ETV Bharat / state

ಮಂಗಳೂರಿನಲ್ಲಿ‌ ಕರಾವಳಿ ಉತ್ಸವಕ್ಕೆ ನಟ ರಿಷಭ್ ಶೆಟ್ಟಿ ಚಾಲನೆ

author img

By

Published : Jan 10, 2020, 11:53 PM IST

ಮಂಗಳೂರಿನಲ್ಲಿ ಆಯೋಜಿಸಲಾಗಿರುವ ವೈಭವದ ಕರಾವಳಿ ಉತ್ಸವಕ್ಕೆ ನಟ, ನಿರ್ದೇಶಕ ರಿಷಭ್ ಶೆಟ್ಟಿ ಚಾಲನೆ ನೀಡಿದರು.

ರಿಷಭ್ ಶೆಟ್ಟಿ ಚಾಲನೆ
ರಿಷಭ್ ಶೆಟ್ಟಿ ಚಾಲನೆ

ಮಂಗಳೂರು: ಮಾತೃಭಾಷೆ ಬರೀ ಭಾಷೆ ಮಾತ್ರವಲ್ಲ; ನಮ್ಮ ಕಲೆ, ನಾಡು-ನುಡಿ, ನೆಲ-ಜಲ ಆ ಭಾಷೆಯೊಳಗೆ ಸಮ್ಮಿಲಿನವಾಗಿರುತ್ತದೆ. ಅಂತಹ ಮಾತೃಭಾಷೆಯನ್ನು ನಾವೆಂದೂ ಮರೆಯಬಾರದು ಎಂದು ನಟ, ನಿರ್ದೇಶಕ ರಿಷಭ್ ಶೆಟ್ಟಿ ಹೇಳಿದರು.

ಕರಾವಳಿ ಉತ್ಸವಕ್ಕೆ ನಟ ರಿಷಭ್ ಶೆಟ್ಟಿ ಚಾಲನೆ ನೀಡಿದರು

ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ವೈಭವದ ಕರಾವಳಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಾತೃಭಾಷೆಯನ್ನು ಮನಸ್ಸಿನಲ್ಲಿರಿಸಿ ಮಾಡಿದ ಸಿನಿಮಾ ''ಸ.ಹಿ.ಪ್ರಾ.ಶಾಲೆ ಕಾಸರಗೋಡು''. ಕರಾವಳಿಯ ಕಲೆಗಳನ್ನು ನೆನಪಿಸುವಂತಹ ಸೊಬಗನ್ನು ಅದರಲ್ಲಿ ತೋರಿಸಲಾಗಿದೆ‌. ಅಲ್ಲದೆ ನನ್ನ ಇತರ ಸಿನಿಮಾಗಳಲ್ಲಿಯೂ ನಮ್ಮ ಕಲೆಗಳನ್ನು ತೋರಿಸುವ ಪ್ರಯತ್ನ ಮಾಡಿದ್ದೇನೆ. ನಮ್ಮ ಕಲೆ, ಭಾಷೆ, ಸಂಸ್ಕೃತಿ ಉಳಿದರೆ ಮಾತ್ರ ಮುಂದಿನ ಪೀಳಿಗೆಗೆ ನಾವು ಯಾರು, ನಮ್ಮ ಇತಿಹಾಸವೇನು ಎಂದು ಅರಿಯಲು ಸಾಧ್ಯ ಎಂದರು. ಇನ್ನು ಕರಾವಳಿ ಉತ್ಸವದ ವಸ್ತುಪ್ರದರ್ಶನವನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.

ಮಂಗಳೂರು: ಮಾತೃಭಾಷೆ ಬರೀ ಭಾಷೆ ಮಾತ್ರವಲ್ಲ; ನಮ್ಮ ಕಲೆ, ನಾಡು-ನುಡಿ, ನೆಲ-ಜಲ ಆ ಭಾಷೆಯೊಳಗೆ ಸಮ್ಮಿಲಿನವಾಗಿರುತ್ತದೆ. ಅಂತಹ ಮಾತೃಭಾಷೆಯನ್ನು ನಾವೆಂದೂ ಮರೆಯಬಾರದು ಎಂದು ನಟ, ನಿರ್ದೇಶಕ ರಿಷಭ್ ಶೆಟ್ಟಿ ಹೇಳಿದರು.

