ETV Bharat / state

ಜನರಿಗೆ ಉಪಯೋಗಬೇಕಾದ ಘಟಕ ಈಗ ಅನಾಥ... ಲಕ್ಷಾಂತರ ಮೌಲ್ಯದ ವಸ್ತುಗಳು ತುಕ್ಕು! - kadaba water purification center news

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೇಟೆಯಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಯ ಘಟಕ ಸ್ಥಾಪಿಸಿ ಒಂದು ವರ್ಷ ಕಳೆದರೂ ಕಾರ್ಯಾರಂಭ ಮಾಡದೇ ತುಕ್ಕು ಹಿಡಿಯುತ್ತಿದೆ.

water
ಶುದ್ಧ ಕುಡಿಯುವ ನೀರು ಪೂರೈಕೆಯ ಘಟಕ
author img

By

Published : Jan 18, 2020, 12:47 PM IST

ಕಡಬ/ದಕ್ಷಿಣ ಕನ್ನಡ: ಜಿಲ್ಲೆಯ ಕಡಬ ಪೇಟೆಯಲ್ಲಿ ಕಳೆದ ವರ್ಷ ಆರಂಭಿಸಲಾದ ‘ಶುದ್ಧ ಕುಡಿಯುವ ನೀರು ಪೂರೈಕೆ ಘಟಕ’ ಇನ್ನೂ ಕಾರ್ಯಾರಂಭ ಮಾಡದೇ ತುಕ್ಕು ಹಿಡಿಯುತ್ತಿದೆ.

ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಮತ್ತು ಆರೋಗ್ಯಪೂರ್ಣ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷಿ ಯೋಜನೆ ನಿಮಿತ್ತ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತದಿಂದ ಕಡಬ ಪೇಟೆಯ ಅಂಚೆ ಕಚೇರಿ ಬಳಿ ಶುದ್ಧ ಕುಡಿಯುವ ನೀರು ಪೂರೈಕೆ ಘಟಕ ನಿರ್ಮಿಸಲಾಗಿತ್ತು. ಆದರೆ ಇದು ಇನ್ನೂ ಕಾರ್ಯಾರಂಭ ಮಾಡದೇ ವ್ಯರ್ಥವಾಗುತ್ತಿದೆ.

ಶುದ್ಧ ಕುಡಿಯುವ ನೀರು ಪೂರೈಕೆಯ ಘಟಕ

ಕಳೆದ ವರ್ಷ ರಾತ್ರೋರಾತ್ರಿ ಬಂದು ತುರಾತುರಿಯಲ್ಲಿ ಆರಂಭಿಸಿದ ಈ ಕುಡಿಯುವ ನೀರಿನ ಘಟಕದ ಬಹುತೇಕ ಎಲ್ಲ ಕಾಮಗಾರಿಗಳು ಬಾಕಿ ಉಳಿಸಿ ಗುತ್ತಿಗೆದಾರರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ನೀರು ಸಂಗ್ರಹಣಾ ಟ್ಯಾಂಕ್ ಮತ್ತು ಇನ್ನಿತರ ಶುದ್ಧೀಕರಣ ಉಪಕರಣಗಳು ಸೇರಿದಂತೆ ಲಕ್ಷಾಂತರ ರೂಪಾಯಿ ವೆಚ್ಚದ ಸಲಕರಣೆಗಳು ಘಟಕದಲ್ಲಿ ಬಿದ್ದು ತುಕ್ಕು ಹಿಡಿಯುತ್ತಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿಲ್ಲ. ಅಷ್ಟೇ ಅಲ್ಲದೆ ಈ ಶುದ್ಧ ಕುಡಿಯುವ ನೀರಿನ ಘಟಕದ ಬದಿಯಲ್ಲಿ ಕಸದ ರಾಶಿ ಜೊತೆಗೆ ನೀರಿನ ಶುದ್ಧೀಕರಣ ಟ್ಯಾಂಕ್, ನೀರಿನ ಟ್ಯಾಂಕ್​​​ಗಳನ್ನು ಬಿಸಾಡಲಾಗಿದೆ. ಈ ಘಟಕಗಳು ಯಾವಾಗ ಕಾರ್ಯಾರಂಭಗೊಳ್ಳುತ್ತದೆ ಎಂಬ ಸ್ಪಷ್ಟ ಮಾಹಿತಿ ಕೂಡಾ ಯಾರಿಗೂ ತಿಳಿದಿಲ್ಲ. ಕರೆ ಮಾಡಿ ವಿಚಾರಿಸೋಣ ಎಂದರೆ ಅಧಿಕಾರಿಗಳೂ ಮಾತನಾಡಲು ತಯಾರಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

