ETV Bharat / state

ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಸ್ಥಳದ ಗೊಂದಲ: ಲಕ್ಷ ಲಕ್ಷ ಹಣ ವ್ಯರ್ಥ ಆರೋಪ - Chitradurga latest news

ಚಿತ್ರದುರ್ಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಈಗಾಗಲೇ ಅಧಿಕಾರಿಗಳು ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 4ರ ಬಳಿಯಲ್ಲಿರುವ ಕುಂಚಿಗನಾಳ್ ಬೆಟ್ಟ ನೆಲಸಮಗೊಳಿಸಿ, ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ತಯಾರಿನಡೆಸುತ್ತಿದ್ದು, ಆದರೆ ಗುಡ್ಡ ನೆಲಸಮಕ್ಕೆ ಅಧಿಕಾರಿಗಳು ಲಕ್ಷ ಲಕ್ಷ ಹಣ ಖರ್ಚು ಮಾಡುತ್ತಿದ್ದಾರೆಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

Chitradurga
ಚಿತ್ರದುರ್ಗ
author img

By

Published : Jan 21, 2021, 1:56 PM IST

Updated : Jan 21, 2021, 5:34 PM IST

ಚಿತ್ರದುರ್ಗ: ಜಿಲ್ಲಾಡಳಿತ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಕಳೆದ ಹಲವು ತಿಂಗಳಿನಿಂದ ಅಧಿಕಾರಿಗಳು ಜಾಗ ಹುಡುಕುವ ಪ್ರಯತ್ನ ಮಾಡುತ್ತಿದ್ದು, ಕೊನೆಗೂ ಕೋಟೆನಾಡಿನ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕುಂಚಿಗನಾಳ್ ಬೆಟ್ಟದ ಜಾಗ ನಿಗದಿ ಮಾಡಿ, ಈಗಾಗಲೇ ಗುಡ್ಡ ನೆಲಸಮಕ್ಕೆ ಅಧಿಕಾರಿಗಳು ಲಕ್ಷ ಲಕ್ಷ ಹಣ ಖರ್ಚು ಮಾಡುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ. ಅದ್ರೆ ಕಟ್ಟಡ ನಿರ್ಮಾಣದ ಜಾಗದ ವಿಚಾರವಾಗಿ ಮತ್ತೆ ಗೊಂದಲ ಶುರುವಾಗಿದೆ.

ಹೌದು, ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 4ರ ಬಳಿಯಲ್ಲಿರುವ ಕುಂಚಿಗನಾಳ್ ಬೆಟ್ಟ ನೆಲಸಮಗೊಳಿಸಿ, ಜಿಲ್ಲಾಡಳಿತ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ಒಟ್ಟು 40 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಕಟ್ಟಡ ನಿರ್ಮಾಣಕ್ಕೆ ಅಧಿಕಾರಿಗಳು ಯೋಜನೆ ಹಾಕಿಕೊಂಡಿದ್ದರು. ಇತ್ತ ಸರ್ಕಾರ 45 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲು ಹಸಿರು ನಿಶಾನೆ ತೋರಿಸಿತು. ಈಗಾಗಲೇ ಮುಂಗಡವಾಗಿ 25 ಕೋಟಿ ರೂಪಾಯಿ ಹಣ ಕೂಡ ಬಿಡುಗಡೆ ಮಾಡಿದೆ.

ಡಿಸಿ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಸ್ಥಳದ ಗೊಂದಲ

ಕಳೆದ ನಾಲ್ಕೈದು ತಿಂಗಳಿನಿಂದ ಬೆಟ್ಟ ನೆಲಸಮ ಮಾಡುವ ಕಾರ್ಯ ಭರದಿಂದ ಸಾಗಿದೆ. ಬೆಟ್ಟದ ಮಣ್ಣನ್ನು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಪಿಎನ್​ಸಿ ಬಳಸಿಕೊಳ್ಳಲಾಗುತ್ತಿತ್ತು. ಸದ್ಯ ಬೆಟ್ಟ ನೆಲಸಮ ಮಾಡುವ ಜಾಗದಲ್ಲಿ ದೊಡ್ಡ ಬೃಹದಾಕಾರದ ಬಂಡೆ ಕಾಣಿಸಿಕೊಂಡಿದೆ ಎಂದು ತೆರವಿಗೆ ಕೋಟಿ ಕೋಟಿ ಹಣ ಖರ್ಚಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮತ್ತೆ ಬೇರೆಡೆಗೆ ಸ್ಥಳಕ್ಕೆ ಜಿಲ್ಲಾಡಳಿತ ಕಟ್ಟಡ ನಿರ್ಮಿಸುಲು ಅಧಿಕಾರಿಗಳು ಓಡಾಟ ನಡೆಸುತ್ತಿರುವುದಕ್ಕೆ ಸಾರ್ವಜನಿಕರು ಗರಂ ಆಗುವಂತಾಗಿದೆ.

