ETV Bharat / state

ಸಚಿವ ಸ್ಥಾನ ಸಿಗುವ ವಿಶ್ವಾಸ ವ್ಯಕ್ತಪಡಿಸಿದ ಶಾಸಕ ಚಂದ್ರಪ್ಪ - MLA Chandrapappa demands ministerial post

2008ರಲ್ಲಿ ಬಿಜೆಪಿಗೆ ನಮ್ಮ ಭೋವಿ ಸಮುದಾಯ ಬೆಂಬಲಿಸಿದ್ದು, ದಕ್ಷಿಣ ಭಾರತದಲ್ಲಿ ಬಿಜೆಪಿ ಬರಲು ನಮ್ಮ ಸಮುದಾಯ ತ್ಯಾಗ ಮಾಡಿದೆ. ಸಚಿವ ಸಂಪುಟ ವಿಸ್ತರಣೆ ವೇಳೆ ಭೋವಿ ಸಮುದಾಯಕ್ಕೆ ಆದ್ಯತೆ ನೀಡುತ್ತಾರೆಂಬ ನಂಬಿಕೆ ಇದೆ ಎಂದು ಹೊಳಲ್ಕೆರೆ ಶಾಸಕ ಚಂದ್ರಪ್ಪ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ.

Holalkere MLA Chandrapappa demands for ministerial post
ಮತ್ತೆ ಸಚಿವ ಸ್ಥಾನದ ಸದ್ದು...ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟ ಶಾಸಕ ಚಂದ್ರಪ್ಪ
author img

By

Published : Jan 4, 2020, 2:54 PM IST

ಚಿತ್ರದುರ್ಗ: 2008ರಲ್ಲಿ ಬಿಜೆಪಿಗೆ ನಮ್ಮ ಭೋವಿ ಸಮುದಾಯ ಬೆಂಬಲಿಸಿದ್ದು, ದಕ್ಷಿಣ ಭಾರತದಲ್ಲಿ ಬಿಜೆಪಿ ಬರಲು ನಮ್ಮ ಸಮುದಾಯ ತ್ಯಾಗ ಮಾಡಿದೆ. ಸಚಿವ ಸಂಪುಟ ವಿಸ್ತರಣೆ ವೇಳೆ ಭೋವಿ ಸಮುದಾಯಕ್ಕೆ ಆದ್ಯತೆ ನೀಡುತ್ತಾರೆಂಬ ನಂಬಿಕೆ ಇದೆ ಎಂದು ಹೊಳಲ್ಕೆರೆ ಶಾಸಕ ಚಂದ್ರಪ್ಪ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ.

ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟ ಶಾಸಕ ಚಂದ್ರಪ್ಪ

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ‌ ಅವರು, ಸಚಿವ ಸ್ಥಾನ ನೀಡುವ ವೇಳೆ ನನ್ನನ್ನು ಕಡೆಗಣಿಸುವುದಿಲ್ಲವೆಂಬ ಭರವಸೆ ಇದೆ. ನಾನೇ ಅಲ್ಲ ನಮ್ಮ ಸಮುದಾಯದಲ್ಲಿ ಯಾರಿಗೇ ಆದ್ಯತೆ ಕೊಟ್ಟರೂ ಸಂತೋಷ. ಪಕ್ಷೇತರ ಶಾಸಕರಾದ ಶಿವರಾಜ್ ತಂಗಡಗಿ, ಗೂಳಿಹಟ್ಟಿ ಶೇಖರ್, ವೆಂಕಟರಮಣಪ್ಪ ನನ್ನ ಮಾತು ಕೇಳಿ‌ ಬಿಜೆಪಿಗೆ‌ ಬೆಂಬಲಿಸಿದರು. ಸರ್ಕಾರ ಬರಲು ಕಾರಣರಾದ‌ ನಮ್ಮ ಸಮುದಾಯಕ್ಕೆ ಬಿಜೆಪಿ‌ ಅನ್ಯಾಯ ಮಾಡಲ್ಲ ಎಂಬ ಭರವಸೆ ಇದೆ ಎಂದರು.

ಇನ್ನು ಅನರ್ಹ ಶಾಸಕರ ಸಚಿವ ಸ್ಥಾನ ಕುರಿತು ಪ್ರತಿಕ್ರಿಯಿಸಿದ ಅವರು, ಅನರ್ಹ ಶಾಸಕರು ಸೋತಿದ್ದರು ಕೂಡ ಅವರಿಗೆ ಸಚಿವ ಸ್ಥಾನ ನೀಡಬೇಕು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಅವರೇ ‌ಕಾರಣರಾಗಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ನಮಗೆ ಹಾಗೂ ಅನರ್ಹರಾಗಿರುವವರಿಗೆ ಸಚಿವ ಸ್ಥಾನ ‌ನೀಡಬೇಕು ಎಂದು ಒತ್ತಾಯಿಸಿದರು.

