ETV Bharat / state

ಬರಡು ಭೂಮಿಯಲ್ಲೂ ಬಾಳೆ ಬೆಳೆದು ಮಾದರಿಯಾದ ವಿದ್ಯಾವಂತ ಯುವಕ

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗೌನಹಳ್ಳಿಯ ಯುವ ರೈತನೊಬ್ಬ ಬರದ ನಡುವೆಯೂ ಸಮೃದ್ಧವಾಗಿ ಬಾಳೆ ಬೆಳೆದು ಎಲ್ಲರ ಗಮನ ಸೆಳೆದಿದ್ದಾನೆ.

author img

By

Published : Jul 6, 2019, 10:46 PM IST

ಬರಡು ಭೂಮಿಯಲ್ಲೂ ಬಾಳೆ ಬೆಳೆದ ರೈತ

ಚಿತ್ರದುರ್ಗ: ಇವರ ಹೆಸರು ಶಂಭುಲಿಂಗೇಶ್. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗೌನಹಳ್ಳಿಯ ನಿವಾಸಿ. ಓದಿದ್ದು ಐಟಿಐ. ವಿದ್ಯಾಭ್ಯಾಸದ ನಂತರ ಉದ್ಯೋಗ ಅರಸಿ ಸಿಲಿಕಾನ್​ ಸಿಟಿಗೆ ತೆರಳಿದ್ರು. ಅದ್ಯಾಕೋ ಏನೋ ಮನಸ್ಸು ಮತ್ತೆ ಊರಿನತ್ತ ಹೊರಳಿತ್ತು. ಕೃಷಿ ಮಾಡು ಅಂತ ಕೈ ಬೀಸಿ ಕರೀತು. ಇಷ್ಟಾಗಿದ್ದೇ ತಡ. ಶಂಭು ಬೆಂಗಳೂರಿಗೆ ಬೈ ಹೇಳಿ ಊರಿಗೆ ವಾಪಸ್​​ ಆದ್ರು. ಇಲ್ಲೋ ಮಳೆ ಇಲ್ಲದೇ ಬರಗಾಲ. ಇಲ್ಲೇನಪ್ಪ ಮಾಡೋದು ಅಂತ ಯೋಚ್ನೇ ಮಾಡ್ದಾಗ ಹೊಳೆದಿದ್ದೇ ಬಾಳೆ ಬೆಳೆಯುವ ಐಡಿಯಾ. ಹೌದು ಇವತ್ತು ಸಮೃದ್ಧಿಯಾಗಿ ಬಾಳೆ ಬೆಳೆದು ಸುಂದರ ಬದುಕು ಕಟ್ಟಿಕೊಂಡಿದ್ದಾರೆ ಶಂಭುಲಿಂಗೇಶ್.

ಬರಡು ಭೂಮಿಯಲ್ಲೂ ಬಾಳೆ ಬೆಳೆದ ರೈತ

ಮಹಾನಗರ ತೊರೆದು ಸ್ವಗ್ರಾಮಕ್ಕೆ ಮರಳಿದ ಶಂಭುಲಿಂಗೇಶ್ ತಮ್ಮ ಪಿತ್ರಾರ್ಜಿತ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿ ಬರುವಂತಹ ನೀರಿನಲ್ಲಿ ಅಡಿಕೆ, ಬಾಳೆ ಗಿಡಗಳನ್ನು ನೆಟ್ಟಿದ್ದಾರೆ. ಅಲ್ಲದೇ ಸಾವಯವ ಕೃಷಿ ಮೂಲಕ ಸಮೃದ್ದವಾಗಿ ಬೆಳೆ ತೆಗೆಯುತ್ತಿದ್ದಾರೆ. ಎರಡು ಎಕರೆ ಪ್ರದೇಶದಲ್ಲಿ 2,150 ಪಚ ಬಾಳೆ, 1ಸಾವಿರ ಪುಟ್​ಬಾಳೆ ಗಿಡಗಳನ್ನು ನೆಟ್ಟಿದ್ದಾರೆ ಒಂದೊಂದು ಬಾಳೆ ಗೊನೆಯಿಂದ 35 ರಿಂದ 40 ಕೆಜಿಗೂ ಅಧಿಕ ಇಳುವರಿ ಪಡೆಯುವುದರ ಜೊತೆಗೆ ಲಕ್ಷಕ್ಕೂ ಅಧಿಕ ಲಾಭದ ಕನಸು ಕಾಣುತ್ತಿದ್ದಾರೆ. ಇನ್ನು ಭದ್ರಾ ನೀರು ಬಂದರೆ ನಮಗೆ ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೇ ಯುವಕರು ಕೃಷಿ ಕಡೆ ಹೆಚ್ಚಿನ ಗಮನಹರಿಸಿ ಎನ್ನುತ್ತಾರೆ ಶಂಭುಲಿಂಗೇಶ್ .

