ETV Bharat / state

ಐಎಂಎ ಮೋಸದ ಜಾಲ... ಕೋಟೆನಾಡಿನ ಜನರಿಗೂ ಮಂಕು ಬೂದಿ ಎರಚಿದ ಮನ್ಸೂರ್​​

author img

By

Published : Jun 14, 2019, 2:15 PM IST

ಐಎಂಎ ವಂಚನೆ ಪ್ರಕರಣದಲ್ಲಿ ಚಿತ್ರದುರ್ಗದ 200ಕ್ಕೂ ಹೆಚ್ಚು ಜನ ಮೋಸ ಹೋಗಿದ್ದು, ಹಣ ವಾಪಸ್​ಗಾಗಿ ಎಸ್ಪಿ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ.

ದೂರು ದಾಖಲು

ಚಿತ್ರದುರ್ಗ: ಐಎಂಎ ಕಂಪನಿಯ ವಂಚನೆಯ ಜಾಲ ರಾಜ್ಯಾದ್ಯಂತ ಹಬ್ಬಿದ್ದು, ಇದೀಗ ಕೋಟೆನಾಡು ಚಿತ್ರದುರ್ಗದಲ್ಲೂ ಮೋಸ ಹೋದವರು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಪ್ರತಿ ತಿಂಗಳು ಹೆಚ್ಚಿನ ಬಡ್ಡಿ ಸಿಗುತ್ತದೆ ಎಂಬ ಆಸೆಯಿಂದ 200ಕ್ಕೂ ಹೆಚ್ಚು ಜನರು ಹಣ ತೊಡಗಿಸಿದ್ದು, ಈಗ ಹಣ ಬರುವುದಿಲ್ಲ ಅಂತಾ ತಿಳಿದು ಎಸ್ಪಿ ಕಚೇರಿ ಮುಂದೆ ಗೋಳಿಡುತ್ತಿದ್ದಾರೆ.

ಖಾನ್​ ನಂಬಿ ಕೆಟ್ಟ ಕೋಟೆ ನಾಡಿನ ಮಂದಿ

ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣ ದಿನೇ ದಿನೇ ಹಲವು ತಿರುವು ಪಡೆದುಕೊಳ್ಳುತ್ತಿದೆ. ಐಎಂಎ ವಿರುದ್ಧ ಈಗಾಗಲೇ ಸಾವಿರಾರು ದೂರುಗಳು ದಾಖಲಾಗಿದ್ದು, ಈ ಮೋಸ ಜಾಲಕ್ಕೆ ಕೋಟೆನಾಡಿನ ಜನ್ರು ಕೂಡ ಬಲಿಯಾಗಿದ್ದಾರೆ. 200ಕ್ಕೂ ಹೆಚ್ಚು ಜನರು ಎಸ್ಪಿ ಕಚೇರಿಗೆ ದೌಡಾಯಿಸಿ ಪ್ರಕರಣ ದಾಖಲಿಸಿದ್ದಾರೆ.

ಮೊಹಮದ್ ನೂರುಲ್ಲಾ ಎಂಬುವರು ಕೂಡ ಇದೇ ಕಂಪನಿಯಲ್ಲೇ ಕೆಲಸ ಮಾಡಿಕೊಂಡು ಐಎಂಎನಲ್ಲಿ ದುಡ್ಡನ್ನ ಹೂಡಿಕೆ ಮಾಡಿ ಮೋಸ ಹೋಗಿರುವುದಾಗಿ ಅಳಲು ತೋಡಿಕೊಂಡಿದ್ದಾರೆ.

