ETV Bharat / state

ಪುತ್ತೂರು ಸಮೀಪದ ಕಂಚಲಗುರಿ ಕೆರೆಯಿಂದ ಅಪಾಯಕ್ಕೆ ಆಹ್ವಾನ, ಸಾರ್ವಜನಿಕರಲ್ಲಿ ಭೀತಿ

ಪುತ್ತೂರು ನಗರಸಭಾ ವ್ಯಾಪ್ತಿಯ ಹಲವು ಭಾಗದಲ್ಲಿ ರಸ್ತೆಗಳ ಅಂಚಿನಲ್ಲಿರುವ ಹಳ್ಳ ಹಾಗೂ ನಿಗೂಢ ಕೆರೆಗಳಿಂದ ಜನಸಾಮಾನ್ಯರ ಬದುಕಿಗೆ ಅಪಾಯ ತಂದೊಡ್ಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತೆಯೇ ಇಲ್ಲಿನ ಜಿಡೆಕಲ್ಲು, ಕಂಚಲಗುರಿ ರಸ್ತೆಯ ಪಕ್ಕದಲ್ಲೇ ಇರುವ ಕೆರೆಯಿಂದ ಈ ಭಾಗದ ಜನತೆ ಹಾಗೂ ಪ್ರಯಾಣಿಕರು ಅಪಾಯವನ್ನು ಎದುರಿಸುವಂತಾಗಿದೆ.

author img

By

Published : Sep 28, 2019, 5:39 PM IST

ಕಂಚಲಗುರಿ ಕೆರೆಯಿಂದ ಅಪಾಯಕ್ಕೆ ಆಹ್ವಾನ

ಪುತ್ತೂರು: ನಗರಸಭಾ ವ್ಯಾಪ್ತಿಯ ಜಿಡೆಕಲ್ಲು ಕಂಚಲಗುರಿ ರಸ್ತೆಯ ಪಕ್ಕದಲ್ಲೇ ಇರುವ ಕೆರೆಯೊಂದು ಅಪಾಯವನ್ನು ಆಹ್ವಾನಿಸುತ್ತಿದೆ.

ರಸ್ತೆಯ ಪಕ್ಕದಲ್ಲಿಯೇ ಇರುವ ಈ ಖಾಸಗಿ ಕೆರೆ, ವರ್ಷದಿಂದ ವರ್ಷಕ್ಕೆ ಅಗಲವಾಗುತ್ತಿದ್ದು, ರಸ್ತೆ ಕುಸಿಯುವ ಭೀತಿಯೂ ಉಂಟಾಗಿದೆ. ದಿನನಿತ್ಯ ನೂರಾರು ವಾಹನಗಳು ಓಡಾಟ ನಡೆಸುವ ಇಲ್ಲಿನ ಬೆದ್ರಾಳ- ಜಿಡೆಕಲ್ಲು ಸಂಪರ್ಕ ರಸ್ತೆಯ ಕಂಚಲಗುರಿ ಎಂಬಲ್ಲಿನ ಈ ಕೆರೆಗೆ ಯಾವುದೇ ತಡೆಗೋಡೆಗಳಿಲ್ಲ. ಈ ಭಾಗದಲ್ಲಿ ರಸ್ತೆ ತಿರುವು ಹೊಂದಿರುವ ಕಾರಣ ಸ್ವಲ್ಪ ಅಜಾಗರೂಕತೆಯಾದರೂ ವಾಹನಗಳು ಕೆರೆಗೆ ಬೀಳುವ ಅಪಾಯವಿದೆ. ಹಾಗಾಗಿ ಈ ಕೆರೆ ಇರುವ ರಸ್ತೆ ಪಕ್ಕ ಬಲಿಷ್ಠ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಮಕ್ಕಳಿಗೂ ಅಪಾಯ...

