ETV Bharat / state

ಸಾರ್ವಜನಿಕರ ಆರೋಗ್ಯಕ್ಕೆ ಒತ್ತು: ಜು. 13ರಂದು ಸಾರಿಗೆ ಸುರಕ್ಷಾ ಐಸಿಯು ಬಸ್​​ಗೆ ಚಾಲನೆ

author img

By

Published : Jul 11, 2021, 11:28 AM IST

ಕೆಎಸ್ಆರ್​ಟಿಸಿ ಐಸಿಯು ಬಸ್​​ ಬಂಟ್ವಾಳಕ್ಕೆ ಆಗಮಿಸಿದ್ದು, ಜುಲೈ 13ರಂದು ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಪೊಳಲಿ ಕ್ಷೇತ್ರದಲ್ಲಿ ಬಸ್​​ಗೆ ಚಾಲನೆ ದೊರೆಯಲಿದೆ.

suraksha ICU bus
ಸಾರಿಗೆ ಸುರಕ್ಷಾ ಐಸಿಯು ಬಸ್​​

ಬಂಟ್ವಾಳ(ದಕ್ಷಿಣ ಕನ್ನಡ): ರಾಜ್ಯ ರಸ್ತೆ ಸಾರಿಗೆ ನಿಗಮವೀಗ ಸಾರ್ವಜನಿಕರ ಆರೋಗ್ಯದ ಸುರಕ್ಷತೆಯತ್ತ ಗಮನ ಹರಿಸಿ, ಸಾರಿಗೆ ಸುರಕ್ಷಾ ಎಂಬ ಬಸ್ ಒದಗಿಸಿದೆ. ಐದು ಹಾಸಿಗೆಯುಳ್ಳ ಆ್ಯಂಬುಲೆನ್ಸ್​ ಇದಾಗಿದ್ದು, ಪ್ರತಿಯೊಂದು ಬೆಡ್​ಗೂ ಆಕ್ಸಿಜನ್ ವ್ಯವಸ್ಥೆ, ಬಿಪಿ, ಇಸಿಜಿ, ತಾಪಮಾನ ಪರೀಕ್ಷೆಯನ್ನು ನೋಡಿಕೊಳ್ಳುವುದು, ಐ.ವಿ. ವ್ಯವಸ್ಥೆ, ವೆಂಟಿಲೇಟರ್ ಅಳವಡಿಸಲು ಸೌಲಭ್ಯ, ತುರ್ತು ಔಷಧ ವ್ಯವಸ್ಥೆ, ಜನರೇಟರ್ ವ್ಯವಸ್ಥೆ ಇದರಲ್ಲಿದೆ.

ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳನ್ನೊಳಗೊಂಡ ಮಂಗಳೂರು ಹಾಗೂ ಪುತ್ತೂರು ಕೆಎಸ್ಆರ್​ಟಿಸಿ ವಿಭಾಗ ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿಗೆ ಕೆಎಸ್ಆರ್​ಟಿಸಿ ಐಸಿಯು ಬಸ್​ ಬಂಟ್ವಾಳಕ್ಕೆ ಆಗಮಿಸಿದೆ.

