ಮಂಗಳೂರು: ರೂಪಾಂತರ ಕೊರೊನಾ ಭೀತಿಯಿಂದ ಮಂಗಳೂರು ನಗರದ ಎಲ್ಲಾ ಬೀಚ್ಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಹೀಗಾಗಿ ಜನರಿಲ್ಲದೆ ಕಡಲ ಕಿನಾರೆ ಭಣಗುಡುತ್ತಿದೆ.
ನಗರದ ಪಣಂಬೂರು ಕಡಲ ಕಿನಾರೆಗಿಂತ 200 ಮೀ. ದೂರದಲ್ಲಿಯೇ ಜನರು ಬೀಚ್ ಪ್ರವೇಶಿಸದಂತೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಸಮುದ್ರ ವಿಹಾರಕ್ಕೆ ಬರುವವರನ್ನೂ ಪ್ರವೇಶಿಸಲು ನಿರಾಕರಿಸಿ ಹಿಂದೆ ಕಳುಹಿಸಲಾಗುತ್ತಿದೆ.