ETV Bharat / state

ರಾಮನ ಬಗ್ಗೆ ಪೋಸ್ಟ್ ಹಾಕಿದ ಯುವಕನ ಮೇಲೆ ಅನ್ಯ ಧರ್ಮೀಯ ಯುವಕರಿಂದ ಹಲ್ಲೆ ಯತ್ನ - young man who posted about Rama

ಯುವಕ ವಾಟ್ಸಪ್ ಸ್ಟೇಟಸ್​ನಲ್ಲಿ ರಾಮ ಮಂದಿರ ನಿರ್ಮಾಣದ ಕುರಿತು ವಿಡಿಯೋ ತುಣುಕು ಹಾಕಿದ್ದ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅನ್ಯ ಧರ್ಮದ ಯುವಕರ ಗುಂಪು​ ಮನೆಗೆ ತೆರಳಿ ಗೇಟ್ ಬಳಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ.

attempted-attack-by-alien-religion-on-a-young-man-who-posted-about-rama
ದಾಳಿಗೆ ಯತ್ನ
author img

By

Published : Mar 4, 2021, 10:16 PM IST

ಉಪ್ಪಿನಂಗಡಿ: ವಾಟ್ಸಪ್​ನಲ್ಲಿ ರಾಮ ಮಂದಿರ ನಿರ್ಮಾಣದ ಸ್ಟೇಟಸ್ ಹಾಕಿದ್ದಾನೆ ಎಂಬ ಕಾರಣಕ್ಕೆ ಅನ್ಯ ಧರ್ಮದ ಯುವಕರ ಗುಂಪೊಂದು ಮನೆಗೆ ತೆರಳಿ ಹಲ್ಲೆಗೆ ಯತ್ನಿಸಿದ ಘಟನೆ ಇಲ್ಲಿನ ಆದರ್ಶ ನಗರದಲ್ಲಿ ನಡೆದಿದೆ.

ಆದರ್ಶನಗರ ನಿವಾಸಿ ಮುಕುಂದ್ ಎಂಬಾತ ತನ್ನ ವಾಟ್ಸಪ್ ಸ್ಟೇಟಸ್​ನಲ್ಲಿ ರಾಮ ಮಂದಿರ ನಿರ್ಮಾಣದ ಕುರಿತು ವಿಡಿಯೋ ತುಣುಕನ್ನು ಹಾಕಿದ್ದ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅನ್ಯ ಧರ್ಮದ ಯುವಕರ ಗುಂಪು, ತಡರಾತ್ರಿ ಮುಕುಂದ್​ ಮನೆಗೆ ತೆರಳಿ ಗೇಟ್ ಬಳಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಯುವಕರು ಹಲ್ಲೆಗೆ ಯತ್ನಿಸಿರುವ ದೃಶ್ಯ

ತಕ್ಷಣವೇ ಮಾಹಿತಿ ತಿಳಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ನೀಡಿ, ಯುವಕನಿಗೆ ಹಾಗೂ ಮನೆಯವರಿಗೆ ಧೈರ್ಯ ತುಂಬಿದ್ದಾರೆ. ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿಂದು 571 ಮಂದಿಗೆ ಕೊರೊನಾ ಸೋಂಕು: 4 ಜನ ಬಲಿ

ಉಪ್ಪಿನಂಗಡಿ: ವಾಟ್ಸಪ್​ನಲ್ಲಿ ರಾಮ ಮಂದಿರ ನಿರ್ಮಾಣದ ಸ್ಟೇಟಸ್ ಹಾಕಿದ್ದಾನೆ ಎಂಬ ಕಾರಣಕ್ಕೆ ಅನ್ಯ ಧರ್ಮದ ಯುವಕರ ಗುಂಪೊಂದು ಮನೆಗೆ ತೆರಳಿ ಹಲ್ಲೆಗೆ ಯತ್ನಿಸಿದ ಘಟನೆ ಇಲ್ಲಿನ ಆದರ್ಶ ನಗರದಲ್ಲಿ ನಡೆದಿದೆ.

ಆದರ್ಶನಗರ ನಿವಾಸಿ ಮುಕುಂದ್ ಎಂಬಾತ ತನ್ನ ವಾಟ್ಸಪ್ ಸ್ಟೇಟಸ್​ನಲ್ಲಿ ರಾಮ ಮಂದಿರ ನಿರ್ಮಾಣದ ಕುರಿತು ವಿಡಿಯೋ ತುಣುಕನ್ನು ಹಾಕಿದ್ದ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅನ್ಯ ಧರ್ಮದ ಯುವಕರ ಗುಂಪು, ತಡರಾತ್ರಿ ಮುಕುಂದ್​ ಮನೆಗೆ ತೆರಳಿ ಗೇಟ್ ಬಳಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಯುವಕರು ಹಲ್ಲೆಗೆ ಯತ್ನಿಸಿರುವ ದೃಶ್ಯ

ತಕ್ಷಣವೇ ಮಾಹಿತಿ ತಿಳಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ನೀಡಿ, ಯುವಕನಿಗೆ ಹಾಗೂ ಮನೆಯವರಿಗೆ ಧೈರ್ಯ ತುಂಬಿದ್ದಾರೆ. ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿಂದು 571 ಮಂದಿಗೆ ಕೊರೊನಾ ಸೋಂಕು: 4 ಜನ ಬಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.