ETV Bharat / state

ಮನವಿಗೆ ಸ್ಪಂದಿಸದ ಅಧಿಕಾರಿಗಳು.. ಕಾಫಿನಾಡಿನ ಗ್ರಾಮಸ್ಥರಿಂದಲೇ ನಿರ್ಮಾಣವಾಯ್ತು ಕಾಲುಸಂಕ

ಅದು ತುಂಗಾ ನದಿಯ ಆಚೆಗಿರುವ ಗ್ರಾಮ. ಮಳೆಗಾಲದಲ್ಲಿ ಅಲ್ಲಿನ ನಿವಾಸಿಗಳ ಸ್ಥಿತಿಯನ್ನಂತೂ ಹೇಳೋದೆ ಬೇಡ. ಒಂದು ರೀತಿ ಹೊರ ಜಗತ್ತಿನ ಸಂಪರ್ಕವನ್ನೇ ಕಳೆದುಕೊಂಡು ಕಾಡು ಪ್ರಾಣಿಗಳಂತೆ ದಯನೀಯವಾಗಿ ಬದುಕುವ ಸ್ಥಿತಿ ಅವರದಾಗುತ್ತದೆ. ಅಲ್ಲಿನ ಗ್ರಾಮಸ್ಥರು ಸೇತುವೆ ಕಲ್ಪಿಸಿಕೊಡಿ ಎಂದು ಹತ್ತಾರು ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದಾರೆ. ಆದ್ರೆ, ಅಧಿಕಾರಿಗಳು-ಜನ ನಾಯಕರು ಅವರ ಮನವಿಯನ್ನು ಆಲಿಸಿಯೇ ಇಲ್ಲ. ಹೀಗಾಗಿ ಅವರೇ ಈಗ ಸೇತುವೆಯನ್ನು ನಿರ್ಮಿಸಿದ್ದಾರೆ.

author img

By

Published : Oct 4, 2022, 1:10 PM IST

Updated : Oct 4, 2022, 1:21 PM IST

ಗ್ರಾಮಸ್ಥರಿಂದಲೇ ನಿರ್ಮಾಣವಾಯ್ತು ಕಾಲುಸಂಕ
ಗ್ರಾಮಸ್ಥರಿಂದಲೇ ನಿರ್ಮಾಣವಾಯ್ತು ಕಾಲುಸಂಕ

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲೂಕಿನ ಹರೇಬಿಳಲು ಗ್ರಾಮದಲ್ಲಿ ಸ್ಥಳೀಯರೇ ತಮ್ಮ ಗ್ರಾಮಕ್ಕೆ ಕಾಲುಸಂಕವನ್ನು ನಿರ್ಮಿಸಿಕೊಂಡಿದ್ದಾರೆ. ಈ ಮೂಲಕ ಅವರು ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ. ಇವರು ಸೇತುವೆಗಾಗಿ ಹತ್ತಾರು ವರ್ಷಗಳಿಂದ ಮನವಿ ಮಾಡಿದ್ರು. ಆದ್ರೆ ಯಾವ ಅಧಿಕಾರಿಯೂ ಇವರ ಮನವಿಗೆ ಸ್ಪಂದಿಸಿರಲಿಲ್ಲವಂತೆ.

ಗ್ರಾಮಸ್ಥರಿಂದಲೇ ನಿರ್ಮಾಣವಾಯ್ತು ಕಾಲುಸಂಕ

ವ್ಯರ್ಥವಾದ ಮನವಿ.. ಸೇತುವೆ ನಿರ್ಮಿಸಿಕೊಡುವಂತೆ ಸರ್ಕಾರ, ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಎಷ್ಟೇ ಮನವಿ ಮಾಡಿದರೂ, ಉಪಯೋಗವಾಗಲಿಲ್ಲ. ಹಾಗಾಗಿ ಹಳ್ಳಿಗರೇ ಕಾಲುಸಂಕ ನಿರ್ಮಿಸಿಕೊಂಡು ಸರ್ಕಾರಕ್ಕೆ ತಮ್ಮ ತೋಳ್ಬಲ ಪ್ರದರ್ಶಿಸಿದ್ದಾರೆ. ಸರ್ಕಾರ ಬೇಜವಾಬ್ದಾರಿಗೆ ಹಳ್ಳಿಗರು ತಾವೇ ಮರದ ಕಂಬಗಳನ್ನು ತಂದು ನದಿಗೆ ಅಡ್ಡ ಹಾಕಿ, ಹಗ್ಗ ಕಟ್ಟಿ, ಮೊಳೆ ಹೊಡೆದು, ತಿಂಗಳಿನಿಂದ ಹತ್ತಾರು ಜನ ಶ್ರಮಪಟ್ಟು ಪುಟ್ಟದೊಂದು ಕಾಲು ಸಂಕವನ್ನು ನಿರ್ಮಿಸಿಕೊಂಡಿದ್ದಾರೆ.