ಕೆರೆಯ ಇನ್ನೊಂದು ಪಾರ್ಶ್ವದಲ್ಲಿ ಐದಾರು ಮನೆಗಳಿವೆ. ಈ ಮನೆಗಳಲ್ಲಿ ಪುಟ್ಟ ಪುಟ್ಟ ಮಕ್ಕಳಿದ್ದಾರೆ. ಆಟವಾಡುವ ವೇಳೆ ಮಕ್ಕಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇದ್ದು, ಈ ಕೆರೆಯನ್ನು ಮುಚ್ಚಬೇಕೆಂಬುದು ಈ ಕುಟುಂಬಗಳ ಆಗ್ರಹವಾಗಿದೆ.

ಕಂಚಲಗುರಿ ಕೆರೆಯಿಂದ ಅಪಾಯಕ್ಕೆ ಆಹ್ವಾನ

ಅಪಾಯದ ಸೂಚನಾ ಫಲಕ ಅಳವಡಿಸಲು ಒತ್ತಾಯ...

ರಸ್ತೆಗ ತಡೆಗೋಡೆ ನಿರ್ಮಾಣಕ್ಕೂ ಮೊದಲು ಇಲ್ಲೊಂದು ಅಪಾಯದ ಸೂಚನಾ ಫಲಕ ಅಗತ್ಯವಾಗಿ ಅಳವಡಿಸಬೇಕು. ನಂತರ ರಸ್ತೆ ಬದಿಯಿಂದ ಕಾಂಕ್ರೀಟ್ ತಡೆಗೋಡೆ ನಿರ್ಮಿಸಬೇಕು. ನಗರಸಭಾ ಅಧಿಕಾರಿಗಳು ಮೊದಲು ಎಚ್ಚೆತ್ತುಕೊಳ್ಳಬೇಕು ಎನ್ನುವುದು ಪುತ್ತೂರಿನ ಸಾಮಾಜಿಕ ಕಾರ್ಯಕರ್ತರಾದ ಲೋಕೇಶ್ ಗೌಡ ಅಲುಂಬುಡ ಅವರ ಅಭಿಪ್ರಾಯ.

ಪುತ್ತೂರು: ನಗರಸಭಾ ವ್ಯಾಪ್ತಿಯ ಜಿಡೆಕಲ್ಲು ಕಂಚಲಗುರಿ ರಸ್ತೆಯ ಪಕ್ಕದಲ್ಲೇ ಇರುವ ಕೆರೆಯೊಂದು ಅಪಾಯವನ್ನು ಆಹ್ವಾನಿಸುತ್ತಿದೆ.

ರಸ್ತೆಯ ಪಕ್ಕದಲ್ಲಿಯೇ ಇರುವ ಈ ಖಾಸಗಿ ಕೆರೆ, ವರ್ಷದಿಂದ ವರ್ಷಕ್ಕೆ ಅಗಲವಾಗುತ್ತಿದ್ದು, ರಸ್ತೆ ಕುಸಿಯುವ ಭೀತಿಯೂ ಉಂಟಾಗಿದೆ. ದಿನನಿತ್ಯ ನೂರಾರು ವಾಹನಗಳು ಓಡಾಟ ನಡೆಸುವ ಇಲ್ಲಿನ ಬೆದ್ರಾಳ- ಜಿಡೆಕಲ್ಲು ಸಂಪರ್ಕ ರಸ್ತೆಯ ಕಂಚಲಗುರಿ ಎಂಬಲ್ಲಿನ ಈ ಕೆರೆಗೆ ಯಾವುದೇ ತಡೆಗೋಡೆಗಳಿಲ್ಲ. ಈ ಭಾಗದಲ್ಲಿ ರಸ್ತೆ ತಿರುವು ಹೊಂದಿರುವ ಕಾರಣ ಸ್ವಲ್ಪ ಅಜಾಗರೂಕತೆಯಾದರೂ ವಾಹನಗಳು ಕೆರೆಗೆ ಬೀಳುವ ಅಪಾಯವಿದೆ. ಹಾಗಾಗಿ ಈ ಕೆರೆ ಇರುವ ರಸ್ತೆ ಪಕ್ಕ ಬಲಿಷ್ಠ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಮಕ್ಕಳಿಗೂ ಅಪಾಯ...

