ETV Bharat / state

ನಮ್ಮ ಪರ್ಯಾಯದಲ್ಲಿ ಕೋಟಿ ಗೀತಾ ಲೇಖನ ಯಜ್ಞ ನಡೆಸಲು ನಿರ್ಧಾರ: ಪುತ್ತಿಗೆ ಶ್ರೀ

ಕಲ್ಕೂರ ಪ್ರತಿಷ್ಠಾನದಿಂದ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿಗೆ ಗುರುವಂದನಾ, ನಾಣ್ಯಗಳ ತುಲಾಭಾರ ನೆರವೇರಿಸಲಾಯಿತು. ಇದೇ ವೇಳೆ ಪರ್ಯಾಯದಲ್ಲಿ ಕೋಟಿ ಗೀತಾ ಲೇಖನ ಯಜ್ಞ ನಡೆಸಲು ನಿರ್ಧರಿಸಲಾಗಿದೆ.

author img

By ETV Bharat Karnataka Team

Published : Jan 6, 2024, 8:00 PM IST

Updated : Jan 6, 2024, 11:02 PM IST

Guruvandana and Thulabhara Programe
ಗುರುವಂದನಾ, ನಾಣ್ಯಗಳ ತುಲಾಭಾರ ಕಾರ್ಯಕ್ರಮ
ಗುರುವಂದನಾ, ನಾಣ್ಯಗಳ ತುಲಾಭಾರ ಕಾರ್ಯಕ್ರಮ

ಮಂಗಳೂರು (ದಕ್ಷಿಣ ಕನ್ನಡ): ಜನವರಿ 18 ರಂದು ಪರ್ಯಾಯ ಮಹೋತ್ಸವ ನಡೆಯಲಿದ್ದು, ನಮ್ಮ ಪರ್ಯಾಯದಲ್ಲಿ ಕೋಟಿ ಗೀತಾ ಲೇಖನ ಯಜ್ಞ ನಡೆಸಲು ನಿರ್ಧರಿಸಲಾಗಿದೆ ಎಂದು ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು. ಜನವರಿ 18 ರಂದು ಪರ್ಯಾಯ ಪೀಠವನ್ನೇರಲಿರುವ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿಗೆ ಕಲ್ಕೂರ ಪ್ರತಿಷ್ಠಾನದಿಂದ ಮಾಡಿದ ಗುರುವಂದನಾ, ನಾಣ್ಯಗಳ ತುಲಾಭಾರ ಸ್ವೀಕರಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು.

"ಎರಡು ವರ್ಷಗಳ ಪರ್ಯಾಯ ಅವಧಿಯಲ್ಲಿ ಹಲವು ಯೋಜನೆಗಳನ್ನು ಮಾಡಿದ್ದೇವೆ. ಅದರಲ್ಲಿ ಕೋಟಿ ಗೀತಾ ಲೇಖನ ಯಜ್ಞ ಕೂಡ ಒಂದು. ನಮ್ಮ ಪರ್ಯಾಯ ಅವಧಿಯಲ್ಲಿ ಒಂದು ಕೋಟಿ ಭಗವದ್ಗೀತೆಯನ್ನು ಬರೆಸುವ ಯೋಜನೆಯಿದೆ. ಇದಕ್ಕಾಗಿ ಗೀತೆಯನ್ನು ಬರೆಯುವವರಿಗೆ ಮಠದಿಂದ ಪುಸ್ತಕ ಕೊಡಲಾಗುವುದು. ಅದನ್ನು ಪೂರ್ತಿ ಬರೆದು ತಂದ ಬಳಿಕ ಶ್ರೀ ಕೃಷ್ಣ ದೇವರ ಮುಂಭಾಗದಲ್ಲಿಟ್ಟು ಪೂಜಿಸಲಾಗುವುದು. ಈ ಪುಸ್ತಕವನ್ನು ಮತ್ತೆ ಬರೆದವರಿಗೆ ನೀಡಲಾಗುವುದು. ಅವರು ಅದನ್ನು ದೇವರ ಕೋಣೆಯಲ್ಲಿಡಬೇಕು. ಈ ಮೂಲಕ ಗೀತೆಯ ಪ್ರಸಾರವನ್ನು ಮಾಡುವ ಉದ್ದೇಶ ಹೊಂದಲಾಗಿದೆ" ಎಂದರು.

