ETV Bharat / state

ಮಂಗಳೂರು ವಿಮಾನ ನಿಲ್ದಾಣದಲ್ಲಿ 2.60 ಕೋಟಿ ರೂ. ಮೌಲ್ಯದ ವಜ್ರ ವಶ

author img

By

Published : Feb 13, 2023, 4:16 PM IST

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೋಟಿ ಬೆಲೆ ಬಾಳುವ ವಜ್ರ ವಶಕ್ಕೆ - ಮುಂಬೈನಿಂದ ದುಬೈಗೆ ವ್ರಜ ಸಾಗಣೆ - ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಭಾರತೀಯ ಕಂದಾಯ ಗುಪ್ತಚರ ನಿರ್ದೇಶನಾಲಯ

2.60 crore worth of diamonds seized at Mangalore airport
ಮಂಗಳೂರು ವಿಮಾನ ನಿಲ್ದಾಣದಲ್ಲಿ 2.60 ಕೋಟಿ ರೂ. ಮೌಲ್ಯದ ವಜ್ರ ವಶ

ಮಂಗಳೂರು (ದಕ್ಷಿಣ ಕನ್ನಡ) : ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಹೆಚ್ಚಾಗಿ ಅಕ್ರಮವಾಗಿ ಚಿನ್ನ ಮತ್ತು ಇತರ ಅಮೂಲ್ಯ ವಸ್ತುಗಳನ್ನು ಸಾಗಿಸುವ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಈ ನಡುವೆ ವಿದೇಶಕ್ಕೆ ಸಾಗಿಸಲು‌ ಯತ್ನಿಸುತ್ತಿದ್ದ ಭಾರಿ ಪ್ರಮಾಣದ ವಜ್ರವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಭಾರತದಿಂದ ದುಬಾೖಗೆ ಅಕ್ರಮವಾಗಿ ವಿಮಾನದಲ್ಲಿ ವಜ್ರವನ್ನು ಸಾಗಿಸಲು ಯತ್ನಿಸಲಾಗಿತ್ತು. ಸಾಗಾಟ ಮಾಡುತ್ತಿದ್ದವರಿಗೆ ಮುಬೈನಿಂದ ಸಂಪರ್ಕ ಇತ್ತು ಎಂದು ತಿಳಿದು ಬಂದಿದೆ. ಇದರಲ್ಲಿ 2.60 ಕೋಟಿ ರೂ. ಮೌಲ್ಯದ ವಜ್ರ ಇತ್ತು. ವಜ್ರ ಸಾಗಿಸುತ್ತಿದ್ದ ಇಬ್ಬರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಾರತೀಯ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ದುಬೈಗೆ ತೆರಳುತ್ತಿದ್ದ ಭಟ್ಕಳದ ಅನಾಸ್‌ ಮತ್ತು ಅಮ್ಮರ್‌ ಎಂಬವರು ತಮ್ಮ ಶೂ ಮತ್ತು ಬ್ಯಾಗ್​ನ ಅಡಿ ಅನುಮಾನ ಬಾರದಂತೆ ಅಡಗಿಸಿಟ್ಟು ವಜ್ರವನ್ನು ಸಾಗಣೆ ಮಾಡುತ್ತಿದ್ದರು. ಮಂಗಳೂರು ವಿಮಾನ ನಿಲ್ದಾಣದಿಂದ ದುಬೈಗೆ ಸಾಗಣೆ ಮಾಡುತ್ತಿದ್ದ ವೇಳೆ ಇಮಿಗ್ರೇಶನ್‌ ವಿಭಾಗದಲ್ಲಿ ತಪಾಸಣೆ ವೇಳೆ ಅಕ್ರಮ ವಜ್ರ ಸಾಗಣೆ ಪತ್ತೆಯಾಗಿದೆ. ಈ ವಜ್ರವನ್ನು ಮುಂಬೈನಿಂದ ತಂದಿದ್ದರು ಎಂದು ತಿಳಿದು ಬಂದಿದ್ದು, ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಬದುಕಿದ್ದ ವ್ಯಕ್ತಿಯ ಡೆತ್​ ರಿಪೋರ್ಟ್ ಕೊಟ್ಟ ವೈದ್ಯರು.. ಆಘಾತಕ್ಕೊಳಗಾಗಿ ಪ್ರತಿಭಟನೆಗೆ ಕುಳಿತ ರೋಗಿ!

ಅಡುಗೆ ಮಾಡುವ ವಿಚಾರದಲ್ಲಿ ಗಲಾಟೆ ಕೊಲೆ: ಮೊತ್ತೊಂದು ಪ್ರಕರಣ ಮಂಗಳೂರಿನ ಹೊಸಬೆಟ್ಟುವಿನಲ್ಲಿ ನಡೆದಿದ್ದು, ಅಡುಗೆ ಮಾಡುವ ವಿಚಾರದಲ್ಲಿ ನಡೆದ ಜಗಳವೊಂದು ಮುಂದುವರಿದು ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ. ಬಿಹಾರ ರಾಜ್ಯದ ಸಮಸ್ತಿಪುರ್ರೆಬ್ರಾ ನಿವಾಸಿ ಚೋಟು ಕುಮಾರ್ (21) ಮೃತಪಟ್ಟ ವ್ಯಕ್ತಿ.