ಈಗಾಗಲೇ ಅರ್ಧಕ್ಕಿಂತ ಹೆಚ್ಚು ಗುಡ್ಡ ಅಗೆಯಲಾಗಿದೆ. ಮಣ್ಣು ಖಾಲಿ ಮಾಡಿ ಅಧಿಕಾರಿಗಳು ನಿಗದಿಪಡಿಸಿದ ಸ್ಥಳದಲ್ಲಿ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣ ಮಾಡಲಾಗುವುದಿಲ್ಲ ಎಂದು ಅಸಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಇತ್ತ ಚಿತ್ರದುರ್ಗ ನಗರವಿಡೀ ಸುತ್ತಾಡಿ ಕಟ್ಟಡ ನಿರ್ಮಾಣಕ್ಕೆ ಬೇರೆ ಜಾಗದ ಹುಡುಕಾಟದಲ್ಲಿ ತೊಡಗಿದ್ದಾರೆ.

ಈ ಕುರಿತು ಎಚ್ಚರಿಸಿದ 'ಈಟಿವಿ ಭಾರತ'

ಇತ್ತ ಕುಂಚಿಗನಾಳ್ ಬೆಟ್ಟದಲ್ಲಿ ಬಂಡೆ ಕಾಣಿಸಿಕೊಂಡಿದೆ ಅದನ್ನು ತೆರವು ಮಾಡಲು ಕೋಟಿಕೋಟಿ ಹಣ ಖರ್ಚಾಗುತ್ತೆ ಹೀಗಾಗಿ ಜಿಲ್ಲಾಡಳಿತಕ್ಕೆ ಮತ್ತೆ ಐದು ಕೋಟಿ ರೂಪಾಯಿ ಹೊರೆಯಾಗುತ್ತದೆ ಎಂದು ಕಳೆದ ತಿಂಗಳಷ್ಟೇ 'ಈಟಿವಿ ಭಾರತ' ವರದಿ ಮಾಡಿತ್ತು. ಅಲ್ಲದೆ ಅಪಾರ ಪ್ರಮಾಣದ ನೈಸರ್ಗಿಕ ಸಂಪತ್ತು ಲೂಟಿ ಮಾಡುತ್ತಿರುವ ಆರೋಪದ ಬಗ್ಗೆ ವಿಸ್ತೃತ ವರದಿ ಬಿತ್ತರಿಸಿತ್ತು. ಚಿತ್ರದುರ್ಗಕ್ಕೆ ದ್ವಾರ ಬಾಗಿಲುನಂತಿದ್ದ ಕುಂಚನಾಳ್ ಬೆಟ್ಟ ಅರ್ಧಂಬರ್ಧ ಬಗೆದ ಬಳಿಕ ಅಧಿಕಾರಿಗಳು ಅಸಾಯಕತೆ ತೋಡಿಕೊಳ್ಳುತ್ತಿರುವುದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇತ್ತ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಕುಮ್ಮಕ್ಕಿನಿಂದ ಬೆಟ್ಟದ ಅಪಾರ ಸಂಪತ್ತು ಲೂಟಿಯಾಗುತ್ತಿದೆ ಎಂದು ಪರಿಸರ ಪ್ರೇಮಿಗಳು ಆರೋಪ ಮಾಡುತ್ತಿದ್ದಾರೆ.

ಕಟ್ಟಡ ನಿರ್ಮಾಣದ ಕುರಿತು ಜಿಲ್ಲಾಧಿಕಾರಿ ಹೇಳೋದೇನು?

