ETV Bharat / state

91 ವರ್ಷದಿಂದ ಗಣೇಶ ಮೂರ್ತಿ ತಯಾರಿಸುತ್ತಿದೆ ಈ ಕುಟುಂಬ: ಅಮೆರಿಕದಲ್ಲೂ‌ ಬೇಡಿಕೆ! - Mangalore Ganesha idol making News

91 ವರ್ಷಗಳ ಹಿಂದೆ ಮೋಹನ್ ರಾವ್ ಎಂಬುವರು ಆಸಕ್ತಿಯಿಂದ ಗಣಪನ ಮೂರ್ತಿ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

91 ವರ್ಷದಿಂದ ಗಣೇಶ ವಿಗ್ರಹ ತಯಾರಿಕೆ
91 ವರ್ಷದಿಂದ ಗಣೇಶ ವಿಗ್ರಹ ತಯಾರಿಕೆ
author img

By

Published : Aug 21, 2020, 8:12 AM IST

ಮಂಗಳೂರು: ಬರೋಬ್ಬರಿ 91 ವರ್ಷಗಳಿಂದ ಗಣಪನ ವಿಗ್ರಹ ಮಾಡುವ ಕಾರ್ಯದಲ್ಲಿ ಮಂಗಳೂರಿನ ಕುಟುಂಬವೊಂದು ತೊಡಗಿದ್ದು, ಇಂದು ಈ ಕುಟುಂಬದ ನಾಲ್ಕನೇ ತಲೆಮಾರು ವಿಗ್ರಹ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ. ವಿಶೇಷವೆಂದರೆ ಈ ಕುಟುಂಬ ತಯಾರಿಸುವ ಗಣಪನ ವಿಗ್ರಹಕ್ಕೆ ಅಮೆರಿಕದಲ್ಲೂ ಬೇಡಿಕೆ ಇದೆ.

91 ವರ್ಷಗಳ ಹಿಂದೆ ಮೋಹನ್ ರಾವ್ ಎಂಬುವರು ಆಸಕ್ತಿಯಿಂದ ಗಣಪನ ಮೂರ್ತಿ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬಳಿಕ ಅವರ ನಾಲ್ವರು ಮಕ್ಕಳು ಈ ಮೂರ್ತಿ ತಯಾರಿಕೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಇದೀಗ ಅವರ ಮಕ್ಕಳು, ಮೊಮ್ಮಕ್ಕಳು ಈ ಕಾರ್ಯಕ್ಕೆ ಕೈ ಜೋಡಿಸುತ್ತಿದ್ದಾರೆ.

91 ವರ್ಷದಿಂದ ಗಣೇಶ ವಿಗ್ರಹ ತಯಾರಿಕೆಯಲ್ಲಿ ನಿರತವಾಗಿರುವ ಕುಟುಂಬ

ನಗರದ ಮಣ್ಣಗುಡ್ಡೆಯಲ್ಲಿರುವ ಈ ಕುಟುಂಬ ತಯಾರಿಸುವ ಗಣಪ ದೂರದ ಅಮೆರಿಕದ ಭಕ್ತರಿಂದಲೂ ಆರಾಧನೆಗೊಳ್ಳುತ್ತಾನೆ. ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್​ನಲ್ಲಿರುವ ಪ್ರಸನ್ನ ಗಣಪತಿ ದೇವಳದಲ್ಲಿ ನಡೆಯುವ ಗಣೇಶೋತ್ಸವದಲ್ಲಿ ಇಲ್ಲಿಂದ ಹೋದ ಗಣಪ ಪ್ರತಿಷ್ಠಾಪನೆಗೊಂಡು ಆರಾಧನೆಗೊಳ್ಳುತ್ತಾನೆ. ನಗರದ ಮುಲ್ಕಿಯ ಮೂಲದ ಪಾಂಡುರಂಗ ಶರ್ಮ ಎಂಬುವರು ಈ ಗಣಪನ ಮೂರ್ತಿಯನ್ನು ಆರಾಧನೆ ಮಾಡುತ್ತಿದ್ದು, 24 ವರ್ಷಗಳಿಂದಲೂ ಇಲ್ಲಿಂದಲೇ ಗಣಪನ ವಿಗ್ರಹವನ್ನು ಕೊಂಡೊಯ್ಯುತ್ತಿದ್ದಾರೆ.

