ETV Bharat / state

ದ್ವೀಪ ಪ್ರದೇಶ ಬಡ್ಡ ಕುದ್ರು ನಿವಾಸಿಗಳಿಂದ ತೂಗು ಸೇತುವೆಗೆ ಮನವಿ: ಡಾ. ಭರತ್ ಶೆಟ್ಟಿ ಸ್ಪಂದನೆ

author img

By

Published : Oct 5, 2020, 6:02 PM IST

ನಾವಿರುವ ದ್ವೀಪ ಪ್ರದೇಶ ಬಡ್ಡ ಕುದ್ರುವಿಗೆ ತೂಗು ಸೇತುವೆ ಮಾಡಿಕೊಡಿ, ಬಹಳ ಹಿಂದಿನಿಂದಲೂ ಇಲ್ಲಿಯೇ ಬದುಕು ಸಾಗಿಸುತ್ತಿದ್ದೇವೆ. ಅನಾರೋಗ್ಯ ಬಂದರೆ ಚಿಕಿತ್ಸೆಗೂ ಪರದಾಟ, ಮಕ್ಕಳಿಗೆ ಶಾಲೆಗೆ ತೆರಳಲು ಸಮಸ್ಯೆ, ಮಳೆಗಾಲದಲ್ಲಿ ನದಿ ಉಕ್ಕಿ ಹರಿದಾಗ ದೋಣಿಯಲ್ಲೂ ದಾಟಲು ಆಗದ ಸ್ಥಿತಿ. ನೀವಾದರೂ ಸೇತುವೆ ಮಾಡಿಸಿಕೊಡಿ...ಇದು ಶಾಸಕರ ಬಳಿ ದ್ವೀಪ ಪ್ರದೇಶದ ನಿವಾಸಿಗಳ ಮನವಿ.

MLA Dr, Bharat shetty visits to badda kudru place
ಶಾಸಕರ ಭೇಟಿ

ಮಂಗಳೂರು/ಸೂರತ್ಕಲ್​: ಕಳೆದ 50 ವರ್ಷಗಳಲ್ಲಿ ಯಾರೊಬ್ಬರೂ ಅಹವಾಲು ಆಲಿಸಲು ಹೆಜ್ಜೆ ಇಡದ ದ್ವೀಪ ಪ್ರದೇಶವಾದ ಬಡ್ಡ ಕುದ್ರುವಿಗೆ ಶಾಸಕ ಡಾ. ಭರತ್ ಶೆಟ್ಟಿ ವೈ, ದೋಣಿಯಲ್ಲಿ ತೆರಳಿ ಅಲ್ಲಿನ ನಿವಾಸಿಗಳ ಸಮಸ್ಯೆಗೆ ಸ್ಪಂದಿಸಿದ್ದಾರೆ.

ಶಾಸಕರ ಭೇಟಿ

ಮಂಗಳೂರು ಮಹಾನಗರ ಪಾಲಿಕೆಗೆ ಒಳಪಟ್ಟ ಮರಕಡ ವಾರ್ಡ್ 14 ರ ಬಡ್ಡಕುದ್ರುವಿಗೆ ಶಾಸಕ ಡಾ.ಭರತ್ ಶೆಟ್ಟಿ ಅವರು ದೋಣಿಯಲ್ಲಿ ಪ್ರಯಾಣಿಸಿ ದ್ವೀಪದ ಜನರ ಅಹವಾಲು ಆಲಿಸಿದ ಸಂದರ್ಭ ಮನವಿಗಳ ಮಹಾಪೂರ ಹರಿದು ಬಂತು. ಸದಾಶಿವ ಪೂಜಾರಿ ಎಂಬುವವರು ಶಾಸಕರಿಗೆ ಇಲ್ಲಿನ ಸಮಸ್ಯೆಗಳ ಬಗ್ಗೆ ವಿವರಿಸಿದರು. ಪಾಲಿಕೆ ಇದೀಗ ತ್ಯಾಜ್ಯ ತೆರಿಗೆ ಹಾಕಲಾಗುತ್ತಿದೆ. ಆದರೆ ಅವರು ಹೇಗೆ ತ್ಯಾಜ್ಯ ಸಂಗ್ರಹಿಸುತ್ತಾರೆ. ಬರಲು ವ್ಯವಸ್ಥೆಗಳಿಲ್ಲ. ನಮ್ಮಲ್ಲಿ ತ್ಯಾಜ್ಯವೂ ಸಂಗ್ರಹವಾಗುತ್ತಿಲ್ಲ. ತೆರಿಗೆ ಭಾರ ಮಾತ್ರ ತಪ್ಪದೆ ಹಾಕುತ್ತಾರೆ. ಇದನ್ನು ಸರಿಪಡಿಸಿ. ಪ್ರಥಮ ಬಾರಿ ಶಾಸಕರೊಬ್ಬರು ಭೇಟಿ ನೀಡಿ ಅಹವಾಲು ಆಲಿಸಿರುವುದಕ್ಕೆ ಸಂತಸವಾಗಿದೆ ಎಂದರು.

