ETV Bharat / state

ಶ್ರೀ ಕ್ಷೇತ್ರ ಕದ್ರಿ ದೇವಾಲಯದ ಬ್ರಹ್ಮಕಲಶೋತ್ಸವ : ಪೇಜಾವರ ಶ್ರೀಗಳಿಂದ ಧಾರ್ಮಿಕ ಉಪನ್ಯಾಸ

author img

By

Published : May 7, 2019, 1:47 AM IST

ಶ್ರೀ ಕ್ಷೇತ್ರ ಕದ್ರಿ ಮಂಜುನಾಥೇಶ್ವರ ದೇವಾಲಯದ ಬ್ರಹ್ಮಕಲಶೋತ್ಸವದಲ್ಲಿ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು‌ ಉದ್ಘಾಟಿಸಿ, ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಮಾತನಾಡಿದರು.

ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ

ಮಂಗಳೂರು: ಶಿವ ಎಂದರೆ ನಮ್ಮ‌ಅಂತಃಕರಣವನ್ನು‌ ನಿರ್ಮಲಗೊಳಿಸುವ ದೇವರು.‌ ಶಿವನು‌ ತನ್ನ ಮೂರನೆಯ ಕಣ್ಣಿನಿಂದ ಕಾಮನನ್ನು ಸುಟ್ಟು ನಮಗೆ ಮಹಾನ್ ಸಂದೇಶವನ್ನು ನೀಡಿದ್ದಾನೆ. ಜೊತೆಗೆ ಸತ್ಕಾಮನೆಗಳನ್ನು ಹುಟ್ಟು ಹಾಕುವಂತೆ ಸೂಚಿಸಿದ್ದಾನೆ ಎಂದು ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.

ನಗರದ ಶ್ರೀ ಕ್ಷೇತ್ರ ಕದ್ರಿ ಮಂಜುನಾಥೇಶ್ವರ ದೇವಾಲಯದ ಬ್ರಹ್ಮಕಲಶೋತ್ಸವದಲ್ಲಿ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು‌ ಉದ್ಘಾಟಿಸಿ ಮಾತನಾಡಿದ ಅವರು, ಮತ್ತೊಬ್ಬರ ದೋಷವನ್ನು‌ ಹುಡುಕುತ್ತೇವೆ. ಆದರೆ ಅವರ ಉತ್ತಮ ಗುಣವನ್ನು ಗಮನಿಸುವುದಿಲ್ಲ. ಶಿವ ಹಾಗಲ್ಲ‌. ಅವನು ಸಮುದ್ರ ಮಥನದಿಂದ ಬಂದ ಚಂದ್ರನನ್ನು‌ ಧರಿಸಿದ. ಕಾಲಕೋಟ ವಿಷವನ್ನು ನುಂಗಿದ. ಹಾಗೆಯೇ ನಾವು ಮತ್ತೊಬ್ಬರ ದೋಷವನ್ನು ನುಂಗಿಬಿಡಬೇಕು. ಇಂದು ಭ್ರಷ್ಟಾಚಾರ ದೊಡ್ಡ ಕಾಲಕೋಟ ವಿಷವಾಗಿದೆ. ಅದು ನಾಶವಾಗಬೇಕಾದರೆ ಶಿವನ‌ ಅನುಗ್ರಹ ಇಡೀ ರಾಷ್ಟ್ರಕ್ಕೆ ಆಗಬೇಕು ಎಂದು ಹೇಳಿದರು.

ಈ‌ ಸಂದರ್ಭದಲ್ಲಿ ಕಾಣಿಯೂರು ಶ್ರೀ ವಿದ್ಯಾವಲ್ಲಭ ಸ್ವಾಮೀಜಿ, ಡಾ.ಶಾಂತಾರಾಮ ಶೆಟ್ಟಿ, ಪ್ರದೀಪ್ ಕುಮಾರ್ ಕಲ್ಕೂರ, ಧರ್ಮದರ್ಶಿ ಹರಿಕೃಷ್ಣ ಪುನರೂರು, ನಿತ್ಯಾನಂದ ಮುಂಡೋಡಿ ಉಪಸ್ಥಿತರಿದ್ದರು.