ನಾವೇ ಹೀಗೊಂದು ಸೇತುವೆ ನಿರ್ಮಿಸಿಕೊಳ್ಳಬಹುದು ಅಂದ್ರೆ, ಸರ್ಕಾರದ ಅನುದಾನದಲ್ಲಿ ನಮ್ಮೂರಿಗೊಂದು ಶಾಶ್ವತ ತೂಗು ಸೇತುವೆ ಮಾಡಿಕೊಡಲು ನಿಮಗೇನು ಕಷ್ಟ ಎಂದು ಗ್ರಾಮಸ್ಥರು ಖಾರವಾಗಿ ಪ್ರಶ್ನಿಸಿದ್ದಾರೆ. ಸದ್ಯ ಕಾಲುಸಂಕ ನಿರ್ಮಾಣದಿಂದ ಹರೇ ಬಿಳಲು-ನೆಮ್ಮಾರು ಗ್ರಾಮಕ್ಕೆ ಸಂಪರ್ಕ ಸಿಕ್ಕಿದಂತಾಗಿದೆ. ಈ ಗ್ರಾಮದಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿದ್ದು, ಜನರು ಗ್ರಾಮದಿಂದ ನೆಮ್ಮಾರು ಮೂಲಕ ಶೃಂಗೇರಿ ಪಟ್ಟಣಕ್ಕೆ ಬರಲು ಸುಲಭವಾಗಿದೆ.

ಇದನ್ನೂ ಓದಿ: ಕಾಫಿನಾಡು ಬಲ್ಲಾಳರಾಯನ ದುರ್ಗಕ್ಕೆ ದುರ್ಗದಹಳ್ಳಿ ಗ್ರಾಮಸ್ಥರಿಂದ ತಡೆ

ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲೂಕಿನ ಹರೇಬಿಳಲು ಗ್ರಾಮದಲ್ಲಿ ಸ್ಥಳೀಯರೇ ತಮ್ಮ ಗ್ರಾಮಕ್ಕೆ ಕಾಲುಸಂಕವನ್ನು ನಿರ್ಮಿಸಿಕೊಂಡಿದ್ದಾರೆ. ಈ ಮೂಲಕ ಅವರು ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ. ಇವರು ಸೇತುವೆಗಾಗಿ ಹತ್ತಾರು ವರ್ಷಗಳಿಂದ ಮನವಿ ಮಾಡಿದ್ರು. ಆದ್ರೆ ಯಾವ ಅಧಿಕಾರಿಯೂ ಇವರ ಮನವಿಗೆ ಸ್ಪಂದಿಸಿರಲಿಲ್ಲವಂತೆ.

ಗ್ರಾಮಸ್ಥರಿಂದಲೇ ನಿರ್ಮಾಣವಾಯ್ತು ಕಾಲುಸಂಕ

ವ್ಯರ್ಥವಾದ ಮನವಿ.. ಸೇತುವೆ ನಿರ್ಮಿಸಿಕೊಡುವಂತೆ ಸರ್ಕಾರ, ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಎಷ್ಟೇ ಮನವಿ ಮಾಡಿದರೂ, ಉಪಯೋಗವಾಗಲಿಲ್ಲ. ಹಾಗಾಗಿ ಹಳ್ಳಿಗರೇ ಕಾಲುಸಂಕ ನಿರ್ಮಿಸಿಕೊಂಡು ಸರ್ಕಾರಕ್ಕೆ ತಮ್ಮ ತೋಳ್ಬಲ ಪ್ರದರ್ಶಿಸಿದ್ದಾರೆ. ಸರ್ಕಾರ ಬೇಜವಾಬ್ದಾರಿಗೆ ಹಳ್ಳಿಗರು ತಾವೇ ಮರದ ಕಂಬಗಳನ್ನು ತಂದು ನದಿಗೆ ಅಡ್ಡ ಹಾಕಿ, ಹಗ್ಗ ಕಟ್ಟಿ, ಮೊಳೆ ಹೊಡೆದು, ತಿಂಗಳಿನಿಂದ ಹತ್ತಾರು ಜನ ಶ್ರಮಪಟ್ಟು ಪುಟ್ಟದೊಂದು ಕಾಲು ಸಂಕವನ್ನು ನಿರ್ಮಿಸಿಕೊಂಡಿದ್ದಾರೆ.

ನಾವೇ ಹೀಗೊಂದು ಸೇತುವೆ ನಿರ್ಮಿಸಿಕೊಳ್ಳಬಹುದು ಅಂದ್ರೆ, ಸರ್ಕಾರದ ಅನುದಾನದಲ್ಲಿ ನಮ್ಮೂರಿಗೊಂದು ಶಾಶ್ವತ ತೂಗು ಸೇತುವೆ ಮಾಡಿಕೊಡಲು ನಿಮಗೇನು ಕಷ್ಟ ಎಂದು ಗ್ರಾಮಸ್ಥರು ಖಾರವಾಗಿ ಪ್ರಶ್ನಿಸಿದ್ದಾರೆ. ಸದ್ಯ ಕಾಲುಸಂಕ ನಿರ್ಮಾಣದಿಂದ ಹರೇ ಬಿಳಲು-ನೆಮ್ಮಾರು ಗ್ರಾಮಕ್ಕೆ ಸಂಪರ್ಕ ಸಿಕ್ಕಿದಂತಾಗಿದೆ. ಈ ಗ್ರಾಮದಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿದ್ದು, ಜನರು ಗ್ರಾಮದಿಂದ ನೆಮ್ಮಾರು ಮೂಲಕ ಶೃಂಗೇರಿ ಪಟ್ಟಣಕ್ಕೆ ಬರಲು ಸುಲಭವಾಗಿದೆ.

ಇದನ್ನೂ ಓದಿ: ಕಾಫಿನಾಡು ಬಲ್ಲಾಳರಾಯನ ದುರ್ಗಕ್ಕೆ ದುರ್ಗದಹಳ್ಳಿ ಗ್ರಾಮಸ್ಥರಿಂದ ತಡೆ

Last Updated : Oct 4, 2022, 1:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.