ಐಎಂಎ ನಲ್ಲಿ ಹಣ ತೊಡಗಿಸಿದ ಜನರಿಗೆ ಮೊದಲು ಮಾಸಿಕವಾಗಿ 2500 ರೂಪಾಯಿ ಬಡ್ಡಿ ನೀಡುತ್ತಿದ್ದ ಸಂಸ್ಥೆ ಕ್ರಮೇಣವಾಗಿ ಕಡಿಮೆ ಮಾಡುತ್ತಾ ಬಂದಿತ್ತು. ಕಳೆದ ಮೂರು ತಿಂಗಳಿನಿಂದ ಹಣ ಬರುವುದೇ ನಿಂತಿತ್ತು. ಹೀಗಾಗಿ ಸಂಸ್ಥೆ ಬಗ್ಗೆ ವಿಚಾರಿಸಿದಾಗ, ಬೀಗ ಜಡಿದು ನಾಪತ್ತೆಯಾಗಿರುವುದು ಗೊತ್ತಾಗಿದೆ. ಇದರಿಂದ ಆತಂಕಕ್ಕೊಳಗಾಗಿರುವ ಹೂಡಿಕೆದಾರರು, ಚಿತ್ರದುರ್ಗ ಎಸ್ಪಿ ಕಚೇರಿಗೆ ಭೇಟಿ ನೀಡಿ 200ಕ್ಕೂ ಹೆಚ್ಚು ಪ್ರತ್ಯೇಕ ದೂರು‌ ನೀಡಿದ್ದಾರೆ. ಅಲ್ಲದೆ ತಮ್ಮ ಹಣ ವಾಪಸ್ ಕೊಡಿಸಿ ಎಂದು ಮನವಿ ಮಾಡ್ತಿದಾರೆ.

ಒಟ್ಟಾರೆ ಐಎಂಎ ಮಾಲೀಕನ ನಂಬಿ ನೋಡಿ ಅದೆಷ್ಟೊ ಜನ ಹಣ ಹೂಡಿಕೆ ಮಾಡಿ ಮೋಸಹೋಗಿದ್ದಾರೆ. ವಂಚಕ ಮೊಹಮದ್ ಮನ್ಸೂರ್ ಖಾನ್ ಸರಿಯಾದ ಶಿಕ್ಷೆಯಾಗಿ ತಮ್ಮ ಹಣ ವಾಪಸ್ ಬರಲಿ ಅನ್ನೋದು ಬಡ ಜನರ ಕೂಗಾಗಿದೆ‌.

ಚಿತ್ರದುರ್ಗ: ಐಎಂಎ ಕಂಪನಿಯ ವಂಚನೆಯ ಜಾಲ ರಾಜ್ಯಾದ್ಯಂತ ಹಬ್ಬಿದ್ದು, ಇದೀಗ ಕೋಟೆನಾಡು ಚಿತ್ರದುರ್ಗದಲ್ಲೂ ಮೋಸ ಹೋದವರು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಪ್ರತಿ ತಿಂಗಳು ಹೆಚ್ಚಿನ ಬಡ್ಡಿ ಸಿಗುತ್ತದೆ ಎಂಬ ಆಸೆಯಿಂದ 200ಕ್ಕೂ ಹೆಚ್ಚು ಜನರು ಹಣ ತೊಡಗಿಸಿದ್ದು, ಈಗ ಹಣ ಬರುವುದಿಲ್ಲ ಅಂತಾ ತಿಳಿದು ಎಸ್ಪಿ ಕಚೇರಿ ಮುಂದೆ ಗೋಳಿಡುತ್ತಿದ್ದಾರೆ.

ಖಾನ್​ ನಂಬಿ ಕೆಟ್ಟ ಕೋಟೆ ನಾಡಿನ ಮಂದಿ

ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣ ದಿನೇ ದಿನೇ ಹಲವು ತಿರುವು ಪಡೆದುಕೊಳ್ಳುತ್ತಿದೆ. ಐಎಂಎ ವಿರುದ್ಧ ಈಗಾಗಲೇ ಸಾವಿರಾರು ದೂರುಗಳು ದಾಖಲಾಗಿದ್ದು, ಈ ಮೋಸ ಜಾಲಕ್ಕೆ ಕೋಟೆನಾಡಿನ ಜನ್ರು ಕೂಡ ಬಲಿಯಾಗಿದ್ದಾರೆ. 200ಕ್ಕೂ ಹೆಚ್ಚು ಜನರು ಎಸ್ಪಿ ಕಚೇರಿಗೆ ದೌಡಾಯಿಸಿ ಪ್ರಕರಣ ದಾಖಲಿಸಿದ್ದಾರೆ.

ಮೊಹಮದ್ ನೂರುಲ್ಲಾ ಎಂಬುವರು ಕೂಡ ಇದೇ ಕಂಪನಿಯಲ್ಲೇ ಕೆಲಸ ಮಾಡಿಕೊಂಡು ಐಎಂಎನಲ್ಲಿ ದುಡ್ಡನ್ನ ಹೂಡಿಕೆ ಮಾಡಿ ಮೋಸ ಹೋಗಿರುವುದಾಗಿ ಅಳಲು ತೋಡಿಕೊಂಡಿದ್ದಾರೆ.

