ETV Bharat / state

ಜಮೀನು ಅತಿಕ್ರಮಣ ಆರೋಪ: ಮೂರು ದಿನದಿಂದ ಉಪವಾಸ ಸತ್ಯಾಗ್ರಹ - Anekkallu Agro Trading Service Co-operative Society

ಏನೆಕಲ್ಲು ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯಿಂದ ತಮ್ಮ ಜಮೀನನ್ನು ಅತಿಕ್ರಮಣ ಮಾಡಿದ್ದು, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪಿ.ಆರ್.ಯಶೋಚಂದ್ರ ಆರೋಪಿಸಿದ್ದಾರೆ.

ಜಮೀನು ಅತಿಕ್ರಮಣ ಅರೋಪ,  Land encroachment
ಜಮೀನು ಅತಿಕ್ರಮಣ ಅರೋಪ
author img

By

Published : Jan 2, 2020, 8:40 PM IST

ದಕ್ಷಿಣ ಕನ್ನಡ: ಕಡಬ ತಾಲೂಕಿನ ಏನೆಕಲ್ಲು ಗ್ರಾಮದ ಪಿ.ಆರ್.ಯಶೋಚಂದ್ರ ಎಂಬುವರು ಕಳೆದ ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಏನೆಕಲ್ಲು ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯಿಂದ ತಮ್ಮ ಜಮೀನನ್ನು ಅತಿಕ್ರಮಣ ಮಾಡಿದ್ದು, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ.

ಜಮೀನು ಅತಿಕ್ರಮಣ ಆರೋಪ

ಏನೆಕಲ್ಲು ಸೇವಾ ಸಹಕಾರಿ ಸಂಘದ ಸ್ಥಾಪಕರಾದ ನನ್ನ ತಂದೆ ದಿವಂಗತ ಪಿ.ಎಸ್.ರಾಮಣ್ಣ ಮಾಸ್ಟರ್ ಅವರು ಸಂಘಕ್ಕೆ ಆರಂಭದಲ್ಲಿ ಸ್ವಂತ ಕಟ್ಟಡ ಇಲ್ಲದ ಕಾರಣ ನಮ್ಮ ಮನೆಯಲ್ಲೇ ಅವಕಾಶ ಕೊಟ್ಟು ಸಂಘದ ಕೆಲಸಗಳನ್ನು ಮಾಡಲು ಅನುವು ಮಾಡಿ ಕೊಟ್ಟಿದ್ದರು. ಈಗ ಈ ಸ್ಥಳ ನಮ್ಮದೇ ಎಂದು ಆಡಳಿತ ಮಂಡಳಿಯು ಜಮೀನನ್ನು ಅತಿಕ್ರಮಣ ಮಾಡಿದೆ ಎಂದು ಆರೋಪ ಮಾಡಿದರು.

ಮೂರು ದಿನದಿಂದ ಸತ್ಯಾಗ್ರಹ ಮಾಡುತ್ತಿದ್ದರೂ ಕೂಡ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡ: ಕಡಬ ತಾಲೂಕಿನ ಏನೆಕಲ್ಲು ಗ್ರಾಮದ ಪಿ.ಆರ್.ಯಶೋಚಂದ್ರ ಎಂಬುವರು ಕಳೆದ ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಏನೆಕಲ್ಲು ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯಿಂದ ತಮ್ಮ ಜಮೀನನ್ನು ಅತಿಕ್ರಮಣ ಮಾಡಿದ್ದು, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ.

ಜಮೀನು ಅತಿಕ್ರಮಣ ಆರೋಪ

ಏನೆಕಲ್ಲು ಸೇವಾ ಸಹಕಾರಿ ಸಂಘದ ಸ್ಥಾಪಕರಾದ ನನ್ನ ತಂದೆ ದಿವಂಗತ ಪಿ.ಎಸ್.ರಾಮಣ್ಣ ಮಾಸ್ಟರ್ ಅವರು ಸಂಘಕ್ಕೆ ಆರಂಭದಲ್ಲಿ ಸ್ವಂತ ಕಟ್ಟಡ ಇಲ್ಲದ ಕಾರಣ ನಮ್ಮ ಮನೆಯಲ್ಲೇ ಅವಕಾಶ ಕೊಟ್ಟು ಸಂಘದ ಕೆಲಸಗಳನ್ನು ಮಾಡಲು ಅನುವು ಮಾಡಿ ಕೊಟ್ಟಿದ್ದರು. ಈಗ ಈ ಸ್ಥಳ ನಮ್ಮದೇ ಎಂದು ಆಡಳಿತ ಮಂಡಳಿಯು ಜಮೀನನ್ನು ಅತಿಕ್ರಮಣ ಮಾಡಿದೆ ಎಂದು ಆರೋಪ ಮಾಡಿದರು.