ಸಾರಿಗೆ ಸುರಕ್ಷಾ ಐಸಿಯು ಬಸ್​​

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಜೂ. 17ರಂದು ಉಪಮುಖ್ಯಮಂತ್ರಿಯಾಗಿರುವ ಸಾರಿಗೆ ಸಚಿವ ಲಕ್ಷ್ಮಣ್​ ಸವದಿ ಅವರನ್ನು ಭೇಟಿಯಾಗಿ ಐಸಿಯು ಬಸ್ಸು ನೀಡುವ ಕುರಿತು ಚರ್ಚಿಸಿದ್ದು, ಡಿಸಿಎಂ ಒಪ್ಪಿಗೆ ಸೂಚಿಸಿದ್ದರು. ಬಿ.ಸಿ. ರೋಡು ಕೆಎಸ್ಆರ್​ಟಿಸಿ ಘಟಕದಲ್ಲಿ ಈಗಾಗಲೇ ಬಸ್ಸಿನ ವ್ಯವಸ್ಥೆಗಳ ಕುರಿತು ತಾಂತ್ರಿಕ ಸಿಬ್ಬಂದಿ ಪರಿಶೀಲಿಸಿದ್ದು, ಎಲ್ಲಾ ಘಟಕಗಳು ಕಾರ್ಯಾಚರಣೆಗಳ ಕುರಿತು ಪರಿಶೀಲನೆ ನಡೆಸಿದೆ. ಆ್ಯಂಬುಲೆನ್ಸ್ ರೀತಿಯಲ್ಲೇ ಸೈರನ್ ವ್ಯವಸ್ಥೆಯನ್ನು ಬಸ್ಸು ಒಳಗೊಂಡಿದ್ದು, ಒಳಭಾಗಕ್ಕೆ ಹೊಕ್ಕರೆ ಮಿನಿ ಕ್ಲಿನಿಕ್​ ರೀತಿಯ ವ್ಯವಸ್ಥೆ ಇರುತ್ತದೆ. ಹಿಂದಿನ ಭಾಗದಲ್ಲಿ ರೋಗಿಗಳು ಪ್ರವೇಶಿಸುವ ವ್ಯವಸ್ಥೆ ಇರುತ್ತದೆ. ನೋಟಿಸ್ ಬೋರ್ಡ್, ರೋಗಿಗಳ ಶೀಘ್ರ ಗುಣಮುಖರಾಗುವ ಕುರಿತು ಬರಹಗಳು ಕೂಡ ಇವೆ.

ಜುಲೈ 13ರಂದು ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಪೊಳಲಿ ಕ್ಷೇತ್ರದಲ್ಲಿ ಸಾರಿಗೆ ಸುರಕ್ಷಾ ಐಸಿಯು ಬಸ್​​ಗೆ ಚಾಲನೆ ದೊರೆಯಲಿದ್ದು, ಬಳಿಕ ಬಂಟ್ವಾಳದ ಪ್ರತಿ ಗ್ರಾಮಗಳಿಗೆ ತೆರಳಿ ಸಂಚಾರಿ ಆಸ್ಪತ್ರೆಯ ರೀತಿಯಲ್ಲಿ ಬಸ್​ ಕಾರ್ಯ ನಿರ್ವಹಿಸಲಿದೆ. ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿ ರೋಗಿಗಳ ತಪಾಸಣೆಯ ಜತೆಗೆ ಅಗತ್ಯ ಔಷಧ ನೀಡುವ ಕಾರ್ಯ ನಿರ್ವಹಿಸಲಿದ್ದಾರೆ. ಈ ಬಸ್​​​​​​ ಕ್ರಮವಾಗಿ ಸಂಚರಿಸಿದರೆ ಸರಾಸರಿಯಾಗಿ 2 ತಿಂಗಳಿಗೊಮ್ಮೆ ಬಸ್ಸು ಒಂದು ಗ್ರಾಮಕ್ಕೆ ಭೇಟಿ ನೀಡಬಹುದು.

ಇದನ್ನೂ ಓದಿ: ವೀಕೆಂಡ್​ ಮೋಜು-ಮಸ್ತಿ.. ಕುಡಿದು ಕಾರು ಚಲಾಯಿಸಿ ಕಂಬಕ್ಕೆ ಡಿಕ್ಕಿ ಹೊಡೆದ!

ಶಾಸಕ ರಾಜೇಶ್ ನಾಯ್ಕ್ ವಿಶೇಷ ಪ್ರಯತ್ನದಿಂದ ಬಸ್​ ಬಂಟ್ವಾಳಕ್ಕೆ ಆಗಮಿಸಿದ್ದು, ಅವರ ನಿರ್ದೇಶನದಂತೆ ಹಳ್ಳಿ ಹಳ್ಳಿಗೆ ತೆರಳಿ ಸಂಚಾರಿ ಆಸ್ಪತ್ರೆಯ ರೀತಿಯಲ್ಲಿ ಬಸ್​ ಕೆಲಸ ಮಾಡುತ್ತದೆ. ಘಟಕದ ಚಾಲಕರು ಅದರ ಚಾಲನೆ ಮಾಡಲಿದ್ದು, ಆರೋಗ್ಯ ಇಲಾಖೆ ವೈದ್ಯರು, ಸಿಬ್ಬಂದಿಯು ರೋಗಿಗಳ ತಪಾಸಣೆ ನಡೆಸಲಿದ್ದಾರೆ. ಪ್ರತಿದಿನ ಬಸ್​ ಬಿ.ಸಿ.ರೋಡು ಘಟಕಕ್ಕೆ ಆಗಮಿಸಲಿದೆ ಎನ್ನುತ್ತಾರೆ ಕೆಎಸ್​ಆರ್​​ಟಿಸಿ ಘಟಕ ವ್ಯವಸ್ಥಾಪಕ ಶ್ರೀಷ ಭಟ್.

