್ದಲು ನಿವಾರಣೆಗೆ ಶಾಶ್ವತ ಪರಿಹಾರ ಕಂಡು ಹಿಡಿದಿದ್ದಾರೆ.

ವಿದ್ಯಾರ್ಥಿಗಳು
author img

By

Published : Jul 2, 2019, 9:11 PM IST

Updated : Jul 3, 2019, 9:20 AM IST

ಮಂಗಳೂರು: ಮನೆಗಳ ಫರ್ನಿಚರ್​ಗಳು, ಮರದ ವಸ್ತುಗಳಿಗೆ ದೊಡ್ಡ ಸಮಸ್ಯೆ ತಂದೊಡ್ಡುವುದು ಗೆದ್ದಲು. ಈ ಗೆದ್ದಲು ನಿವಾರಣೆಗೆ ಮಾಡುವ ಪ್ರಯತ್ನಗಳು, ಮಾರುಕಟ್ಟೆಯಲ್ಲಿ ಸಿಗುವ ಔಷಧಿಗಳು ಹೆಚ್ಚು ಪರಿಣಾಮಕಾರಿಯಲ್ಲ. ಇದಕ್ಕೊಂದು ಶಾಶ್ವತ ಪರಿಹಾರವನ್ನು ಪುತ್ತೂರು ಸುಧಾನ ವಸತಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಕಂಡು ಹಿಡಿದಿದ್ದಾರೆ.

ದಡ್ಡಾಲದ ಮರ ಹೆಚ್ಚೇನೂ ಉಪಯೋಗಕ್ಕೆ ಬಾರದ ಮರ. ಆದರೆ ಈ ಮರದ ತೊಗಟೆಯನ್ನು ಇದೀಗ ಇತರ ಮರಗಳಿಂದ ಮಾಡಿದ ಫರ್ನಿಚರ್ ಸಾಮಾಗ್ರಿಗಳಿಗೆ ತಗುಲುವ ಗೆದ್ದಲು ನಾಶಕ್ಕೆ ಉಪಯೋಗಿಸಬಹುದೆಂಬುದನ್ನು ಪುತ್ತೂರು ಸುಧಾನ ಪ್ರೌಢ ಶಾಲೆಯ ಈ ವಿದ್ಯಾರ್ಥಿನಿಯರು ತೋರಿಸಿಕೊಟ್ಟಿದ್ದಾರೆ.

ಈ ಶಾಲೆಯ ಎಸ್​ಎಸ್​ಎಲ್​​ಸಿ ವಿದ್ಯಾರ್ಥಿನಿಯರಾದ ಸ್ತುತಿ ಎಂ.ಎಸ್. ಮತ್ತು ಸಂಧ್ಯಾ ಪ್ರಭು ಈ ಸಾಧನೆ ಮಾಡಿದ ವಿದ್ಯಾರ್ಥಿನಿಯರಾಗಿದ್ದು, ತಮ್ಮ‌ ಸಾಧನೆಗೆ ಅವರು ಅಂತಾರಾಷ್ಟ್ರೀಯ ಮಟ್ಟದ ಜೀನಿಯಸ್ ಒಲಂಪಿಯಾಡ್​ನಲ್ಲಿ ರಜತ ಪದಕವನ್ನು ಪಡೆದಿದ್ದಾರೆ. ಈ ವಿದ್ಯಾರ್ಥಿನಿಯರಿಗೆ ಶಾಲೆಯ ಶಿಕ್ಷಕಿ ಸಾಧನ ಅವರು ಮಾರ್ಗದರ್ಶನ ನೀಡಿದ್ದು, ಅದರಂತೆ ಈ ಇಬ್ಬರು ವಿದ್ಯಾರ್ಥಿನಿಯರು ಈ ಸಾಧನೆ ಮಾಡಿದ್ದಾರೆ.