"ವಿವಿಧ ದೇಶಗಳ ಪ್ರವಾಸ ಮಾಡಿ ವಿಶ್ವ ಪರ್ಯಟನೆ ಮಾಡಿ ಬರಲಾಗಿದೆ. ಉಡುಪಿಯ ಪುರಪ್ರವೇಶಕ್ಕೂ ಮುನ್ನ ಪರ್ಯಟನೆಗೆ ಮಂಗಳೂರಿನಲ್ಲಿ ಮಂಗಳ ಹಾಕಲಾಗಿದೆ. ಗೀತಾ ಮಂದಿರದಲ್ಲಿ ನಿತ್ಯ ಗೀತೆ ವಾಚನ, ಕಲ್ಸಂಕದಲ್ಲಿ ಮಧ್ವಾಚಾರ್ಯರ ಪ್ರತಿಮೆ, ಮಠದ ಒಳಗೆ ಪ್ರದಕ್ಷಿಣೆಗೆ ಸ್ವರ್ಣರಥ, 108 ಕೋಣೆಗಳ ಅಷ್ಟೋತ್ತರ ಸಭಾಭವನ ನಿರ್ಮಿಸಲಾಗುವುದು" ಎಂದರು.

"ಕಳೆದ ಬಾರಿ ಪರ್ಯಾಯಕ್ಕೆ ಸಮುದ್ರೋಲ್ಲಂಘನೆ ಹಿನ್ನೆಲೆಯಲ್ಲಿ ವಿರೋಧ ವ್ಯಕ್ಯವಾಗಿತ್ತು. ಆದರೆ ಈ ಬಾರಿ ವಿರೋಧ ಇಲ್ಲ. ಎಲ್ಲಾ ಸ್ವಾಮೀಜಿಗಳು ಪರ್ಯಾಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಪರ್ಯಾಯ ಸಮಾರಂಭಕ್ಕೆ ವಿದೇಶದಿಂದ ಹಲವಾರು ಗಣ್ಯರು ಆಗಮಿಸಲಿದ್ದಾರೆ. ವಿದೇಶದಿಂದ ಭಕ್ತರು ಆಗಮಿಸಲಿದ್ದಾರೆ. ಈಗಾಗಲೇ ವಿದೇಶದಲ್ಲಿ 15 ಶಾಖೆಗಳಿದ್ದು, ಜೀವಮಾನದಲ್ಲಿ ಅದನ್ನು 108 ಮಾಡುವ ಉದ್ದೇಶವಿದೆ" ಎಂದರು.

ಇದನ್ನೂ ಓದಿ: ಉಡುಪಿ ಪೇಜಾವರ ಶ್ರೀ ವಿಜಯಪುರಕ್ಕೆ ಭೇಟಿ: ದಲಿತರ ಮನೆಗಳಿಗೆ ತೆರಳಿ ರಾಮ ಮಂದಿರದ ಮಂತ್ರಾಕ್ಷತೆ ವಿತರಣೆ

ಗುರುವಂದನಾ, ನಾಣ್ಯಗಳ ತುಲಾಭಾರ ಕಾರ್ಯಕ್ರಮ

ಮಂಗಳೂರು (ದಕ್ಷಿಣ ಕನ್ನಡ): ಜನವರಿ 18 ರಂದು ಪರ್ಯಾಯ ಮಹೋತ್ಸವ ನಡೆಯಲಿದ್ದು, ನಮ್ಮ ಪರ್ಯಾಯದಲ್ಲಿ ಕೋಟಿ ಗೀತಾ ಲೇಖನ ಯಜ್ಞ ನಡೆಸಲು ನಿರ್ಧರಿಸಲಾಗಿದೆ ಎಂದು ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು. ಜನವರಿ 18 ರಂದು ಪರ್ಯಾಯ ಪೀಠವನ್ನೇರಲಿರುವ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿಗೆ ಕಲ್ಕೂರ ಪ್ರತಿಷ್ಠಾನದಿಂದ ಮಾಡಿದ ಗುರುವಂದನಾ, ನಾಣ್ಯಗಳ ತುಲಾಭಾರ ಸ್ವೀಕರಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು.

