ETV Bharat / state

ನದಿಗೆಸೆದ ಪೂಜಾ ಸಾಮಗ್ರಿ ಕಾದುಕುಳಿತ ಕಾಳಿಂಗ ಸರ್ಪ.. ಕೊನೆಗೆ ಹೀಗಾಯ್ತು ನೋಡಿ

author img

By

Published : Oct 19, 2022, 6:46 AM IST

ನದಿಯಲ್ಲಿ ಬಿಸಾಡಿದ್ದ ಪೂಜಾ ಸಾಮಾಗ್ರಿಯ ಪಕ್ಕದಲ್ಲಿ ಕಾಳಿಂಗ ಸರ್ಪವೊಂದು ಕಾದು ಕುಳಿತುಕೊಳ್ಳುವ ಮೂಲಕ ಜನರನ್ನು ಅಚ್ಚರಿಗೊಳಿಸಿದ ಘಟನೆ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಇಜಿನಡ್ಕದಲ್ಲಿ ನಡೆದಿದೆ.

King cobra guarding the pooja items
ನದಿಗೆಸೆದ ಪೂಜಾ ಸಾಮಗ್ರಿ ಕಾದುಕುಳಿತ ಕಾಳಿಂಗ ಸರ್ಪ

ಸುಳ್ಯ(ದಕ್ಷಿಣ ಕನ್ನಡ): ಅಚ್ಚರಿಯಾದರೂ ಸತ್ಯ ಎಂಬಂತಿದೆ ಈ ಘಟನೆ. ನದಿಯಲ್ಲಿ ಬಿಸಾಡಿದ್ದ ಪೂಜಾ ಸಾಮಗ್ರಿಯ ಪಕ್ಕದಲ್ಲಿ ಕಾಳಿಂಗ ಸರ್ಪವೊಂದು ಕಾದು ಕುಳಿತ ಪ್ರಸಂಗ ದಕ್ಷಿಣ ಕನ್ನಡ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಇಜಿನಡ್ಕದಲ್ಲಿ ನಡೆದಿದೆ. ಇದನ್ನು ಗಮನಿಸಿದ ಸ್ಥಳೀಯರು ಪೂಜಾ ಸಾಮಗ್ರಿಯನ್ನು ಎತ್ತಿ ಕೊಂಡೊಯ್ದ ಬಳಿಕ ಕಾಳಿಂಗ ಸರ್ಪವೂ ಅಲ್ಲಿಂದ ತೆರಳಿದೆ ಎನ್ನಲಾಗ್ತಿದೆ.

ಪೂಜೆಗೆ ಬಳಸುವ ಕಾಲುದೀಪ, ಆರತಿ, ಗಂಟೆ, ಹರಿವಾಣ ಸಹಿತ ಹಳೆಯ ಪೂಜಾ ಸಾಮಗ್ರಿಗಳನ್ನು ಇಜಿನಡ್ಕ ಎಂಬಲ್ಲಿ ನದಿಯಲ್ಲಿ ಬಿಸಾಡಿರುವುದನ್ನು ಅದೇ ದಾರಿಯಲ್ಲಿ ಬಂದವರು ನೋಡಿದ್ದರು. ಈ ವೇಳೆ ಪೂಜಾ ಸಾಮಗ್ರಿ ಇದ್ದ ಜಾಗದ ಸಮೀಪದಲ್ಲೇ ನದಿ ದಡದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದನ್ನೂ ಅವರು ಗಮನಿಸಿದ್ದಾರೆ.

ಕೂಡಲೇ ಅವರು ಇತರರಿಗೆ ಮಾಹಿತಿ ನೀಡಿದ್ದು, ಇದನ್ನು ವೀಕ್ಷಿಸಲು ಸ್ಥಳಕ್ಕೆ ಹಲವಾರು ಜನರು ಆಗಮಿಸಿದ್ದಾರೆ. ಆದರೆ ಈ ಪೂಜಾ ಸಾಮಗ್ರಿಗಳನ್ನು ಯಾರು ಬಿಸಾಡಿರುವುದು ಎಂಬುದು ತಿಳಿದು ಬಂದಿರಲಿಲ್ಲ. ಹೀಗಾಗಿ ಪಕ್ಕದಲ್ಲೇ ಇರುವ ಚಾರ್ಮತ ನಾಗನ ಸನ್ನಿಧಿಯಲ್ಲಿ ಸ್ಥಳೀಯರೆಲ್ಲ ಸೇರಿ ಪ್ರಾರ್ಥನೆ ನೆರವೇರಿಸಿ ಪೂಜಾ ಸಾಮಗ್ರಿಗಳನ್ನು ಬಿಸಾಡಿರುವ ಕುರಿತು ಗೊತ್ತಾಗಬೇಕು ಎಂದು ದೇವರ ಮುಂದೆ ಹೇಳಿಕೊಂಡು ಪೂಜಾ ಸಾಮಗ್ರಿಗಳನ್ನು ನದಿಯಿಂದ ಮೇಲಕ್ಕೆತ್ತಿದರು ಎನ್ನಲಾಗ್ತಿದೆ.