ಮೂರು ದಿನದಿಂದ ಸತ್ಯಾಗ್ರಹ ಮಾಡುತ್ತಿದ್ದರೂ ಕೂಡ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Intro:ಏನೆಕಲ್ಲು

ಕಡಬ ತಾಲೂಕಿನ ಏನೆಕಲ್ಲು ಗ್ರಾಮದ ಪಿ.ಆರ್ ಯಶೋಚಂದ್ರ ಅವರಿಂದ ಏನೆಕಲ್ಲು ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಕಚೇರಿಯ ಬಳಿ ಟೆಂಟ್ ಕಟ್ಟಿ ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹ.!Body:ಯಶೋಚಂದ್ರ ರವರು
ಮೂರೂ ದಿನಗಳಿಂದ ಯಾವುದೇ ಆಹಾರ ಸೇವಿಸದೇ ಏನೆಕಲ್ಲು ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಎದುರಿನ ತನ್ನದೇ ಜಾಗದಲ್ಲಿ ಶೆಡ್ಡ್ ನಿರ್ಮಾಣ ಮಾಡಿಕೊಂಡು ಮನೆಗೂ ಹೋಗದೆ ರಾತ್ರಿ ಶೆಡ್ಡ್ ನಲ್ಲೆ ಉಳಿದುಕೊಂಡು ಸತ್ಯಾಗ್ರಹ ಮಾಡುತ್ತಿದ್ದಾರೆ.
ಏನೆಕಲ್ಲು ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯಿಂದ ತನ್ನ ಜಮೀನು ಅತಿಕ್ರಮಣ ಮಾಡಿದ್ದು ಹಾಗೂ ತನಗೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಇವರು ಉಪವಾಸ ಸತ್ಯಾಗ್ರಹವನ್ನು ಮಾಡುತ್ತಿದ್ದಾರೆ.