ಕೊರೊನಾ ಸಂಕಷ್ಟದಿಂದ ವಿಮಾನಯಾನದ ತೊಂದರೆಯಾಗಿ ಈ ಬಾರಿ ಗಣಪನ ವಿಗ್ರಹ ಕೊಂಡೊಯ್ಯಲು‌ ಬಹಳಷ್ಟು ಸಂಕಷ್ಟವಾಗಿತ್ತು. ಆದರೆ ಕೊನೆಯ ಗಳಿಗೆಯಲ್ಲಿ ಜುಲೈ ಕೊನೆಯ ವಾರದಲ್ಲಿ‌ ವಂದೇ ಭಾರತ್ ಮಿಷನ್ ನಡಿಯಲ್ಲಿನ ವಿಮಾನದ ಮೂಲಕ ಪಾಂಡುರಂಗ ಶರ್ಮ ಅವರು ಇಲ್ಲಿಂದ ಗಣಪನ ವಿಗ್ರಹವನ್ನು ಕೊಂಡೊಯ್ದಿದ್ದಾರೆ. ಅಲ್ಲಿ‌ ಈ ಗಣಪ‌ ಒಂದು ವಾರಗಳ ಕಾಲ ಪ್ರಸನ್ನ ಗಣಪತಿ ದೇವಳದಲ್ಲಿ ಪೂಜಿಸಲ್ಪಟ್ಟು ಅದೇ ದೇವಳದಲ್ಲಿ ಜಲಸ್ತಂಭನಗೊಳ್ಳುತ್ತಾನೆ.

ಈ ಬಗ್ಗೆ ವಿಗ್ರಹ ತಯಾರಕ ರಾಮಚಂದ್ರ ರಾವ್ ಮಾತನಾಡಿ,‌ ಪಾಂಡುರಂಗ ಶರ್ಮ ಅವರು ಪ್ರತೀ ವರ್ಷವೂ ನಮ್ಮಲ್ಲಿಂದಲೇ ಅಮೆರಿಕಕ್ಕೆ ಗಣಪನ ವಿಗ್ರಹ ಕೊಂಡೊಯ್ಯುತ್ತಾರೆ. ಆದರೆ ಈ ಬಾರಿ ಕೊರೊನಾ ಸಂಕಷ್ಟದಿಂದ ವಿಮಾನಯಾನದ ಸಮಸ್ಯೆಯಿಂದ ವಿಗ್ರಹ ಕೊಂಡೊಯ್ಯಲು ಸಮಸ್ಯೆಯಾಗಿತ್ತು. ಕೊನೆಯ ಪ್ರಯತ್ನವೆಂಬಂತೆ ಈ ಮೂರ್ತಿ ಜುಲೈ ಅಂತ್ಯಕ್ಕೆ ಅಮೆರಿಕ ತಲುಪಿದೆ ಎಂದು ಹೇಳಿದರು.

ಮಂಗಳೂರು: ಬರೋಬ್ಬರಿ 91 ವರ್ಷಗಳಿಂದ ಗಣಪನ ವಿಗ್ರಹ ಮಾಡುವ ಕಾರ್ಯದಲ್ಲಿ ಮಂಗಳೂರಿನ ಕುಟುಂಬವೊಂದು ತೊಡಗಿದ್ದು, ಇಂದು ಈ ಕುಟುಂಬದ ನಾಲ್ಕನೇ ತಲೆಮಾರು ವಿಗ್ರಹ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ. ವಿಶೇಷವೆಂದರೆ ಈ ಕುಟುಂಬ ತಯಾರಿಸುವ ಗಣಪನ ವಿಗ್ರಹಕ್ಕೆ ಅಮೆರಿಕದಲ್ಲೂ ಬೇಡಿಕೆ ಇದೆ.

91 ವರ್ಷಗಳ ಹಿಂದೆ ಮೋಹನ್ ರಾವ್ ಎಂಬುವರು ಆಸಕ್ತಿಯಿಂದ ಗಣಪನ ಮೂರ್ತಿ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬಳಿಕ ಅವರ ನಾಲ್ವರು ಮಕ್ಕಳು ಈ ಮೂರ್ತಿ ತಯಾರಿಕೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಇದೀಗ ಅವರ ಮಕ್ಕಳು, ಮೊಮ್ಮಕ್ಕಳು ಈ ಕಾರ್ಯಕ್ಕೆ ಕೈ ಜೋಡಿಸುತ್ತಿದ್ದಾರೆ.