ಕೆರೆಯ ಇನ್ನೊಂದು ಪಾರ್ಶ್ವದಲ್ಲಿ ಐದಾರು ಮನೆಗಳಿವೆ. ಈ ಮನೆಗಳಲ್ಲಿ ಪುಟ್ಟ ಪುಟ್ಟ ಮಕ್ಕಳಿದ್ದಾರೆ. ಆಟವಾಡುವ ವೇಳೆ ಮಕ್ಕಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇದ್ದು, ಈ ಕೆರೆಯನ್ನು ಮುಚ್ಚಬೇಕೆಂಬುದು ಈ ಕುಟುಂಬಗಳ ಆಗ್ರಹವಾಗಿದೆ.

ಕಂಚಲಗುರಿ ಕೆರೆಯಿಂದ ಅಪಾಯಕ್ಕೆ ಆಹ್ವಾನ

ಅಪಾಯದ ಸೂಚನಾ ಫಲಕ ಅಳವಡಿಸಲು ಒತ್ತಾಯ...

ರಸ್ತೆಗ ತಡೆಗೋಡೆ ನಿರ್ಮಾಣಕ್ಕೂ ಮೊದಲು ಇಲ್ಲೊಂದು ಅಪಾಯದ ಸೂಚನಾ ಫಲಕ ಅಗತ್ಯವಾಗಿ ಅಳವಡಿಸಬೇಕು. ನಂತರ ರಸ್ತೆ ಬದಿಯಿಂದ ಕಾಂಕ್ರೀಟ್ ತಡೆಗೋಡೆ ನಿರ್ಮಿಸಬೇಕು. ನಗರಸಭಾ ಅಧಿಕಾರಿಗಳು ಮೊದಲು ಎಚ್ಚೆತ್ತುಕೊಳ್ಳಬೇಕು ಎನ್ನುವುದು ಪುತ್ತೂರಿನ ಸಾಮಾಜಿಕ ಕಾರ್ಯಕರ್ತರಾದ ಲೋಕೇಶ್ ಗೌಡ ಅಲುಂಬುಡ ಅವರ ಅಭಿಪ್ರಾಯ.

