ETV Bharat / state

ವಕೀಲರಿಗೂ ತಟ್ಟಿದ ಲಾಕ್​​​ಡೌನ್ ಎಫೆಕ್ಟ್: ನೆರವಿಗೆ ಧಾವಿಸಿದ ಜೆಡಿಎಸ್​​​​

ಲಾಕ್​​ಡೌನ್​​​​ನಿಂದಾಗಿ ರಾಜ್ಯದ ಎಲ್ಲಾ ನ್ಯಾಯಾಲಯಗಳನ್ನು ಬಂದ್ ಮಾಡಲಾಗಿತ್ತು. ಇದರಿಂದಾಗಿ ರಾಜ್ಯದ ವಕೀಲರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದನ್ನರಿತ ಚಿತ್ರದುರ್ಗ ಜಿಲ್ಲಾ ಜೆಡಿಎಸ್​​ ಯುವ ಘಟಕ, ವಕೀಲರ ಕಷ್ಟಕ್ಕೆ ಧಾವಿಸಿದ್ದು ದಿನಸಿ ಹಾಗೂ ಅಗತ್ಯ ವಸ್ತುಗಳ ವಿತರಣೆ ಮಾಡಿದ್ದಾರೆ.

author img

By

Published : May 19, 2020, 10:17 PM IST

Lockdown Effected to lawyers: JDS came to aid in Chitradurga
ವಕೀಲರಿಗೂ ತಟ್ಟಿದ ಲಾಕ್​​​ಡೌನ್ ಎಫೆಕ್ಟ್: ನೆರವಿಗೆ ಧಾವಿಸಿದ ಜೆಡಿಎಸ್​​​​

ಚಿತ್ರದುರ್ಗ: ಕೊರೊನಾ ಸೋಂಕು ತಡೆಗಟ್ಟಲು ಸರ್ಕಾರ ಘೋಷಣೆ ಮಾಡಿರುವ ಲಾಕ್​ಡೌನ್ ಬಿಸಿ ವಕೀಲರಿಗೂ ತಟ್ಟಿದೆ. ಸತತ ನಾಲ್ಕು ಹಂತದ ಲಾಕ್​​​ಡೌನ್ ಘೋಷಣೆಯಿಂದಾಗಿ ವಕೀಲರ ಬದುಕು ದುಸ್ತರವಾಗಿದೆ. ಲಾಕ್​​ಡೌನ್​​​ನಿಂದಾಗಿ ನ್ಯಾಯಾಲಯದ ಕಲಾಪಗಳು ಸ್ಥಗಿತಗೊಳಿಸಿದ ಪರಿಣಾಮ ವಕೀಲರ ಸಮುದಾಯ ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದೆ. ವಕೀಲರ ನೆರವಿಗೆ ಚಿತ್ರದುರ್ಗ ಜಿಲ್ಲಾ ಜೆಡಿಎಸ್​​​ ಯುವ ಘಟಕದ ಅಧ್ಯಕ್ಷ ಪ್ರತಾಪ್ ಜೋಗಿಯವರು ಧಾವಿಸಿದ್ದಾರೆ.

ಕಷ್ಟಕ್ಕೆ ಸ್ಪಂದಿಸಿರುವ ಪ್ರತಾಪ್ ಜೋಗಿಯವರು, ಇಂದು ಜೆಡಿಎಸ್ ಕಚೇರಿಯಲ್ಲಿ ನಗರದ ಕಿರಿಯ ವಕೀಲರಿಗೆ ದವಸ-ಧಾನ್ಯ ಸೇರಿದಂತೆ ಅಗತ್ಯ ವಸ್ತುಗಳ ಕಿಟ್ ವಿತರಣೆ ಮಾಡಿದರು.

ಸರ್ಕಾರ ವಕೀಲರನ್ನು ಕಡೆಗಣಿಸಿದೆ. ಕಲಾಪಗಳಿಲ್ಲದೆ ಕೆಲ ವಕೀಲರು ತೊಂದರೆಗೊಳಗಾಗಿದ್ದಾರೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ವಕೀಲರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಪ್ರತಾಪ್ ಜೋಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಚಿತ್ರದುರ್ಗ: ಕೊರೊನಾ ಸೋಂಕು ತಡೆಗಟ್ಟಲು ಸರ್ಕಾರ ಘೋಷಣೆ ಮಾಡಿರುವ ಲಾಕ್​ಡೌನ್ ಬಿಸಿ ವಕೀಲರಿಗೂ ತಟ್ಟಿದೆ. ಸತತ ನಾಲ್ಕು ಹಂತದ ಲಾಕ್​​​ಡೌನ್ ಘೋಷಣೆಯಿಂದಾಗಿ ವಕೀಲರ ಬದುಕು ದುಸ್ತರವಾಗಿದೆ. ಲಾಕ್​​ಡೌನ್​​​ನಿಂದಾಗಿ ನ್ಯಾಯಾಲಯದ ಕಲಾಪಗಳು ಸ್ಥಗಿತಗೊಳಿಸಿದ ಪರಿಣಾಮ ವಕೀಲರ ಸಮುದಾಯ ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದೆ. ವಕೀಲರ ನೆರವಿಗೆ ಚಿತ್ರದುರ್ಗ ಜಿಲ್ಲಾ ಜೆಡಿಎಸ್​​​ ಯುವ ಘಟಕದ ಅಧ್ಯಕ್ಷ ಪ್ರತಾಪ್ ಜೋಗಿಯವರು ಧಾವಿಸಿದ್ದಾರೆ.

ಕಷ್ಟಕ್ಕೆ ಸ್ಪಂದಿಸಿರುವ ಪ್ರತಾಪ್ ಜೋಗಿಯವರು, ಇಂದು ಜೆಡಿಎಸ್ ಕಚೇರಿಯಲ್ಲಿ ನಗರದ ಕಿರಿಯ ವಕೀಲರಿಗೆ ದವಸ-ಧಾನ್ಯ ಸೇರಿದಂತೆ ಅಗತ್ಯ ವಸ್ತುಗಳ ಕಿಟ್ ವಿತರಣೆ ಮಾಡಿದರು.

ಸರ್ಕಾರ ವಕೀಲರನ್ನು ಕಡೆಗಣಿಸಿದೆ. ಕಲಾಪಗಳಿಲ್ಲದೆ ಕೆಲ ವಕೀಲರು ತೊಂದರೆಗೊಳಗಾಗಿದ್ದಾರೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ವಕೀಲರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಪ್ರತಾಪ್ ಜೋಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.