ಜಿಲ್ಲಾಧಿಕಾರಿ ಕಟ್ಟಡ ಸಂಕೀರ್ಣ ನಿರ್ಮಾಣ ಕುರಿತು ಡಿಸಿ ಕವಿತಾ ಮನ್ನಿಕೆರಿ ಅವರನ್ನು ಕೇಳಿದಾಗ, ಈಗಾಗಲೇ ನಿಗದಿಪಡಿಸಿದ ಜಾಗದಲ್ಲೇ ಬೃಹತ್ತಾಕಾರದ ಕಲ್ಲು ಬಂಡೆ ಕಾಣಿಸಿಕೊಂಡಿದೆ. ತೆರವು ಮಾಡಲು ಹಣ ವ್ಯಯ ಮಾಡಬೇಕಾಗುತ್ತದೆ ಎಂದು ತಾಂತ್ರಿಕರು ತಿಳಿಸಿದ್ದಾರೆ. ಈ ಕುರಿತು ಕಳೆದ ವಾರ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಈಗಾಗಲೇ ಮಣ್ಣು ಸರಬರಾಜು ಮಾಡುತ್ತಿರುವ ಪಿಎನ್​​ಸಿ ಕಂಪನಿಯಿಂದ ಗುಡ್ಡದಲ್ಲಿ ಕಾಣಿಸಿಕೊಂಡ ಬೃಹತ್ತಾಕಾರದ ಬಂಡೆ ತೆರವು ಮಾಡುವಂತೆ ಸೂಚಿಸುವಂತೆ ಅಧಿಕಾರಿಗಳಿಗೆ ಹೇಳಿದ್ದಾರಂತೆ. 25 ಕೋಟಿ ರೂಪಾಯಿ ಬಿಡುಗಡೆಯಾದ ಹಣದಲ್ಲೇ ಬಂಡೆ ತೆರೆವಿಗೆ ಅವಕಾಶವಿಲ್ಲ ಎನ್ನುತ್ತಾರೆ. ಚಿತ್ರದುರ್ಗ ನಗರದಲ್ಲಿ ಇರುವ ಎಂಟು ಎಕರೆ ಜಾಗ ಕೂಡ ಗೊಂದಲದಲ್ಲಿದೆಯಂತೆ. ನಗರ ಇರುವ ಜಾಗದ ಕುರಿತು ಜಿಲ್ಲಾಧಿಕಾರಿ ನಗರಸಭೆ ಅಧಿಕಾರಿಗಳಿಗೆ ಮಾಹಿತಿ ಕೇಳಿ ಕಾಗದಪತ್ರಗಳನ್ನು ನೀಡುವಂತೆ ಸೂಚಿಸಿದ್ದಾರಂತೆ.

ಬಂಡೆ ತರೆವಿಗೆ ಕಂಪನಿ ಒಪ್ಪಿಗೆ ನೀಡುತ್ತಾ?

ಬಂಡೆ ತೆರವಿಗೆ ಕೋಟಿ ಕೋಟಿ ಖರ್ಚು ಮಾಡಲು ಪಿಎನ್‌ಸಿ ಕಂಪನಿ ಒಪ್ಪಿಕೊಳ್ಳುತ್ತಾ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ. ತಮ್ಮ ಖರ್ಚಿನಲ್ಲೇ ಸಲೀಸಾಗಿ ಬಂಡೆ ತೆರವಿಗೆ ಮುಂದಾಗುವುದಿಲ್ಲ. ಮತ್ತೆ ಕೋಟಿ‌‌ ಕೋಟಿ ದುಡ್ಡು ಜಿಲ್ಲಾಡಳಿತಕ್ಕೆ ಹೊರೆಯಾಗಲಿದೆ ಎಂಬುದು ಪರಿಸರ ಪ್ರೇಮಿಗಳ ಮಾತಾಗಿದೆ.

ಸಾರ್ವಜನಿಕರ ಆಕ್ರೋಶವೇನು?

ಜಿಲ್ಲಾಡಳಿತ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಅಧಿಕಾರಿಗಳು ನಿಗದಿಪಡಿಸಿದ ಸ್ಥಳದಲ್ಲಿ ಮಣ್ಣು ಸರಬರಾಜು ಮಾಡುತ್ತಿರುವುದಿಂದ ಪರಿಸರ ನಾಶವಾಗುತ್ತಿದೆ ಎಂಬ ಆಕ್ರೋಶ ಒಂದು ಕಡೆಯಾದರೆ, ಲಕ್ಷ ಲಕ್ಷ ಬೆಲೆಬಾಳುವ ಮಣ್ಣು ಹಗಲು ದರೋಡೆಯಾಗಿದೆ ಎನ್ನುವುದು ಪರಿಸರ ಪ್ರೇಮಿಗಳ ಆರೋಪವಾಗಿದೆ. ಈ ಮೊದಲೇ ತಂತ್ರಜ್ಞರು ಬಂಡೆ ಇರುವ ಕುರಿತಾಗಿ ಮಾಹಿತಿಯನ್ನು ಏಕೆ ನೀಡಿಲ್ಲವೆಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸರ್ಕಾರದ ದುಡ್ಡನ್ನು ಪೋಲು ಮಾಡುವ ಬದಲು ಕಚೇರಿ ಸಂಕೀರ್ಣ ನಿರ್ಮಾಣದ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.