Intro:ಪುತ್ತೂರು; ಪುತ್ತೂರು ನಗರಸಭಾ ವ್ಯಾಪ್ತಿಯ ಹಲವು ಭಾಗದಲ್ಲಿ ರಸ್ತೆಗಳ ಅಂಚಿನಲ್ಲಿರುವ ಹಳ್ಳ ಹಾಗೂ ನಿಗೂಢ ಕೆರೆಗಳು ಜನಸಾಮಾನ್ಯರ ಬದುಕಿಗೆ ಅಪಾಯ ತಂದೊಡ್ಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಪಿಎಂಸಿ ರಸ್ತೆಯಿಂದ ಸಾಲ್ಮರ ಮೌಂಟನ್ ವ್ಯೂ ಮೂಲಕ ಜಿಡೆಕಲ್ಲಿಗೆ ಸಂಪರ್ಕಿಸುವ ರಸ್ತೆಯ ಮುದ್ದೋಡಿ ಎಂಬಲ್ಲಿ ನಿಗೂಢ ಹಳ್ಳ ಅಪಾಯದ ತಾಣವಾಗಿದ್ದರೆ, ಇದೀಗ ಜಿಡೆಕಲ್ಲು ಕಂಚಲಗುರಿ ರಸ್ತೆಯ ಪಕ್ಕದಲ್ಲಿಯೇ ಭಾರೀ ಗಾತ್ರದ ಕೆರೆಯೊಂದು ಅಪಾಯವನ್ನು ಆಹ್ವಾನಿಸುತ್ತಿದೆ.
ರಸ್ತೆಯ ಪಕ್ಕದಲ್ಲಿಯೇ ಇರುವ ಈ ಖಾಸಗಿ ಕೆರೆ ವರ್ಷದಿಂದ ವರ್ಷಕ್ಕೆ ಅಗಲ ಹೆಚ್ಚಾಗುತ್ತಿದ್ದು, ರಸ್ತೆಯಡಿ ಭಾಗದ ತನಕ ಕೊರೆದು ಹೋಗಿದ್ದು, ರಸ್ತೆಯೂ ಕುಸಿಯುವ ಭೀತಿ ಉಂಟಾಗಿದೆ.
ದಿನನಿತ್ಯ ನೂರಾರು ವಾಹನಗಳು ಓಡಾಟ ನಡೆಸುವ ಈ ಬೆದ್ರಾಳದಿಂದ ಜಿಡೆಕಲ್ಲು ಸಂಪರ್ಕ ರಸ್ತೆಯಲ್ಲಿ ಕಂಚಲಗುರಿ ಎಂಬಲ್ಲಿನ ಈ ದೊಡ್ಡ ಕೆರೆಗೆ ಯಾವುದೇ ತಡೆಗೋಡೆಗಳಿಲ್ಲ. ಈ ಭಾಗದಲ್ಲಿ ರಸ್ತೆ ತಿರುವು ಹೊಂದಿರುವ ಕಾರಣ ಸ್ವಲ್ಪ ಅಜಾಗರೂಕತೆಯಾದರೂ ವಾಹನಗಳು ಕೆರೆಗೆ ಬೀಳುವ ಅಪಾಯವಿದೆ. ವಾಹನ ಚಾಲಕರಿಗೆ ತಕ್ಷಣ ಗಮನಕ್ಕೆ ಬಾರದಂತಿರುವ ಕೆರೆ ಭಾಗ ಕೆಲವು ದಿನಗಳ ಹಿಂದೆ ಕೌಡಿಚ್ಚಾರು ಮಡ್ಯಂಗಲ ಎಂಬಲ್ಲಿ 4 ಮಂದಿಯನ್ನು ಬಲಿ ಪಡೆದ ಕೆರೆಯ ರೀತಿಯಲ್ಲಿಯೇ ಇದೆ. ಹಾಗಾಗಿ ಈ ಕೆರೆ ಇರುವ ರಸ್ತೆ ಪಕ್ಕ ಬಲಿಷ್ಠವಾದ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಮಕ್ಕಳಿಗೂ ಅಪಾಯ..