ಗೆದ್ದಲು ನಿವಾರಣೆಗೆ ಶಾಶ್ವತ ಪರಿಹಾರ ಕಂಡುಹಿಡಿದಿರುವ ಪುತ್ತೂರು ವಿದ್ಯಾರ್ಥಿಗಳು

ಎರಡು ರೀತಿಯ ಪ್ರಯೋಗಗಳನ್ನು ಮಾಡಲಾಗಿದ್ದು, ಮೊದಲನೇಯದಾಗಿ ದಡ್ಡಾಲದ ಮರದ ಎಲೆಯಿಂದ ದ್ರಾವಣ ತಯಾರಿಸಲಾಗಿತ್ತು. ಬಳಿಕ ದಡ್ಡಾಲದ ಮರದ ತೊಗಟೆಯಿಂದ ದ್ರಾವಣ ತಯಾರಿಸಲಾಗಿತ್ತು. ಇದರಲ್ಲಿ ತೊಗಟೆಯಿಂದ ಮಾಡಿದ ದ್ರಾವಣ ಹೆಚ್ಚಿನ ಪರಿಣಾಮಕಾರಿ ಎಂದು ಅಧ್ಯಯನದಿಂದ ತಿಳಿದಿದೆ. ಇವುಗಳನ್ನು ಗೆದ್ದಲು ಬಾರದಂತೆ ತಡೆಯಲು ಮರದ ಸಾಮಾಗ್ರಿಗಳಿಗೆ ಬಳಸಬಹುದಾಗಿದೆ.

ಯಾವುದೇ ಕೃತಕ ವಸ್ತು, ರಾಸಾಯನಿಕ ವಸ್ತುಗಳು ಬಳಸದೆ ಈ ದ್ರಾವಣ ತಯಾರಿಸಲಾಗಿದ್ದು, ಶೀಘ್ರ ಪರಿಣಾಮ ಬೀರುತ್ತದೆ ಎಂಬುದನ್ನು ಕಳೆದ ಒಂದು ವರ್ಷಗಳ ಅಧ್ಯಯನದಿಂದ ಕಂಡುಕೊಳ್ಳಲಾಗಿದೆ.

ಮಂಗಳೂರು: ಮನೆಗಳ ಫರ್ನಿಚರ್​ಗಳು, ಮರದ ವಸ್ತುಗಳಿಗೆ ದೊಡ್ಡ ಸಮಸ್ಯೆ ತಂದೊಡ್ಡುವುದು ಗೆದ್ದಲು. ಈ ಗೆದ್ದಲು ನಿವಾರಣೆಗೆ ಮಾಡುವ ಪ್ರಯತ್ನಗಳು, ಮಾರುಕಟ್ಟೆಯಲ್ಲಿ ಸಿಗುವ ಔಷಧಿಗಳು ಹೆಚ್ಚು ಪರಿಣಾಮಕಾರಿಯಲ್ಲ. ಇದಕ್ಕೊಂದು ಶಾಶ್ವತ ಪರಿಹಾರವನ್ನು ಪುತ್ತೂರು ಸುಧಾನ ವಸತಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಕಂಡು ಹಿಡಿದಿದ್ದಾರೆ.

ದಡ್ಡಾಲದ ಮರ ಹೆಚ್ಚೇನೂ ಉಪಯೋಗಕ್ಕೆ ಬಾರದ ಮರ. ಆದರೆ ಈ ಮರದ ತೊಗಟೆಯನ್ನು ಇದೀಗ ಇತರ ಮರಗಳಿಂದ ಮಾಡಿದ ಫರ್ನಿಚರ್ ಸಾಮಾಗ್ರಿಗಳಿಗೆ ತಗುಲುವ ಗೆದ್ದಲು ನಾಶಕ್ಕೆ ಉಪಯೋಗಿಸಬಹುದೆಂಬುದನ್ನು ಪುತ್ತೂರು ಸುಧಾನ ಪ್ರೌಢ ಶಾಲೆಯ ಈ ವಿದ್ಯಾರ್ಥಿನಿಯರು ತೋರಿಸಿಕೊಟ್ಟಿದ್ದಾರೆ.

ಈ ಶಾಲೆಯ ಎಸ್​ಎಸ್​ಎಲ್​​ಸಿ ವಿದ್ಯಾರ್ಥಿನಿಯರಾದ ಸ್ತುತಿ ಎಂ.ಎಸ್. ಮತ್ತು ಸಂಧ್ಯಾ ಪ್ರಭು ಈ ಸಾಧನೆ ಮಾಡಿದ ವಿದ್ಯಾರ್ಥಿನಿಯರಾಗಿದ್ದು, ತಮ್ಮ‌ ಸಾಧನೆಗೆ ಅವರು ಅಂತಾರಾಷ್ಟ್ರೀಯ ಮಟ್ಟದ ಜೀನಿಯಸ್ ಒಲಂಪಿಯಾಡ್​ನಲ್ಲಿ ರಜತ ಪದಕವನ್ನು ಪಡೆದಿದ್ದಾರೆ. ಈ ವಿದ್ಯಾರ್ಥಿನಿಯರಿಗೆ ಶಾಲೆಯ ಶಿಕ್ಷಕಿ ಸಾಧನ ಅವರು ಮಾರ್ಗದರ್ಶನ ನೀಡಿದ್ದು, ಅದರಂತೆ ಈ ಇಬ್ಬರು ವಿದ್ಯಾರ್ಥಿನಿಯರು ಈ ಸಾಧನೆ ಮಾಡಿದ್ದಾರೆ.