ಚಿತ್ರದುರ್ಗ: ಜಿಲ್ಲಾಡಳಿತ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಕಳೆದ ಹಲವು ತಿಂಗಳಿನಿಂದ ಅಧಿಕಾರಿಗಳು ಜಾಗ ಹುಡುಕುವ ಪ್ರಯತ್ನ ಮಾಡುತ್ತಿದ್ದು, ಕೊನೆಗೂ ಕೋಟೆನಾಡಿನ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕುಂಚಿಗನಾಳ್ ಬೆಟ್ಟದ ಜಾಗ ನಿಗದಿ ಮಾಡಿ, ಈಗಾಗಲೇ ಗುಡ್ಡ ನೆಲಸಮಕ್ಕೆ ಅಧಿಕಾರಿಗಳು ಲಕ್ಷ ಲಕ್ಷ ಹಣ ಖರ್ಚು ಮಾಡುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ. ಅದ್ರೆ ಕಟ್ಟಡ ನಿರ್ಮಾಣದ ಜಾಗದ ವಿಚಾರವಾಗಿ ಮತ್ತೆ ಗೊಂದಲ ಶುರುವಾಗಿದೆ.

ಹೌದು, ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ 4ರ ಬಳಿಯಲ್ಲಿರುವ ಕುಂಚಿಗನಾಳ್ ಬೆಟ್ಟ ನೆಲಸಮಗೊಳಿಸಿ, ಜಿಲ್ಲಾಡಳಿತ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ಒಟ್ಟು 40 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಕಟ್ಟಡ ನಿರ್ಮಾಣಕ್ಕೆ ಅಧಿಕಾರಿಗಳು ಯೋಜನೆ ಹಾಕಿಕೊಂಡಿದ್ದರು. ಇತ್ತ ಸರ್ಕಾರ 45 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲು ಹಸಿರು ನಿಶಾನೆ ತೋರಿಸಿತು. ಈಗಾಗಲೇ ಮುಂಗಡವಾಗಿ 25 ಕೋಟಿ ರೂಪಾಯಿ ಹಣ ಕೂಡ ಬಿಡುಗಡೆ ಮಾಡಿದೆ.

ಡಿಸಿ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಸ್ಥಳದ ಗೊಂದಲ

ಕಳೆದ ನಾಲ್ಕೈದು ತಿಂಗಳಿನಿಂದ ಬೆಟ್ಟ ನೆಲಸಮ ಮಾಡುವ ಕಾರ್ಯ ಭರದಿಂದ ಸಾಗಿದೆ. ಬೆಟ್ಟದ ಮಣ್ಣನ್ನು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಪಿಎನ್​ಸಿ ಬಳಸಿಕೊಳ್ಳಲಾಗುತ್ತಿತ್ತು. ಸದ್ಯ ಬೆಟ್ಟ ನೆಲಸಮ ಮಾಡುವ ಜಾಗದಲ್ಲಿ ದೊಡ್ಡ ಬೃಹದಾಕಾರದ ಬಂಡೆ ಕಾಣಿಸಿಕೊಂಡಿದೆ ಎಂದು ತೆರವಿಗೆ ಕೋಟಿ ಕೋಟಿ ಹಣ ಖರ್ಚಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮತ್ತೆ ಬೇರೆಡೆಗೆ ಸ್ಥಳಕ್ಕೆ ಜಿಲ್ಲಾಡಳಿತ ಕಟ್ಟಡ ನಿರ್ಮಿಸುಲು ಅಧಿಕಾರಿಗಳು ಓಡಾಟ ನಡೆಸುತ್ತಿರುವುದಕ್ಕೆ ಸಾರ್ವಜನಿಕರು ಗರಂ ಆಗುವಂತಾಗಿದೆ.

