ETV Bharat / state

ಉಳ್ಳಾಲದಲ್ಲಿ ದಡಕ್ಕೆ ಅಪ್ಪಳಿಸಿದ ಮೀನುಗಾರಿಕಾ ಬೋಟ್: 10 ಮಂದಿಯ ರಕ್ಷಣೆ

author img

By

Published : May 23, 2021, 12:29 PM IST

ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟ್​ ದಡಕ್ಕೆ ಬಂದು ಅಪ್ಪಳಿಸುವ ಮೂಲಕ ಉಳ್ಳಾಲ ಬಳಿ ಅವಘಡ ಸಂಭವಿಸಿದೆ.

A fishing boat that crashed into the sea shore in Ullal
ದಡಕ್ಕೆ ಅಪ್ಪಳಿಸಿರುವ ಬೋಟ್​

ಉಳ್ಳಾಲ: ರಾತ್ರಿ ಮಂಗಳೂರಿನ ಧಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟ್ ಉಳ್ಳಾಲದ ಕೋಡಿಯಲ್ಲಿ ದಡಕ್ಕೆ ಬಂದು ಅಪ್ಪಳಿಸಿದೆ.

ಉಳ್ಳಾಲದ ಅಶ್ರಫ್ ಎಂಬವರಿಗೆ ಸೇರಿದ ಅಝಾನ್ ಹೆಸರಿನ ಬೋಟ್ ಕಳೆದ ರಾತ್ರಿ 1.30 ರ ಸುಮಾರಿಗೆ ಮಂಗಳೂರು ಧಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಕುಡಿದ ಮತ್ತಿನಲ್ಲಿದ್ದ ಬೋಟ್​ ಚಾಲಕ ಇನ್ನೋರ್ವನ ಕೈಗೆ ಬೋಟ್ ನೀಡಿದ ಪರಿಣಾಮ ಘಟನೆ ನಡೆದಿದೆ ಎನ್ನಲಾಗಿದೆ.

ದಡಕ್ಕೆ ಅಪ್ಪಳಿಸಿರುವ ಬೋಟ್​

ಇದನ್ನೂ ಓದಿ: ಮೈಸೂರು ಜಿಪಂ ಕಚೇರಿಯಲ್ಲಿ ಜನರೇಟರ್ ಸ್ಫೋಟ: ತಪ್ಪಿದ ಭಾರೀ ಅನಾಹುತ

ಕನ್ಯಾಕುಮಾರಿ ಮೂಲದ ಐವರು ಮೀನುಗಾರರು ಹಾಗೂ ಇತರ ಕಾರ್ಮಿಕರು ಸೇರಿ ‌ಸುಮಾರು ಹತ್ತು ಮಂದಿಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಈ ಸಂಬಂಧ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಳ್ಳಾಲ: ರಾತ್ರಿ ಮಂಗಳೂರಿನ ಧಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟ್ ಉಳ್ಳಾಲದ ಕೋಡಿಯಲ್ಲಿ ದಡಕ್ಕೆ ಬಂದು ಅಪ್ಪಳಿಸಿದೆ.

ಉಳ್ಳಾಲದ ಅಶ್ರಫ್ ಎಂಬವರಿಗೆ ಸೇರಿದ ಅಝಾನ್ ಹೆಸರಿನ ಬೋಟ್ ಕಳೆದ ರಾತ್ರಿ 1.30 ರ ಸುಮಾರಿಗೆ ಮಂಗಳೂರು ಧಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಕುಡಿದ ಮತ್ತಿನಲ್ಲಿದ್ದ ಬೋಟ್​ ಚಾಲಕ ಇನ್ನೋರ್ವನ ಕೈಗೆ ಬೋಟ್ ನೀಡಿದ ಪರಿಣಾಮ ಘಟನೆ ನಡೆದಿದೆ ಎನ್ನಲಾಗಿದೆ.

ದಡಕ್ಕೆ ಅಪ್ಪಳಿಸಿರುವ ಬೋಟ್​

ಇದನ್ನೂ ಓದಿ: ಮೈಸೂರು ಜಿಪಂ ಕಚೇರಿಯಲ್ಲಿ ಜನರೇಟರ್ ಸ್ಫೋಟ: ತಪ್ಪಿದ ಭಾರೀ ಅನಾಹುತ

ಕನ್ಯಾಕುಮಾರಿ ಮೂಲದ ಐವರು ಮೀನುಗಾರರು ಹಾಗೂ ಇತರ ಕಾರ್ಮಿಕರು ಸೇರಿ ‌ಸುಮಾರು ಹತ್ತು ಮಂದಿಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಈ ಸಂಬಂಧ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.