ಗೆದ್ದಲು ನಿವಾರಣೆಗೆ ಶಾಶ್ವತ ಪರಿಹಾರ ಕಂಡುಹಿಡಿದಿರುವ ಪುತ್ತೂರು ವಿದ್ಯಾರ್ಥಿಗಳು

ಎರಡು ರೀತಿಯ ಪ್ರಯೋಗಗಳನ್ನು ಮಾಡಲಾಗಿದ್ದು, ಮೊದಲನೇಯದಾಗಿ ದಡ್ಡಾಲದ ಮರದ ಎಲೆಯಿಂದ ದ್ರಾವಣ ತಯಾರಿಸಲಾಗಿತ್ತು. ಬಳಿಕ ದಡ್ಡಾಲದ ಮರದ ತೊಗಟೆಯಿಂದ ದ್ರಾವಣ ತಯಾರಿಸಲಾಗಿತ್ತು. ಇದರಲ್ಲಿ ತೊಗಟೆಯಿಂದ ಮಾಡಿದ ದ್ರಾವಣ ಹೆಚ್ಚಿನ ಪರಿಣಾಮಕಾರಿ ಎಂದು ಅಧ್ಯಯನದಿಂದ ತಿಳಿದಿದೆ. ಇವುಗಳನ್ನು ಗೆದ್ದಲು ಬಾರದಂತೆ ತಡೆಯಲು ಮರದ ಸಾಮಾಗ್ರಿಗಳಿಗೆ ಬಳಸಬಹುದಾಗಿದೆ.

ಯಾವುದೇ ಕೃತಕ ವಸ್ತು, ರಾಸಾಯನಿಕ ವಸ್ತುಗಳು ಬಳಸದೆ ಈ ದ್ರಾವಣ ತಯಾರಿಸಲಾಗಿದ್ದು, ಶೀಘ್ರ ಪರಿಣಾಮ ಬೀರುತ್ತದೆ ಎಂಬುದನ್ನು ಕಳೆದ ಒಂದು ವರ್ಷಗಳ ಅಧ್ಯಯನದಿಂದ ಕಂಡುಕೊಳ್ಳಲಾಗಿದೆ.

Intro:ಮಂಗಳೂರು: ಮನೆಗಳ ಫರ್ನಿಚರ್ ಗಳು, ಮರದ ವಸ್ತುಗಳಿಗೆ ದೊಡ್ಡ ಸಮಸ್ಯೆ ತಂದೊಡ್ಡುವುದು ಗೆದ್ದಲು. ಈ ಗೆದ್ದಲು ನಿವಾರಣೆಗೆ ಮಾಡುವ ಪ್ರಯತ್ನಗಳು, ಮಾರುಕಟ್ಟೆಯಲ್ಲಿ ಸಿಗುವ ಔಷಧಿಗಳು ಹೆಚ್ಚು ಪರಿಣಾಮಕಾರಿಯಲ್ಲ. ಇದಕ್ಕೊಂದು ಶಾಸ್ವತ ಪರಿಹಾರವನ್ನು ಪುತ್ತೂರು ಸುಧಾನ ವಸತಿ ಪ್ರೌಢಶಾಲೆ ಯ ವಿದ್ಯಾರ್ಥಿನಿಯರು ಮಾಡಿದ್ದಾರೆ.



Body:ದಡ್ಡಾಲ ಮರ ಹೆಚ್ಚೇನು ಉಪಯೋಗಕ್ಕೆ ಬಾರದ ಮರ . ಅದರೆ ಈ ಮರದ ತೊಗಟೆ ಇದೀಗ ಇತರ ಮರಗಳಿಂದ ಮಾಡಿದ ಫರ್ನಿಚರ್, ಸಾಮಾಗ್ರಿಗಳಿಗೆ ತಗುಲುವ ಗೆದ್ದಲು ನಾಶಕ್ಕೆ ಉಪಯೋಗಿಸಬಹುದೆಂಬುದನ್ನು ಪುತ್ತೂರು ಸುಧಾನ ಪ್ರೌಢಶಾಲೆಯ ಈ ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ.

