ETV Bharat / state

ಸ್ವಾತಂತ್ರ್ಯದ ಅಮೃತ ಮಹೋತ್ಸವ: ಮಂಗಳೂರಿನ ಧಕ್ಕೆಯಲ್ಲಿ ಬೋಟ್ ರ‍್ಯಾಲಿ

author img

By

Published : Aug 12, 2022, 6:24 PM IST

Updated : Aug 12, 2022, 7:05 PM IST

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆ ಆ.12 ರಂದು ಧಕ್ಕೆಯಲ್ಲಿ ಬೋಟ್​​ ಜಾಥಾ ನಡೆಯಿತು. ಇದಕ್ಕೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ಚಾಲನೆ ನೀಡಿದರು.

Boat rally in Dhakke
ಮಂಗಳೂರಿನ ಧಕ್ಕೆಯಲ್ಲಿ ಬೋಟ್ ರ್ಯಾಲಿ

ಮಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಮೀನುಗಾರಿಕೆ ಇಲಾಖೆ ಹಾಗೂ ಮೀನುಗಾರಿಕಾ ಸಂಘಗಳ ಸಹಯೋಗದಲ್ಲಿ ಇಂದು ತ್ರಿವರ್ಣ ಧ್ವಜ ಹಾರಿಸಿ, ಬೋಟ್ ರ‍್ಯಾಲಿ ನಡೆಸಲಾಯಿತು. ನಗರದ ಮೀನುಗಾರಿಕಾ ಧಕ್ಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ರ‍್ಯಾಲಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ‌. ರಾಜೇಂದ್ರ ಕೆ.ವಿ. ಚಾಲನೆ ಕೊಟ್ಟರು.

ಮಂಗಳೂರಿನ ಧಕ್ಕೆಯಲ್ಲಿ ಬೋಟ್ ರ‍್ಯಾಲಿ

ಸುಮಾರು 75 ಬೋಟ್​ಗಳಿಂದ ಈ ರ‍್ಯಾಲಿ ನಡೆಸಲಾಯಿತು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸಿಇಒ ಡಾ. ಕುಮಾರ್, ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಹರೀಶ್, ಉಪ ನಿರ್ದೇಶಕರಾದ ಸುಶ್ಮಿತಾ, ರೇವತಿ, ರೇಖಾ, ಕರಾವಳಿ ಕಾವಲು ಪಡೆಯ ಅಧಿಕಾರಿಗಳು, ಟ್ರಾಲ್ ಬೋಟ್ ಯೂನಿಯನ್ ಅಧ್ಯಕ್ಷರು, ಸದಸ್ಯರು ಇನ್ನಿತರ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಬೋಟ್ ಚಾಲಕರು, ಮಾಲೀಕರು ಉಪಸ್ಥಿತರಿದ್ದರು.

ಇದನ್ನೂ ಓದಿ: ಚಿಕ್ಕಬಳ್ಳಾಪುರ: 3 ಸಾವಿರ ಅಡಿಗೂ ಹೆಚ್ಚು ಉದ್ದದ ತಿರಂಗಾ ಜಾಥಾಗೆ ಚಾಲನೆ

ಮಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಮೀನುಗಾರಿಕೆ ಇಲಾಖೆ ಹಾಗೂ ಮೀನುಗಾರಿಕಾ ಸಂಘಗಳ ಸಹಯೋಗದಲ್ಲಿ ಇಂದು ತ್ರಿವರ್ಣ ಧ್ವಜ ಹಾರಿಸಿ, ಬೋಟ್ ರ‍್ಯಾಲಿ ನಡೆಸಲಾಯಿತು. ನಗರದ ಮೀನುಗಾರಿಕಾ ಧಕ್ಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ರ‍್ಯಾಲಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ‌. ರಾಜೇಂದ್ರ ಕೆ.ವಿ. ಚಾಲನೆ ಕೊಟ್ಟರು.

ಮಂಗಳೂರಿನ ಧಕ್ಕೆಯಲ್ಲಿ ಬೋಟ್ ರ‍್ಯಾಲಿ

ಸುಮಾರು 75 ಬೋಟ್​ಗಳಿಂದ ಈ ರ‍್ಯಾಲಿ ನಡೆಸಲಾಯಿತು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸಿಇಒ ಡಾ. ಕುಮಾರ್, ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಹರೀಶ್, ಉಪ ನಿರ್ದೇಶಕರಾದ ಸುಶ್ಮಿತಾ, ರೇವತಿ, ರೇಖಾ, ಕರಾವಳಿ ಕಾವಲು ಪಡೆಯ ಅಧಿಕಾರಿಗಳು, ಟ್ರಾಲ್ ಬೋಟ್ ಯೂನಿಯನ್ ಅಧ್ಯಕ್ಷರು, ಸದಸ್ಯರು ಇನ್ನಿತರ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಬೋಟ್ ಚಾಲಕರು, ಮಾಲೀಕರು ಉಪಸ್ಥಿತರಿದ್ದರು.

ಇದನ್ನೂ ಓದಿ: ಚಿಕ್ಕಬಳ್ಳಾಪುರ: 3 ಸಾವಿರ ಅಡಿಗೂ ಹೆಚ್ಚು ಉದ್ದದ ತಿರಂಗಾ ಜಾಥಾಗೆ ಚಾಲನೆ

Last Updated : Aug 12, 2022, 7:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.