ಕಂಚಲಗುರಿಯಲ್ಲಿರುವ ಕೆರೆಯ ಇನ್ನೊಂದು ಪಾಶ್ರ್ವದಲ್ಲಿ ಐದಾರು ಮನೆಗಳಿವೆ. ಈ ಮನೆಗಳಲ್ಲಿ ಪುಟ್ಟ ಪುಟ್ಟ ಮಕ್ಕಳಿದ್ದಾರೆ. ಆಟವಾಡುವ ವೇಳೆ ಮಕ್ಕಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇದ್ದು, ಈ ಕೆರೆಯನ್ನು ಮುಚ್ಚುವಂತೆ ಈ ಕುಟುಂಬಗಳ ಆಗ್ರಹವಾಗಿದೆ. ಕೆರೆಗೆ ಎರಡೂ ಭಾಗಗಳಿಂದ ತಡೆಗೋಡೆ ನಿರ್ಮಿಸಿದರೆ ಮಾತ್ರ ಇಲ್ಲಿರು ಅಪಾಯ ತಪ್ಪಿಸಬಹುದಾಗಿದೆ.
ವಿಶಾಲವಾಗಿರುವ ಈ ಕೆರೆಯಲ್ಲಿ ಹಿಂದೆ ಈ ಭಾಗ ಮಂದಿ ತಮ್ಮ ಬಟ್ಟೆಗಳನ್ನು ಒಗೆಯುತ್ತಿದ್ದರು. ಪುರಸಭೆಯ ಅವಧಿಯಲ್ಲಿ ಸಾರ್ವಜನಿಕರಿಗೆ ನೀರಿನ ಕೊರತೆ ಉಂಟಾದಾಗ ಇದೇ ಕೆರೆಯಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ಇದೀಗ ಖಾಸಗಿ ಕೆರೆಯಾಗಿದ್ದರೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈ ಕೆರೆಗೆ ತಡೆಗೋಡೆ ನಿರ್ಮಿಸಿ ಎಂದು ನಗರಸಭಾ ಸದಸ್ಯರಲ್ಲಿ ಹಲವು ಬಾರಿ ಸ್ಥಳೀಯರು ಮನವಿ ಮಾಡಿದ್ದಾರೆ. ಆದರೆ ಅಪಾಯ ಮುನ್ಸೂಚನೆ ನೀಡುತ್ತಿರುವ ಕೆರೆ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪಗಳೂ ಇಲ್ಲಿನ ಜನತೆಯಿಂದ ವ್ಯಕ್ತವಾಗಿದೆ.
ಖಾಸಗಿ ಕುಟುಂಬಕ್ಕೆ ಸೇರಿದ ಈ ಕೆರೆಗೆ ತಡೆಗೋಡೆ ನಿರ್ಮಿಸಲು ಮುಂದಾಗುವಂತೆ ಆಗ್ರಹಿಸಿ ನಗರಸಭೆಗೆ ಮನವಿ ನೀಡಲು ಇದೀಗ ಈ ಕುಟುಂಬವೂ ಮುಂದಾಗಿದೆ. ಸದ್ಯ ಯಾರ ಉಪಯೋಗಕ್ಕೂ ಇಲ್ಲದ ಕೆರೆಯನ್ನು ಶಾಶ್ವತವಾಗಿ ಮುಚ್ಚುವ ಅಥವಾ ಕೆರೆಗೆ ಕಾಂಕ್ರೀಟ್ ತಡೆಗೋಡೆ ನಿರ್ಮಿಸಿ ಕೆರೆಯನ್ನು ಉಳಿಸಿಕೊಳ್ಳುವ ಎರಡೂ ಅವಕಾಶಗಳು ಇಲ್ಲಿವೆ. ಒಂದು ವೇಳೆ ಈ ಎರಡೂ ಕೆಲಸಗಳು ನಡೆಯದಿದ್ದರೆ ಮುಂದಿನ ಮಳೆಗಾಲದಲ್ಲಿ ಬೆದ್ರಾಳ ಜಿಡೆಕಲ್ಲು ಸಂಪರ್ಕ ರಸ್ತೆ ಕುಸಿದು ಕೆರೆಗೆ ಆಹುತಿಯಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ವಾಹನ ಚಾಲಕರಿಗೂ ಅಪಾಯ ತಪ್ಪಿದ್ದಲ್ಲ..!