ಕರಾವಳಿ ಉತ್ಸವಕ್ಕೆ ನಟ ರಿಷಭ್ ಶೆಟ್ಟಿ ಚಾಲನೆ ನೀಡಿದರು

ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ವೈಭವದ ಕರಾವಳಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಾತೃಭಾಷೆಯನ್ನು ಮನಸ್ಸಿನಲ್ಲಿರಿಸಿ ಮಾಡಿದ ಸಿನಿಮಾ ''ಸ.ಹಿ.ಪ್ರಾ.ಶಾಲೆ ಕಾಸರಗೋಡು''. ಕರಾವಳಿಯ ಕಲೆಗಳನ್ನು ನೆನಪಿಸುವಂತಹ ಸೊಬಗನ್ನು ಅದರಲ್ಲಿ ತೋರಿಸಲಾಗಿದೆ‌. ಅಲ್ಲದೆ ನನ್ನ ಇತರ ಸಿನಿಮಾಗಳಲ್ಲಿಯೂ ನಮ್ಮ ಕಲೆಗಳನ್ನು ತೋರಿಸುವ ಪ್ರಯತ್ನ ಮಾಡಿದ್ದೇನೆ. ನಮ್ಮ ಕಲೆ, ಭಾಷೆ, ಸಂಸ್ಕೃತಿ ಉಳಿದರೆ ಮಾತ್ರ ಮುಂದಿನ ಪೀಳಿಗೆಗೆ ನಾವು ಯಾರು, ನಮ್ಮ ಇತಿಹಾಸವೇನು ಎಂದು ಅರಿಯಲು ಸಾಧ್ಯ ಎಂದರು. ಇನ್ನು ಕರಾವಳಿ ಉತ್ಸವದ ವಸ್ತುಪ್ರದರ್ಶನವನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.

Intro:ಮಂಗಳೂರು: ಬೇರೆ ಭಾಷೆಗಳನ್ನು ನಾವು ಸಂವಹನಕಷ್ಟೇ ಬಳಕೆ ಮಾಡುತ್ತೇವೆ. ಆದರೆ ಮಾತೃಭಾಷೆ ಬರೀ ಭಾಷೆ ಮಾತ್ರವಲ್ಲ ನಮ್ಮ ಕಲೆ, ನಾಡು-ನುಡಿ, ನೆಲ-ಜಲ ಆ ಭಾಷೆಯೊಳಗೆ ಸಮ್ಮಿಲಿತವಾಗಿರುತ್ತದೆ. ಅಂತಹ ಮಾತೃಭಾಷೆಯನ್ನು ನಾವೆಂದೂ ಮರೆಯಬಾರದು ಎಂದು ನಟ, ನಿರ್ದೇಶಕ ರಿಷಭ್ ಶೆಟ್ಟಿ ಚಾಲನೆ ನೀಡಿದರು.

ಜಿಲ್ಲಾಡಳಿತದಿಂದ ಆಯೋಜಿಸಲಾಗಿರುವ ವೈಭವದ ಕರಾವಳಿ ಉತ್ಸವಕ್ಕೆ ಚಾಲನೆ ನೀಡಿದ ಅವರು, ಮಾತೃಭಾಷೆಯನ್ನು ಮನಸ್ಸಲ್ಲಿರಿಸಿ ಮಾಡಿದ ಸಿನಿಮಾ ಸ.ಹಿ.ಪ್ರಾ.ಶಾಲೆ ಕಾಸರಗೋಡು. ಆದ್ದರಿಂದಲೇ ನಮ್ಮ ಕರಾವಳಿಯ ಕಲೆಗಳನ್ನು ನೆನಪಿಸುವಂತಹ ಅಲ್ಲಿ ತೋರಿಸಲಾಗಿದೆ‌. ಅಲ್ಲದೆ ನನ್ನ ಇತರ ಸಿನಿಮಾಗಳಲ್ಲಿಯೂ ನಮ್ಮ ಕಲೆಗಳನ್ನು ತೋರಿಸುವ ಪ್ರಯತ್ನ ಮಾಡಿದ್ದೇನೆ. ಆದ್ದರಿಂದಲೇ ಇಂದು ಕರಾವಳಿ ಉತ್ಸವವನ್ನು ಉದ್ಘಾಟನೆ ಮಾಡಲು ನನಗೆ ದೊರಕಿರೋದು ಸಾರ್ಥಕ ಕ್ಷಣವೆಂದೆನಿಸಿತು. ನಮ್ಮ ಕಲೆ, ಭಾಷೆ, ಸಂಸ್ಕೃತಿ ಉಳಿದರೆ ಮಾತ್ರ ಮುಂದಿನ ಪೀಳಿಗೆ ನಾವು ಯಾರು, ನಮ್ಮ ಇತಿಹಾಸವೇನು ಎಂದು ಅರಿಯಲು ಸಾಧ್ಯ ಎಂದು ಹೇಳಿದರು.





Body:ಕರಾವಳಿ ಉತ್ಸವದ ವಸ್ತುಪ್ರದರ್ಶನವನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.

ಈ ಸಂದರ್ಭ ಶಾಸಕ ವೇದವ್ಯಾಸ ಕಾಮತ್, ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪಾ, ಮಂಗಳೂರು ‌ಮನಪಾ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್, ದ.ಕ.ಜಿಲ್ಲಾ ಕಸಪಾ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮತ್ತಿತರರು ಉಪಸ್ಥಿತರಿದ್ದರು.

Reporter_Vishwanath Panjimogaru




Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.