ಇದೀಗ ಫುಲ್ ಟೈಂ ರೈತನಾಗಿರುವ ಶಂಭು ಮೂರು ಎಕರೆ ಭೂಮಿಯಲ್ಲಿ ಲಾಭದಾಯಕ ಬಾಳೆಯನ್ನು ಬೆಳೆದು ಲಾಭಗಳಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಒಟ್ನಲ್ಲಿ ಕೆಲಸ ಸಿಗ್ತಿಲ್ಲ ಅಂತ ಕೊರಗುವ ಯುವಕರ ನಡುವೆ ಶಂಭುಲಿಂಗೇಶ್ ಗಮನ ಸೆಳೆದಿದ್ದಾರೆ.

ಚಿತ್ರದುರ್ಗ: ಇವರ ಹೆಸರು ಶಂಭುಲಿಂಗೇಶ್. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗೌನಹಳ್ಳಿಯ ನಿವಾಸಿ. ಓದಿದ್ದು ಐಟಿಐ. ವಿದ್ಯಾಭ್ಯಾಸದ ನಂತರ ಉದ್ಯೋಗ ಅರಸಿ ಸಿಲಿಕಾನ್​ ಸಿಟಿಗೆ ತೆರಳಿದ್ರು. ಅದ್ಯಾಕೋ ಏನೋ ಮನಸ್ಸು ಮತ್ತೆ ಊರಿನತ್ತ ಹೊರಳಿತ್ತು. ಕೃಷಿ ಮಾಡು ಅಂತ ಕೈ ಬೀಸಿ ಕರೀತು. ಇಷ್ಟಾಗಿದ್ದೇ ತಡ. ಶಂಭು ಬೆಂಗಳೂರಿಗೆ ಬೈ ಹೇಳಿ ಊರಿಗೆ ವಾಪಸ್​​ ಆದ್ರು. ಇಲ್ಲೋ ಮಳೆ ಇಲ್ಲದೇ ಬರಗಾಲ. ಇಲ್ಲೇನಪ್ಪ ಮಾಡೋದು ಅಂತ ಯೋಚ್ನೇ ಮಾಡ್ದಾಗ ಹೊಳೆದಿದ್ದೇ ಬಾಳೆ ಬೆಳೆಯುವ ಐಡಿಯಾ. ಹೌದು ಇವತ್ತು ಸಮೃದ್ಧಿಯಾಗಿ ಬಾಳೆ ಬೆಳೆದು ಸುಂದರ ಬದುಕು ಕಟ್ಟಿಕೊಂಡಿದ್ದಾರೆ ಶಂಭುಲಿಂಗೇಶ್.