ಕಡಬ/ದಕ್ಷಿಣ ಕನ್ನಡ: ಜಿಲ್ಲೆಯ ಕಡಬ ಪೇಟೆಯಲ್ಲಿ ಕಳೆದ ವರ್ಷ ಆರಂಭಿಸಲಾದ ‘ಶುದ್ಧ ಕುಡಿಯುವ ನೀರು ಪೂರೈಕೆ ಘಟಕ’ ಇನ್ನೂ ಕಾರ್ಯಾರಂಭ ಮಾಡದೇ ತುಕ್ಕು ಹಿಡಿಯುತ್ತಿದೆ.

ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಮತ್ತು ಆರೋಗ್ಯಪೂರ್ಣ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷಿ ಯೋಜನೆ ನಿಮಿತ್ತ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತದಿಂದ ಕಡಬ ಪೇಟೆಯ ಅಂಚೆ ಕಚೇರಿ ಬಳಿ ಶುದ್ಧ ಕುಡಿಯುವ ನೀರು ಪೂರೈಕೆ ಘಟಕ ನಿರ್ಮಿಸಲಾಗಿತ್ತು. ಆದರೆ ಇದು ಇನ್ನೂ ಕಾರ್ಯಾರಂಭ ಮಾಡದೇ ವ್ಯರ್ಥವಾಗುತ್ತಿದೆ.

ಶುದ್ಧ ಕುಡಿಯುವ ನೀರು ಪೂರೈಕೆಯ ಘಟಕ

ಕಳೆದ ವರ್ಷ ರಾತ್ರೋರಾತ್ರಿ ಬಂದು ತುರಾತುರಿಯಲ್ಲಿ ಆರಂಭಿಸಿದ ಈ ಕುಡಿಯುವ ನೀರಿನ ಘಟಕದ ಬಹುತೇಕ ಎಲ್ಲ ಕಾಮಗಾರಿಗಳು ಬಾಕಿ ಉಳಿಸಿ ಗುತ್ತಿಗೆದಾರರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ನೀರು ಸಂಗ್ರಹಣಾ ಟ್ಯಾಂಕ್ ಮತ್ತು ಇನ್ನಿತರ ಶುದ್ಧೀಕರಣ ಉಪಕರಣಗಳು ಸೇರಿದಂತೆ ಲಕ್ಷಾಂತರ ರೂಪಾಯಿ ವೆಚ್ಚದ ಸಲಕರಣೆಗಳು ಘಟಕದಲ್ಲಿ ಬಿದ್ದು ತುಕ್ಕು ಹಿಡಿಯುತ್ತಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿಲ್ಲ. ಅಷ್ಟೇ ಅಲ್ಲದೆ ಈ ಶುದ್ಧ ಕುಡಿಯುವ ನೀರಿನ ಘಟಕದ ಬದಿಯಲ್ಲಿ ಕಸದ ರಾಶಿ ಜೊತೆಗೆ ನೀರಿನ ಶುದ್ಧೀಕರಣ ಟ್ಯಾಂಕ್, ನೀರಿನ ಟ್ಯಾಂಕ್​​​ಗಳನ್ನು ಬಿಸಾಡಲಾಗಿದೆ. ಈ ಘಟಕಗಳು ಯಾವಾಗ ಕಾರ್ಯಾರಂಭಗೊಳ್ಳುತ್ತದೆ ಎಂಬ ಸ್ಪಷ್ಟ ಮಾಹಿತಿ ಕೂಡಾ ಯಾರಿಗೂ ತಿಳಿದಿಲ್ಲ. ಕರೆ ಮಾಡಿ ವಿಚಾರಿಸೋಣ ಎಂದರೆ ಅಧಿಕಾರಿಗಳೂ ಮಾತನಾಡಲು ತಯಾರಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