ಇದಕ್ಕೆ ಉತ್ತರಿಸಿದ ಶಾಸಕ ಡಾ.ಭರತ್ ಶೆಟ್ಟಿ, ತೂಗು ಸೇತುವೆ ನಿರ್ಮಾಣಕ್ಕೆ ತಾಂತ್ರಿಕ ಸಲಹೆಯ ಅಗತ್ಯವಿದೆ. ತಜ್ಞ ಎಂಜಿನಿಯರ್​ಗಳ ಬಳಿ ಸಮಾಲೋಚನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ತ್ಯಾಜ್ಯ ತೆರಿಗೆಯಲ್ಲಿ ವಿನಾಯಿತಿ ನೀಡುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಈ ಸಂದರ್ಭ ಸ್ಥಳೀಯ ಮನಪಾ ಸದಸ್ಯರಾದ ಲೋಹಿತ್ ಅಮೀನ್ ಹಾಗೂ ಭಾಜಪ ಉತ್ತರ ಮಂಡಲದ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ. ಪ್ರಧಾನ ಕಾರ್ಯದರ್ಶಿ ರಾಜೇಶ್ ಕೊಟ್ಟಾರಿ, ಪಕ್ಷದ ಪ್ರಮುಖರಾದ ಹರೀಶ್ ಶೆಟ್ಟಿ, ಅಮರೇಶ್ ಬೇಕಲ್ ಹಾಗೂ ಕಾರ್ಯಕರ್ತರಾದ ಸುನೀಲ್, ಧನಂಜಯ್, ಶ್ರವಣ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಮಂಗಳೂರು/ಸೂರತ್ಕಲ್​: ಕಳೆದ 50 ವರ್ಷಗಳಲ್ಲಿ ಯಾರೊಬ್ಬರೂ ಅಹವಾಲು ಆಲಿಸಲು ಹೆಜ್ಜೆ ಇಡದ ದ್ವೀಪ ಪ್ರದೇಶವಾದ ಬಡ್ಡ ಕುದ್ರುವಿಗೆ ಶಾಸಕ ಡಾ. ಭರತ್ ಶೆಟ್ಟಿ ವೈ, ದೋಣಿಯಲ್ಲಿ ತೆರಳಿ ಅಲ್ಲಿನ ನಿವಾಸಿಗಳ ಸಮಸ್ಯೆಗೆ ಸ್ಪಂದಿಸಿದ್ದಾರೆ.

ಶಾಸಕರ ಭೇಟಿ

ಮಂಗಳೂರು ಮಹಾನಗರ ಪಾಲಿಕೆಗೆ ಒಳಪಟ್ಟ ಮರಕಡ ವಾರ್ಡ್ 14 ರ ಬಡ್ಡಕುದ್ರುವಿಗೆ ಶಾಸಕ ಡಾ.ಭರತ್ ಶೆಟ್ಟಿ ಅವರು ದೋಣಿಯಲ್ಲಿ ಪ್ರಯಾಣಿಸಿ ದ್ವೀಪದ ಜನರ ಅಹವಾಲು ಆಲಿಸಿದ ಸಂದರ್ಭ ಮನವಿಗಳ ಮಹಾಪೂರ ಹರಿದು ಬಂತು. ಸದಾಶಿವ ಪೂಜಾರಿ ಎಂಬುವವರು ಶಾಸಕರಿಗೆ ಇಲ್ಲಿನ ಸಮಸ್ಯೆಗಳ ಬಗ್ಗೆ ವಿವರಿಸಿದರು. ಪಾಲಿಕೆ ಇದೀಗ ತ್ಯಾಜ್ಯ ತೆರಿಗೆ ಹಾಕಲಾಗುತ್ತಿದೆ. ಆದರೆ ಅವರು ಹೇಗೆ ತ್ಯಾಜ್ಯ ಸಂಗ್ರಹಿಸುತ್ತಾರೆ. ಬರಲು ವ್ಯವಸ್ಥೆಗಳಿಲ್ಲ. ನಮ್ಮಲ್ಲಿ ತ್ಯಾಜ್ಯವೂ ಸಂಗ್ರಹವಾಗುತ್ತಿಲ್ಲ. ತೆರಿಗೆ ಭಾರ ಮಾತ್ರ ತಪ್ಪದೆ ಹಾಕುತ್ತಾರೆ. ಇದನ್ನು ಸರಿಪಡಿಸಿ. ಪ್ರಥಮ ಬಾರಿ ಶಾಸಕರೊಬ್ಬರು ಭೇಟಿ ನೀಡಿ ಅಹವಾಲು ಆಲಿಸಿರುವುದಕ್ಕೆ ಸಂತಸವಾಗಿದೆ ಎಂದರು.

ಇದಕ್ಕೆ ಉತ್ತರಿಸಿದ ಶಾಸಕ ಡಾ.ಭರತ್ ಶೆಟ್ಟಿ, ತೂಗು ಸೇತುವೆ ನಿರ್ಮಾಣಕ್ಕೆ ತಾಂತ್ರಿಕ ಸಲಹೆಯ ಅಗತ್ಯವಿದೆ. ತಜ್ಞ ಎಂಜಿನಿಯರ್​ಗಳ ಬಳಿ ಸಮಾಲೋಚನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ತ್ಯಾಜ್ಯ ತೆರಿಗೆಯಲ್ಲಿ ವಿನಾಯಿತಿ ನೀಡುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಈ ಸಂದರ್ಭ ಸ್ಥಳೀಯ ಮನಪಾ ಸದಸ್ಯರಾದ ಲೋಹಿತ್ ಅಮೀನ್ ಹಾಗೂ ಭಾಜಪ ಉತ್ತರ ಮಂಡಲದ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ. ಪ್ರಧಾನ ಕಾರ್ಯದರ್ಶಿ ರಾಜೇಶ್ ಕೊಟ್ಟಾರಿ, ಪಕ್ಷದ ಪ್ರಮುಖರಾದ ಹರೀಶ್ ಶೆಟ್ಟಿ, ಅಮರೇಶ್ ಬೇಕಲ್ ಹಾಗೂ ಕಾರ್ಯಕರ್ತರಾದ ಸುನೀಲ್, ಧನಂಜಯ್, ಶ್ರವಣ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.