ಬರಡು ಭೂಮಿಯಲ್ಲೂ ಬಾಳೆ ಬೆಳೆದ ರೈತ

ಮಹಾನಗರ ತೊರೆದು ಸ್ವಗ್ರಾಮಕ್ಕೆ ಮರಳಿದ ಶಂಭುಲಿಂಗೇಶ್ ತಮ್ಮ ಪಿತ್ರಾರ್ಜಿತ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿ ಬರುವಂತಹ ನೀರಿನಲ್ಲಿ ಅಡಿಕೆ, ಬಾಳೆ ಗಿಡಗಳನ್ನು ನೆಟ್ಟಿದ್ದಾರೆ. ಅಲ್ಲದೇ ಸಾವಯವ ಕೃಷಿ ಮೂಲಕ ಸಮೃದ್ದವಾಗಿ ಬೆಳೆ ತೆಗೆಯುತ್ತಿದ್ದಾರೆ. ಎರಡು ಎಕರೆ ಪ್ರದೇಶದಲ್ಲಿ 2,150 ಪಚ ಬಾಳೆ, 1ಸಾವಿರ ಪುಟ್​ಬಾಳೆ ಗಿಡಗಳನ್ನು ನೆಟ್ಟಿದ್ದಾರೆ ಒಂದೊಂದು ಬಾಳೆ ಗೊನೆಯಿಂದ 35 ರಿಂದ 40 ಕೆಜಿಗೂ ಅಧಿಕ ಇಳುವರಿ ಪಡೆಯುವುದರ ಜೊತೆಗೆ ಲಕ್ಷಕ್ಕೂ ಅಧಿಕ ಲಾಭದ ಕನಸು ಕಾಣುತ್ತಿದ್ದಾರೆ. ಇನ್ನು ಭದ್ರಾ ನೀರು ಬಂದರೆ ನಮಗೆ ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೇ ಯುವಕರು ಕೃಷಿ ಕಡೆ ಹೆಚ್ಚಿನ ಗಮನಹರಿಸಿ ಎನ್ನುತ್ತಾರೆ ಶಂಭುಲಿಂಗೇಶ್ .

ಇದೀಗ ಫುಲ್ ಟೈಂ ರೈತನಾಗಿರುವ ಶಂಭು ಮೂರು ಎಕರೆ ಭೂಮಿಯಲ್ಲಿ ಲಾಭದಾಯಕ ಬಾಳೆಯನ್ನು ಬೆಳೆದು ಲಾಭಗಳಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಒಟ್ನಲ್ಲಿ ಕೆಲಸ ಸಿಗ್ತಿಲ್ಲ ಅಂತ ಕೊರಗುವ ಯುವಕರ ನಡುವೆ ಶಂಭುಲಿಂಗೇಶ್ ಗಮನ ಸೆಳೆದಿದ್ದಾರೆ.