ಅಪಾಯದ ಸೂಚನಾ ಫಲಕ ಅಳವಡಿಕೆ
ಹಲವು ವರ್ಷಗಳಿಂದ ಕಂಚಲಗುರಿ ಭಾಗದಲ್ಲಿ ಅಪಾಯದ ಸ್ಥಿತಿ ಇದೆ. ಇದೀಗ ರಸ್ತೆಯ ಭಾಗದ ವರೆಗೂ ಕೆರೆ ತನ್ನ ಅಗಲವನ್ನು ಹಿರಿದಾಗಿಸಿಕೊಂಡು ಬಂದಿದೆ. ಇದರಿಂದ ರಸ್ತೆ ಮಾತ್ರವಲ್ಲ ಇಲ್ಲಿಂದ ಹೋಗುವ ಜನತೆಗೂ ಅಪಾಯವಿದೆ. ತಡೆಗೋಡೆ ನಿರ್ಮಾಣಕ್ಕೂ ಮೊದಲು ಇಲ್ಲೊಂದು ಅಪಾಯದ ಸೂಚನಾ ಫಲಕ ಅಗತ್ಯವಾಗಿ ಅಳವಡಿಸಬೇಕು. ನಂತರ ರಸ್ತೆ ಬದಿಯಿಂದ ಕಾಂಕ್ರೀಟ್ ತಡೆಗೋಡೆ ನಿರ್ಮಿಸಬೇಕು. ನಗರ ಸಭಾ ಅಧಿಕಾರಿಗಳು ಮೊದಲು ಎಚ್ಚೆತ್ತುಕೊಳ್ಳಬೇಕು ಎನ್ನುವುದು ಪುತ್ತೂರಿನ ಸಾಮಾಜಿಕ ಕಾರ್ಯಕರ್ತರಾದ ಲೋಕೇಶ್ ಗೌಡ ಅಲುಂಬುಡ ಅವರ ಅಭಿಪ್ರಾಯ.
ವರದಿ; ಅನೀಶ್ ಕುಮಾರ್ ಪುತ್ತೂರುBody:ಪುತ್ತೂರು; ಪುತ್ತೂರು ನಗರಸಭಾ ವ್ಯಾಪ್ತಿಯ ಹಲವು ಭಾಗದಲ್ಲಿ ರಸ್ತೆಗಳ ಅಂಚಿನಲ್ಲಿರುವ ಹಳ್ಳ ಹಾಗೂ ನಿಗೂಢ ಕೆರೆಗಳು ಜನಸಾಮಾನ್ಯರ ಬದುಕಿಗೆ ಅಪಾಯ ತಂದೊಡ್ಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಪಿಎಂಸಿ ರಸ್ತೆಯಿಂದ ಸಾಲ್ಮರ ಮೌಂಟನ್ ವ್ಯೂ ಮೂಲಕ ಜಿಡೆಕಲ್ಲಿಗೆ ಸಂಪರ್ಕಿಸುವ ರಸ್ತೆಯ ಮುದ್ದೋಡಿ ಎಂಬಲ್ಲಿ ನಿಗೂಢ ಹಳ್ಳ ಅಪಾಯದ ತಾಣವಾಗಿದ್ದರೆ, ಇದೀಗ ಜಿಡೆಕಲ್ಲು ಕಂಚಲಗುರಿ ರಸ್ತೆಯ ಪಕ್ಕದಲ್ಲಿಯೇ ಭಾರೀ ಗಾತ್ರದ ಕೆರೆಯೊಂದು ಅಪಾಯವನ್ನು ಆಹ್ವಾನಿಸುತ್ತಿದೆ.
ರಸ್ತೆಯ ಪಕ್ಕದಲ್ಲಿಯೇ ಇರುವ ಈ ಖಾಸಗಿ ಕೆರೆ ವರ್ಷದಿಂದ ವರ್ಷಕ್ಕೆ ಅಗಲ ಹೆಚ್ಚಾಗುತ್ತಿದ್ದು, ರಸ್ತೆಯಡಿ ಭಾಗದ ತನಕ ಕೊರೆದು ಹೋಗಿದ್ದು, ರಸ್ತೆಯೂ ಕುಸಿಯುವ ಭೀತಿ ಉಂಟಾಗಿದೆ.
