ETV Bharat / state

ದಲಿತ ಹೋರಾಟಗಾರ ಡೀಕಯ್ಯ ಅಸಹಜ ಸಾವು ಪ್ರಕರಣ; ಸಿಐಡಿಗೆ ವಹಿಸಿದ ರಾಜ್ಯ ಸರ್ಕಾರ

author img

By

Published : Nov 7, 2022, 3:58 PM IST

ದಲಿತ ಹೋರಾಟಗಾರ ಡೀಕಯ್ಯ ಸಾವು ಪ್ರಕರಣದ ತನಿಖೆ ಸಿಐಡಿಗೆ ವರ್ಗಾಯಿಸಲಾಗಿದೆ. ಪೊಲೀಸರು ಸರಿಯಾದ ತನಿಖೆ ನಡೆಸುತ್ತಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಇದೀಗ ಈ ಪ್ರಕರಣ ಸಿಐಡಿ ತನಿಖೆಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.

cid-probe-ordered-into-death-of-dalit-leader-deekaiah
ದಲಿತ ಹೋರಾಟಗಾರ ಡೀಕಯ್ಯ ಅಸಹಜ ಸಾವು ಪ್ರಕರಣ ಸಿಐಡಿಗೆ

ಮಂಗಳೂರು: ದಲಿತ ಹೋರಾಟಗಾರ ಡೀಕಯ್ಯ ಅಸಹಜ ಸಾವು ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ನೀಡಿ ಆದೇಶಿಸಿದೆ. ಡೀಕಯ್ಯ (63) ಅವರು 2022ರ ಜುಲೈ 9ರಂದು ಮಣಿಪಾಲ ಕೆಎಂ‌ಸಿಯಲ್ಲಿ ಮೃತರಾಗಿದ್ದರು‌. ದಲಿತ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದ ಬೆಳ್ತಂಗಡಿಯ ಡೀಕಯ್ಯ, ನಿವೃತ್ತ ಬಿಎಸ್​ಎನ್​​ಎಲ್ ಉದ್ಯೋಗಿ. ಹಲವು ಹೋರಾಟಗಳಲ್ಲಿ‌ ಭಾಗಿಯಾಗಿದ್ದು ಮಾತ್ರವಲ್ಲದೇ ಅಂಬೇಡ್ಕರ್ ಚಿಂತನೆಯನ್ನು ಪಸರಿಸಲು ಶ್ರಮಿಸಿದ್ದರು. ಆದರೆ, ಅವರ ಸಾವಿನ ಬಗ್ಗೆ ಕುಟುಂಬವರ್ಗ ಸಂಶಯ ವ್ಯಕ್ತಪಡಿಸಿತ್ತು.

ಡೀಕಯ್ಯ ಅವರ ಪತ್ನಿ ಮತ್ತು ಪತ್ನಿಯ ಸಹೋದರಿ ಮೇಲೆ ಸಂಶಯವನ್ನು ಕುಟುಂಬವರ್ಗ ವ್ಯಕ್ತಪಡಿಸಿತ್ತು. ಅವರ ತಲೆಗೆ ಗಾಯವಾಗಿರುವುದು ಮತ್ತು ಇದು ಅಸಹಜ ಸಾವೆಂಬು ಅನುಮಾನದ ಮೇಲೆ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಆ ಬಳಿಕ ಅಂತ್ಯಕ್ರಿಯೆ ಮಾಡಲಾಗಿದ್ದ ಅವರ ಶವವನ್ನು ಬೆಳ್ತಂಗಡಿ ತಹಶೀಲ್ದಾರ್​​ ಸಮ್ಮುಖದಲ್ಲಿ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.

