ETV Bharat / state

ಚಾಕುವಿನಿಂದ ಇರಿದು ಮಹಿಳೆಯ ಬರ್ಬರ ಹತ್ಯೆ: ಹಳೆ ವೈಷಮ್ಯ ಶಂಕೆ - ಚಿತ್ರದುರ್ಗದಲ್ಲಿ ಮಹಿಳೆಯ ಹತ್ಯೆ

ಚಿತ್ರದುರ್ಗದ ಬಡಾಮಕಾನ್ ಬಡಾವಣೆಯಲ್ಲಿ ಮಹಿಳೆಯೊಬ್ಬರನ್ನು ಹತ್ಯೆ ಮಾಡಲಾಗಿದ್ದು, ಕೃತ್ಯದ ಬಳಿಕ ಆರೋಪಿ ಪರಾರಿಯಾಗಿದ್ದಾನೆ.

woman killed in Badamakan layout in Chitradurga
ಮಹಿಳೆಯ ಬರ್ಬರ ಹತ್ಯೆ
author img

By

Published : Jan 8, 2021, 9:35 AM IST

ಚಿತ್ರದುರ್ಗ : ಮಹಿಳೆಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಬಡಾಮಕಾನ್ ಬಡಾವಣೆಯಲ್ಲಿ ನಡೆದಿದೆ.

ಬರಹನ್ ಬೇಗಂ (55) ಕೊಲೆಯಾದ ಮಹಿಳೆ. ಹಳೆ ವೈಷಮ್ಯದಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ತಾಯಿಯನ್ನು ಹತ್ಯೆ ಮಾಡಲು ಮುಂದಾದಾಗ ಬಿಡಿಸಲು ಹೋದ ಪುತ್ರ ಮೆಹಫೂಜ್ ಇಲಾಯಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ.

ಓದಿ : ಮಾವನ ಮೇಲಿನ ದ್ವೇಷ: ಕೊಳವೆ ಬಾವಿಗೆ ಕಲ್ಲು ಹಾಕಿದ ಅಳಿಯ ಮಹಾಶಯ!

ಗಾಯಗೊಂಡ ಯುವಕ ಮೆಹಫೂಜ್ ಇಲಾಯಿಯನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೃತ್ಯದ ಬಳಿಕ ಅರೋಪಿ ಇಂತಿರಾಜ್ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಚಿತ್ರದುರ್ಗ ನಗರ ಠಾಣಾ ಪೊಲೀಸರು, ಆರೋಪಿಗಾಗಿ ಬಲೆ ಬೀಸಿದ್ದಾರೆ.

ಚಿತ್ರದುರ್ಗ : ಮಹಿಳೆಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಬಡಾಮಕಾನ್ ಬಡಾವಣೆಯಲ್ಲಿ ನಡೆದಿದೆ.

ಬರಹನ್ ಬೇಗಂ (55) ಕೊಲೆಯಾದ ಮಹಿಳೆ. ಹಳೆ ವೈಷಮ್ಯದಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ತಾಯಿಯನ್ನು ಹತ್ಯೆ ಮಾಡಲು ಮುಂದಾದಾಗ ಬಿಡಿಸಲು ಹೋದ ಪುತ್ರ ಮೆಹಫೂಜ್ ಇಲಾಯಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ.

ಓದಿ : ಮಾವನ ಮೇಲಿನ ದ್ವೇಷ: ಕೊಳವೆ ಬಾವಿಗೆ ಕಲ್ಲು ಹಾಕಿದ ಅಳಿಯ ಮಹಾಶಯ!

ಗಾಯಗೊಂಡ ಯುವಕ ಮೆಹಫೂಜ್ ಇಲಾಯಿಯನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೃತ್ಯದ ಬಳಿಕ ಅರೋಪಿ ಇಂತಿರಾಜ್ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಚಿತ್ರದುರ್ಗ ನಗರ ಠಾಣಾ ಪೊಲೀಸರು, ಆರೋಪಿಗಾಗಿ ಬಲೆ ಬೀಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.