ಪ್ರಧಾನಿ ಮೋದಿ ಮರುಭೂಮಿಯಲ್ಲಿ ಹಿಂದೂ ಭೂಮಿ ಕಟ್ಟಲಿ ಎಂಬ ಮಾಜಿ‌ ಸಚಿವ ಆಂಜನೇಯ ಹೇಳಿಕೆಗೆ ಅವರು ತಿರುಗೇಟು ನೀಡಿದರು. ಆತ ಐದು ವರ್ಷ ಅಧಿಕಾರ ಅನುಭವಿಸಿದ್ದ. ಈಗ ಅಧಿಕಾರ ಕಳೆದುಕೊಂಡು ಅವನಿಗೆ ಅರಳು ಮರಳಾಗಿದೆ ಎಂದು ವ್ಯಂಗ್ಯವಾಡಿದರು.

ಚಿತ್ರದುರ್ಗ: 2008ರಲ್ಲಿ ಬಿಜೆಪಿಗೆ ನಮ್ಮ ಭೋವಿ ಸಮುದಾಯ ಬೆಂಬಲಿಸಿದ್ದು, ದಕ್ಷಿಣ ಭಾರತದಲ್ಲಿ ಬಿಜೆಪಿ ಬರಲು ನಮ್ಮ ಸಮುದಾಯ ತ್ಯಾಗ ಮಾಡಿದೆ. ಸಚಿವ ಸಂಪುಟ ವಿಸ್ತರಣೆ ವೇಳೆ ಭೋವಿ ಸಮುದಾಯಕ್ಕೆ ಆದ್ಯತೆ ನೀಡುತ್ತಾರೆಂಬ ನಂಬಿಕೆ ಇದೆ ಎಂದು ಹೊಳಲ್ಕೆರೆ ಶಾಸಕ ಚಂದ್ರಪ್ಪ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ.

ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟ ಶಾಸಕ ಚಂದ್ರಪ್ಪ

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ‌ ಅವರು, ಸಚಿವ ಸ್ಥಾನ ನೀಡುವ ವೇಳೆ ನನ್ನನ್ನು ಕಡೆಗಣಿಸುವುದಿಲ್ಲವೆಂಬ ಭರವಸೆ ಇದೆ. ನಾನೇ ಅಲ್ಲ ನಮ್ಮ ಸಮುದಾಯದಲ್ಲಿ ಯಾರಿಗೇ ಆದ್ಯತೆ ಕೊಟ್ಟರೂ ಸಂತೋಷ. ಪಕ್ಷೇತರ ಶಾಸಕರಾದ ಶಿವರಾಜ್ ತಂಗಡಗಿ, ಗೂಳಿಹಟ್ಟಿ ಶೇಖರ್, ವೆಂಕಟರಮಣಪ್ಪ ನನ್ನ ಮಾತು ಕೇಳಿ‌ ಬಿಜೆಪಿಗೆ‌ ಬೆಂಬಲಿಸಿದರು. ಸರ್ಕಾರ ಬರಲು ಕಾರಣರಾದ‌ ನಮ್ಮ ಸಮುದಾಯಕ್ಕೆ ಬಿಜೆಪಿ‌ ಅನ್ಯಾಯ ಮಾಡಲ್ಲ ಎಂಬ ಭರವಸೆ ಇದೆ ಎಂದರು.

ಇನ್ನು ಅನರ್ಹ ಶಾಸಕರ ಸಚಿವ ಸ್ಥಾನ ಕುರಿತು ಪ್ರತಿಕ್ರಿಯಿಸಿದ ಅವರು, ಅನರ್ಹ ಶಾಸಕರು ಸೋತಿದ್ದರು ಕೂಡ ಅವರಿಗೆ ಸಚಿವ ಸ್ಥಾನ ನೀಡಬೇಕು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಅವರೇ ‌ಕಾರಣರಾಗಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ನಮಗೆ ಹಾಗೂ ಅನರ್ಹರಾಗಿರುವವರಿಗೆ ಸಚಿವ ಸ್ಥಾನ ‌ನೀಡಬೇಕು ಎಂದು ಒತ್ತಾಯಿಸಿದರು.

ಪ್ರಧಾನಿ ಮೋದಿ ಮರುಭೂಮಿಯಲ್ಲಿ ಹಿಂದೂ ಭೂಮಿ ಕಟ್ಟಲಿ ಎಂಬ ಮಾಜಿ‌ ಸಚಿವ ಆಂಜನೇಯ ಹೇಳಿಕೆಗೆ ಅವರು ತಿರುಗೇಟು ನೀಡಿದರು. ಆತ ಐದು ವರ್ಷ ಅಧಿಕಾರ ಅನುಭವಿಸಿದ್ದ. ಈಗ ಅಧಿಕಾರ ಕಳೆದುಕೊಂಡು ಅವನಿಗೆ ಅರಳು ಮರಳಾಗಿದೆ ಎಂದು ವ್ಯಂಗ್ಯವಾಡಿದರು.