Intro:ಕಡಬ

ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಮತ್ತು ಆರೋಗ್ಯಪೂರ್ಣ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷಿ ಯೋಜನೆಯ ನಿಮಿತ್ತ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ದಿ ನಿಯಮಿತದಿಂದ ಕಡಬ ಪೇಟೆಯ ಅಂಚೆ ಕಚೇರಿ ಬಳಿ ಕಳೆದ ವರ್ಷ ಆರಂಭಿಸಲಾದ ‘ಶುದ್ಧ ಕುಡಿಯುವ ನೀರು ಪೂರೈಕೆಯ ಘಟಕ’ ಇನ್ನೂ ಕಾರ್ಯಾರಂಭ ಮಾಡದೇ ತುಕ್ಕು ಹಿಡಿದು ಸಾರ್ವಜನಿಕರ ಲಕ್ಷಾಂತರ ತೆರಿಗೆ ಹಣ ವ್ಯರ್ಥವಾಗುತ್ತಿದೆ.Body:ಕಡಬದಲ್ಲಿ ಕಳೆದ ವರ್ಷ ರಾತೋರಾತ್ರಿ ಬಂದು ತುರಾತುರಿಯಲ್ಲಿ ಆರಂಭಿಸಿದ ಈ ಕುಡಿಯುವ ನೀರು ಘಟಕದ ಬಹುತೇಕ ಎಲ್ಲಾ ಕಾಮಗಾರಿಗಳು ಬಾಕಿ ಮಾಡಿ ಗುತ್ತಿಗೆದಾರರು ಪರಾರಿಯಾಗಿದ್ದಾರೆ. ಈಗಾಗಲೇ ನೀರು ಸಂಗ್ರಹಣಾ ಟ್ಯಾಂಕ್ ಮತ್ತು ಇನ್ನಿತರ ಶುದ್ಧೀಕರಣ ಉಪಕರಣಗಳು ಸೇರಿದಂತೆ ಲಕ್ಷಾಂತರ ರೂಪಾಯಿ ವೆಚ್ಚದ ಸಲಕರಣೆಗಳನ್ನು ಘಟಕದಲ್ಲಿ ಬಿದ್ದು ಕೊಳೆಯುತ್ತಿದೆ.ಅವುಗಳೆಲ್ಲವೂ ಕಾರ್ಯಾರಂಭಗೊಳ್ಳದೆ ನಿಷ್ಪ್ರಯೋಜಕವಾಗಿದ್ದು, ತುಕ್ಕು ಹಿಡಿಯುತ್ತಿದೆ. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿಲ್ಲ. ಅಷ್ಟೇ ಅಲ್ಲದೆ ಈ ಶುದ್ಧ ಕುಡಿಯುವ ನೀರಿನ ಘಟಕ ಬದಿಯಲ್ಲಿ ಕಸದ ರಾಶಿ ಜೊತೆಗೆ ನೀರಿನ ಶುದ್ದೀಕರಣ ಟ್ಯಾಂಕ್,ನೀರಿನ ಟ್ಯಾಂಕ್ ಗಳನ್ನು ಬಿಸಾಡಲಾಗಿದೆ. ಈ ಘಟಕಗಳು ಯಾವಾಗ ಕಾರ್ಯಾರಂಭಗೊಳ್ಳುತ್ತದೆ ಎಂಬ ಸ್ಪಷ್ಟ ಮಾಹಿತಿ ಕೂಡಾ ಯಾರಿಗೂ ತಿಳಿದಿಲ್ಲ. ಕರೆ ಮಾಡಿ ವಿಚಾರಿಸೋಣ ಎಂದರೆ ಅಧಿಕಾರಿಗಳೂ ಮಾತನಾಡಲು ತಯಾರಿಲ್ಲ.

ಎರಡು ರೂಪಾಯಿಯ ನಾಣ್ಯವನ್ನು ನೀಡಿ ಇಪ್ಪತ್ತು ಲೀಟರ್ ಶುದ್ಧ ಕುಡಿಯುವ ನೀರು ಪಡೆಯುವ ವ್ಯವಸ್ಥೆಯನ್ನು ಈ ಘಟಕಗಳಲ್ಲಿ ಅಳವಡಿಸಲಾಗುತ್ತಿದ್ದು, ಆ ಮೂಲಕ ಆಸುಪಾಸಿನ ಜನರಿಗೆ ಆರೋಗ್ಯಪೂರ್ಣ ಕುಡಿಯುವ ನೀರು ದೊರಕಿಸುವ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ ಇದಾಗಿದೆ. ಮಾನ್ಯ ಜಿಲ್ಲಾಧಿಕಾರಿಗಳು ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಈ ಕಡೆ ಗಮನ ನೀಡಿ ಈ ಕುಡಿಯುವ ನೀರಿನ ಘಟಕವನ್ನು ಕಾರ್ಯಗತ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕಿದೆ.Conclusion:ಘಟಕದ ವೀಡಿಯೋ ಹಾಕಲಾಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.