ಈ ದುರ್ಘಟನೆ ಸುರತ್ಕಲ್​ನ ಕುಳಾಯಿ ಬಳಿಯ ಹೊಸಬೆಟ್ಟುವಿನ ಮಾರ್ಬಲ್ ಅಂಗಡಿಯ ಬಳಿ ನಡೆದಿದೆ. ಫೆಬ್ರವರಿ 11 ರ ರಾತ್ರಿ ಮಾರ್ಬಲ್ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಉತ್ತರ ಭಾರತದ ಮೂಲದ ವಲಸೆ ಕಾರ್ಮಿಕರ ನಡುವೆ ಜಗಳ ನಡೆದಿದೆ. ವಾಸ ವಿರುವ ರೂಮ್​ನಲ್ಲಿ ಮಾಡುವ ಕೆಲಸದ ವಿಚಾರದಲ್ಲಿ ರಾತ್ರಿ ಮೂವರ ನಡುವೆ ಗಲಾಟೆ ಆರಂಭವಾಗಿದೆ.

ಸರದಿ ಪ್ರಕಾರ ಅಡುಗೆ ಮಾಡುವ ವಿಚಾರದಲ್ಲಿ ಜಗಳ ನಡೆದಿದೆ. ಮೂವರ ನಡುವ ಆರಂಭವಾದ ವಾಗ್ವಾದದ ಜಗಳದ ರೂಪಕ್ಕೆ ತಿರುಗಿದೆ. ನಂತರ ಮೂರೂ ಪರಸ್ಪರ ಕೈಕೈ ಮಿಲಾಯಿಸಿಕೊಂಡು ಹೊಡೆದಾಡಿಕೊಂಡಿದ್ದಾರೆ. ಹೊಡೆದಾಟ ಮಿತಿಮೀರಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಲಾಟೆಯಿಂದ ಗಾಯಗೊಂಡ ಮೂವರನ್ನು ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಗಾಯಾಳುಗಳಲ್ಲಿ ಚೋಟು ಕುಮಾರ್ ಎಂಬಾತ ಭಾನುವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಉಳಿದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಶ್ರೀನಿವಾಸ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಅಪ್ರಾಪ್ತ ಆಟಗಾರ್ತಿಯರ ಜೊತೆ ಅನುಚಿತ ವರ್ತನೆ ಆರೋಪ; ಕೋಚ್ ಅಲೆಕ್ಸ್ ಆಂಬ್ರೋಸ್ ವಿರುದ್ಧ ಜಾಮೀನು ರಹಿತ ವಾರೆಂಟ್

ಮಂಗಳೂರು (ದಕ್ಷಿಣ ಕನ್ನಡ) : ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಹೆಚ್ಚಾಗಿ ಅಕ್ರಮವಾಗಿ ಚಿನ್ನ ಮತ್ತು ಇತರ ಅಮೂಲ್ಯ ವಸ್ತುಗಳನ್ನು ಸಾಗಿಸುವ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಈ ನಡುವೆ ವಿದೇಶಕ್ಕೆ ಸಾಗಿಸಲು‌ ಯತ್ನಿಸುತ್ತಿದ್ದ ಭಾರಿ ಪ್ರಮಾಣದ ವಜ್ರವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಭಾರತದಿಂದ ದುಬಾೖಗೆ ಅಕ್ರಮವಾಗಿ ವಿಮಾನದಲ್ಲಿ ವಜ್ರವನ್ನು ಸಾಗಿಸಲು ಯತ್ನಿಸಲಾಗಿತ್ತು. ಸಾಗಾಟ ಮಾಡುತ್ತಿದ್ದವರಿಗೆ ಮುಬೈನಿಂದ ಸಂಪರ್ಕ ಇತ್ತು ಎಂದು ತಿಳಿದು ಬಂದಿದೆ. ಇದರಲ್ಲಿ 2.60 ಕೋಟಿ ರೂ. ಮೌಲ್ಯದ ವಜ್ರ ಇತ್ತು. ವಜ್ರ ಸಾಗಿಸುತ್ತಿದ್ದ ಇಬ್ಬರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಾರತೀಯ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ದುಬೈಗೆ ತೆರಳುತ್ತಿದ್ದ ಭಟ್ಕಳದ ಅನಾಸ್‌ ಮತ್ತು ಅಮ್ಮರ್‌ ಎಂಬವರು ತಮ್ಮ ಶೂ ಮತ್ತು ಬ್ಯಾಗ್​ನ ಅಡಿ ಅನುಮಾನ ಬಾರದಂತೆ ಅಡಗಿಸಿಟ್ಟು ವಜ್ರವನ್ನು ಸಾಗಣೆ ಮಾಡುತ್ತಿದ್ದರು. ಮಂಗಳೂರು ವಿಮಾನ ನಿಲ್ದಾಣದಿಂದ ದುಬೈಗೆ ಸಾಗಣೆ ಮಾಡುತ್ತಿದ್ದ ವೇಳೆ ಇಮಿಗ್ರೇಶನ್‌ ವಿಭಾಗದಲ್ಲಿ ತಪಾಸಣೆ ವೇಳೆ ಅಕ್ರಮ ವಜ್ರ ಸಾಗಣೆ ಪತ್ತೆಯಾಗಿದೆ. ಈ ವಜ್ರವನ್ನು ಮುಂಬೈನಿಂದ ತಂದಿದ್ದರು ಎಂದು ತಿಳಿದು ಬಂದಿದ್ದು, ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಬದುಕಿದ್ದ ವ್ಯಕ್ತಿಯ ಡೆತ್​ ರಿಪೋರ್ಟ್ ಕೊಟ್ಟ ವೈದ್ಯರು.. ಆಘಾತಕ್ಕೊಳಗಾಗಿ ಪ್ರತಿಭಟನೆಗೆ ಕುಳಿತ ರೋಗಿ!