ದಿನನಿತ್ಯ ನೂರಾರು ವಾಹನಗಳು ಓಡಾಟ ನಡೆಸುವ ಈ ಬೆದ್ರಾಳದಿಂದ ಜಿಡೆಕಲ್ಲು ಸಂಪರ್ಕ ರಸ್ತೆಯಲ್ಲಿ ಕಂಚಲಗುರಿ ಎಂಬಲ್ಲಿನ ಈ ದೊಡ್ಡ ಕೆರೆಗೆ ಯಾವುದೇ ತಡೆಗೋಡೆಗಳಿಲ್ಲ. ಈ ಭಾಗದಲ್ಲಿ ರಸ್ತೆ ತಿರುವು ಹೊಂದಿರುವ ಕಾರಣ ಸ್ವಲ್ಪ ಅಜಾಗರೂಕತೆಯಾದರೂ ವಾಹನಗಳು ಕೆರೆಗೆ ಬೀಳುವ ಅಪಾಯವಿದೆ. ವಾಹನ ಚಾಲಕರಿಗೆ ತಕ್ಷಣ ಗಮನಕ್ಕೆ ಬಾರದಂತಿರುವ ಕೆರೆ ಭಾಗ ಕೆಲವು ದಿನಗಳ ಹಿಂದೆ ಕೌಡಿಚ್ಚಾರು ಮಡ್ಯಂಗಲ ಎಂಬಲ್ಲಿ 4 ಮಂದಿಯನ್ನು ಬಲಿ ಪಡೆದ ಕೆರೆಯ ರೀತಿಯಲ್ಲಿಯೇ ಇದೆ. ಹಾಗಾಗಿ ಈ ಕೆರೆ ಇರುವ ರಸ್ತೆ ಪಕ್ಕ ಬಲಿಷ್ಠವಾದ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಮಕ್ಕಳಿಗೂ ಅಪಾಯ..
ಕಂಚಲಗುರಿಯಲ್ಲಿರುವ ಕೆರೆಯ ಇನ್ನೊಂದು ಪಾಶ್ರ್ವದಲ್ಲಿ ಐದಾರು ಮನೆಗಳಿವೆ. ಈ ಮನೆಗಳಲ್ಲಿ ಪುಟ್ಟ ಪುಟ್ಟ ಮಕ್ಕಳಿದ್ದಾರೆ. ಆಟವಾಡುವ ವೇಳೆ ಮಕ್ಕಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇದ್ದು, ಈ ಕೆರೆಯನ್ನು ಮುಚ್ಚುವಂತೆ ಈ ಕುಟುಂಬಗಳ ಆಗ್ರಹವಾಗಿದೆ. ಕೆರೆಗೆ ಎರಡೂ ಭಾಗಗಳಿಂದ ತಡೆಗೋಡೆ ನಿರ್ಮಿಸಿದರೆ ಮಾತ್ರ ಇಲ್ಲಿರು ಅಪಾಯ ತಪ್ಪಿಸಬಹುದಾಗಿದೆ.
ವಿಶಾಲವಾಗಿರುವ ಈ ಕೆರೆಯಲ್ಲಿ ಹಿಂದೆ ಈ ಭಾಗ ಮಂದಿ ತಮ್ಮ ಬಟ್ಟೆಗಳನ್ನು ಒಗೆಯುತ್ತಿದ್ದರು. ಪುರಸಭೆಯ ಅವಧಿಯಲ್ಲಿ ಸಾರ್ವಜನಿಕರಿಗೆ ನೀರಿನ ಕೊರತೆ ಉಂಟಾದಾಗ ಇದೇ ಕೆರೆಯಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ಇದೀಗ ಖಾಸಗಿ ಕೆರೆಯಾಗಿದ್ದರೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈ ಕೆರೆಗೆ ತಡೆಗೋಡೆ ನಿರ್ಮಿಸಿ ಎಂದು ನಗರಸಭಾ ಸದಸ್ಯರಲ್ಲಿ ಹಲವು ಬಾರಿ ಸ್ಥಳೀಯರು ಮನವಿ ಮಾಡಿದ್ದಾರೆ. ಆದರೆ ಅಪಾಯ ಮುನ್ಸೂಚನೆ ನೀಡುತ್ತಿರುವ ಕೆರೆ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪಗಳೂ ಇಲ್ಲಿನ ಜನತೆಯಿಂದ ವ್ಯಕ್ತವಾಗಿದೆ.