ಆದರೆ, ಪೊಲೀಸರು ಸರಿಯಾದ ತನಿಖೆ ನಡೆಸುತ್ತಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಇದೀಗ ಈ ಪ್ರಕರಣ ಸಿಐಡಿ ತನಿಖೆಗೆ ನೀಡಿರುವುದು ತಿಳಿದುಬಂದಿದೆ. ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ್ ಸೋನವಾಣೆ ಅವರು ಡೀಕಯ್ಯ ಸಾವಿನ ಪ್ರಕರಣ ಸಿಐಡಿ ತನಿಖೆಗೆ ನೀಡಲಾಗಿದೆ. ಈ ಪ್ರಕರಣವು ಇನ್ನಷ್ಟೆ ಸಿಐಡಿಗೆ ಹಸ್ತಾಂತರ ಆಗಬೇಕಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಓಲಾ, ಉಬರ್​ನಲ್ಲಿ ಆಟೋರಿಕ್ಷಾ ಸೇವೆ: 4 ವಾರ ಸಮಯ ನೀಡುವಂತೆ ಹೈಕೋರ್ಟ್​ಗೆ ಮನವಿ ಮಾಡಿದ ಸರ್ಕಾರ

ಮಂಗಳೂರು: ದಲಿತ ಹೋರಾಟಗಾರ ಡೀಕಯ್ಯ ಅಸಹಜ ಸಾವು ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ನೀಡಿ ಆದೇಶಿಸಿದೆ. ಡೀಕಯ್ಯ (63) ಅವರು 2022ರ ಜುಲೈ 9ರಂದು ಮಣಿಪಾಲ ಕೆಎಂ‌ಸಿಯಲ್ಲಿ ಮೃತರಾಗಿದ್ದರು‌. ದಲಿತ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದ ಬೆಳ್ತಂಗಡಿಯ ಡೀಕಯ್ಯ, ನಿವೃತ್ತ ಬಿಎಸ್​ಎನ್​​ಎಲ್ ಉದ್ಯೋಗಿ. ಹಲವು ಹೋರಾಟಗಳಲ್ಲಿ‌ ಭಾಗಿಯಾಗಿದ್ದು ಮಾತ್ರವಲ್ಲದೇ ಅಂಬೇಡ್ಕರ್ ಚಿಂತನೆಯನ್ನು ಪಸರಿಸಲು ಶ್ರಮಿಸಿದ್ದರು. ಆದರೆ, ಅವರ ಸಾವಿನ ಬಗ್ಗೆ ಕುಟುಂಬವರ್ಗ ಸಂಶಯ ವ್ಯಕ್ತಪಡಿಸಿತ್ತು.

ಡೀಕಯ್ಯ ಅವರ ಪತ್ನಿ ಮತ್ತು ಪತ್ನಿಯ ಸಹೋದರಿ ಮೇಲೆ ಸಂಶಯವನ್ನು ಕುಟುಂಬವರ್ಗ ವ್ಯಕ್ತಪಡಿಸಿತ್ತು. ಅವರ ತಲೆಗೆ ಗಾಯವಾಗಿರುವುದು ಮತ್ತು ಇದು ಅಸಹಜ ಸಾವೆಂಬು ಅನುಮಾನದ ಮೇಲೆ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಆ ಬಳಿಕ ಅಂತ್ಯಕ್ರಿಯೆ ಮಾಡಲಾಗಿದ್ದ ಅವರ ಶವವನ್ನು ಬೆಳ್ತಂಗಡಿ ತಹಶೀಲ್ದಾರ್​​ ಸಮ್ಮುಖದಲ್ಲಿ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.

ಆದರೆ, ಪೊಲೀಸರು ಸರಿಯಾದ ತನಿಖೆ ನಡೆಸುತ್ತಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಇದೀಗ ಈ ಪ್ರಕರಣ ಸಿಐಡಿ ತನಿಖೆಗೆ ನೀಡಿರುವುದು ತಿಳಿದುಬಂದಿದೆ. ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ್ ಸೋನವಾಣೆ ಅವರು ಡೀಕಯ್ಯ ಸಾವಿನ ಪ್ರಕರಣ ಸಿಐಡಿ ತನಿಖೆಗೆ ನೀಡಲಾಗಿದೆ. ಈ ಪ್ರಕರಣವು ಇನ್ನಷ್ಟೆ ಸಿಐಡಿಗೆ ಹಸ್ತಾಂತರ ಆಗಬೇಕಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಓಲಾ, ಉಬರ್​ನಲ್ಲಿ ಆಟೋರಿಕ್ಷಾ ಸೇವೆ: 4 ವಾರ ಸಮಯ ನೀಡುವಂತೆ ಹೈಕೋರ್ಟ್​ಗೆ ಮನವಿ ಮಾಡಿದ ಸರ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.