"ಎರಡು ವರ್ಷಗಳ ಪರ್ಯಾಯ ಅವಧಿಯಲ್ಲಿ ಹಲವು ಯೋಜನೆಗಳನ್ನು ಮಾಡಿದ್ದೇವೆ. ಅದರಲ್ಲಿ ಕೋಟಿ ಗೀತಾ ಲೇಖನ ಯಜ್ಞ ಕೂಡ ಒಂದು. ನಮ್ಮ ಪರ್ಯಾಯ ಅವಧಿಯಲ್ಲಿ ಒಂದು ಕೋಟಿ ಭಗವದ್ಗೀತೆಯನ್ನು ಬರೆಸುವ ಯೋಜನೆಯಿದೆ. ಇದಕ್ಕಾಗಿ ಗೀತೆಯನ್ನು ಬರೆಯುವವರಿಗೆ ಮಠದಿಂದ ಪುಸ್ತಕ ಕೊಡಲಾಗುವುದು. ಅದನ್ನು ಪೂರ್ತಿ ಬರೆದು ತಂದ ಬಳಿಕ ಶ್ರೀ ಕೃಷ್ಣ ದೇವರ ಮುಂಭಾಗದಲ್ಲಿಟ್ಟು ಪೂಜಿಸಲಾಗುವುದು. ಈ ಪುಸ್ತಕವನ್ನು ಮತ್ತೆ ಬರೆದವರಿಗೆ ನೀಡಲಾಗುವುದು. ಅವರು ಅದನ್ನು ದೇವರ ಕೋಣೆಯಲ್ಲಿಡಬೇಕು. ಈ ಮೂಲಕ ಗೀತೆಯ ಪ್ರಸಾರವನ್ನು ಮಾಡುವ ಉದ್ದೇಶ ಹೊಂದಲಾಗಿದೆ" ಎಂದರು.

"ವಿವಿಧ ದೇಶಗಳ ಪ್ರವಾಸ ಮಾಡಿ ವಿಶ್ವ ಪರ್ಯಟನೆ ಮಾಡಿ ಬರಲಾಗಿದೆ. ಉಡುಪಿಯ ಪುರಪ್ರವೇಶಕ್ಕೂ ಮುನ್ನ ಪರ್ಯಟನೆಗೆ ಮಂಗಳೂರಿನಲ್ಲಿ ಮಂಗಳ ಹಾಕಲಾಗಿದೆ. ಗೀತಾ ಮಂದಿರದಲ್ಲಿ ನಿತ್ಯ ಗೀತೆ ವಾಚನ, ಕಲ್ಸಂಕದಲ್ಲಿ ಮಧ್ವಾಚಾರ್ಯರ ಪ್ರತಿಮೆ, ಮಠದ ಒಳಗೆ ಪ್ರದಕ್ಷಿಣೆಗೆ ಸ್ವರ್ಣರಥ, 108 ಕೋಣೆಗಳ ಅಷ್ಟೋತ್ತರ ಸಭಾಭವನ ನಿರ್ಮಿಸಲಾಗುವುದು" ಎಂದರು.

"ಕಳೆದ ಬಾರಿ ಪರ್ಯಾಯಕ್ಕೆ ಸಮುದ್ರೋಲ್ಲಂಘನೆ ಹಿನ್ನೆಲೆಯಲ್ಲಿ ವಿರೋಧ ವ್ಯಕ್ಯವಾಗಿತ್ತು. ಆದರೆ ಈ ಬಾರಿ ವಿರೋಧ ಇಲ್ಲ. ಎಲ್ಲಾ ಸ್ವಾಮೀಜಿಗಳು ಪರ್ಯಾಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಪರ್ಯಾಯ ಸಮಾರಂಭಕ್ಕೆ ವಿದೇಶದಿಂದ ಹಲವಾರು ಗಣ್ಯರು ಆಗಮಿಸಲಿದ್ದಾರೆ. ವಿದೇಶದಿಂದ ಭಕ್ತರು ಆಗಮಿಸಲಿದ್ದಾರೆ. ಈಗಾಗಲೇ ವಿದೇಶದಲ್ಲಿ 15 ಶಾಖೆಗಳಿದ್ದು, ಜೀವಮಾನದಲ್ಲಿ ಅದನ್ನು 108 ಮಾಡುವ ಉದ್ದೇಶವಿದೆ" ಎಂದರು.

ಇದನ್ನೂ ಓದಿ: ಉಡುಪಿ ಪೇಜಾವರ ಶ್ರೀ ವಿಜಯಪುರಕ್ಕೆ ಭೇಟಿ: ದಲಿತರ ಮನೆಗಳಿಗೆ ತೆರಳಿ ರಾಮ ಮಂದಿರದ ಮಂತ್ರಾಕ್ಷತೆ ವಿತರಣೆ

Last Updated : Jan 6, 2024, 11:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.