ಸ್ವಲ್ಪ ಹೊತ್ತಿನಲ್ಲಿ ಈ ವಿಚಾರ ತಿಳಿದ ರಾಮಣ್ಣ ನಾಯ್ಕ ಎಂಬವರು ಸ್ಥಳಕ್ಕಾಗಮಿಸಿ ಪೂಜಾ ಪರಿಕರಗಳನ್ನು ತಾವೇ ನದಿಗೆ ಬಿಸಾಡಿರುವುದಾಗಿ ಹೇಳಿಕೊಂಡರು. ತಮ್ಮ ಅಣ್ಣ ಪ್ರತ್ಯೇಕ ಮನೆ ಮಾಡಿ ವಾಸಿಸುತ್ತಿದ್ದು, ಆ ಮನೆಯಲ್ಲಿ ದೇವಿಯನ್ನು ಆರಾಧನೆ ಮಾಡಲಾಗುತ್ತಿದೆ. ಆದರೆ ಅವರ ನಿಧನದ ನಂತರ ವಾರಸುದಾರರಿಲ್ಲದ ಕಾರಣ ಮನೆಯಲ್ಲೇ ಉಳಿದುಕೊಂಡ ಹಳೆಯ ಪೂಜಾ ಸಾಮಗ್ರಿಗಳ ಬಗ್ಗೆ ಪ್ರಶ್ನಾ ಚಿಂತಕರಲ್ಲಿ ಕೇಳಿದಾಗ ಅವರದನ್ನು ನದಿಯಲ್ಲಿ ಬಿಡುವಂತೆ ಹೇಳಿದ ಮೇರೆಗೆ ನದಿಗೆ ಎಸೆದಿರುವುದಾಗಿ ರಾಮಣ್ಣ ನಾಯ್ಕ ವಿವರಿಸಿದರು.

ಬಳಿಕ ನದಿಯಿಂದ ಪೂಜಾ ಸಾಮಗ್ರಿಗಳನ್ನು ಎತ್ತಿದ ರಾಮಣ್ಣ ನಾಯ್ಕ ಅವರು ಮರಳಿ ಮನೆಗೆ ಕೊಂಡೊಯ್ದಿದ್ದಾರೆ. ಆ ಬಳಿಕ ಅಲ್ಲಿದ್ದ ಕಾಳಿಂಗ ಸರ್ಪ ಸ್ಥಳದಿಂದ ತೆರಳಿತು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಒಂದು ವರ್ಷದ 5 ಅಡಿ ಉದ್ದದ ಅಪರೂಪದ ಕಾಳಿಂಗ ಸರ್ಪ ಪ್ರತ್ಯಕ್ಷ!

ಸುಳ್ಯ(ದಕ್ಷಿಣ ಕನ್ನಡ): ಅಚ್ಚರಿಯಾದರೂ ಸತ್ಯ ಎಂಬಂತಿದೆ ಈ ಘಟನೆ. ನದಿಯಲ್ಲಿ ಬಿಸಾಡಿದ್ದ ಪೂಜಾ ಸಾಮಗ್ರಿಯ ಪಕ್ಕದಲ್ಲಿ ಕಾಳಿಂಗ ಸರ್ಪವೊಂದು ಕಾದು ಕುಳಿತ ಪ್ರಸಂಗ ದಕ್ಷಿಣ ಕನ್ನಡ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಇಜಿನಡ್ಕದಲ್ಲಿ ನಡೆದಿದೆ. ಇದನ್ನು ಗಮನಿಸಿದ ಸ್ಥಳೀಯರು ಪೂಜಾ ಸಾಮಗ್ರಿಯನ್ನು ಎತ್ತಿ ಕೊಂಡೊಯ್ದ ಬಳಿಕ ಕಾಳಿಂಗ ಸರ್ಪವೂ ಅಲ್ಲಿಂದ ತೆರಳಿದೆ ಎನ್ನಲಾಗ್ತಿದೆ.

