ETV Bharat / state

ಮಂಗಳೂರಿನಲ್ಲಿ 94 ವರ್ಷದಿಂದ ಗಣಪತಿ ತಯಾರಿಸುತ್ತಿರುವ ಕುಟುಂಬ.. ಅಮೆರಿಕಕ್ಕೂ ರವಾನೆಯಾಗುತ್ತೆ ಇಲ್ಲಿನ ಮೂರ್ತಿ

author img

By ETV Bharat Karnataka Team

Published : Sep 14, 2023, 1:22 PM IST

Updated : Sep 14, 2023, 8:02 PM IST

Family making Ganesha idol: ದಿವಂಗತ ಮಣ್ಣಗುಡ್ಡೆ ಮೋಹನ್ ರಾವ್ ಅವರು 94 ವರ್ಷಗಳ ಹಿಂದೆ ಗಣೇಶ ಮೂರ್ತಿ ತಯಾರಿಕೆಯನ್ನು ಪ್ರಾರಂಭಿಸಿದ್ದರು.

Idols of Ganesha
ಗಣೇಶನ ಮೂರ್ತಿಗಳು
ಮಂಗಳೂರಿನಲ್ಲಿ 94 ವರ್ಷದಿಂದ ಗಣೇಶನ ಮೂರ್ತಿ ತಯಾರಿಸುತ್ತಿರುವ ಕುಟುಂಬ

ಮಂಗಳೂರು: ವಿಘ್ನ ನಿವಾರಕ ಗಣಪತಿಯ ಹಬ್ಬವನ್ನು ಇಡೀ ದೇಶವೇ ಸಂಭ್ರಮದಿಂದ ಆಚರಿಸಲು ಸಿದ್ಧವಾಗಿದೆ. ಗಣೇಶನ ಮೂರ್ತಿಯನ್ನು ಆರಾಧಿಸಿ ನಡೆಯುವ ಈ ಹಬ್ಬಕ್ಕೆ ಗಣೇಶನ ಮೂರ್ತಿ ತಯಾರಿಸುವ ಕಲಾವಿದರ ಕೊಡುಗೆ ಅಪಾರವಾಗಿದೆ. ಮಂಗಳೂರಿನಲ್ಲೊಂದು ಕುಟುಂಬದ ನಾಲ್ಕನೇ ತಲೆಮಾರು ಗಣೇಶನ ಮೂರ್ತಿ ತಯಾರಿಕೆಯಲ್ಲಿ ಮಗ್ನವಾಗಿದೆ.

ಹೌದು, ಇಲ್ಲಿನ ಮಣ್ಣಗುಡ್ಡೆಯ ಗಣೇಶ ಗೃಹಕ್ಕೆ ಕಾಲಿಟ್ಟರೆ ಕಣ್ಣಿಗೆ ಕಾಣುವುದು ಗಣಪತಿ ಮೂರ್ತಿಗಳ ರಾಶಿ ರಾಶಿ. ಸಣ್ಣ ಗಣಪತಿ ಮೂರ್ತಿಯಿಂದ ಹಿಡಿದು ಹತ್ತಕ್ಕೂ ಹೆಚ್ಚು ಅಡಿಯ ಗಣೇಶ ಮೂರ್ತಿಗಳು ಇಲ್ಲಿವೆ. ಈ ಬಾರಿ 260 ಗಜಮುಖನ ಮೂರ್ತಿಗಳನ್ನು ತಯಾರಿಸಲಾಗಿದೆ. ಈ ಮೂರ್ತಿಗಳನ್ನು ತಯಾರಿಸುತ್ತಿರುವುದು ಒಂದೇ ಕುಟುಂಬದ ಸದಸ್ಯರು ಎಂಬುದು ವಿಶೇಷ. ರೋಬ್ಬರಿ 94 ವರ್ಷಗಳಿಂದ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಈ ಕುಟುಂಬ.