ಬಂಟ್ವಾಳ(ದಕ್ಷಿಣ ಕನ್ನಡ): ರಾಜ್ಯ ರಸ್ತೆ ಸಾರಿಗೆ ನಿಗಮವೀಗ ಸಾರ್ವಜನಿಕರ ಆರೋಗ್ಯದ ಸುರಕ್ಷತೆಯತ್ತ ಗಮನ ಹರಿಸಿ, ಸಾರಿಗೆ ಸುರಕ್ಷಾ ಎಂಬ ಬಸ್ ಒದಗಿಸಿದೆ. ಐದು ಹಾಸಿಗೆಯುಳ್ಳ ಆ್ಯಂಬುಲೆನ್ಸ್​ ಇದಾಗಿದ್ದು, ಪ್ರತಿಯೊಂದು ಬೆಡ್​ಗೂ ಆಕ್ಸಿಜನ್ ವ್ಯವಸ್ಥೆ, ಬಿಪಿ, ಇಸಿಜಿ, ತಾಪಮಾನ ಪರೀಕ್ಷೆಯನ್ನು ನೋಡಿಕೊಳ್ಳುವುದು, ಐ.ವಿ. ವ್ಯವಸ್ಥೆ, ವೆಂಟಿಲೇಟರ್ ಅಳವಡಿಸಲು ಸೌಲಭ್ಯ, ತುರ್ತು ಔಷಧ ವ್ಯವಸ್ಥೆ, ಜನರೇಟರ್ ವ್ಯವಸ್ಥೆ ಇದರಲ್ಲಿದೆ.

ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳನ್ನೊಳಗೊಂಡ ಮಂಗಳೂರು ಹಾಗೂ ಪುತ್ತೂರು ಕೆಎಸ್ಆರ್​ಟಿಸಿ ವಿಭಾಗ ವ್ಯಾಪ್ತಿಯಲ್ಲಿ ಇದೇ ಮೊದಲ ಬಾರಿಗೆ ಕೆಎಸ್ಆರ್​ಟಿಸಿ ಐಸಿಯು ಬಸ್​ ಬಂಟ್ವಾಳಕ್ಕೆ ಆಗಮಿಸಿದೆ.

ಸಾರಿಗೆ ಸುರಕ್ಷಾ ಐಸಿಯು ಬಸ್​​

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಜೂ. 17ರಂದು ಉಪಮುಖ್ಯಮಂತ್ರಿಯಾಗಿರುವ ಸಾರಿಗೆ ಸಚಿವ ಲಕ್ಷ್ಮಣ್​ ಸವದಿ ಅವರನ್ನು ಭೇಟಿಯಾಗಿ ಐಸಿಯು ಬಸ್ಸು ನೀಡುವ ಕುರಿತು ಚರ್ಚಿಸಿದ್ದು, ಡಿಸಿಎಂ ಒಪ್ಪಿಗೆ ಸೂಚಿಸಿದ್ದರು. ಬಿ.ಸಿ. ರೋಡು ಕೆಎಸ್ಆರ್​ಟಿಸಿ ಘಟಕದಲ್ಲಿ ಈಗಾಗಲೇ ಬಸ್ಸಿನ ವ್ಯವಸ್ಥೆಗಳ ಕುರಿತು ತಾಂತ್ರಿಕ ಸಿಬ್ಬಂದಿ ಪರಿಶೀಲಿಸಿದ್ದು, ಎಲ್ಲಾ ಘಟಕಗಳು ಕಾರ್ಯಾಚರಣೆಗಳ ಕುರಿತು ಪರಿಶೀಲನೆ ನಡೆಸಿದೆ. ಆ್ಯಂಬುಲೆನ್ಸ್ ರೀತಿಯಲ್ಲೇ ಸೈರನ್ ವ್ಯವಸ್ಥೆಯನ್ನು ಬಸ್ಸು ಒಳಗೊಂಡಿದ್ದು, ಒಳಭಾಗಕ್ಕೆ ಹೊಕ್ಕರೆ ಮಿನಿ ಕ್ಲಿನಿಕ್​ ರೀತಿಯ ವ್ಯವಸ್ಥೆ ಇರುತ್ತದೆ. ಹಿಂದಿನ ಭಾಗದಲ್ಲಿ ರೋಗಿಗಳು ಪ್ರವೇಶಿಸುವ ವ್ಯವಸ್ಥೆ ಇರುತ್ತದೆ. ನೋಟಿಸ್ ಬೋರ್ಡ್, ರೋಗಿಗಳ ಶೀಘ್ರ ಗುಣಮುಖರಾಗುವ ಕುರಿತು ಬರಹಗಳು ಕೂಡ ಇವೆ.

