ETV Bharat / state

ಕಾರ್ಮಿಕ ಇಲಾಖೆಯಿಂದ ಆಹಾರ ಪದಾರ್ಥಗಳ 4 ಸಾವಿರ ಕಿಟ್ ವಿತರಣೆ: ಪರದಾಡಿದ ಪೌರಕಾರ್ಮಿಕರು - Chitradurga news

ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಕಿಟ್ ವಿತರಣೆ ಮಾಡುವ ಮೂಲಕ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಶಾಕರು ಚಾಲನೆ ನೀಡಿದರು.

4000 food kits distributed by the Labor Departmen
ಕಾರ್ಮಿಕ ಇಲಾಖೆಯಿಂದ 4 ಸಾವಿರ ಆಹಾರಕಿಟ್ ವಿತರಣೆ : ಕಿಟ್ ಪಡೆಯಲು ಪರದಾಡಿದ ಪೌರಕಾರ್ಮಿಕರು
author img

By

Published : Nov 17, 2020, 10:07 PM IST

Updated : Nov 17, 2020, 10:47 PM IST

ಚಿತ್ರದುರ್ಗ: ಕಾರ್ಮಿಕ ಇಲಾಖೆಯಿಂದ ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು ಹಾಗೂ ಇತರ ಕಾರ್ಮಿಕರಿಗೆ ಆಹಾರ ಪದಾರ್ಥಗಳ 4 ಸಾವಿರ ಕಿಟ್​ಗಳನ್ನು ವಿತರಣೆ ಮಾಡಲಾಯಿತು.

ಕಾರ್ಮಿಕ ಇಲಾಖೆಯಿಂದ 4 ಸಾವಿರ ಆಹಾರಕಿಟ್ ವಿತರಣೆ : ಕಿಟ್ ಪಡೆಯಲು ಪರದಾಡಿದ ಪೌರಕಾರ್ಮಿಕರು

ಮಹಿಳೆಯರಿಗೆ ಕಿಟ್ ವಿತರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಶಾಸಕ ಜಿ.ಹೆಚ್​.ತಿಪ್ಪಾರೆಡ್ಡಿ ಚಾಲನೆ ನೀಡಿದರು. ಚಿತ್ರದುರ್ಗ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಆರಂಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಹಂತ ಹಂತವಾಗಿ ಸೇರಿದ್ದ ಜನ, ಸಾಮಾಜಿಕ ಅಂತರ ಲೆಕ್ಕಿಸದೆ ಕಿಟ್ ಪಡೆಯಲು ಗುಂಪಾಗಿ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದು ಕಂಡು ಬಂತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಅಮೆರಿಕ ದೇಶದಲ್ಲಿ ಕೊರೊನಾ ಸಂಖ್ಯೆ ಕಡಿಮೆಯಾಗಿ ಬಳಿಕ ಇದ್ದಕ್ಕಿದ್ದಂತೆ ಹೆಚ್ಚಾಗುತ್ತಿದೆ. ನಮ್ಮ ದೇಶದಲ್ಲಿ‌ ಕೊರೊನಾ ಅಂಕಿ-ಸಂಖ್ಯೆ ಇಳಿಮುಖ‌ ಆಗುತ್ತಿರುವುದು ನಮ್ಮ ಅದೃಷ್ಟ. ನಮ್ಮ ಚಿತ್ರದುರ್ಗ ಕ್ಷೇತ್ರಕ್ಕೆ ನಾಲ್ಕು ಸಾವಿರ ಆಹಾರ ಕಿಟ್​ಗಳು ಬಂದಿದ್ದು, ಅದರಲ್ಲಿ ಮಹಿಳಾ ಕಾರ್ಮಿಕ ಸಂಘಟನೆಯ ಮಹಿಳೆಯರಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸೇರಿದಂತೆ ಪೌರಕಾರ್ಮಿಕರಿಗೆ ನೀಡುತ್ತಿದ್ದೇವೆ ಎಂದರು.

ವೇದಿಕೆಯಲ್ಲಿ ಕೆಲ ಕಾಲ ನಗೆ ಚಟಾಕಿ ಹಾರಿಸಿದ ಶಾಸಕರು:

ಕಿಟ್​ನಲ್ಲಿ ಏನ್ಐತಿ ನೋಡಿಲ್ಲ ನಾನು. ಏನ್ ಐತ್ರಪ್ಪೋ ಅದರಲ್ಲಿ ಓಪನ್‌ ಮಾಡಿ ನೋಡಿದ್ರಾ, ಕಾಟ್ರ್ಯಾಕ್ಟ್​ನವನು ಏನ್ ಕೊಟ್ಟಿದ್ದಾನೋ, ಏನ್ ಸಪ್ಲೈ ಮಾಡಿದ್ದಾನೋ ಗೊತ್ತಿಲ್ಲ ಎಂದು ನಗೆ ಚಟಾಕಿ ಹಾರಿಸಿದರು. ಇನ್ನು ವೇದಿಕೆ ಮುಂದೆ ಕೂತಿದ್ದ ಮಹಿಳೆಗೆ ಫೋನ್ ಆಫ್ ಮಾಡಮ್ಮಾ ತಾಯಿ, ಫೋನ್ ಇದ್ರೆ ಕಿಟ್ ಕೊಡಲ್ಲ ನೋಡು ಎಂದು ರೇಗಿಸಿದರು.

