ETV Bharat / state

ರಸ್ತೆ ಅಪಘಾತದಲ್ಲಿ ಮೃತಪಟ್ಟ ಜೈನಿ ಅಂತ್ಯಸಂಸ್ಕಾರ: ಶಿಷ್ಯ ಸಮೂಹದಿಂದ ಅಂತಿಮ ನಮನ

author img

By

Published : Feb 12, 2020, 8:28 PM IST

Updated : Feb 12, 2020, 9:22 PM IST

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬೆದ್ರೋಡಿ ಎಂಬಲ್ಲಿ ಭಾನುವಾರ ಕಾರು ಮತ್ತು ಟ್ಯಾಂಕರ್ ಲಾರಿ ನಡುವೆ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದ ಎಸ್​ಡಿಎಂ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ.ಜೈನಿರವರ ಅಂತ್ಯಸಂಸ್ಕಾರ ಕಾರ್ಯಗಳು ಸೈಂಟ್ ತೋಮಸ್ ಮಲಂಕರ ಕ್ಯಾಥೋಲಿಕ್ ಚರ್ಚ್‌ನಲ್ಲಿ ನಡೆಯಿತು.

Mangalore
ರಸ್ತೆ ಅಪಘಾತದಲ್ಲಿ ಮೃತಪಟ್ಟ ಜೈನಿ ಅಂತ್ಯಸಂಸ್ಕಾರ

ಮಂಗಳೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬೆದ್ರೋಡಿ ಎಂಬಲ್ಲಿ ಭಾನುವಾರ ಕಾರು ಮತ್ತು ಟ್ಯಾಂಕರ್ ಲಾರಿ ನಡುವೆ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದ ಎಸ್​ಡಿಎಂ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ಜೈನಿರವರ ಅಂತ್ಯ ಸಂಸ್ಕಾರ ಕಾರ್ಯಗಳು ಇಂದು ಸೈಂಟ್ ಜೋಸೆಫ್ ಕ್ಯಾಥೋಲಿಕ್ ಚರ್ಚಿನಲ್ಲಿ ನಡೆಯಿತು.

ರಸ್ತೆ ಅಪಘಾತದಲ್ಲಿ ಮೃತಪಟ್ಟ ಜೈನಿ ಅಂತ್ಯಸಂಸ್ಕಾರ

ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯುತ್ತಿದ್ದ ಶಿಬಿರಕ್ಕೆ ಹೋಗುತ್ತಿರುವಾಗ ನಡೆದ ಈ ಅಪಘಾತದಲ್ಲಿ ಜೈನಿರವರ ಶಿಷ್ಯ ಧರ್ಮಗುರು ತರಬೇತಿ ಪಡೆಯುತ್ತಿದ್ದ ಕೇರಳದ ಜಿತಿನ್ ಜೇಕಬ್ ಸೇರಿದಂತೆ ಇಬ್ಬರು ಮೃತಪಟ್ಟು ಜೈನಿರವರ ಮಗ ಶಾರ್ವೀನ್ ಗಂಭೀರವಾಗಿ ಗಾಯಗೊಂಡಿದ್ದರು. ಮೃತ ಡಾ.ಜೈನಿರವರ ಅಂತಿಮ ಸಂಸ್ಕಾರವು ಪುತ್ತೂರು ಧರ್ಮಪ್ರಾಂತ್ಯದ ಬಿಷಪ್ ವಂದನೀಯ ರೆ.ಡಾ.ಗೀವರ್ಗೀಸ್ ಮಾರ್ ಮಕ್ಕಾರಿಯೋಸ್​ರವರ ನೇತೃತ್ವದಲ್ಲಿ ವಿವಿಧ ಧರ್ಮಗುರುಗಳ ಸಹಭಾಜಕತ್ವದಲ್ಲಿ ನಡೆಯಿತು.

