ಚಿತ್ರದುರ್ಗ : ಜಿಲ್ಲೆಯಲ್ಲಿ ಶನಿವಾರ ಸುರಿದ ಮಳೆಗೆ ನಗರದ ಹಲವು ಬಡಾವಣೆಗಳಿಗೆ ನೀರು ನುಗ್ಗಿತ್ತು. ಈ ಹಿನ್ನೆಲೆ ಇಂದು ವಿಧಾನಪರಿಷತ್ ಸದಸ್ಯ ರಘು ಆಚಾರ್ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ನಗರದ ಗುಮಾಸ್ತ ಕಾಲೋನಿ, ಕೆಳಗೋಟೆ ಬಡಾವಣೆ ಸೇರಿ ಮಳೆ ನೀರು ನುಗ್ಗಿದ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿದ ರಘು ಆಚಾರ್ ಜನರ ಸಂಕಷ್ಟ ಆಲಿಸಿದರು.
ಓದಿ:ಸ್ವಪಕ್ಷದವರೇ ಮಸಲತ್ ಮಾಡಿ ನನ್ನ ಬಾದಾಮಿಯಲ್ಲಿ ಸೋಲಿಸಿದ್ರು : ಸಚಿವ ಶ್ರೀರಾಮುಲು
ಈ ವೇಳೆ ಅಧಿಕಾರಿಗಳು ಕೂಡ ವಿಧಾನಪರಿಷತ್ ಸದಸ್ಯರ ಭೇಟಿಗೆ ಸಾಥ್ ನೀಡಿದರು. ಅಧಿಕಾರಿಗಳ ಜೊತೆಗೆ ತಕ್ಷಣವೇ ಚರ್ಚಿಸಿ ಸಮಸ್ಯೆ ಪರಿಹರಿಸುವುದಾಗಿ ವಿಧಾನಪರಿಷತ್ ಸದಸ್ಯ ರಘು ಆಚಾರ್ ಭರವಸೆ ನೀಡಿದರು. ಗುಮಾಸ್ತ ಕಾಲೋನಿ ಸೇರಿ ಹಲವು ಬಡಾವಣೆಗಳಿಗೆ ಭೇಟಿ ನೀಡಿ ಜನರಿಗೆ ಆಶ್ವಾಸನೆ ನೀಡಿದರು.