ಪೂಜೆಗೆ ಬಳಸುವ ಕಾಲುದೀಪ, ಆರತಿ, ಗಂಟೆ, ಹರಿವಾಣ ಸಹಿತ ಹಳೆಯ ಪೂಜಾ ಸಾಮಗ್ರಿಗಳನ್ನು ಇಜಿನಡ್ಕ ಎಂಬಲ್ಲಿ ನದಿಯಲ್ಲಿ ಬಿಸಾಡಿರುವುದನ್ನು ಅದೇ ದಾರಿಯಲ್ಲಿ ಬಂದವರು ನೋಡಿದ್ದರು. ಈ ವೇಳೆ ಪೂಜಾ ಸಾಮಗ್ರಿ ಇದ್ದ ಜಾಗದ ಸಮೀಪದಲ್ಲೇ ನದಿ ದಡದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದನ್ನೂ ಅವರು ಗಮನಿಸಿದ್ದಾರೆ.

ಕೂಡಲೇ ಅವರು ಇತರರಿಗೆ ಮಾಹಿತಿ ನೀಡಿದ್ದು, ಇದನ್ನು ವೀಕ್ಷಿಸಲು ಸ್ಥಳಕ್ಕೆ ಹಲವಾರು ಜನರು ಆಗಮಿಸಿದ್ದಾರೆ. ಆದರೆ ಈ ಪೂಜಾ ಸಾಮಗ್ರಿಗಳನ್ನು ಯಾರು ಬಿಸಾಡಿರುವುದು ಎಂಬುದು ತಿಳಿದು ಬಂದಿರಲಿಲ್ಲ. ಹೀಗಾಗಿ ಪಕ್ಕದಲ್ಲೇ ಇರುವ ಚಾರ್ಮತ ನಾಗನ ಸನ್ನಿಧಿಯಲ್ಲಿ ಸ್ಥಳೀಯರೆಲ್ಲ ಸೇರಿ ಪ್ರಾರ್ಥನೆ ನೆರವೇರಿಸಿ ಪೂಜಾ ಸಾಮಗ್ರಿಗಳನ್ನು ಬಿಸಾಡಿರುವ ಕುರಿತು ಗೊತ್ತಾಗಬೇಕು ಎಂದು ದೇವರ ಮುಂದೆ ಹೇಳಿಕೊಂಡು ಪೂಜಾ ಸಾಮಗ್ರಿಗಳನ್ನು ನದಿಯಿಂದ ಮೇಲಕ್ಕೆತ್ತಿದರು ಎನ್ನಲಾಗ್ತಿದೆ.

ಸ್ವಲ್ಪ ಹೊತ್ತಿನಲ್ಲಿ ಈ ವಿಚಾರ ತಿಳಿದ ರಾಮಣ್ಣ ನಾಯ್ಕ ಎಂಬವರು ಸ್ಥಳಕ್ಕಾಗಮಿಸಿ ಪೂಜಾ ಪರಿಕರಗಳನ್ನು ತಾವೇ ನದಿಗೆ ಬಿಸಾಡಿರುವುದಾಗಿ ಹೇಳಿಕೊಂಡರು. ತಮ್ಮ ಅಣ್ಣ ಪ್ರತ್ಯೇಕ ಮನೆ ಮಾಡಿ ವಾಸಿಸುತ್ತಿದ್ದು, ಆ ಮನೆಯಲ್ಲಿ ದೇವಿಯನ್ನು ಆರಾಧನೆ ಮಾಡಲಾಗುತ್ತಿದೆ. ಆದರೆ ಅವರ ನಿಧನದ ನಂತರ ವಾರಸುದಾರರಿಲ್ಲದ ಕಾರಣ ಮನೆಯಲ್ಲೇ ಉಳಿದುಕೊಂಡ ಹಳೆಯ ಪೂಜಾ ಸಾಮಗ್ರಿಗಳ ಬಗ್ಗೆ ಪ್ರಶ್ನಾ ಚಿಂತಕರಲ್ಲಿ ಕೇಳಿದಾಗ ಅವರದನ್ನು ನದಿಯಲ್ಲಿ ಬಿಡುವಂತೆ ಹೇಳಿದ ಮೇರೆಗೆ ನದಿಗೆ ಎಸೆದಿರುವುದಾಗಿ ರಾಮಣ್ಣ ನಾಯ್ಕ ವಿವರಿಸಿದರು.

ಬಳಿಕ ನದಿಯಿಂದ ಪೂಜಾ ಸಾಮಗ್ರಿಗಳನ್ನು ಎತ್ತಿದ ರಾಮಣ್ಣ ನಾಯ್ಕ ಅವರು ಮರಳಿ ಮನೆಗೆ ಕೊಂಡೊಯ್ದಿದ್ದಾರೆ. ಆ ಬಳಿಕ ಅಲ್ಲಿದ್ದ ಕಾಳಿಂಗ ಸರ್ಪ ಸ್ಥಳದಿಂದ ತೆರಳಿತು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಒಂದು ವರ್ಷದ 5 ಅಡಿ ಉದ್ದದ ಅಪರೂಪದ ಕಾಳಿಂಗ ಸರ್ಪ ಪ್ರತ್ಯಕ್ಷ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.