ಬಂಟ್ವಾಳ (ದ.ಕ.): ಕೊರೊನಾ ಜಾಗೃತಿ ಮೂಡಿಸಲು ಬಂಟ್ವಾಳ ಪುರಸಭೆ ಹರಸಾಹಸ ಪಡುತ್ತಿದ್ದು, ಗುರುವಾರ ಬೆಳಗ್ಗೆಯೂ ಪುರಸಭೆ ಸಿಬ್ಬಂದಿ ಅಂಗಡಿಗಳ ಮುಂದೆ ಗುರುತು ಮಾಡಿ, ಸಾಮಾಜಿಕ ಅಂತರ ಕಾಪಾಡುವ ಮಹತ್ವ ತಿಳಿಸಿದರು.
ನಗರದಲ್ಲಿ ಇಂದು ಬೆಳಗ್ಗಿನ ಜಾವವೇ ಅಂಗಡಿಗಳಿಗೆ ಅಗತ್ಯ ವಸ್ತು ಖರೀದಿಗಾಗಿ ಜನರು ಧಾವಿಸುತ್ತಿದ್ದರು. ಈ ಸಂದರ್ಭ ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಸೂಚನೆಯಂತೆ ಪುರಸಭೆಯ ಇಂಜಿನಿಯರ್ ಸಹಾಯಕ ಇಕ್ಬಾಲ್ ಮತ್ತು ಪೌರಕಾರ್ಮಿಕ ಸಿಬ್ಬಂದಿ ಸಹಿತ ಪುರಸಭೆಯ ಸಿಬ್ಬಂದಿ ಸುಣ್ಣದಿಂದ ಗುರುತು ಮಾಡಿ, ಜನರು ಖರೀದಿಗೆ ಬರುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮಹತ್ವ ತಿಳಿಸಿ, ಜನರನ್ನೂ ಅಲ್ಲೇ ನಿಲ್ಲುವಂತೆ ಸೂಚಿಸಿದರು.
ಇದಕ್ಕೆ ಬಂಟ್ವಾಳದ ಜನರು ಸ್ಪಂದಿಸಿದ್ದು, ಅಂತರ ಕಾಯ್ದುಕೊಂಡು ಅಂಗಡಿಗೆ ತೆರಳಿ ಖರೀದಿ ನಡೆಸಿದರು. ವಿಶೇಷವಾಗಿ ಮೆಡಿಕಲ್ ಶಾಪ್ಗಳಲ್ಲಿ ಗುರುವಾರ ಬೆಳಗ್ಗೆಯೂ ಜನಸಂದಣಿ ಕಾಣುತ್ತಿತ್ತು.