ದಿವಂಗತ ಮಣ್ಣಗುಡ್ಡೆ ಮೋಹನ್ ರಾವ್ ಅವರು ಆರಂಭಿಸಿದ ಗಣಪತಿ ಮೂರ್ತಿ ತಯಾರಿಕೆಯಲ್ಲಿ ಇದೀಗ ನಾಲ್ಕನೇ ತಲೆಮಾರಿನವರು ಸಹ ಈ ಕಾರ್ಯವನ್ನು ಮುಂದುವರಿಸಿದ್ದಾರೆ. ಮೋಹನ್ ರಾವ್ ಅವರ ಕುಟುಂಬ ವೃತ್ತಿಪರ ಕಲಾವಿದರಲ್ಲ. ಸರ್ಕಾರಿ ಅಧಿಕಾರಿಗಳು ಸೇರಿದಂತೆ ಪ್ರಮುಖ ಹುದ್ದೆಗಳಲ್ಲಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಯಾವುದೇ ವೃತ್ತಿಪರ ಕಲಾವಿದರಿಗೆ ಕಡಿಮೆಯಿಲ್ಲದಂತೆ ಸುಂದರ ಗಣಪತಿ ಮೂರ್ತಿಗಳನ್ನು ಇವರು ತಯಾರಿಸುತ್ತಿರುವುದು ವಿಶೇಷ.

A family making idol of Ganesha
ಗಣೇಶನ ಮೂರ್ತಿ ತಯಾರಿಸುತ್ತಿರುವ ಕುಟುಂಬ

ಮೋಹನ್ ರಾವ್ ಅವರ ಮೂವರು ಪುತ್ರರಾದ ಪ್ರಭಾಕರ ರಾವ್, ಸುಧಾಕರ್ ರಾವ್, ರಾಮಚಂದ್ರ ರಾವ್, ಮೊಮ್ಮಕ್ಕಳಾದ ಬಾಲಕೃಷ್ಣ ರಾವ್, ವೆಂಕಟೇಶ್ ರಾವ್, ಮಹೇಶ್ ರಾವ್, ಪೂನಂ ಮತ್ತು ಪ್ರೀತಮ್ ರಾವ್, ಮರಿ ಮಕ್ಕಳಾದ ಕೃಪ, ಶಿಲ್ಪ, ಅಂಕಿತ್, ಅಂಕುಶ್ ಗಣಪತಿ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಿರಿಯರು ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡರೆ, ಉಳಿದವರು ಮೂರ್ತಿಗೆ ಬಣ್ಣ ಬಳಿದು, ಅಲಂಕಾರ ಮಾಡುತ್ತಾರೆ.

ದಿವಂಗತ ಮೋಹನ್ ರಾವ್ ಅವರು ಮುಂಬೈನಲ್ಲಿದ್ದ ವೇಳೆ ಅಲ್ಲಿ ಗಣೇಶ ಮೂರ್ತಿ ತಯಾರಿಕೆಯನ್ನು ನೋಡಿ ಸ್ಫೂರ್ತಿ ಪಡೆದಿದ್ದರು. ಬಳಿಕ ಅವರು ಮಂಗಳೂರಿಗೆ ಬಂದು ಪಾರ್ವತಿ ಸುತನ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡರು. ಆ ನಂತರ ವರ್ಷಕ್ಕೆ ಬೇಡಿಕೆಯಂತೆ 50 ರಷ್ಟು ಗಣಪತಿ ಮೂರ್ತಿಗಳನ್ನು ತಯಾರಿಸುತ್ತಿದ್ದರು. ಇದೀಗ ಮೋಹನ್ ರಾವ್ ಅವರ ಕುಟುಂಬ ವರ್ಷಕ್ಕೆ 260 ಮೂರ್ತಿಗಳನ್ನು ತಯಾರಿಸುತ್ತಿದೆ. ಇವರು ತಯಾರಿಸುವ ಗಣಪತಿಗೆ ಆವೆ ಮಣ್ಣು ಬಳಸುತ್ತಿದ್ದು, ಸುಮಾರು 16 ಕಡೆಗೆ ಸಾರ್ವಜನಿಕ ಗಣೇಶೋತ್ಸವಕ್ಕೆ ಇಡುವ ಗಣಪತಿ ಮೂರ್ತಿಗಳನ್ನು ಇವರೇ ತಯಾರಿಸುತ್ತಿದ್ದಾರೆ.