ಮಂಗಳೂರು: ಶಿವ ಎಂದರೆ ನಮ್ಮ‌ಅಂತಃಕರಣವನ್ನು‌ ನಿರ್ಮಲಗೊಳಿಸುವ ದೇವರು.‌ ಶಿವನು‌ ತನ್ನ ಮೂರನೆಯ ಕಣ್ಣಿನಿಂದ ಕಾಮನನ್ನು ಸುಟ್ಟು ನಮಗೆ ಮಹಾನ್ ಸಂದೇಶವನ್ನು ನೀಡಿದ್ದಾನೆ. ಜೊತೆಗೆ ಸತ್ಕಾಮನೆಗಳನ್ನು ಹುಟ್ಟು ಹಾಕುವಂತೆ ಸೂಚಿಸಿದ್ದಾನೆ ಎಂದು ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.

ನಗರದ ಶ್ರೀ ಕ್ಷೇತ್ರ ಕದ್ರಿ ಮಂಜುನಾಥೇಶ್ವರ ದೇವಾಲಯದ ಬ್ರಹ್ಮಕಲಶೋತ್ಸವದಲ್ಲಿ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು‌ ಉದ್ಘಾಟಿಸಿ ಮಾತನಾಡಿದ ಅವರು, ಮತ್ತೊಬ್ಬರ ದೋಷವನ್ನು‌ ಹುಡುಕುತ್ತೇವೆ. ಆದರೆ ಅವರ ಉತ್ತಮ ಗುಣವನ್ನು ಗಮನಿಸುವುದಿಲ್ಲ. ಶಿವ ಹಾಗಲ್ಲ‌. ಅವನು ಸಮುದ್ರ ಮಥನದಿಂದ ಬಂದ ಚಂದ್ರನನ್ನು‌ ಧರಿಸಿದ. ಕಾಲಕೋಟ ವಿಷವನ್ನು ನುಂಗಿದ. ಹಾಗೆಯೇ ನಾವು ಮತ್ತೊಬ್ಬರ ದೋಷವನ್ನು ನುಂಗಿಬಿಡಬೇಕು. ಇಂದು ಭ್ರಷ್ಟಾಚಾರ ದೊಡ್ಡ ಕಾಲಕೋಟ ವಿಷವಾಗಿದೆ. ಅದು ನಾಶವಾಗಬೇಕಾದರೆ ಶಿವನ‌ ಅನುಗ್ರಹ ಇಡೀ ರಾಷ್ಟ್ರಕ್ಕೆ ಆಗಬೇಕು ಎಂದು ಹೇಳಿದರು.

ಈ‌ ಸಂದರ್ಭದಲ್ಲಿ ಕಾಣಿಯೂರು ಶ್ರೀ ವಿದ್ಯಾವಲ್ಲಭ ಸ್ವಾಮೀಜಿ, ಡಾ.ಶಾಂತಾರಾಮ ಶೆಟ್ಟಿ, ಪ್ರದೀಪ್ ಕುಮಾರ್ ಕಲ್ಕೂರ, ಧರ್ಮದರ್ಶಿ ಹರಿಕೃಷ್ಣ ಪುನರೂರು, ನಿತ್ಯಾನಂದ ಮುಂಡೋಡಿ ಉಪಸ್ಥಿತರಿದ್ದರು.

