ETV Bharat / state

ಸಂತ್ರಸ್ತರಿಗೆ ಸಿಗುತ್ತಿಲ್ಲ ದಿನಬಳಕೆಯ ವಸ್ತು: ಮೂಡಿಗೆರೆ ಜನರ ನೆರವಿಗೆ ಧಾವಿಸಿದ ಯುವಕರು

author img

By

Published : Aug 11, 2019, 2:24 PM IST

ಮಲೆನಾಡಿನಲ್ಲಿ ವರುಣನ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಹಲವು ಗ್ರಾಮಗಳಲ್ಲಿ ಜನರಿಗೆ ದಿನನಿತ್ಯದ ಅಗತ್ಯ ವಸ್ತುಗಳಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇವರಿಗೆ ಸಹಾಯ ಮಾಡುವ ಸದುದ್ದೇಶದಿಂದ ಚಿಕ್ಕಮಗಳೂರಿನ ಯುವಕ ತಂಡ ದಿನಬಳಕೆ ವಸ್ತುಗಳನ್ನು ಸಂಗ್ರಹಿಸಿ ಸಂತ್ರಸ್ತರಿಗೆ ನೀಡುವ ಕೆಲಸಕ್ಕೆ ಮುಂದಾಗಿದೆ.

ಮೂಡಿಗೆರೆಯಲ್ಲಿ ನೆರವಿಗೆ ಧಾವಿಸಿದ ಯುವಕರ ತಂಡ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಿತ್ಯವೂ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಲೆನಾಡಿನ ಜನರು ಅಕ್ಷರಶಃ ನಲುಗಿದ್ದಾರೆ. ಮೂಡಿಗೆರೆ ತಾಲೂಕಿನ ಹತ್ತಾರೂ ಹಳ್ಳಿಗಳ ಜನರಿಗೆ ದಿನಬಳಕೆಯ ವಸ್ತುಗಳು ಸಿಗದಂತಾಗಿದೆ. ಹೀಗಾಗಿ ಚಿಕ್ಕಮಗಳೂರಿನ ಯುವಕರ ತಂಡವೊಂದು ದಿನಬಳಕೆಯ ವಸ್ತುಗಳನ್ನು ಸಂಗ್ರಹಿಸಿ ಸಂತ್ರಸ್ತರಿಗೆ ನೀಡುತ್ತಿದೆ.

ಸಂತ್ರಸ್ತರಿಗೆ ದಿನಬಳಕೆಯ ವಸ್ತುಗಳನ್ನು ತಲುಪಿಸುತ್ತಿರುವ ಯುವಕರ ತಂಡ

1 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಈ ಯುವಕರ ತಂಡ ಸಂಗ್ರಹಿಸಿದೆ. ಬ್ರೆಡ್, ಬಿಸ್ಕೆಟ್​, ಬೆಡ್ ಶೀಟ್, ಚಾಪೆ, ಟೂತ್ ಪೇಸ್ಟ್, ಬ್ರಶ್, ಔಷಧಿಗಳು, ಬಟ್ಟೆ, ಸೇರಿದಂತೆ ಹಲವಾರು ವಸ್ತುಗಳು ಸಂಗ್ರಹವಾಗಿವೆ. ಎಲ್ಲವನ್ನೂ ತುಂಬಿಕೊಂಡು ವಾಹನದ ಮೂಲಕ ಮೂಡಿಗೆರೆ ಭಾಗಕ್ಕೆ ಈ ಯುವಕರು ತೆರಳುತ್ತಿದ್ದಾರೆ. ಈ ಯುವಕರ ಕಾರ್ಯಕ್ಕೆ ನಗರ ಪ್ರದೇಶದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅವರು ಕೂಡ ಸಹಾಯ ಮಾಡಲು ಮುಂದೆ ಬಂದಿದೆ.

ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಿತ್ಯವೂ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಲೆನಾಡಿನ ಜನರು ಅಕ್ಷರಶಃ ನಲುಗಿದ್ದಾರೆ. ಮೂಡಿಗೆರೆ ತಾಲೂಕಿನ ಹತ್ತಾರೂ ಹಳ್ಳಿಗಳ ಜನರಿಗೆ ದಿನಬಳಕೆಯ ವಸ್ತುಗಳು ಸಿಗದಂತಾಗಿದೆ. ಹೀಗಾಗಿ ಚಿಕ್ಕಮಗಳೂರಿನ ಯುವಕರ ತಂಡವೊಂದು ದಿನಬಳಕೆಯ ವಸ್ತುಗಳನ್ನು ಸಂಗ್ರಹಿಸಿ ಸಂತ್ರಸ್ತರಿಗೆ ನೀಡುತ್ತಿದೆ.

