ETV Bharat / state

ಕೋವಿಡ್-19 ಸೋಂಕು: ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಏಳು ಮಂದಿ ಅರೆಸ್ಟ್​ - corona in Mangalore

ಕೋವಿಡ್-19 ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಮಂಗಳೂರಲ್ಲಿ ಲಾಕ್​ ಡೌನ್ ಇದ್ದರೂ, ಅಧಿಕಾರಿಗಳ ಆದೇಶ ಉಲ್ಲಂಘಿಸಿದ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

mangalore
ಕಾನೂನು ಉಲ್ಲಂಘಿಸಿದ ಏಳು ಮಂದಿಯ ಬಂಧನ
author img

By

Published : Mar 24, 2020, 4:22 PM IST

ಮಂಗಳೂರು: ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿಗಳ ಆದೇಶ ಮತ್ತು ನಿರ್ದೇಶನಗಳನ್ನು ಹಾಗೂ 144 ಸೆಕ್ಷನ್​ ಅನ್ವಯ ವಿಧಿಸಿರುವ ನಿರ್ಬಂಧಕಾಜ್ಞೆಯನ್ನು ಉಲ್ಲಂಘಿಸಿರುವುದಕ್ಕೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹಾಸನ ಮೂಲದ ಪ್ರಸ್ತುತ ನಗರದ ಪ್ರಭಾತ್ ಟಾಕೀಸ್​ನಲ್ಲಿ ವಾಚ್​ಮ್ಯಾನ್​ ಆಗಿರುವ ಜೇಮ್ಸ್(45), ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ, ಪ್ರಸ್ತುತ ಜೀವನ ದೀಪ್ ಪಬ್ಲಿಕೇಷನ್​ಲ್ಲಿರುವ ವಿಮೇಶ್(30), ಉತ್ತರ ಪ್ರದೇಶ ರಾಜ್ಯದ ಮಹದಯಾ ಬರ್ಲಾಪುರ ಮೂಲದ ಪ್ರಸ್ತುತ ಕುದ್ರೋಳಿ ಜೆ.ಎಂ. ರೋಡ್​ನ ನಿವಾಸಿ ಅಮೀರ್​ ಹಾಜು ಅನ್ಸಾರಿ, ರಾಜಸ್ಥಾನ ಮೂಲದ ಪ್ರಸ್ತುತ ಕುದ್ರೋಳಿ ದೇವಾಲಯದ ಮುಂಭಾಗ ನಿವಾಸಿ ಬಲರಾಮ ಚೌಧರಿ(32), ಅಸ್ಸೋಂ ರಾಜ್ಯದ ಮಜೂರಿ ಮೂಲದ ಪ್ರಸ್ತುತ ಬಂದರ್​ನಲ್ಲಿರುವ ಅಜಾದಿ ಸ್ಟೀಲ್​ನಲ್ಲಿ ಉದ್ಯೋಗಿಯಾಗಿರುವ ರಾಹುಲ್ ಪಾಂಡೆ(18), ಉಳ್ಳಾಲ ಇನ್ಲ್ಯಾಂಡ್ ಇಂಫಾಲದ ಸಿದ್ದೀಕ್, ತೊಕ್ಕೊಟ್ಟು ಕೃಷ್ಣ ನಗರದ ವಿನಯ್ ಬಂಧಿತ ಆರೋಪಿಗಳು.
ಕೋವಿಡ್-19 ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾಡಿರೋದರಿಂದ ದ.ಕ. ಜಿಲ್ಲೆಯಲ್ಲಿ ಸೋಮವಾರದಿಂದ ಜಿಲ್ಲಾಧಿಕಾರಿ 144 ಸೆಕ್ಷನ್ ಜಾರಿಗೊಳಿಸಿದ್ದಾರೆ. ಆದರೆ ಆದೇಶವನ್ನು ಉಲ್ಲಂಘಿಸಿರೋದರಿಂದ ಕೇಂದ್ರ ಉಪ ವಿಭಾಗ ಹಾಗೂ ಪಶ್ಚಿಮ ಉಪ ವಿಭಾಗದ ಪೊಲೀಸರು ಈ ಏಳು ಮಂದಿಯನ್ನು ಬಂಧಿಸಿದ್ದಾರೆ.

ಮಂಗಳೂರು: ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿಗಳ ಆದೇಶ ಮತ್ತು ನಿರ್ದೇಶನಗಳನ್ನು ಹಾಗೂ 144 ಸೆಕ್ಷನ್​ ಅನ್ವಯ ವಿಧಿಸಿರುವ ನಿರ್ಬಂಧಕಾಜ್ಞೆಯನ್ನು ಉಲ್ಲಂಘಿಸಿರುವುದಕ್ಕೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹಾಸನ ಮೂಲದ ಪ್ರಸ್ತುತ ನಗರದ ಪ್ರಭಾತ್ ಟಾಕೀಸ್​ನಲ್ಲಿ ವಾಚ್​ಮ್ಯಾನ್​ ಆಗಿರುವ ಜೇಮ್ಸ್(45), ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ, ಪ್ರಸ್ತುತ ಜೀವನ ದೀಪ್ ಪಬ್ಲಿಕೇಷನ್​ಲ್ಲಿರುವ ವಿಮೇಶ್(30), ಉತ್ತರ ಪ್ರದೇಶ ರಾಜ್ಯದ ಮಹದಯಾ ಬರ್ಲಾಪುರ ಮೂಲದ ಪ್ರಸ್ತುತ ಕುದ್ರೋಳಿ ಜೆ.ಎಂ. ರೋಡ್​ನ ನಿವಾಸಿ ಅಮೀರ್​ ಹಾಜು ಅನ್ಸಾರಿ, ರಾಜಸ್ಥಾನ ಮೂಲದ ಪ್ರಸ್ತುತ ಕುದ್ರೋಳಿ ದೇವಾಲಯದ ಮುಂಭಾಗ ನಿವಾಸಿ ಬಲರಾಮ ಚೌಧರಿ(32), ಅಸ್ಸೋಂ ರಾಜ್ಯದ ಮಜೂರಿ ಮೂಲದ ಪ್ರಸ್ತುತ ಬಂದರ್​ನಲ್ಲಿರುವ ಅಜಾದಿ ಸ್ಟೀಲ್​ನಲ್ಲಿ ಉದ್ಯೋಗಿಯಾಗಿರುವ ರಾಹುಲ್ ಪಾಂಡೆ(18), ಉಳ್ಳಾಲ ಇನ್ಲ್ಯಾಂಡ್ ಇಂಫಾಲದ ಸಿದ್ದೀಕ್, ತೊಕ್ಕೊಟ್ಟು ಕೃಷ್ಣ ನಗರದ ವಿನಯ್ ಬಂಧಿತ ಆರೋಪಿಗಳು.
ಕೋವಿಡ್-19 ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾಡಿರೋದರಿಂದ ದ.ಕ. ಜಿಲ್ಲೆಯಲ್ಲಿ ಸೋಮವಾರದಿಂದ ಜಿಲ್ಲಾಧಿಕಾರಿ 144 ಸೆಕ್ಷನ್ ಜಾರಿಗೊಳಿಸಿದ್ದಾರೆ. ಆದರೆ ಆದೇಶವನ್ನು ಉಲ್ಲಂಘಿಸಿರೋದರಿಂದ ಕೇಂದ್ರ ಉಪ ವಿಭಾಗ ಹಾಗೂ ಪಶ್ಚಿಮ ಉಪ ವಿಭಾಗದ ಪೊಲೀಸರು ಈ ಏಳು ಮಂದಿಯನ್ನು ಬಂಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.