ETV Bharat / state

ಜಲಾವೃತ ಪ್ರದೇಶಗಳಿಗೆ ದ.ಕ.ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

author img

By

Published : Sep 12, 2020, 12:49 AM IST

ದಕ್ಷಿಣ ಕನ್ನಡ ಜಿಲ್ಲಯಲ್ಲಿ ವಿಪರೀತ ಮಳೆಯಾಗುತ್ತಿರುವ ಪರಿಣಾಮ ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ. ಈ ಹಿನ್ನೆಲೆ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

dakshin kannda dc visits to flooded areas
ಮಳೆಯಿಂದ ಮನೆಗಳು ಜಲಾವೃತ

ಮಂಗಳೂರು: ನಗರದಲ್ಲಿ ಸುರಿಯುತ್ತಿರುವ ಮಳೆಗೆ ನಗರದ ಹೊರವಲಯದಲ್ಲಿರುವ ಜಪ್ಪುನಮೊಗರು, ಕಲ್ಲಾಪು, ಎಕ್ಕೂರು ಪ್ರದೇಶಗಳಲ್ಲಿ ವಸತಿ ಸಮುಚ್ಚಯಗಳು ಜಲಾವೃತಗೊಂಡಿದೆ. ಈ ಪ್ರದೇಶಗಳಿಗೆ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಭೇಟಿ‌ ನೀಡಿ ಪರಿಶೀಲನೆ ನಡೆಸಿದರು.

ನಿನ್ನೆ ತಡರಾತ್ರಿ ಈ ವಸತಿ ಸಮುಚ್ಚಯ ಜಲಾವೃತಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿದೆ. ಫ್ಲ್ಯಾಟ್ ಗಳ ತಳ ಅಂತಸ್ತು ಸಂಪೂರ್ಣ ಜಲಾವೃತಗೊಂಡಿತ್ತು. ಅಗ್ನಿಶಾಮಕದಳ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ದೋಣಿಗಳ ಸಹಾಯದಿಂದ ವೃದ್ಧರು, ಮಕ್ಕಳು ಸೇರಿ 10 ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆ.

dakshin kannda dc visits to flooded areas
ಮಳೆಯಿಂದ ಮನೆಗಳು ಜಲಾವೃತ
ಇಂದು ಸಂಜೆ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಮೇಯರ್ ದಿವಾಕರ ಪಾಂಡೇಶ್ವರ ಸೇರಿದಂತೆ ಪಾಲಿಕೆಯ ಅಧಿಕಾರಿಗಳು, ಸ್ಥಳೀಯ ಕಾರ್ಪೊರೇಟರ್ ಭೇಟಿ ನೀಡಿದ್ದಾರೆ.
ಮುಲ್ಕಿಯಲ್ಲಿ ವೃದ್ಧೆಯ ರಕ್ಷಣೆ:ನಗರದ ಹೊರವಲಯದಲ್ಲಿರುವ ಮುಲ್ಕಿಯಲ್ಲಿಯೂ ಮಳೆಯಿಂದ ಮನೆಗಳು ಜಲಾವೃತವಾಗಿದ್ದು, ಇಲ್ಲಿನ ಮನೆಯೊಂದರ ವಯೋವೃದ್ಧೆಯೋರ್ವರನ್ನು ರಕ್ಷಿಸಲಾಗಿದೆ.

ಮಂಗಳೂರು: ನಗರದಲ್ಲಿ ಸುರಿಯುತ್ತಿರುವ ಮಳೆಗೆ ನಗರದ ಹೊರವಲಯದಲ್ಲಿರುವ ಜಪ್ಪುನಮೊಗರು, ಕಲ್ಲಾಪು, ಎಕ್ಕೂರು ಪ್ರದೇಶಗಳಲ್ಲಿ ವಸತಿ ಸಮುಚ್ಚಯಗಳು ಜಲಾವೃತಗೊಂಡಿದೆ. ಈ ಪ್ರದೇಶಗಳಿಗೆ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಭೇಟಿ‌ ನೀಡಿ ಪರಿಶೀಲನೆ ನಡೆಸಿದರು.

ನಿನ್ನೆ ತಡರಾತ್ರಿ ಈ ವಸತಿ ಸಮುಚ್ಚಯ ಜಲಾವೃತಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿದೆ. ಫ್ಲ್ಯಾಟ್ ಗಳ ತಳ ಅಂತಸ್ತು ಸಂಪೂರ್ಣ ಜಲಾವೃತಗೊಂಡಿತ್ತು. ಅಗ್ನಿಶಾಮಕದಳ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ದೋಣಿಗಳ ಸಹಾಯದಿಂದ ವೃದ್ಧರು, ಮಕ್ಕಳು ಸೇರಿ 10 ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದೆ.

dakshin kannda dc visits to flooded areas
ಮಳೆಯಿಂದ ಮನೆಗಳು ಜಲಾವೃತ
ಇಂದು ಸಂಜೆ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಮೇಯರ್ ದಿವಾಕರ ಪಾಂಡೇಶ್ವರ ಸೇರಿದಂತೆ ಪಾಲಿಕೆಯ ಅಧಿಕಾರಿಗಳು, ಸ್ಥಳೀಯ ಕಾರ್ಪೊರೇಟರ್ ಭೇಟಿ ನೀಡಿದ್ದಾರೆ.
ಮುಲ್ಕಿಯಲ್ಲಿ ವೃದ್ಧೆಯ ರಕ್ಷಣೆ:ನಗರದ ಹೊರವಲಯದಲ್ಲಿರುವ ಮುಲ್ಕಿಯಲ್ಲಿಯೂ ಮಳೆಯಿಂದ ಮನೆಗಳು ಜಲಾವೃತವಾಗಿದ್ದು, ಇಲ್ಲಿನ ಮನೆಯೊಂದರ ವಯೋವೃದ್ಧೆಯೋರ್ವರನ್ನು ರಕ್ಷಿಸಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.