ಐಎಂಎ ನಲ್ಲಿ ಹಣ ತೊಡಗಿಸಿದ ಜನರಿಗೆ ಮೊದಲು ಮಾಸಿಕವಾಗಿ 2500 ರೂಪಾಯಿ ಬಡ್ಡಿ ನೀಡುತ್ತಿದ್ದ ಸಂಸ್ಥೆ ಕ್ರಮೇಣವಾಗಿ ಕಡಿಮೆ ಮಾಡುತ್ತಾ ಬಂದಿತ್ತು. ಕಳೆದ ಮೂರು ತಿಂಗಳಿನಿಂದ ಹಣ ಬರುವುದೇ ನಿಂತಿತ್ತು. ಹೀಗಾಗಿ ಸಂಸ್ಥೆ ಬಗ್ಗೆ ವಿಚಾರಿಸಿದಾಗ, ಬೀಗ ಜಡಿದು ನಾಪತ್ತೆಯಾಗಿರುವುದು ಗೊತ್ತಾಗಿದೆ. ಇದರಿಂದ ಆತಂಕಕ್ಕೊಳಗಾಗಿರುವ ಹೂಡಿಕೆದಾರರು, ಚಿತ್ರದುರ್ಗ ಎಸ್ಪಿ ಕಚೇರಿಗೆ ಭೇಟಿ ನೀಡಿ 200ಕ್ಕೂ ಹೆಚ್ಚು ಪ್ರತ್ಯೇಕ ದೂರು‌ ನೀಡಿದ್ದಾರೆ. ಅಲ್ಲದೆ ತಮ್ಮ ಹಣ ವಾಪಸ್ ಕೊಡಿಸಿ ಎಂದು ಮನವಿ ಮಾಡ್ತಿದಾರೆ.

ಒಟ್ಟಾರೆ ಐಎಂಎ ಮಾಲೀಕನ ನಂಬಿ ನೋಡಿ ಅದೆಷ್ಟೊ ಜನ ಹಣ ಹೂಡಿಕೆ ಮಾಡಿ ಮೋಸಹೋಗಿದ್ದಾರೆ. ವಂಚಕ ಮೊಹಮದ್ ಮನ್ಸೂರ್ ಖಾನ್ ಸರಿಯಾದ ಶಿಕ್ಷೆಯಾಗಿ ತಮ್ಮ ಹಣ ವಾಪಸ್ ಬರಲಿ ಅನ್ನೋದು ಬಡ ಜನರ ಕೂಗಾಗಿದೆ‌.

Intro:ಐಎಂ ಕಂಪನಿಯಲ್ಲಿ ಹಣ ಹೂಡಿ ಮೋಸ ಹೋದ ಕೋಟೆನಾಡಿನ ಮಂದಿ

ಆಂಕರ್: - ಐಎಂಎ ಕಂಪನಿಯ ವಂಚನೆಯ ಜಾಲ ರಾಜ್ಯದಂತ್ಯ ಹಬ್ಬಿದ್ದು, ಇದೀಗ ಕೋಟೆನಾಡು ಚಿತ್ರದುರ್ಗಕ್ಕೆ ಕಾಲಿಟ್ಟಿದೆ. ಪ್ರತಿ ತಿಂಗಳು ಹೆಚ್ಚಿನ ಬಡ್ಡಿ ಸಿಗುತ್ತದೆ ಎಂಬ ಆಸೆಯಿಂದ 200ಕ್ಕೂ ಹೆಚ್ಚು ಜನರ ಹಣ ತೊಡಗಿಸಿರುವುದು ಬಸಳಕಿಗೆ ಬಂದಿದೆ. ಹಣ ವಾಪಸ್ಸು ನೀಡುವಂತೆ ಏಕಾಏಕಿ ಎಸ್ಪಿ ಕಚೇರಿಗೆ ಭೇಟಿ ನೀಡಿ ನ್ಯಾಯ ಕೊಡಿಸಿವಂತೆ ಎಸ್ಪಿಯವರಿಗೆ ಅಂಗಲಾಚಿ ಕೇಳಿಕೊಂಡರು.