ಏನೆಕಲ್ಲು ಸೇವಾ ಸಹಕಾರಿ ಸಂಘದ ಸ್ಥಾಪಕರಾದ ನನ್ನ ತಂದೆ ದಿವಂಗತ ಪಿ ಎಸ್ ರಾಮಣ್ಣ ಮಾಸ್ಟರ್ ರವರು ಸಂಘಕ್ಕೆ ಆರಂಭದಲ್ಲಿ ಸ್ವಂತ ಕಟ್ಟಡ ಇಲ್ಲದ ಕಾರಣ ನಮ್ಮ ಮನೆಯಲ್ಲೇ ಅವಕಾಶ ಕೊಟ್ಟು ಸಂಘದ ಕೆಲಸಗಳನ್ನು ಮಾಡಲು ಅನುವು ಮಾಡಿ ಕೊಟ್ಟಿದ್ದರು.
ಆ ಬಳಿಕ 1955 ರಲ್ಲಿ 23 ಸೆಂಟ್ಸ್ ಜಾಗವನ್ನು ದಾನ ಮಾಡಿ ಈಗ ಗೋದಾಮು ಆಗಿರುವ ಮೂಲ ಕಟ್ಟಡ ನಿರ್ಮಿಸಲು ಅವಕಾಶವನ್ನು ನೀಡಿದರು.ಬಡತನವೇ ಬಂಡವಾಳವಾಗಿದ್ದ ಆ ಕಾಲದಲ್ಲಿ ಅತಿ ಕಷ್ಟದಿಂದ ಸಂಘದ ನಿರ್ವಹಣೆ ಮಾಡಿದ್ದರು.ಸಂಘಕ್ಕೆ ಭೇಟಿ ಕೊಡುವ ಅಧಿಕಾರಿಗಳಿಗೆ ಸಿಬ್ಬಂದಿ ಗಳಿಗೆ ಊಟೋಪಚಾರವೂ ನಮ್ಮ ಮನೆಯಲ್ಲೇ ಉಚಿತವಾಗಿತ್ತು.
ನಂತರ ಬಂದ ಆಡಳಿತ ಮಂಡಳಿ ರಾಜಕೀಯ ದ್ವೇಷದಿಂದ ನಮ್ಮ ತಂದೆಯವರಿಗೆ ಕಿರುಕುಳ ಕೊಡಲಾರಂಭಿಸಿದರು.
ಸಹಕಾರಿ ಸಂಘಕ್ಕೆ ನಮ್ಮ ಮನೆಯ ತ್ಯಾಗದ ಹಿನ್ನೆಲೆ ಅರ್ಥವಾಗದೇ ಈಗಿನ ಆಡಳಿತ ಮಂಡಳಿಯೂ ಸ್ವ-ಪ್ರತಿಷ್ಠೆ ಮತ್ತು ಉಡಾಫೆಯಿಂದ ವರ್ತಿಸುತ್ತಿದ್ದು ನನ್ನ ಒಪ್ಪಿಗೆಯಿಲ್ಲದೆ ಮೂಲ 23 ಸೆಂಟ್ಸ್ ಜಾಗವನ್ನು ವಿಸ್ತರಿಸಿದ್ದು, ಪಟ್ಟಾ ಮತ್ತು ಕುಮ್ಕಿ(ನಮ್ಮ ವಿಶೇಷ ಹಕ್ಕು ಇರುವ ಕದೀಮು ಜಮೀನು) ಸೇರಿ ಅರ್ಧ ಎಕರೆಯಷ್ಟು ಜಾಗವನ್ನು ಸಹಕಾರಿ ಸಂಘವು ಅತಿಕ್ರಮಿಸಿದೆ.ನನ್ನೊಂದಿಗೆ ಗೌರವಯುತವಾಗಿ ವರ್ತಿಸುವುದನ್ನು ಬಿಟ್ಟು ದರ್ಪ ಮತ್ತು ಗೌರವ ರಹಿತವಾಗಿ ವರ್ತಿಸಿದೆ. ಇವರ ಈ ವರ್ತನೆಯನ್ನು ಖಂಡಿಸಿ ಡಿಸೆಂಬರ್ 31ರಿಂದು ನಾನು ಆರಂಭಿಸಿದ ಉಪವಾಸ ಸತ್ಯಾಗ್ರಹಕ್ಕೆ ಇಂದು ಮೂರನೇ ದಿನ. ಸತ್ಯಾಗ್ರಹಕ್ಕೆ ಮೊದಲು ಸಂಬಂಧಿಸಿದ ಸಹಕಾರಿ ಸಂಘ,ಜಿಲ್ಲಾಡಳಿತ,ಸಹಕಾರಿ ಇಲಾಖೆ ಮತ್ತು ಮಾಧ್ಯಮಗಳಿಗೆ ಕೊಡಬೇಕಾದ ಮಾಹಿತಿ ಬಗ್ಗೆ ನನಗೆ ಅರಿವಿಲ್ಲದ ಕಾರಣ, ಉಪವಾಸ ಸತ್ಯಾಗ್ರಹವನ್ನು ಇವತ್ತು ನಿಲ್ಲಿಸುತ್ತಿದ್ದೇನೆ. ಸಂಘದ ಚುನಾವಣೆ ನಂತರ ಮುಂದಿನ ಹೋರಾಟ ಮುಂದುವರಿಸಲಿದ್ದೇನೆ.
ಎಂದು ಯಶೋಚಂದ್ರ ರವರು ಮಾಹಿತಿ ನೀಡಿದರು.

ಆದರೆ ಮೂರು ದಿನ ಆದರೂ ಯಾವುದೇ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ತಿಳಿದು ಬಂದಿದೆ. ಸದ್ಯ ಯಶೋಚಂದ್ರ ರವರು ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸಿದ್ದಾರೆ.ಸಹಕಾರಿ ಸಂಘದ ಪ್ರತಿಕ್ರಿಯೆ ಲಭ್ಯವಾಗಿಲ್ಲ.Conclusion:ಬೈಟ್- ಪಿ.ಆರ್ ಯಶೋಚಂದ್ರ, ಉಪವಾಸ ಸತ್ಯಾಗ್ರಹ ಮಾಡಿದವರು.
ವೀಡಿಯೋಗಳು ಹಾಕಲಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.