91 ವರ್ಷದಿಂದ ಗಣೇಶ ವಿಗ್ರಹ ತಯಾರಿಕೆಯಲ್ಲಿ ನಿರತವಾಗಿರುವ ಕುಟುಂಬ

ನಗರದ ಮಣ್ಣಗುಡ್ಡೆಯಲ್ಲಿರುವ ಈ ಕುಟುಂಬ ತಯಾರಿಸುವ ಗಣಪ ದೂರದ ಅಮೆರಿಕದ ಭಕ್ತರಿಂದಲೂ ಆರಾಧನೆಗೊಳ್ಳುತ್ತಾನೆ. ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್​ನಲ್ಲಿರುವ ಪ್ರಸನ್ನ ಗಣಪತಿ ದೇವಳದಲ್ಲಿ ನಡೆಯುವ ಗಣೇಶೋತ್ಸವದಲ್ಲಿ ಇಲ್ಲಿಂದ ಹೋದ ಗಣಪ ಪ್ರತಿಷ್ಠಾಪನೆಗೊಂಡು ಆರಾಧನೆಗೊಳ್ಳುತ್ತಾನೆ. ನಗರದ ಮುಲ್ಕಿಯ ಮೂಲದ ಪಾಂಡುರಂಗ ಶರ್ಮ ಎಂಬುವರು ಈ ಗಣಪನ ಮೂರ್ತಿಯನ್ನು ಆರಾಧನೆ ಮಾಡುತ್ತಿದ್ದು, 24 ವರ್ಷಗಳಿಂದಲೂ ಇಲ್ಲಿಂದಲೇ ಗಣಪನ ವಿಗ್ರಹವನ್ನು ಕೊಂಡೊಯ್ಯುತ್ತಿದ್ದಾರೆ.

ಕೊರೊನಾ ಸಂಕಷ್ಟದಿಂದ ವಿಮಾನಯಾನದ ತೊಂದರೆಯಾಗಿ ಈ ಬಾರಿ ಗಣಪನ ವಿಗ್ರಹ ಕೊಂಡೊಯ್ಯಲು‌ ಬಹಳಷ್ಟು ಸಂಕಷ್ಟವಾಗಿತ್ತು. ಆದರೆ ಕೊನೆಯ ಗಳಿಗೆಯಲ್ಲಿ ಜುಲೈ ಕೊನೆಯ ವಾರದಲ್ಲಿ‌ ವಂದೇ ಭಾರತ್ ಮಿಷನ್ ನಡಿಯಲ್ಲಿನ ವಿಮಾನದ ಮೂಲಕ ಪಾಂಡುರಂಗ ಶರ್ಮ ಅವರು ಇಲ್ಲಿಂದ ಗಣಪನ ವಿಗ್ರಹವನ್ನು ಕೊಂಡೊಯ್ದಿದ್ದಾರೆ. ಅಲ್ಲಿ‌ ಈ ಗಣಪ‌ ಒಂದು ವಾರಗಳ ಕಾಲ ಪ್ರಸನ್ನ ಗಣಪತಿ ದೇವಳದಲ್ಲಿ ಪೂಜಿಸಲ್ಪಟ್ಟು ಅದೇ ದೇವಳದಲ್ಲಿ ಜಲಸ್ತಂಭನಗೊಳ್ಳುತ್ತಾನೆ.

ಈ ಬಗ್ಗೆ ವಿಗ್ರಹ ತಯಾರಕ ರಾಮಚಂದ್ರ ರಾವ್ ಮಾತನಾಡಿ,‌ ಪಾಂಡುರಂಗ ಶರ್ಮ ಅವರು ಪ್ರತೀ ವರ್ಷವೂ ನಮ್ಮಲ್ಲಿಂದಲೇ ಅಮೆರಿಕಕ್ಕೆ ಗಣಪನ ವಿಗ್ರಹ ಕೊಂಡೊಯ್ಯುತ್ತಾರೆ. ಆದರೆ ಈ ಬಾರಿ ಕೊರೊನಾ ಸಂಕಷ್ಟದಿಂದ ವಿಮಾನಯಾನದ ಸಮಸ್ಯೆಯಿಂದ ವಿಗ್ರಹ ಕೊಂಡೊಯ್ಯಲು ಸಮಸ್ಯೆಯಾಗಿತ್ತು. ಕೊನೆಯ ಪ್ರಯತ್ನವೆಂಬಂತೆ ಈ ಮೂರ್ತಿ ಜುಲೈ ಅಂತ್ಯಕ್ಕೆ ಅಮೆರಿಕ ತಲುಪಿದೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.