ಅಮೆರಿಕಕ್ಕೂ ರವಾನೆ: ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಕುಟುಂಬವೊಂದು ಹಲವು ವರ್ಷಗಳಿಂದ ಗಣೇಶನ ಮೂರ್ತಿಯನ್ನು ಇಲ್ಲಿಂದಲೇ ಕೊಂಡೊಯ್ಯುತ್ತಿದೆ. ಕರಾವಳಿ ಮೂಲದಿಂದ ಅಮೆರಿಕ ತೆರಳಿರುವ ವಿನು ಎಂಟರ್ ಪ್ರೈಸಸ್ ಎಂಬ ಸಂಸ್ಥೆಯ ಕುಟುಂಬದವರು ‌ಮಂಗಳೂರಿನಿಂದ ಅಮೆರಿಕದ ಕ್ಯಾಲಿಫೋರ್ನಿಯಾಕ್ಕೆ ಗಣೇಶನ ಮೂರ್ತಿ ಕೊಂಡೊಯ್ಯುತ್ತಾರೆ. ಅಮೆರಿಕಕ್ಕೆ ಹೋಗುವ ಈ ಮೂರ್ತಿ 10 ಇಂಚಿನದ್ದಾಗಿದೆ. ಎರಡು ತಿಂಗಳ ಮೊದಲು ಆ ಕುಟುಂಬದವರೇ ಬಂದು ಗಣೇಶನ ಮೂರ್ತಿಯನ್ನು ಇಲ್ಲಿಂದ ಕೊಂಡೊಯ್ದು ಪೂಜೆ ನೆರವೇರಿಸುತ್ತಾರೆ.

ಈ ಬಗ್ಗೆ ಮಾತನಾಡಿದ ಕಲಾವಿದ ವೆಂಕಟೇಶ್ ರಾವ್ ಅವರು, ಜೂನ್ ತಿಂಗಳಲ್ಲಿ ನಾವು ಗಣೇಶನ ಮೂರ್ತಿ ತಯಾರಿ ಕಾರ್ಯ ಆರಂಭಿಸಿದ್ದೇವೆ. ನಮ್ಮ ಅಜ್ಜ ಮಣ್ಣಗುಡ್ಡೆ ಮೋಹನ್ ರಾವ್ ಅವರು ಆರಂಭಿಸಿದ ಗಣೇಶನ ಮೂರ್ತಿ ತಯಾರಿ ಕಾರ್ಯ 94 ವರ್ಷಗಳಿಂದ ಮುಂದುವರಿಸಿಕೊಂಡು ಬಂದಿದ್ದೇವೆ. ಇದೀಗ ನಾಲ್ಕನೇ ತಲಮಾರು ಗಣೇಶನ ಮೂರ್ತಿಯ ತಯಾರಿಯಲ್ಲಿ ತೊಡಗಿಸಿಕೊಂಡಿದ್ದೇವೆ. ನಾವು ಮನೆಮಂದಿಯೇ ಸೇರಿ ಮಾಡುತ್ತಿದ್ದೇವೆ. ಪ್ರೀತಿ ಭಕ್ತಿಯ ತತ್ವದಿಂದ ಈ ತಯಾರಿ ಕೆಲಸ ನಡೆಯುತ್ತಿದೆ. ನಾವು ಮಾಡುವ ವಿಗ್ರಹಗಳಲ್ಲಿ 16 ಸಾರ್ವಜನಿಕ ಗಣೇಶೋತ್ಸವ ಗಣಪತಿ ಸೇರಿದಂತೆ 260 ಗಣಪತಿ ತಯಾರಿ ಮಾಡುತ್ತಿದ್ದೇವೆ. ನಾವು ಪರಿಸರ ಪ್ರೇಮಿ ಗಣೇಶನ ಮೂರ್ತಿ ತಯಾರಿಸುತ್ತಿದ್ದೇವೆ. ಆವೆ ಮಣ್ಣಿನಿಂದ ಮೂರ್ತಿ ತಯಾರಿಸಿ ಲೆಡ್ ಫ್ರೀ ಬಣ್ಣವನ್ನು ಹಾಕುತ್ತಿದ್ದೇವೆ.