ಖಾಸಗಿ ಕುಟುಂಬಕ್ಕೆ ಸೇರಿದ ಈ ಕೆರೆಗೆ ತಡೆಗೋಡೆ ನಿರ್ಮಿಸಲು ಮುಂದಾಗುವಂತೆ ಆಗ್ರಹಿಸಿ ನಗರಸಭೆಗೆ ಮನವಿ ನೀಡಲು ಇದೀಗ ಈ ಕುಟುಂಬವೂ ಮುಂದಾಗಿದೆ. ಸದ್ಯ ಯಾರ ಉಪಯೋಗಕ್ಕೂ ಇಲ್ಲದ ಕೆರೆಯನ್ನು ಶಾಶ್ವತವಾಗಿ ಮುಚ್ಚುವ ಅಥವಾ ಕೆರೆಗೆ ಕಾಂಕ್ರೀಟ್ ತಡೆಗೋಡೆ ನಿರ್ಮಿಸಿ ಕೆರೆಯನ್ನು ಉಳಿಸಿಕೊಳ್ಳುವ ಎರಡೂ ಅವಕಾಶಗಳು ಇಲ್ಲಿವೆ. ಒಂದು ವೇಳೆ ಈ ಎರಡೂ ಕೆಲಸಗಳು ನಡೆಯದಿದ್ದರೆ ಮುಂದಿನ ಮಳೆಗಾಲದಲ್ಲಿ ಬೆದ್ರಾಳ ಜಿಡೆಕಲ್ಲು ಸಂಪರ್ಕ ರಸ್ತೆ ಕುಸಿದು ಕೆರೆಗೆ ಆಹುತಿಯಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ವಾಹನ ಚಾಲಕರಿಗೂ ಅಪಾಯ ತಪ್ಪಿದ್ದಲ್ಲ..!
ಅಪಾಯದ ಸೂಚನಾ ಫಲಕ ಅಳವಡಿಕೆ
ಹಲವು ವರ್ಷಗಳಿಂದ ಕಂಚಲಗುರಿ ಭಾಗದಲ್ಲಿ ಅಪಾಯದ ಸ್ಥಿತಿ ಇದೆ. ಇದೀಗ ರಸ್ತೆಯ ಭಾಗದ ವರೆಗೂ ಕೆರೆ ತನ್ನ ಅಗಲವನ್ನು ಹಿರಿದಾಗಿಸಿಕೊಂಡು ಬಂದಿದೆ. ಇದರಿಂದ ರಸ್ತೆ ಮಾತ್ರವಲ್ಲ ಇಲ್ಲಿಂದ ಹೋಗುವ ಜನತೆಗೂ ಅಪಾಯವಿದೆ. ತಡೆಗೋಡೆ ನಿರ್ಮಾಣಕ್ಕೂ ಮೊದಲು ಇಲ್ಲೊಂದು ಅಪಾಯದ ಸೂಚನಾ ಫಲಕ ಅಗತ್ಯವಾಗಿ ಅಳವಡಿಸಬೇಕು. ನಂತರ ರಸ್ತೆ ಬದಿಯಿಂದ ಕಾಂಕ್ರೀಟ್ ತಡೆಗೋಡೆ ನಿರ್ಮಿಸಬೇಕು. ನಗರ ಸಭಾ ಅಧಿಕಾರಿಗಳು ಮೊದಲು ಎಚ್ಚೆತ್ತುಕೊಳ್ಳಬೇಕು ಎನ್ನುವುದು ಪುತ್ತೂರಿನ ಸಾಮಾಜಿಕ ಕಾರ್ಯಕರ್ತರಾದ ಲೋಕೇಶ್ ಗೌಡ ಅಲುಂಬುಡ ಅವರ ಅಭಿಪ್ರಾಯ.
ವರದಿ; ಅನೀಶ್ ಕುಮಾರ್ ಪುತ್ತೂರುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.