ಲುಕ್,,,,

ಫ್ಲೋ,,,,,

ವಾಯ್ಸ್01: - ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣಕ್ಕೆ ದಿನೆ ದಿನೆ ಹಲವು ತಿರುವು ಪಡೆದುಕೊಳ್ಳುತ್ತಿದೆ. ಐಎಂಎ ವಿರುದ್ದ ಈಗಾಗಲೇ ಸಾವಿರಾರು ದೂರುಗಳು ದಾಖಲಾಗಿದ್ದು, ಇದಕ್ಕೆ ಕೋಟೆನಾಡು ಚಿತ್ರದುರ್ಗದ ಜನ್ರು ಕೂಡ ಮೋಸದಾಟಕ್ಕೆ ಬಲಿಯಾಗಿದ್ದಾರೆ. 200ಕ್ಕೂ ಹೆಚ್ಚು ಜನರು ಎಸ್ಪಿ ಕಚೇರಿಗೆ ದೌಡಾಯಿಸಿ ಪ್ರಕರಣ ದಾಖಲಿಸಿದ್ದಾರೆ. ಚಿತ್ರದುರ್ಗದಲ್ಲಿ ಐಎಂಎ ಶಾಖೆ ಇಲ್ಲದ ಕಾರಣ ಇಲ್ಲಿನ ಜನರು ಮೋಸ ಹೋಗಿಲ್ಲ ಎಂದೇ ಹೇಳಲಾಗಿತ್ತು, ಆದರೆ ಚಿತ್ರದುರ್ಗದ ನಿವಾಸಿ ಮೊಹಮದ್ ನೂರುಲ್ಲಾ ಐಎಂಎ ಸಂಸ್ಥೆಯ ನೌಕರನಾಗಿದ್ದು, ಆತನಿಂದಾಗಿಯೇ ಚಿತ್ರದುರ್ಗ ಜಿಲ್ಲೆಯಾದ್ಯಂತ ಸಾವಿರಾರು ಜನರು ಹಣ ತೊಡಗಿಸಿರುವ ಸಾಧ್ಯತೆ ಇದೆ, ಆದರೆ ಇದೀಗ ಕೇವಲ 200ಕ್ಕೂ ಹೆಚ್ಚು ಮಂದಿ ಮಾತ್ರ ದೂರು ನೀಡಲು ಮುಂದಾಗಿದ್ದಾರೆ. ಸುಮಾರು ಒಂದರಿಂದ ಮೂವತ್ತು ಲಕ್ಷಕ್ಕೂ ಹೆಚ್ಚು ಹಣ ಹೂಡಿಕೆ ಮಾಡಿರುವ ಶಂಕೆಯಿದ್ದು, ನಂಬಿಕೆ ಮೇಲೆ ಹಣ ಹೂಡಿಕೆ ಮಾಡಿರುವವರಲ್ಲಿ ಕಡು ಬಡವರೂ ಸೇರಿದ್ದಾರೆ, ಆದ್ರೆ ನಾನು ಹಣ ಹೂಡಿಕೆ ಮಾಡಿ ಲಾಭ ಬಂದ ನಂತರವೇ ನಮ್ಮ ಜನರಿಗೆ ಉಪಯೋಗ ಆಗಲಿ ಎಂಬ ಉದ್ದೇಶದಿಂದ ಜನರಿಗೆ ಐಎಂಎ ಬಗ್ಗೆ ಹೇಳಿದ್ದೆ, ಆದ್ರೆ ಈಗ ನಾನೂ ಕೂಡ ಹಣ ಕಳೆದುಕೊಂಡವರಲ್ಲಿ ಒಬ್ಬನಾಗಿದ್ದೇನೆ ಎಂದು ಐಎಂಎ ನೌಕರ‌ ಹೇಳುತ್ತಿದ್ದಾನೆ..

ಬೈಟ್02: ಮೊಹಮದ್ ನೂರುಲ್ಲಾ, ಐಎಂಎ ನೌಕರ, ಚಿತ್ರದುರ್ಗ

ಫ್ಲೋ.....