ಇದನ್ನೂ ಓದಿ: ಗಣೇಶ ಚತುರ್ಥಿಗೆ ದಿನಗಣನೆ.. 6 ದಶಕಗಳಿಂದ ಬೆಳಗಾವಿಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಸುತ್ತಿರುವ ಕುಟುಂಬ

ಮಂಗಳೂರಿನಲ್ಲಿ 94 ವರ್ಷದಿಂದ ಗಣೇಶನ ಮೂರ್ತಿ ತಯಾರಿಸುತ್ತಿರುವ ಕುಟುಂಬ

ಮಂಗಳೂರು: ವಿಘ್ನ ನಿವಾರಕ ಗಣಪತಿಯ ಹಬ್ಬವನ್ನು ಇಡೀ ದೇಶವೇ ಸಂಭ್ರಮದಿಂದ ಆಚರಿಸಲು ಸಿದ್ಧವಾಗಿದೆ. ಗಣೇಶನ ಮೂರ್ತಿಯನ್ನು ಆರಾಧಿಸಿ ನಡೆಯುವ ಈ ಹಬ್ಬಕ್ಕೆ ಗಣೇಶನ ಮೂರ್ತಿ ತಯಾರಿಸುವ ಕಲಾವಿದರ ಕೊಡುಗೆ ಅಪಾರವಾಗಿದೆ. ಮಂಗಳೂರಿನಲ್ಲೊಂದು ಕುಟುಂಬದ ನಾಲ್ಕನೇ ತಲೆಮಾರು ಗಣೇಶನ ಮೂರ್ತಿ ತಯಾರಿಕೆಯಲ್ಲಿ ಮಗ್ನವಾಗಿದೆ.

ಹೌದು, ಇಲ್ಲಿನ ಮಣ್ಣಗುಡ್ಡೆಯ ಗಣೇಶ ಗೃಹಕ್ಕೆ ಕಾಲಿಟ್ಟರೆ ಕಣ್ಣಿಗೆ ಕಾಣುವುದು ಗಣಪತಿ ಮೂರ್ತಿಗಳ ರಾಶಿ ರಾಶಿ. ಸಣ್ಣ ಗಣಪತಿ ಮೂರ್ತಿಯಿಂದ ಹಿಡಿದು ಹತ್ತಕ್ಕೂ ಹೆಚ್ಚು ಅಡಿಯ ಗಣೇಶ ಮೂರ್ತಿಗಳು ಇಲ್ಲಿವೆ. ಈ ಬಾರಿ 260 ಗಜಮುಖನ ಮೂರ್ತಿಗಳನ್ನು ತಯಾರಿಸಲಾಗಿದೆ. ಈ ಮೂರ್ತಿಗಳನ್ನು ತಯಾರಿಸುತ್ತಿರುವುದು ಒಂದೇ ಕುಟುಂಬದ ಸದಸ್ಯರು ಎಂಬುದು ವಿಶೇಷ. ರೋಬ್ಬರಿ 94 ವರ್ಷಗಳಿಂದ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಈ ಕುಟುಂಬ.

ದಿವಂಗತ ಮಣ್ಣಗುಡ್ಡೆ ಮೋಹನ್ ರಾವ್ ಅವರು ಆರಂಭಿಸಿದ ಗಣಪತಿ ಮೂರ್ತಿ ತಯಾರಿಕೆಯಲ್ಲಿ ಇದೀಗ ನಾಲ್ಕನೇ ತಲೆಮಾರಿನವರು ಸಹ ಈ ಕಾರ್ಯವನ್ನು ಮುಂದುವರಿಸಿದ್ದಾರೆ. ಮೋಹನ್ ರಾವ್ ಅವರ ಕುಟುಂಬ ವೃತ್ತಿಪರ ಕಲಾವಿದರಲ್ಲ. ಸರ್ಕಾರಿ ಅಧಿಕಾರಿಗಳು ಸೇರಿದಂತೆ ಪ್ರಮುಖ ಹುದ್ದೆಗಳಲ್ಲಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಯಾವುದೇ ವೃತ್ತಿಪರ ಕಲಾವಿದರಿಗೆ ಕಡಿಮೆಯಿಲ್ಲದಂತೆ ಸುಂದರ ಗಣಪತಿ ಮೂರ್ತಿಗಳನ್ನು ಇವರು ತಯಾರಿಸುತ್ತಿರುವುದು ವಿಶೇಷ.

