ಚಿತ್ರದುರ್ಗ: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನ್ನು ಅಗಲಿದರೂ ಕೂಡ ಕೋಟ್ಯಂತರ ಮನಸ್ಸುಗಳಲ್ಲಿ ಉಳಿದಿದ್ದಾರೆ. ಅಪ್ಪು ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಚಿತ್ರದುರ್ಗ ನಗರದ ಟಾರ್ಗೆಟ್ 10 ತೌಸಂಡ್ ತಂಡದ ಯುವಕರು ಸದ್ಗುರು ಸೇವಾ ಆಶ್ರಮದಲ್ಲಿ ಮೂರು ಗಂಟೆಗಳಲ್ಲಿ ನೂರು ಗಿಡಗಳನ್ನು ನೆಡುವ ಮೂಲಕ ನಟನಿಗೆ ಗೌರವ ಸೂಚಿಸಿದರು.
ಈ ವೇಳೆ ಮಾತನಾಡಿದ ತಂಡದ ಮುಖಂಡ ಸಿದ್ದರಾಜು ಜೋಗಿ, ನಾವು ಪ್ರತಿ ವಾರ ಗಿಡ ನೆಡುವ ಕಾರ್ಯಕ್ರಮ ಮಾಡುತ್ತಾ ಬಂದಿದ್ದೇವೆ. ಆದರೆ ಇಂದು ವಿಶೇಷವಾಗಿ ಪುನೀತ್ ಅವರಿಗಾಗಿ ಈ ಗಿಡಗಳನ್ನು ನೆಡಲಾಗಿದೆ. ಕುಟಂಬದ ಜೊತೆಗೆ ಸಮಾಜವನ್ನು ಸಹ ತಮ್ಮ ಕುಟುಂಬವೆಂದು ಭಾವಿಸಿ ಪುನೀತ್ ಬದುಕಿದ್ದರು. ಅವರು ಇಂದು ನಮ್ಮೊಂದಿಗಿಲ್ಲ ಎನ್ನುವುದು ದುಃಖ ತರಿಸುತ್ತದೆ. ಸಮಾಜದ ಪ್ರತಿಯೊಬ್ಬರು ಅವರಲ್ಲಿನ ಒಂದೊಂದು ಗುಣವನ್ನು ಅಳವಡಿಸಿಕೊಂಡು ಸಮಾಜ ಸುಧಾರಣೆ ಕಾರ್ಯಗಳನ್ನು ಮಾಡಬೇಕು ಎಂದು ಕರೆ ನೀಡಿದರು.
ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಗ್ರಾಮದ ಯುವಕರು ಪುನೀತ್ ಪ್ಲೆಕ್ಸ್ಗೆ ಪುಪ್ಪಮಾಲೆ ಹಾಕುವ ಮೂಲಕ ಅಪ್ಪು ಪುಣ್ಯಸ್ಮರಣೆ ಮಾಡಿದರು.