ಮೃತ ಡಾ.ಜೈನಿರವರ ಅಂತಿಮ ದರ್ಶನ ಪಡೆಯಲು ಧಾರ್ಮಿಕ, ರಾಜಕೀಯ, ಸಾಮಾಜಿಕ,ಮುಖಂಡರು, ಧರ್ಮಭಗಿನಿಯರು, ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಅವರ ಸಹೋದ್ಯೋಗಿಗಳು, ಶಿಷ್ಯಸಮೂಹ, ಸೇರಿದಂತೆ ಸಾವಿರಾರು ಜನರು ನೆರಿದಿದ್ದರು. ಶೋಕಮೆರವಣಿಗೆಯ ಮೂಲಕ ಮೃತದೇಹವನ್ನು ಕಾಂಚನದ ಅವರ ನಿವಾಸದಿಂದ ನೆಲ್ಯಾಡಿಯ ಚರ್ಚಿಗೆ ತರುತ್ತಿದ್ದ ವೇಳೆ ಉಪ್ಪಿನಂಗಡಿ ಮತ್ತು ನೆಲ್ಯಾಡಿ ಪೋಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ಉಂಟಾಗದಂತೆ ಬೇಕಾದ ಮುನ್ನೆಚ್ಚರಿಕೆ ವಹಿಸಿದರು.

ಮಂಗಳೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬೆದ್ರೋಡಿ ಎಂಬಲ್ಲಿ ಭಾನುವಾರ ಕಾರು ಮತ್ತು ಟ್ಯಾಂಕರ್ ಲಾರಿ ನಡುವೆ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದ ಎಸ್​ಡಿಎಂ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ಜೈನಿರವರ ಅಂತ್ಯ ಸಂಸ್ಕಾರ ಕಾರ್ಯಗಳು ಇಂದು ಸೈಂಟ್ ಜೋಸೆಫ್ ಕ್ಯಾಥೋಲಿಕ್ ಚರ್ಚಿನಲ್ಲಿ ನಡೆಯಿತು.

ರಸ್ತೆ ಅಪಘಾತದಲ್ಲಿ ಮೃತಪಟ್ಟ ಜೈನಿ ಅಂತ್ಯಸಂಸ್ಕಾರ

ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ನಡೆಯುತ್ತಿದ್ದ ಶಿಬಿರಕ್ಕೆ ಹೋಗುತ್ತಿರುವಾಗ ನಡೆದ ಈ ಅಪಘಾತದಲ್ಲಿ ಜೈನಿರವರ ಶಿಷ್ಯ ಧರ್ಮಗುರು ತರಬೇತಿ ಪಡೆಯುತ್ತಿದ್ದ ಕೇರಳದ ಜಿತಿನ್ ಜೇಕಬ್ ಸೇರಿದಂತೆ ಇಬ್ಬರು ಮೃತಪಟ್ಟು ಜೈನಿರವರ ಮಗ ಶಾರ್ವೀನ್ ಗಂಭೀರವಾಗಿ ಗಾಯಗೊಂಡಿದ್ದರು. ಮೃತ ಡಾ.ಜೈನಿರವರ ಅಂತಿಮ ಸಂಸ್ಕಾರವು ಪುತ್ತೂರು ಧರ್ಮಪ್ರಾಂತ್ಯದ ಬಿಷಪ್ ವಂದನೀಯ ರೆ.ಡಾ.ಗೀವರ್ಗೀಸ್ ಮಾರ್ ಮಕ್ಕಾರಿಯೋಸ್​ರವರ ನೇತೃತ್ವದಲ್ಲಿ ವಿವಿಧ ಧರ್ಮಗುರುಗಳ ಸಹಭಾಜಕತ್ವದಲ್ಲಿ ನಡೆಯಿತು.

ಮೃತ ಡಾ.ಜೈನಿರವರ ಅಂತಿಮ ದರ್ಶನ ಪಡೆಯಲು ಧಾರ್ಮಿಕ, ರಾಜಕೀಯ, ಸಾಮಾಜಿಕ,ಮುಖಂಡರು, ಧರ್ಮಭಗಿನಿಯರು, ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಅವರ ಸಹೋದ್ಯೋಗಿಗಳು, ಶಿಷ್ಯಸಮೂಹ, ಸೇರಿದಂತೆ ಸಾವಿರಾರು ಜನರು ನೆರಿದಿದ್ದರು. ಶೋಕಮೆರವಣಿಗೆಯ ಮೂಲಕ ಮೃತದೇಹವನ್ನು ಕಾಂಚನದ ಅವರ ನಿವಾಸದಿಂದ ನೆಲ್ಯಾಡಿಯ ಚರ್ಚಿಗೆ ತರುತ್ತಿದ್ದ ವೇಳೆ ಉಪ್ಪಿನಂಗಡಿ ಮತ್ತು ನೆಲ್ಯಾಡಿ ಪೋಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ಉಂಟಾಗದಂತೆ ಬೇಕಾದ ಮುನ್ನೆಚ್ಚರಿಕೆ ವಹಿಸಿದರು.

Last Updated : Feb 12, 2020, 9:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.