ವಾಯ್ಸ್02:- ಐಎಂಎ ನಲ್ಲಿ ಹಣ ತೊಡಗಿಸಿದ ಜನರಿಗೆ ಮೊದಲು ಮಾಸಿಕವಾಗಿ 2500 ರೂಪಾಯಿ ಬಡ್ಡಿ ನೀಡುತ್ತಿದ್ದ ಸಂಸ್ಥೆ ಕ್ರಮೇಣವಾಗಿ ಕಡಿಮೆ ಮಾಡುತ್ತಾ ಬಂದಿದ್ದು, ಕಳೆದ ಮೂರು ತಿಂಗಳಿನಿಂದ ಹಣ ಬರುವುದು ನಿಂತಿದೆ, ಹೀಗಾಗಿ ಸಂಸ್ಥೆ ಬಗ್ಗೆ ವಿಚಾರಿಸಿ ನೋಡಿದಾಗ, ಬೀಗ ಜಡಿದು ನಾಪತ್ತೆಯಾಗಿರುವುದು ಗೊತ್ತಾಗಿದೆ. ಇದರಿಂದ ಆತಂಕಕ್ಕೊಳಗಾಗಿರುವ ಹೂಡಿಕೆದಾರರು, ಚಿತ್ರದುರ್ಗ ಎಸ್ಪಿ ಕಚೇರಿಗೆ ಭೇಟಿ ನೀಡಿ 200ಕ್ಕೂ ಹೆಚ್ಚು ಜನರು ಪ್ರತ್ಯೇಕ ದೂರು‌ ನೀಡಿ ನಮ್ಮ ಹಣ ವಾಪಸ್ ಕೊಡಿಸಿ ಎಂದು ಮನವಿ ಮಾಡಿದ್ದಾರೆ, ವಂಚನೆಗೊಳಗಾದವರ ಮನವಿ ಸ್ವೀಕರಿಸಿರುವ ಎಸ್ಪಿ ಡಾ.ಕೆ.ಅರುಣ್, ಈಗಾಗಲೇ ರಾಜ್ಯ ಸರ್ಕಾರ ಐಎಂಎ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡವನ್ನು‌ ರಚಿಸಿದೆ, ಅವರಿಗೆ ಚಿತ್ರದುರ್ಗ ಜಿಲ್ಲೆಯಲ್ಲಿ‌ ಹಣ ಹೂಡಿಕೆ ಮಾಡಿರುವ ಜನರ ವಿವರವನ್ನು ಕಳುಹಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದ್ದಾರೆ..

ಫ್ಲೋ....

ಬೈಟ್03: ಡಾ.ಕೆ.ಅರುಣ್, ಎಸ್ಪಿ, ಚಿತ್ರದುರ್ಗ..

ವಾಯ್ಸ್03:- ಒಟ್ಟಾರೆ ಧರ್ಮ ನೋಡಿ ಅದೇಷ್ಟೊ ಜನ ಹಣ ಹೂಡಿಕೆ ಮಾಡಿ ಮೋಸಹೋಗಿದ್ದಾರೆ. ಧರ್ಮವನ್ನೇ ಬಂಡವಾಳ ಮಾಡಿಕೊಂಡ ಐಎಂಎ ಮಾಲೀಕ ಮೊಹಮದ್ ಮನ್ಸೂರ್ ಖಾನ್, ತಮ್ಮ ಸಮುದಾಯದ ಜನರನ್ನೇ ಟಾರ್ಗೆಟ್ ಮಾಡಿ ಸಾವಿರಾರು ಕೋಟಿ ಹಣ ವಸೂಲಿ ಮಾಡಿ ಪಂಗನಾಮ ಹಾಕಿರುವುದು ಬೆಳಕಿಗೆ ಬಂದಿದೆ. ಅದೇನೆ ಆಗಲಿ ವಂಚನೆ ಮಾಡಿರುವ ಮಾಲೀಕನಿಗೆ ಸರಿಯಾದ ಶಿಕ್ಷೆಯಾಗಿ ನಮ್ಮ ಹಣ ವಾಪಸ್ ನೀಡುವಂತೆ ಬಡ ಜನ್ರು ಕೂಗಾಗಿದೆ‌‌

ಡಿ ನೂರುಲ್ಲಾ ಈಟಿವಿ ಭಾರತ ಚಿತ್ರದುರ್ಗ...Body:PkgConclusion:Ima

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.