ಈಗಾಗಲೇ ಅರ್ಧಕ್ಕಿಂತ ಹೆಚ್ಚು ಗುಡ್ಡ ಅಗೆಯಲಾಗಿದೆ. ಮಣ್ಣು ಖಾಲಿ ಮಾಡಿ ಅಧಿಕಾರಿಗಳು ನಿಗದಿಪಡಿಸಿದ ಸ್ಥಳದಲ್ಲಿ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣ ಮಾಡಲಾಗುವುದಿಲ್ಲ ಎಂದು ಅಸಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಇತ್ತ ಚಿತ್ರದುರ್ಗ ನಗರವಿಡೀ ಸುತ್ತಾಡಿ ಕಟ್ಟಡ ನಿರ್ಮಾಣಕ್ಕೆ ಬೇರೆ ಜಾಗದ ಹುಡುಕಾಟದಲ್ಲಿ ತೊಡಗಿದ್ದಾರೆ.

ಈ ಕುರಿತು ಎಚ್ಚರಿಸಿದ 'ಈಟಿವಿ ಭಾರತ'

ಇತ್ತ ಕುಂಚಿಗನಾಳ್ ಬೆಟ್ಟದಲ್ಲಿ ಬಂಡೆ ಕಾಣಿಸಿಕೊಂಡಿದೆ ಅದನ್ನು ತೆರವು ಮಾಡಲು ಕೋಟಿಕೋಟಿ ಹಣ ಖರ್ಚಾಗುತ್ತೆ ಹೀಗಾಗಿ ಜಿಲ್ಲಾಡಳಿತಕ್ಕೆ ಮತ್ತೆ ಐದು ಕೋಟಿ ರೂಪಾಯಿ ಹೊರೆಯಾಗುತ್ತದೆ ಎಂದು ಕಳೆದ ತಿಂಗಳಷ್ಟೇ 'ಈಟಿವಿ ಭಾರತ' ವರದಿ ಮಾಡಿತ್ತು. ಅಲ್ಲದೆ ಅಪಾರ ಪ್ರಮಾಣದ ನೈಸರ್ಗಿಕ ಸಂಪತ್ತು ಲೂಟಿ ಮಾಡುತ್ತಿರುವ ಆರೋಪದ ಬಗ್ಗೆ ವಿಸ್ತೃತ ವರದಿ ಬಿತ್ತರಿಸಿತ್ತು. ಚಿತ್ರದುರ್ಗಕ್ಕೆ ದ್ವಾರ ಬಾಗಿಲುನಂತಿದ್ದ ಕುಂಚನಾಳ್ ಬೆಟ್ಟ ಅರ್ಧಂಬರ್ಧ ಬಗೆದ ಬಳಿಕ ಅಧಿಕಾರಿಗಳು ಅಸಾಯಕತೆ ತೋಡಿಕೊಳ್ಳುತ್ತಿರುವುದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇತ್ತ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಕುಮ್ಮಕ್ಕಿನಿಂದ ಬೆಟ್ಟದ ಅಪಾರ ಸಂಪತ್ತು ಲೂಟಿಯಾಗುತ್ತಿದೆ ಎಂದು ಪರಿಸರ ಪ್ರೇಮಿಗಳು ಆರೋಪ ಮಾಡುತ್ತಿದ್ದಾರೆ.

ಕಟ್ಟಡ ನಿರ್ಮಾಣದ ಕುರಿತು ಜಿಲ್ಲಾಧಿಕಾರಿ ಹೇಳೋದೇನು?