A family making idol of Ganesha
ಗಣೇಶನ ಮೂರ್ತಿ ತಯಾರಿಸುತ್ತಿರುವ ಕುಟುಂಬ

ಮೋಹನ್ ರಾವ್ ಅವರ ಮೂವರು ಪುತ್ರರಾದ ಪ್ರಭಾಕರ ರಾವ್, ಸುಧಾಕರ್ ರಾವ್, ರಾಮಚಂದ್ರ ರಾವ್, ಮೊಮ್ಮಕ್ಕಳಾದ ಬಾಲಕೃಷ್ಣ ರಾವ್, ವೆಂಕಟೇಶ್ ರಾವ್, ಮಹೇಶ್ ರಾವ್, ಪೂನಂ ಮತ್ತು ಪ್ರೀತಮ್ ರಾವ್, ಮರಿ ಮಕ್ಕಳಾದ ಕೃಪ, ಶಿಲ್ಪ, ಅಂಕಿತ್, ಅಂಕುಶ್ ಗಣಪತಿ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಿರಿಯರು ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡರೆ, ಉಳಿದವರು ಮೂರ್ತಿಗೆ ಬಣ್ಣ ಬಳಿದು, ಅಲಂಕಾರ ಮಾಡುತ್ತಾರೆ.

ದಿವಂಗತ ಮೋಹನ್ ರಾವ್ ಅವರು ಮುಂಬೈನಲ್ಲಿದ್ದ ವೇಳೆ ಅಲ್ಲಿ ಗಣೇಶ ಮೂರ್ತಿ ತಯಾರಿಕೆಯನ್ನು ನೋಡಿ ಸ್ಫೂರ್ತಿ ಪಡೆದಿದ್ದರು. ಬಳಿಕ ಅವರು ಮಂಗಳೂರಿಗೆ ಬಂದು ಪಾರ್ವತಿ ಸುತನ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡರು. ಆ ನಂತರ ವರ್ಷಕ್ಕೆ ಬೇಡಿಕೆಯಂತೆ 50 ರಷ್ಟು ಗಣಪತಿ ಮೂರ್ತಿಗಳನ್ನು ತಯಾರಿಸುತ್ತಿದ್ದರು. ಇದೀಗ ಮೋಹನ್ ರಾವ್ ಅವರ ಕುಟುಂಬ ವರ್ಷಕ್ಕೆ 260 ಮೂರ್ತಿಗಳನ್ನು ತಯಾರಿಸುತ್ತಿದೆ. ಇವರು ತಯಾರಿಸುವ ಗಣಪತಿಗೆ ಆವೆ ಮಣ್ಣು ಬಳಸುತ್ತಿದ್ದು, ಸುಮಾರು 16 ಕಡೆಗೆ ಸಾರ್ವಜನಿಕ ಗಣೇಶೋತ್ಸವಕ್ಕೆ ಇಡುವ ಗಣಪತಿ ಮೂರ್ತಿಗಳನ್ನು ಇವರೇ ತಯಾರಿಸುತ್ತಿದ್ದಾರೆ.