Intro:ಮಂಗಳೂರು: ಶಿವ ಅಂದರೆ ನಮ್ಮ‌ಅಂತಃಕರಣವನ್ನು‌ ನಿರ್ಮಲಗೊಳಿಸುವ ದೇವರು.‌ ನಮ್ಮ ಮನಸ್ಸಿನ ಕೆಟ್ಟ ಕಾಮನೆಗಳನ್ನು ನಿರ್ಮೂಲನೆ ಮಾಡುವಾತ ಶಿವ. ಶಿವನು‌ ತನ್ನ ಮೂರನೆಯ ಕಣ್ಣಿನಿಂದ ಕಾಮನನ್ನು ಸುಟ್ಟು ನಮಗೆ ಮಹಾನ್ ಸಂದೇಶವನ್ನು ನೀಡಿದ್ದಾನೆ. ಈ ಮೂಲಕ ನಮಗೂ ಕೆಟ್ಟ ಕಾಮನೆಗಳು ಬಂದಾಗ ಮೂರನೆಯ ಕಣ್ಣು ತೆರೆದು ಧ್ವಂಸಗೊಳಿಸಿ ಎಂದು ಸಂದೇಶ ನೀಡಿದ್ದಾನೆ. ಜೊತೆಗೆ ಸತ್ಕಾಮನೆಗಳನ್ನು ಹುಟ್ಟುಹಾಕುವಂತೆ ಸೂಚಿಸಿದ್ದಾನೆ ಎಂದು ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.

ನಗರದ ಶ್ರೀಕ್ಷೇತ್ರ ಕದ್ರಿಯ ಬ್ರಹ್ಮಕಲಶೋತ್ಸವದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮವನ್ನು‌ ಉದ್ಘಾಟಿಸಿ ಅವರು ಮಾತನಾಡಿದರು.




Body:ಮತ್ತೊಬ್ಬರ ದೋಷವನ್ನು‌ ಹುಡುಕುತ್ತೇವೆ. ಗುಣವನ್ನು ಇದ್ದರೂ ಗಮನಿಸುವುದಿಲ್ಲ. ಶಿವ ಹಾಗಲ್ಲ‌ ಅವನು ಸಮುದ್ರಮಥನದಿಂದ ಬಂದ ಚಂದ್ರನನ್ನು‌ ಧರಿಸಿದ. ಕಾಲಕೋಟ ವಿಷವನ್ನು ನುಂಗಿದ. ಹಾಗೆಯೇ ನಾವು ಮತ್ತೊಬ್ಬರ ದೋಷವನ್ನು ನುಂಗಿಬಿಡಬೇಕು. ನಾವು ಮತ್ತೊಬ್ಬರಿಗೆ ವಿಷ ಕೊಟ್ಟು ಅಮೃತ ಮಾತ್ರ ನಮಗಿರಲಿ‌ ಎಂದು ಬಿಡುತ್ತೇವೆ. ಇಂದು ಭ್ರಷ್ಟಾಚಾರ ದೊಡ್ಡ ಕಾಲಕೋಟ ವಿಷ. ಆ ಭ್ರಷ್ಟಾಚಾರ ಎಂಬ ಕಾಲಕೋಟ ವಿಷ ನಾಶವಾಗಬೇಕಾದರೆ ಶಿವನ‌ಅನುಗ್ರಹ ಇಡೀ ರಾಷ್ಟ್ರಕ್ಕೆ ಆಗಬೇಕು ಎಂದು ಪೇಜಾವರ ಶ್ರೀ ಹೇಳಿದರು.




Conclusion:ಈ‌ ಸಂದರ್ಭ ಕಾಣಿಯೂರು ಶ್ರೀ ವಿದ್ಯಾವಲ್ಲಭ ಸ್ವಾಮೀಜಿ, ಡಾ.ಶಾಂತಾರಾಮ ಶೆಟ್ಟಿ, ಪ್ರದೀಪ್ ಕುಮಾರ್ ಕಲ್ಕೂರ, ಧರ್ಮದರ್ಶಿ ಹರಿಕೃಷ್ಣ ಪುನರೂರು, ನಿತ್ಯಾನಂದ ಮುಂಡೋಡಿ ಉಪಸ್ಥಿತರಿದ್ದರು.

Reporter_Vishwanath Panjimogaru

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.