ಬಳಿಕ ಬಿ.ಎಸ್.ಯಡಿಯೂರಪ್ಪನವರ ಸರ್ಕಾರದ ಬಗ್ಗೆ ಗುಣಗಾನ ಮಾಡಲು ನಿಂತ ಶಾಸಕರು, ಕಾರ್ಮಿಕ ಇಲಾಖೆಯ ಸಚಿವ ಶಿವರಾಮ್ ಹೆಬ್ಬಾರ್​ರನ್ನು ಹಾಡಿ ಹೊಗಳಿದರು.

ಚಿತ್ರದುರ್ಗ: ಕಾರ್ಮಿಕ ಇಲಾಖೆಯಿಂದ ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು ಹಾಗೂ ಇತರ ಕಾರ್ಮಿಕರಿಗೆ ಆಹಾರ ಪದಾರ್ಥಗಳ 4 ಸಾವಿರ ಕಿಟ್​ಗಳನ್ನು ವಿತರಣೆ ಮಾಡಲಾಯಿತು.

ಕಾರ್ಮಿಕ ಇಲಾಖೆಯಿಂದ 4 ಸಾವಿರ ಆಹಾರಕಿಟ್ ವಿತರಣೆ : ಕಿಟ್ ಪಡೆಯಲು ಪರದಾಡಿದ ಪೌರಕಾರ್ಮಿಕರು

ಮಹಿಳೆಯರಿಗೆ ಕಿಟ್ ವಿತರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಶಾಸಕ ಜಿ.ಹೆಚ್​.ತಿಪ್ಪಾರೆಡ್ಡಿ ಚಾಲನೆ ನೀಡಿದರು. ಚಿತ್ರದುರ್ಗ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಆರಂಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಹಂತ ಹಂತವಾಗಿ ಸೇರಿದ್ದ ಜನ, ಸಾಮಾಜಿಕ ಅಂತರ ಲೆಕ್ಕಿಸದೆ ಕಿಟ್ ಪಡೆಯಲು ಗುಂಪಾಗಿ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದು ಕಂಡು ಬಂತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಅಮೆರಿಕ ದೇಶದಲ್ಲಿ ಕೊರೊನಾ ಸಂಖ್ಯೆ ಕಡಿಮೆಯಾಗಿ ಬಳಿಕ ಇದ್ದಕ್ಕಿದ್ದಂತೆ ಹೆಚ್ಚಾಗುತ್ತಿದೆ. ನಮ್ಮ ದೇಶದಲ್ಲಿ‌ ಕೊರೊನಾ ಅಂಕಿ-ಸಂಖ್ಯೆ ಇಳಿಮುಖ‌ ಆಗುತ್ತಿರುವುದು ನಮ್ಮ ಅದೃಷ್ಟ. ನಮ್ಮ ಚಿತ್ರದುರ್ಗ ಕ್ಷೇತ್ರಕ್ಕೆ ನಾಲ್ಕು ಸಾವಿರ ಆಹಾರ ಕಿಟ್​ಗಳು ಬಂದಿದ್ದು, ಅದರಲ್ಲಿ ಮಹಿಳಾ ಕಾರ್ಮಿಕ ಸಂಘಟನೆಯ ಮಹಿಳೆಯರಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸೇರಿದಂತೆ ಪೌರಕಾರ್ಮಿಕರಿಗೆ ನೀಡುತ್ತಿದ್ದೇವೆ ಎಂದರು.

ವೇದಿಕೆಯಲ್ಲಿ ಕೆಲ ಕಾಲ ನಗೆ ಚಟಾಕಿ ಹಾರಿಸಿದ ಶಾಸಕರು:

ಕಿಟ್​ನಲ್ಲಿ ಏನ್ಐತಿ ನೋಡಿಲ್ಲ ನಾನು. ಏನ್ ಐತ್ರಪ್ಪೋ ಅದರಲ್ಲಿ ಓಪನ್‌ ಮಾಡಿ ನೋಡಿದ್ರಾ, ಕಾಟ್ರ್ಯಾಕ್ಟ್​ನವನು ಏನ್ ಕೊಟ್ಟಿದ್ದಾನೋ, ಏನ್ ಸಪ್ಲೈ ಮಾಡಿದ್ದಾನೋ ಗೊತ್ತಿಲ್ಲ ಎಂದು ನಗೆ ಚಟಾಕಿ ಹಾರಿಸಿದರು. ಇನ್ನು ವೇದಿಕೆ ಮುಂದೆ ಕೂತಿದ್ದ ಮಹಿಳೆಗೆ ಫೋನ್ ಆಫ್ ಮಾಡಮ್ಮಾ ತಾಯಿ, ಫೋನ್ ಇದ್ರೆ ಕಿಟ್ ಕೊಡಲ್ಲ ನೋಡು ಎಂದು ರೇಗಿಸಿದರು.

ಬಳಿಕ ಬಿ.ಎಸ್.ಯಡಿಯೂರಪ್ಪನವರ ಸರ್ಕಾರದ ಬಗ್ಗೆ ಗುಣಗಾನ ಮಾಡಲು ನಿಂತ ಶಾಸಕರು, ಕಾರ್ಮಿಕ ಇಲಾಖೆಯ ಸಚಿವ ಶಿವರಾಮ್ ಹೆಬ್ಬಾರ್​ರನ್ನು ಹಾಡಿ ಹೊಗಳಿದರು.

Last Updated : Nov 17, 2020, 10:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.