ಸಂತ್ರಸ್ತರಿಗೆ ದಿನಬಳಕೆಯ ವಸ್ತುಗಳನ್ನು ತಲುಪಿಸುತ್ತಿರುವ ಯುವಕರ ತಂಡ

1 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಈ ಯುವಕರ ತಂಡ ಸಂಗ್ರಹಿಸಿದೆ. ಬ್ರೆಡ್, ಬಿಸ್ಕೆಟ್​, ಬೆಡ್ ಶೀಟ್, ಚಾಪೆ, ಟೂತ್ ಪೇಸ್ಟ್, ಬ್ರಶ್, ಔಷಧಿಗಳು, ಬಟ್ಟೆ, ಸೇರಿದಂತೆ ಹಲವಾರು ವಸ್ತುಗಳು ಸಂಗ್ರಹವಾಗಿವೆ. ಎಲ್ಲವನ್ನೂ ತುಂಬಿಕೊಂಡು ವಾಹನದ ಮೂಲಕ ಮೂಡಿಗೆರೆ ಭಾಗಕ್ಕೆ ಈ ಯುವಕರು ತೆರಳುತ್ತಿದ್ದಾರೆ. ಈ ಯುವಕರ ಕಾರ್ಯಕ್ಕೆ ನಗರ ಪ್ರದೇಶದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅವರು ಕೂಡ ಸಹಾಯ ಮಾಡಲು ಮುಂದೆ ಬಂದಿದೆ.

Intro:Kn_Ckm_07_Sahaya hasta_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕರ ಮಳೆಗೆ ಮಲೆನಾಡಿನ ಜನರು ಅಕ್ಷರಶ ನಲುಗಿ ಹೋಗಿದ್ದು ಎಲ್ಲವನ್ನೂ ಕಳೆದುಕೊಂಡ ಸ್ಥಿತಿಯಲ್ಲಿ ಮೂಡಿಗೆರೆ ತಾಲೂಕಿನ ಹತ್ತಾರೂ ಹಳ್ಳಿಗಳ ಜನರು ಇದ್ದಾರೆ.ಮನೆ, ಆಸ್ತಿ, ಇರಲೂ ಸೂರಿಲ್ಲದೇ ಪರದಾಟ ನಡೆಸುತ್ತಿದ್ದಾರೆ. ಪ್ರತಿನಿತ್ಯ ಬಳಕೆ ಮಾಡುವ ವಸ್ತುಗಳು ಸಿಗದೇ ಕಂಗಲಾಗಿದ್ದು ನೆರೆ ಹಾವಾಳಿಯಿಂದಾ ಪರದಾಟ ನಡೆಸುತ್ತಿರುವ ಜನರಿಗೆ ಸಹಾಯ ಮಾಡಲು ಚಿಕ್ಕಮಗಳೂರಿನ ಯುವಕ ತಂಡ ಪ್ರತಿನಿತ್ಯ ಬಳಕೆ ವಸ್ತುಗಳನ್ನು ಸಂಗ್ರಹ ಮಾಡಿ ಸಂತ್ರಸ್ಥರಿಗೆ ನೀಡುವ ಕೆಲಸಕ್ಕೆ ಮುಂದಾಗಿದೆ. 1 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಈ ಯುವಕರ ತಂಡ ಸಂಗ್ರಹ ಮಾಡಿದ್ದು, ಬ್ರೇಡ್, ಬಿಸ್ಕೇಟ್, ಬೇಡ್ ಶೀಟ್, ಚಾಪೆ, ಟೂತ್ ಪೇಸ್ಟ್, ಬ್ರಶ್, ಔಷಧಿಗಳು, ಬಟ್ಟೆ, ಸೇರಿದಂತೆ ಹಲವಾರು ವಸ್ತುಗಳ ಸಂಗ್ರಹ ಮಾಡಿದ್ದು ಎಲ್ಲವನ್ನೂ ತುಂಬಿಕೊಂಡು ವಾಹನದ ಮೂಲಕ ಮೂಡಿಗೆರೆ ಭಾಗಕ್ಕೆ ತೆರಳುತ್ತಿದ್ದಾರೆ. ಚಿಕ್ಕಮಗಳೂರಿನ ಕೆಲ ಯುವಕರು ಮಾಡುತ್ತಿರುವ ಈ ಕೆಲಸಕ್ಕೆ ನಗರ ಪ್ರದೇಶದ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದು ಅವರು ಕೂಡ ಸಹಾಯ ಮಾಡಲು ಮುಂದೆ ಬರುತ್ತಿದ್ದಾರೆ...

Conclusion:ರಾಜಕುಮಾರ್.....
ಈ ಟಿವಿ ಭಾರತ್....
ಚಿಕ್ಕಮಗಳೂರು....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.