ಜುಲೈ 13ರಂದು ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಪೊಳಲಿ ಕ್ಷೇತ್ರದಲ್ಲಿ ಸಾರಿಗೆ ಸುರಕ್ಷಾ ಐಸಿಯು ಬಸ್​​ಗೆ ಚಾಲನೆ ದೊರೆಯಲಿದ್ದು, ಬಳಿಕ ಬಂಟ್ವಾಳದ ಪ್ರತಿ ಗ್ರಾಮಗಳಿಗೆ ತೆರಳಿ ಸಂಚಾರಿ ಆಸ್ಪತ್ರೆಯ ರೀತಿಯಲ್ಲಿ ಬಸ್​ ಕಾರ್ಯ ನಿರ್ವಹಿಸಲಿದೆ. ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿ ರೋಗಿಗಳ ತಪಾಸಣೆಯ ಜತೆಗೆ ಅಗತ್ಯ ಔಷಧ ನೀಡುವ ಕಾರ್ಯ ನಿರ್ವಹಿಸಲಿದ್ದಾರೆ. ಈ ಬಸ್​​​​​​ ಕ್ರಮವಾಗಿ ಸಂಚರಿಸಿದರೆ ಸರಾಸರಿಯಾಗಿ 2 ತಿಂಗಳಿಗೊಮ್ಮೆ ಬಸ್ಸು ಒಂದು ಗ್ರಾಮಕ್ಕೆ ಭೇಟಿ ನೀಡಬಹುದು.

ಇದನ್ನೂ ಓದಿ: ವೀಕೆಂಡ್​ ಮೋಜು-ಮಸ್ತಿ.. ಕುಡಿದು ಕಾರು ಚಲಾಯಿಸಿ ಕಂಬಕ್ಕೆ ಡಿಕ್ಕಿ ಹೊಡೆದ!

ಶಾಸಕ ರಾಜೇಶ್ ನಾಯ್ಕ್ ವಿಶೇಷ ಪ್ರಯತ್ನದಿಂದ ಬಸ್​ ಬಂಟ್ವಾಳಕ್ಕೆ ಆಗಮಿಸಿದ್ದು, ಅವರ ನಿರ್ದೇಶನದಂತೆ ಹಳ್ಳಿ ಹಳ್ಳಿಗೆ ತೆರಳಿ ಸಂಚಾರಿ ಆಸ್ಪತ್ರೆಯ ರೀತಿಯಲ್ಲಿ ಬಸ್​ ಕೆಲಸ ಮಾಡುತ್ತದೆ. ಘಟಕದ ಚಾಲಕರು ಅದರ ಚಾಲನೆ ಮಾಡಲಿದ್ದು, ಆರೋಗ್ಯ ಇಲಾಖೆ ವೈದ್ಯರು, ಸಿಬ್ಬಂದಿಯು ರೋಗಿಗಳ ತಪಾಸಣೆ ನಡೆಸಲಿದ್ದಾರೆ. ಪ್ರತಿದಿನ ಬಸ್​ ಬಿ.ಸಿ.ರೋಡು ಘಟಕಕ್ಕೆ ಆಗಮಿಸಲಿದೆ ಎನ್ನುತ್ತಾರೆ ಕೆಎಸ್​ಆರ್​​ಟಿಸಿ ಘಟಕ ವ್ಯವಸ್ಥಾಪಕ ಶ್ರೀಷ ಭಟ್.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.