ಅಮೆರಿಕಕ್ಕೂ ರವಾನೆ: ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಕುಟುಂಬವೊಂದು ಹಲವು ವರ್ಷಗಳಿಂದ ಗಣೇಶನ ಮೂರ್ತಿಯನ್ನು ಇಲ್ಲಿಂದಲೇ ಕೊಂಡೊಯ್ಯುತ್ತಿದೆ. ಕರಾವಳಿ ಮೂಲದಿಂದ ಅಮೆರಿಕ ತೆರಳಿರುವ ವಿನು ಎಂಟರ್ ಪ್ರೈಸಸ್ ಎಂಬ ಸಂಸ್ಥೆಯ ಕುಟುಂಬದವರು ‌ಮಂಗಳೂರಿನಿಂದ ಅಮೆರಿಕದ ಕ್ಯಾಲಿಫೋರ್ನಿಯಾಕ್ಕೆ ಗಣೇಶನ ಮೂರ್ತಿ ಕೊಂಡೊಯ್ಯುತ್ತಾರೆ. ಅಮೆರಿಕಕ್ಕೆ ಹೋಗುವ ಈ ಮೂರ್ತಿ 10 ಇಂಚಿನದ್ದಾಗಿದೆ. ಎರಡು ತಿಂಗಳ ಮೊದಲು ಆ ಕುಟುಂಬದವರೇ ಬಂದು ಗಣೇಶನ ಮೂರ್ತಿಯನ್ನು ಇಲ್ಲಿಂದ ಕೊಂಡೊಯ್ದು ಪೂಜೆ ನೆರವೇರಿಸುತ್ತಾರೆ.

ಈ ಬಗ್ಗೆ ಮಾತನಾಡಿದ ಕಲಾವಿದ ವೆಂಕಟೇಶ್ ರಾವ್ ಅವರು, ಜೂನ್ ತಿಂಗಳಲ್ಲಿ ನಾವು ಗಣೇಶನ ಮೂರ್ತಿ ತಯಾರಿ ಕಾರ್ಯ ಆರಂಭಿಸಿದ್ದೇವೆ. ನಮ್ಮ ಅಜ್ಜ ಮಣ್ಣಗುಡ್ಡೆ ಮೋಹನ್ ರಾವ್ ಅವರು ಆರಂಭಿಸಿದ ಗಣೇಶನ ಮೂರ್ತಿ ತಯಾರಿ ಕಾರ್ಯ 94 ವರ್ಷಗಳಿಂದ ಮುಂದುವರಿಸಿಕೊಂಡು ಬಂದಿದ್ದೇವೆ. ಇದೀಗ ನಾಲ್ಕನೇ ತಲಮಾರು ಗಣೇಶನ ಮೂರ್ತಿಯ ತಯಾರಿಯಲ್ಲಿ ತೊಡಗಿಸಿಕೊಂಡಿದ್ದೇವೆ. ನಾವು ಮನೆಮಂದಿಯೇ ಸೇರಿ ಮಾಡುತ್ತಿದ್ದೇವೆ. ಪ್ರೀತಿ ಭಕ್ತಿಯ ತತ್ವದಿಂದ ಈ ತಯಾರಿ ಕೆಲಸ ನಡೆಯುತ್ತಿದೆ. ನಾವು ಮಾಡುವ ವಿಗ್ರಹಗಳಲ್ಲಿ 16 ಸಾರ್ವಜನಿಕ ಗಣೇಶೋತ್ಸವ ಗಣಪತಿ ಸೇರಿದಂತೆ 260 ಗಣಪತಿ ತಯಾರಿ ಮಾಡುತ್ತಿದ್ದೇವೆ. ನಾವು ಪರಿಸರ ಪ್ರೇಮಿ ಗಣೇಶನ ಮೂರ್ತಿ ತಯಾರಿಸುತ್ತಿದ್ದೇವೆ. ಆವೆ ಮಣ್ಣಿನಿಂದ ಮೂರ್ತಿ ತಯಾರಿಸಿ ಲೆಡ್ ಫ್ರೀ ಬಣ್ಣವನ್ನು ಹಾಕುತ್ತಿದ್ದೇವೆ.

ಇದನ್ನೂ ಓದಿ: ಗಣೇಶ ಚತುರ್ಥಿಗೆ ದಿನಗಣನೆ.. 6 ದಶಕಗಳಿಂದ ಬೆಳಗಾವಿಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಸುತ್ತಿರುವ ಕುಟುಂಬ

Last Updated : Sep 14, 2023, 8:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.