ಅಡುಗೆ ಮಾಡುವ ವಿಚಾರದಲ್ಲಿ ಗಲಾಟೆ ಕೊಲೆ: ಮೊತ್ತೊಂದು ಪ್ರಕರಣ ಮಂಗಳೂರಿನ ಹೊಸಬೆಟ್ಟುವಿನಲ್ಲಿ ನಡೆದಿದ್ದು, ಅಡುಗೆ ಮಾಡುವ ವಿಚಾರದಲ್ಲಿ ನಡೆದ ಜಗಳವೊಂದು ಮುಂದುವರಿದು ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ. ಬಿಹಾರ ರಾಜ್ಯದ ಸಮಸ್ತಿಪುರ್ರೆಬ್ರಾ ನಿವಾಸಿ ಚೋಟು ಕುಮಾರ್ (21) ಮೃತಪಟ್ಟ ವ್ಯಕ್ತಿ.

ಈ ದುರ್ಘಟನೆ ಸುರತ್ಕಲ್​ನ ಕುಳಾಯಿ ಬಳಿಯ ಹೊಸಬೆಟ್ಟುವಿನ ಮಾರ್ಬಲ್ ಅಂಗಡಿಯ ಬಳಿ ನಡೆದಿದೆ. ಫೆಬ್ರವರಿ 11 ರ ರಾತ್ರಿ ಮಾರ್ಬಲ್ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಉತ್ತರ ಭಾರತದ ಮೂಲದ ವಲಸೆ ಕಾರ್ಮಿಕರ ನಡುವೆ ಜಗಳ ನಡೆದಿದೆ. ವಾಸ ವಿರುವ ರೂಮ್​ನಲ್ಲಿ ಮಾಡುವ ಕೆಲಸದ ವಿಚಾರದಲ್ಲಿ ರಾತ್ರಿ ಮೂವರ ನಡುವೆ ಗಲಾಟೆ ಆರಂಭವಾಗಿದೆ.

ಸರದಿ ಪ್ರಕಾರ ಅಡುಗೆ ಮಾಡುವ ವಿಚಾರದಲ್ಲಿ ಜಗಳ ನಡೆದಿದೆ. ಮೂವರ ನಡುವ ಆರಂಭವಾದ ವಾಗ್ವಾದದ ಜಗಳದ ರೂಪಕ್ಕೆ ತಿರುಗಿದೆ. ನಂತರ ಮೂರೂ ಪರಸ್ಪರ ಕೈಕೈ ಮಿಲಾಯಿಸಿಕೊಂಡು ಹೊಡೆದಾಡಿಕೊಂಡಿದ್ದಾರೆ. ಹೊಡೆದಾಟ ಮಿತಿಮೀರಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಲಾಟೆಯಿಂದ ಗಾಯಗೊಂಡ ಮೂವರನ್ನು ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಗಾಯಾಳುಗಳಲ್ಲಿ ಚೋಟು ಕುಮಾರ್ ಎಂಬಾತ ಭಾನುವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಉಳಿದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಶ್ರೀನಿವಾಸ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಅಪ್ರಾಪ್ತ ಆಟಗಾರ್ತಿಯರ ಜೊತೆ ಅನುಚಿತ ವರ್ತನೆ ಆರೋಪ; ಕೋಚ್ ಅಲೆಕ್ಸ್ ಆಂಬ್ರೋಸ್ ವಿರುದ್ಧ ಜಾಮೀನು ರಹಿತ ವಾರೆಂಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.