Intro:ಬರಡು ಭೂಮಿಯಲ್ಲೂ ಬಾಳೆ ಬೆಳೆದು ಇತರೆ ರೈತರಿಗೆ ಮಾದರಿಯಾದ ಯುವ ರೈತ
ವಿಶೇಷ ವರದಿ….
ಆ್ಯಂಕರ್ :- ಕೋಟೆನಾಡು ಚಿತ್ರದುರ್ಗ ಬರದಿಂದ ಕಗ್ಗೆಟ್ಟಿರುವ ಜಿಲ್ಲೆ. ಮಳೆ ಬೆಳೆ ಇಲ್ಲದೆ ರೈತರು ಹೈರಾಣಾಗಿದ್ದು, ಹನಿ ನೀರಿಗಾಗಿ ಕಾದುಕೂರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಅದ್ರೇ ಇಲ್ಲೊಬ್ಬ ವಿದ್ಯಾವಂತ ಯುವ ರೈತ ಬರಡು ಭೂಮಿಯಲ್ಲೇ ಬಾಳೆ ಬೆಳೆದು ಯಶಸ್ವಿಯಾಗಿದ್ದಾನೆ. ಪಾಳು ಬಿದ್ದಿದ್ದ ಮೂರು ಎಕರೆ ಭೂಮಿಯಲ್ಲಿ ಕೊಟ್ಟಿಗೆ ಗೊಬ್ಬರ ಬಳಸಿ ಸಮೃದ್ದ ಬಾಳೆ ಬೆಳೆಯನ್ನು ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದು, ಇತರರು ಹುಬ್ಬೆರಿಸುವಂತೆ ಮಾಡಿದ್ದಾನೆ.
ಲುಕ್,,,,,
ಫ್ಲೋ,,,,,
ವಾಯ್ಸ್01:- ಇತಂಹದೊಂದು ಅಪರೂಪದ ಸಂಗತಿಗೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಗೌನಹಳ್ಳಿ ಗ್ರಾಮ ಸಾಕ್ಷಿಯಾಗಿದೆ. ಇದೆ ಗ್ರಾಮದ ವಿದ್ಯಾವಂತ ಯುವ ರೈತ ಶಂಭುಲಿಂಗೇಶ್ ಪಾಳು ಬಿದ್ದಿದ್ದ ಜಮೀನಿನಲ್ಲಿ ಬಾಳೆ ಬೆಳೆದು ಯುವ ರೈತರಿಗೆ ಮಾದರಿಯಾಗಿ ಮನಸ್ಸಿದ್ದರೆ ಮಾರ್ಗವಿದೆ ಎಂಬುವುದನ್ನು ಶಂಭುಲಿಂಗೇಶ್ ಸಾಧಿಸಿ ತೋರಿಸಿದ್ದಾರೆ. ಕೆಲ ವರ್ಷಗಳ ಹಿಂದೆ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರು ಸೇರಿ ಖಾಸಗಿ ಕಂಪನಿಯಿಂದರಲ್ಲಿ ಉದ್ಯೋಗ ಮಾಡುತ್ತಿದ್ದ ಶಂಭುಲಿಂಗೇಶ್ ಗೆ ನಗರ ಜೀವನ ಬೇಸರ ತರಿಸಿತ್ತು. ಮಹಾನಗರವನ್ನು ತೊರೆದು ಸ್ವಗ್ರಾಮಕ್ಕೆ ಬಂದ ಶಂಭುಲಿಂಗೇಶ್ ತಮ್ಮ ಪೀತ್ರಾರ್ಜಿತ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿ ಬರುವಂತಹ ನೀರಿನಲ್ಲಿ ಅಡಿಕೆ, ಬಾಳೆ ಗಿಡಗಳನ್ನು ನೆಟ್ಟಿದ್ದಾರೆ. ಅಲ್ಲದೇ ಸಾವಯವ ಕೃಷಿಯನ್ನು ನೆಚ್ಚಿಕೊಂಡಿದ್ದ ಶಂಭುಲಿಂಗೇಶ್ ಇದೀಗ ಸಮೃದ್ದ ಬೆಳೆಯನ್ನು ಬೆಳೆಯುತ್ತಿದ್ದಾರೆ. ಎರಡು ಎಕರೆ ಪ್ರದೇಶದಲ್ಲಿ 2,15೦ ಪಚ್ಚ ಬಾಳೆ 1ಸಾವಿರ ಪುಟಬಾಳೆ ಗಿಡಗಳನ್ನು ನೆಟ್ಟು ಒಂದು ಬಾಳೆ ಗೊನೆ 35ರಿಂದ40 ಕೆಜಿಗೂ ಅಧಿಕ ಇಳುವರಿ ಪಡೆಯುವುದರ ಜೊತೆಗೆ ಲಕ್ಷಕ್ಕೂ ಅಧಿಕ ಲಾಭದ ಕನಸು ಕಾಣುತ್ತಿದ್ದಾರೆ. ಇನ್ನೂ ಭದ್ರ ನೀರು ಬಂದರೆ ನಮ್ಮಗೆ ಹೆಚ್ಚಿನ ಅನುಕೂಲವಾಗಲಿದೆ. ಯುವಕರು ಕೃಷಿ ಕಡೆ ಹೆಚ್ಚಿನ ಗಮನಹರಿಸಿ ಹೊಸ ಹೊಸ ಬೆಳೆಯನ್ನು ಬೆಳೆಯಬೇಕಿದೆ ಎನ್ನುತ್ತಾರೆ.
ಫ್ಲೋ,,,,,
ಬೈಟ್ : ಶಂಭುಲಿಂಗೇಶ್, ವಿದ್ಯಾವಂತ ಯುವ ಕೃಷಿಕ
ವಾಯ್ಸ್02 :¬- ಗೌನಹಳ್ಳಿ ಗ್ರಾಮದ ಶಂಭುಲಿಂಗೇಶ್ ಅವರ ಅಣ್ಣ ಚಿದಾನಂದ ಅವರು ತೋಟದಲ್ಲಿ ಅಡಿಕೆ ಬಾಳೆ ಬೆಳೆಯುವುದನ್ನು ಕಂಡ ಶಂಭುಲಿಂಗೇಶ್ ತಾನೂ ಕೂಡ ಯಾಕೆ ಕೃಷಿ ಮಾಡಿ ತೋಟದ ಮಾಲೀಕನಾಗಬೇಕೆಂಬ ಬಯಕೆಯನ್ನು ರೂಢಿಸಿಕೊಂಡು ತಾನು ಸಂಪಾದಿಸಿದ ಅಷ್ಟೊ ಇಷ್ಟೊ ಹಣವನ್ನು ಒಟ್ಟುಗೂಡಿಸಿ ಬೋರ್ ಕೊರೆಸಿ ಅಪ್ಪನ ಜೊತೆಗೂಡಿ ಇದೀಗ ಫುಲ್ ಟೈಂ ರೈತನಾಗಿದ್ದಾನೆ. ಇನ್ನೂ ಚಿದಾನಂದ ಅವರು ಕೊಟ್ಟಿಗೆ ಗೊಬ್ಬರ ಜೊತೆ ಕಾಲಕಾಲಕ್ಕೆ ನೀರು ಹಾಯಿಸಿ ಭರ್ಜರಿ ಬಾಳೆ ಬೆಳೆದು ಬಂಪರ್ ಲಾಭದ ನಿರೀಕ್ಷೆಯಲ್ಲಿದ್ದಾರೆ.
ಫ್ಲೋ,,,,,
ಬೈಟ್ 02:- ಚಿದಾನಂದ, ರೈತ ಗೌನಹಳ್ಳಿ
ವಾಯ್ಸ್ 03:- ಸಣ್ಣ ಹಿಡುವಳಿದಾರರಿಗೆ ಮಾದರಿಯಾಗಿರೋ ಛಲವಾದಿ ಶಂಭುಲಿಂಗೇಶ್ ಅವರ ಸಾಧನೆಗೆ ಈಗಾಗಲೇ ಉತ್ತಮ ಕೃಷಿನಾಗುತ್ತಿದ್ದಾರೆ. ಶಂಭು ಅವರು ಮೂರು ಎಕರೆ ಭೂಮಿಯಲ್ಲಿ ಲಾಭದಾಯಕ ಬಾಳೆಯನ್ನು ಬೆಳೆದು ಲಾಭಗಳಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಇವರ ತೋಟವನ್ನು ವೀಕ್ಷಿಸಲು ಜಿಲ್ಲೆಯ ಇತರ ಕೃಷಿಕರು ಕೂಡ ಆಗಮಿಸುತ್ತಿದ್ದಾರೆ. ತನ್ನಂತೆಯೇ ಇತರರು ಕೂಡ ಬಾಳೆನೇ ಅಂತೆನೂ ಅಲ್ಲ ಬೇರೆ ಬೆಳೆಯನ್ನು ಬೆಳೆದು ಲಾಭಗಳಿಸಲಿ ಎಂಬ ಉದ್ದೇಶ ಯುವ ರೈತ ಶಂಭು ಅವರ ಆಸೆ.
ಡಿ ನೂರುಲ್ಲಾ ಈಟಿವಿ ಭಾರತ ಚಿತ್ರದುರ್ಗ

Body:baleConclusion:bele special pkg

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.