ಜಿಲ್ಲಾಧಿಕಾರಿ ಕಟ್ಟಡ ಸಂಕೀರ್ಣ ನಿರ್ಮಾಣ ಕುರಿತು ಡಿಸಿ ಕವಿತಾ ಮನ್ನಿಕೆರಿ ಅವರನ್ನು ಕೇಳಿದಾಗ, ಈಗಾಗಲೇ ನಿಗದಿಪಡಿಸಿದ ಜಾಗದಲ್ಲೇ ಬೃಹತ್ತಾಕಾರದ ಕಲ್ಲು ಬಂಡೆ ಕಾಣಿಸಿಕೊಂಡಿದೆ. ತೆರವು ಮಾಡಲು ಹಣ ವ್ಯಯ ಮಾಡಬೇಕಾಗುತ್ತದೆ ಎಂದು ತಾಂತ್ರಿಕರು ತಿಳಿಸಿದ್ದಾರೆ. ಈ ಕುರಿತು ಕಳೆದ ವಾರ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಈಗಾಗಲೇ ಮಣ್ಣು ಸರಬರಾಜು ಮಾಡುತ್ತಿರುವ ಪಿಎನ್​​ಸಿ ಕಂಪನಿಯಿಂದ ಗುಡ್ಡದಲ್ಲಿ ಕಾಣಿಸಿಕೊಂಡ ಬೃಹತ್ತಾಕಾರದ ಬಂಡೆ ತೆರವು ಮಾಡುವಂತೆ ಸೂಚಿಸುವಂತೆ ಅಧಿಕಾರಿಗಳಿಗೆ ಹೇಳಿದ್ದಾರಂತೆ. 25 ಕೋಟಿ ರೂಪಾಯಿ ಬಿಡುಗಡೆಯಾದ ಹಣದಲ್ಲೇ ಬಂಡೆ ತೆರೆವಿಗೆ ಅವಕಾಶವಿಲ್ಲ ಎನ್ನುತ್ತಾರೆ. ಚಿತ್ರದುರ್ಗ ನಗರದಲ್ಲಿ ಇರುವ ಎಂಟು ಎಕರೆ ಜಾಗ ಕೂಡ ಗೊಂದಲದಲ್ಲಿದೆಯಂತೆ. ನಗರ ಇರುವ ಜಾಗದ ಕುರಿತು ಜಿಲ್ಲಾಧಿಕಾರಿ ನಗರಸಭೆ ಅಧಿಕಾರಿಗಳಿಗೆ ಮಾಹಿತಿ ಕೇಳಿ ಕಾಗದಪತ್ರಗಳನ್ನು ನೀಡುವಂತೆ ಸೂಚಿಸಿದ್ದಾರಂತೆ.

ಬಂಡೆ ತರೆವಿಗೆ ಕಂಪನಿ ಒಪ್ಪಿಗೆ ನೀಡುತ್ತಾ?

ಬಂಡೆ ತೆರವಿಗೆ ಕೋಟಿ ಕೋಟಿ ಖರ್ಚು ಮಾಡಲು ಪಿಎನ್‌ಸಿ ಕಂಪನಿ ಒಪ್ಪಿಕೊಳ್ಳುತ್ತಾ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ. ತಮ್ಮ ಖರ್ಚಿನಲ್ಲೇ ಸಲೀಸಾಗಿ ಬಂಡೆ ತೆರವಿಗೆ ಮುಂದಾಗುವುದಿಲ್ಲ. ಮತ್ತೆ ಕೋಟಿ‌‌ ಕೋಟಿ ದುಡ್ಡು ಜಿಲ್ಲಾಡಳಿತಕ್ಕೆ ಹೊರೆಯಾಗಲಿದೆ ಎಂಬುದು ಪರಿಸರ ಪ್ರೇಮಿಗಳ ಮಾತಾಗಿದೆ.

ಸಾರ್ವಜನಿಕರ ಆಕ್ರೋಶವೇನು?

ಜಿಲ್ಲಾಡಳಿತ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಅಧಿಕಾರಿಗಳು ನಿಗದಿಪಡಿಸಿದ ಸ್ಥಳದಲ್ಲಿ ಮಣ್ಣು ಸರಬರಾಜು ಮಾಡುತ್ತಿರುವುದಿಂದ ಪರಿಸರ ನಾಶವಾಗುತ್ತಿದೆ ಎಂಬ ಆಕ್ರೋಶ ಒಂದು ಕಡೆಯಾದರೆ, ಲಕ್ಷ ಲಕ್ಷ ಬೆಲೆಬಾಳುವ ಮಣ್ಣು ಹಗಲು ದರೋಡೆಯಾಗಿದೆ ಎನ್ನುವುದು ಪರಿಸರ ಪ್ರೇಮಿಗಳ ಆರೋಪವಾಗಿದೆ. ಈ ಮೊದಲೇ ತಂತ್ರಜ್ಞರು ಬಂಡೆ ಇರುವ ಕುರಿತಾಗಿ ಮಾಹಿತಿಯನ್ನು ಏಕೆ ನೀಡಿಲ್ಲವೆಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸರ್ಕಾರದ ದುಡ್ಡನ್ನು ಪೋಲು ಮಾಡುವ ಬದಲು ಕಚೇರಿ ಸಂಕೀರ್ಣ ನಿರ್ಮಾಣದ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.

Last Updated : Jan 21, 2021, 5:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.