ಪುತ್ತೂರು: ಇಲ್ಲಿನ ನೆಲ್ಯಾಡಿ ಗ್ರಾಮದ ಬೊನ್ಯಸಾಗು ಪೂವಣಿ ಗೌಡ ಎಂಬುವರ ತೋಟಕ್ಕೆ ನಿನ್ನೆ ರಾತ್ರಿ ಕಾಡಾನೆಯೊಂದು ನುಗ್ಗಿ ಅಡಿಕೆ, ಗದ್ದೆ, ತೆಂಗಿನ ಮರಗಳನ್ನು ನಾಶಪಡಿಸಿದೆ. ಇದರಿಂದ ತೋಟದ ಮಾಲೀಕರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಅಡಿಕೆ, ತೆಂಗು, ಬಾಳೆ, ಭತ್ತದ ಪೈರು, ಕಟಾವಿಗೆ ಬಂದಿರುವ ಹುಲ್ಲನ್ನು ಆನೆ ಹಾನಿ ಮಾಡಿದೆ. ಆನೆ ಮನಸೋ ಇಚ್ಛೆ ಓಡಾಡಿ ಭತ್ತದ ಗದ್ದೆ ಹಾಳು ಮಾಡಿದೆ. ಪೂವಣಿ ಗೌಡರ ಜಮೀನು ಹಾಗೂ ಹತ್ತಿರದ ಜಮೀನಿಗೂ ನುಗ್ಗಿದೆ.