ಈ ಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯರಾದ ಸ್ತುತಿ ಎಂ ಎಸ್ ಮತ್ತು ಸಂಧ್ಯಾ ಪ್ರಭು ಈ ಸಾಧನೆ ಮಾಡಿದ ವಿದ್ಯಾರ್ಥಿನಿಯರಾಗಿದ್ದು ತಮ್ಮ‌ಸಾಧನೆಗೆ ಅವರು ಅಂತರಾಷ್ಟ್ರೀಯ ಮಟ್ಟದ ಜೀನಿಯಸ್ ಒಲಿಂಪಿಯಾಡ್ ನಲ್ಲಿ ರಜತ ಪದಕವನ್ನು ಪಡೆದಿದ್ದಾರೆ.
ಈ ವಿದ್ಯಾರ್ಥಿನಿಯರಿಗೆ ಶಾಲೆಯ ಶಿಕ್ಷಕಿ ಸಾಧನ ಅವರು ಮಾರ್ಗದರ್ಶನ ನೀಡಿದ್ದು ಅದರಂತೆ ಈ ಇಬ್ಬರು ವಿದ್ಯಾರ್ಥಿನಿಯರು ಈ ಸಾಧನೆ ಮಾಡಿದ್ದಾರೆ.

ಎರಡು ರೀತಿಯ ಪ್ರಯೋಗಗಳನ್ನು ಮಾಡಲಾಗಿದ್ದು ಮೊದಲನೆಯದಾಗಿ ದಡ್ಡಾಲ ಮರದ ಎಲೆಯಿಂದ ದ್ರಾವಣ ತಯಾರಿಸಲಾಗಿತ್ತು. ಬಳಿಕ ದಡ್ಡಾಲ ಮರದ ತೊಗಟೆಯಿಂದ ದ್ರಾವಣ ತಯಾರಿಸಲಾಗಿತ್ತು. ಇದರಲ್ಲಿ ತೊಗಟೆಯಿಂದ ಮಾಡಿದ ದ್ರಾವಣ ಹೆಚ್ಚಿನ ಪರಿಣಾಮಕಾರಿ ಎಂದು ಅಧ್ಯಯನದಿಂದ ತಿಳಿದಿದೆ. ಇವುಗಳನ್ನು ಗೆದ್ದಲು ಬಾರದಂತೆ ತಡೆಯಲು ಮರದ ಸಾಮಾಗ್ರಿಗಳಿಗೆ ಬಳಸಬಹುದಾಗಿದೆ.
ಯಾವುದೇ ಕೃತಕ ವಸ್ತು, ರಾಸಾಯನಿಕ ವಸ್ತುಗಳು ಬಳಸದೆ ಈ ದ್ರಾವಣ ತಯಾರಿಸಲಾಗಿದ್ದು ಶೀಘ್ರ ಪರಿಣಾಮ ಬೀರುತ್ತದೆ ಎಂಬುದನ್ನು ಕಳೆದ ಒಂದು ವರ್ಷಗಳ ಅಧ್ಯಯನದಿಂದ ಕಂಡುಕೊಳ್ಳಲಾಗಿದೆ.
ಒಟ್ಟಿನಲ್ಲಿ ದಡ್ಡಾಲ ಮರದ ತೊಗಟೆಯಿಂದ ಗೆದ್ದಲು ನಿವಾರಣೆಗೆ ಔಷಧ ಕಂಡು ಹಿಡಿದ ವಿದ್ಯಾರ್ಥಿಗಳ ಆವಿಷ್ಕಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಗೆ ಪಾತ್ರವಾಗಿದೆ.

ಬೈಟ್-ಸ್ತುತಿ ಎಂ‌ ಎಸ್, ‌ಸಾಧನೆ ಮಾಡಿದ ವಿದ್ಯಾರ್ಥಿನಿ ( ಗಿಡ್ಡ ಇರುವವರು)

ಬೈಟ್- ಸಂಧ್ಯಾ ಪ್ರಭು, ಸಾಧನೆ ಮಾಡಿದ ವಿದ್ಯಾರ್ಥಿನಿ ( ಉದ್ದ ಇರುವವರು)

ಬೈಟ್- ಸಾಧನ, ವಿದ್ಯಾರ್ಥಿಗಳ ಮಾರ್ಗದರ್ಶಕರು

( ಸ್ತುತಿ ಅವರ ಇಂಗ್ಲಿಷ್ ಬೈಟ್ ಕೂಡ ಇದೆ)


Conclusion:
Last Updated : Jul 3, 2019, 9:20 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.