Intro:ಮತ್ತೇ ಸಚಿವ ಸ್ಥಾನದ ಸದ್ದು...ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಾ ಶಾಸಕ ಚಂದ್ರಪ್ಪ

ಆ್ಯಂಕರ್:- 2008 ರಲ್ಲಿ ಬಿಜೆಪಿಗೆ ನಮ್ ಸಮುದಾಯ ಬೆಂಬಲಿಸಿದ್ದು, ದಕ್ಷಿಣ ಭಾರತದಲ್ಲಿ ಬಿಜೆಪಿ ಬರಲು ನಮ್ಮ ಸಮುದಾಯ ತ್ಯಾಗ ಮಾಡಿದೆ. ಸಚಿವ ಸಂಪುಟ ವಿಸ್ತರಣೆ ವೇಳೆ ಭೋವಿ ಸಮುದಾಯಕ್ಕೆ ಆದ್ಯತೆ ನೀಡುವುದರೆಂಬ ನಂಬಿಕೆ ಇದೆ ಎಂದು ಹೊಳಲ್ಕೆರೆ ಶಾಸಕ ಚಂದ್ರಪ್ಪ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ರು. ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ‌ ಅವರು ನನ್ನನ್ನು ಕಡೆಗಣಿಸಲ್ಲವೆಂಬ ಭರವಸೆ ಇದ್ದು, ಸಮುದಾಯದಲ್ಲಿ ಯಾರಿಗೆ ಆದ್ಯತೆ ಕೊಟ್ಟರೂ ಸಂತೋಷ. ಪಕ್ಷೇತರ ಶಾಸಕರಾದ ಶಿವರಾಜ್ ತಂಗಡಗಿ,ಗೂಳಿಹಟ್ಟಿ ಶೇಖರ್, ವೆಂಕಟರಮಣಪ್ಪ ನನ್ನ ಮಾತು ಕೇಳಿ‌ ಬಿಜೆಪಿ‌ ಬೆಂಬಲಿಸಿದ್ರು. ಸರ್ಕಾರ ಬರಲು ಕಾರಣರಾದ‌ ನಮ್ಮ ಸಮುದಾಯಕ್ಕೆ ಬಿಜೆಪಿ‌ ಅನ್ಯಾಯ ಮಾಡಲ್ಲ ಎಂದು ಭರವಸೆ ಇದೆ ಎಂದರು. ಇನ್ನೂ ಅನರ್ಹ ಶಾಸಕರ ಬಗ್ಗೆ ಪ್ರತಿಕ್ರಿಯಿಸಿದ ಅವರು ಅನರ್ಹ ಶಾಸಕರು ಸೋತಿದ್ದರು ಕೂಡ ಸಚಿವ ಸ್ಥಾನ ನೀಡಬೇಕು, ಅವರು ಬಿಜೆಪಿ ಸರ್ಕಾರ ಬರಲು ‌ಕಾರಣರಾಗಿದ್ದು, ಎಲ್ಲಾ ಸಮಾಜವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಹೆಚ್ಚಾಗಿರುವವರನ್ನು ತೆಗೆದು ನಮಗೆ ಹಾಗೂ ಅನರ್ಹರಾಗಿರುವವರಿಗೆ ಸಚಿವ ಸ್ಥಾನ ‌ನೀಡುವಂತೆ ಒತ್ತಾಯಿಸಿದರು. ಇನ್ನೂ ಮಾಜಿ‌ ಸಚಿವ ಆಂಜನೇಯ ವಿರುದ್ದ ವಾಗ್ದಾಳಿ ನಡೆಸಿದ ಅವರು ಪ್ರಧಾನಿ ಮೋದಿ ಮರುಭೂಮಿಯಲ್ಲಿ ಹಿಂದೂ ಭೂಮಿ ಕಟ್ಟಲಿ ಎಂಬ ಮಾತಿಗೆ ತಿರುಗೇಟು ನೀಡಿದ್ದು, ಆತನಿಗೆ ಅರಿವು ಮರುವಾಗಿದೆ ಐದು ವರ್ಷ ಅಧಿಕಾರ ಅನುಭವಿಸಿದ್ದನು.
ಈಗ ಅಧಿಕಾರ ಕಳೆದುಕೊಂಡು ಅರಳು ಮರಳಾಗಿದೆ ಎಂದು ವ್ಯಂಗ್ಯ ಮಾಡಿದರು.

ಫ್ಲೋ....

ಬೈಟ್01:- ಚಂದ್ರಪ್ಪ, ಹೊಳಲ್ಕೆರೆ ಶಾಸಕBody:Chandrappa Conclusion:Avb
ETV Bharat Logo

Copyright © 2025 Ushodaya Enterprises Pvt. Ltd., All Rights Reserved.